ನಗರ ಸಭೆ From Wikipedia, the free encyclopedia
ಸಾಗರ ಅಥವಾ ಸಾಗರ ಜಂಬಗಾರು ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ಊರು ಮತ್ತು ಅದೇ ಹೆಸರಿನ ಉಪವಿಭಾಗೀಯ ಮತ್ತು ತಾಲೂಕು ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ ೩೬೦ ಕಿ.ಮೀ ಮತ್ತು ಶಿರಸಿ ನಗರದಿಂದ ಸುಮಾರು ೭೨.೨ ಕಿ.ಮೀ ದೂರದಲ್ಲಿರುವ ಸಾಗರ ನಗರ ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ಮತ್ತು ಹವ್ಯಕ ಬ್ರಾಹ್ಮಣರ ತವರಾಗಿದೆ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ.[3] ಇಲ್ಲಿನ ಜನರು ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಹಾಗೂ ಗೌರಿ-ಗಣೇಶ ಚತುರ್ಥಿಯನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಸಾಗರವನ್ನು ಮಲೆನಾಡಿನ ರಾಜಧಾನಿ ಅಂತಲೂ ಕರೆಯಲಾಗುತ್ತದೆ
ಸಾಗರ
ಸಾಗರ ಜಂಬಗಾರು | |
---|---|
ನಗರಸಭೆ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಪ್ರದೇಶ | ಮಲೆನಾಡು |
ಜಿಲ್ಲೆ | ಶಿವಮೊಗ್ಗ ಜಿಲ್ಲೆ |
Subdivision | ಸಾಗರ |
ಸರ್ಕಾರ | |
• ಮಾದರಿ | ಪ್ರಜಾಸತ್ತಾತ್ಮಕ |
• ಪಾಲಿಕೆ | ಸಾಗರ ಸಿಟಿ ಮುನ್ಸಿಪಲ್ ಕೌನ್ಸಿಲ್ ನಗರಸಭಾ() |
Area | |
• ನಗರಸಭೆ | ೧೯.೭೫ km೨ (೭.೬೩ sq mi) |
Elevation | ೫೭೯ m (೧,೯೦೦ ft) |
Population (೨೦೧೧) | |
• ನಗರಸಭೆ | ೫೪,೫೫೦[1] |
• ಸಾಂದ್ರತೆ | ೭,೧೬೦/km೨ (೧೮,೫೦೦/sq mi) |
• ಗ್ರಾಮೀಣ | ೧,೪೦,೯೨೨ [2] |
Languages | |
• Official | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
Telephone code | ೦೮೧೮೩ |
ವಾಹನ ನೋಂದಣಿ | ಕೆಎ-೧೫(ಸಾಗರ ಉಪ ವಿಭಾಗ) |
ಜಾಲತಾಣ | www |
ಸಂಪೂರ್ಣ ಜಗತ್ತು ಭಾರತದಲ್ಲಿ ಹಾಗೂ ಇಡೀ ಭಾರತ ಕರ್ನಾಟಕದಲ್ಲಿ ಇರುವಂತೆಯೇ ಪ್ರವಾಸಿಗರ ಸ್ವರ್ಗವೇ ಆದ ಸಾಗರದಲ್ಲಿ ಸಂಪೂರ್ಣ ಕರ್ನಾಟಕವನ್ನು ಕಾಣಬಹುದು. ಇಲ್ಲಿನ ಜನರು ಹಿಂದುತ್ವವನ್ನು ಅಳವಡಿಸಿಕೊಂಡಿದ್ದಾರೆ ಹಾಗೂ ಕ್ಷಾತ್ರ ಭಾವದವರು.
ಸಾಗರ ಊರಿಗೆ ನಾಲ್ಕುನೂರು ವರ್ಷಗಳ ಇತಿಹಾಸವಿದೆಯೆಂದು ತಿಳಿದು ಬಂದಿದೆ. ಕೆಳದಿ ವಂಶಸ್ಥರ ಕಾಲದಿಂದಲೂ ಈ ನಗರ ಇದ್ದಿತು. ಸಾಗರದ ಸಮೀಪವಿರುವ ಕೆರೆ ಅಂದು ಅತ್ಯಂತ ವಿಶಾಲವಾಗಿ ಇದ್ದು, ಅದು ಸಾಗರದಂತೆ (ಸಮುದ್ರದಂತೆ ) ಕಾಣಿಸುತ್ತಿತ್ತಂತೆ. ಆ ಕೆರೆಗೆ "ಸದಾಶಿವ ಸಾಗರ" ಎಂಬ ಹೆಸರು ಇತ್ತು. ನಂತರ ಸದಾಶಿವ ಹೊರಟು ಹೋಗಿ ಸಾಗರ ಮಾತ್ರ ಉಳಿದು ಅದುವೇ ಈ ನಗರದ ಹೆಸರಾಯಿತು ಎಂದು ಹೇಳಲಾಗುತ್ತಿದೆ.[4] ಇತ್ತೀಚಿಗೆ ಸಾಗರದ ಜನಸಂಖ್ಯೆ ಹೆಚ್ಚಾದ ಕಾರಣ ಇದನ್ನು ನಗರಸಭೆಯನ್ನಾಗಿ ಘೋಷಿಸಿದ್ದಾರೆ.
ಸಾಗರದಲ್ಲಿ ಕೆಳದಿಯ ಅರಸರು ಕಟ್ಟಿಸಿದ ಗಣಪತಿ ದೇವಸ್ಥಾನವನ್ನು ಕಾಣಬಹುದಾಗಿದೆ ಮತ್ತು ಸಾಗರದ ಸಮೀಪದಲ್ಲಿನ ಇಕ್ಕೆರಿಯ ಅಘೋರೇಶ್ವರ ದೇವಾಲಯವು ಕೆಳದಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ. ರಣದುಲ್ಲಾಖಾನನ ಅಕ್ರಮಣದಲ್ಲಿ ಗಣಪತಿ ದೇವಸ್ಥಾನ ಮತ್ತು ಅಘೋರೇಶ್ವರ ದೇವಸ್ಥಾನಗಳು ಹಾನಿಗೊಳಗದವು ಎಂದು ಸಾಗರದ ಇತಿಹಾಸ ಹೇಳುತ್ತದೆ.
ಕಾಳುಮೆಣಸಿನ ರಾಣಿ ಎಂದೇ ಹೆಸರಾಗಿರುವ ರಾಣಿ ಚೆನ್ನಭೈರಾದೇವಿಯು ಸಾಗರ ತಾಲೂಕಿನ(ಕರೂರು)ತುಮರಿ,ಕುದರೂರು, ಕಾರಣಿ,( ಭಾರಂಗಿ)ಅರಳಗೊಡು, ಜೋಗ, ಭಾನ್ಕುಳಿ,ಆವಿನಹಳ್ಳಿ ಭಾಗಗಳಲ್ಲಿ ಆಡಳಿತ ನೆಡೆಸಿದ್ದಳು. ನಂತರ ಈ ಪ್ರದೇಶಗಳು ಕೆಳದಿ ಅರಸರ ಕೈವಶವಾಯಿತು.
ಭಾರತದಲ್ಲೇ ಅತ್ಯಂತ ಎತ್ತರವಾದ ಮತ್ತು ಜಗತ್ತಿನಲ್ಲಿ ೨ನೆಯ ಸ್ಥಾನದಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತವು ಸಾಗರದಿಂದ ೨೯ ಕಿ.ಮೀ ಅಂತರದಲ್ಲಿದೆ.[5] ಶರಾವತಿ ನದಿಯು ರಾಜ, ರೋರರ್, ರಾಕೆಟ್ ಮತ್ತು ರಾಣಿ ಹೀಗೆ ನಾಲ್ಕು ಭಾಗವಾಗಿ ೨೭೩ ಮೀ ಎತ್ತರದಿಂದ ಧುಮುಕುವ ಜೋಗ ಜಲಪಾತಕ್ಕೆ ಸಾಗರದಿಂದ ಪ್ರತೀ ೫ ನಿಮಿಷಕ್ಕೆ ಒಂದರಂತೆ ಬಸ್ಸಿನ ವ್ಯವಸ್ಥೆ ಇದೆ.
ಹೊಯ್ಸಳ ಶೈಲಿಯ ಸುಂದರವಾದ ಕೆತ್ತನೆಗಳಿರುವ ಕೆಳದಿ ಸಂಸ್ಥಾನಕ್ಕೆ ಸೇರಿದ ದೇವಸ್ಥಾನವಿರುವ ಇಕ್ಕೇರಿ ಸಾಗರ ಪೇಟೆಯಿಂದ ೪ ಕಿ.ಮೀ. ದೂರದಲ್ಲಿದೆ. ಬಸ್ಸು, ಟ್ಯಾಕ್ಸಿ ಅಥವ ಆಟೋಗಳಿಂದ ಸುಲಭವಾಗಿ ಇಕ್ಕೇರಿಯನ್ನು ತಲುಪಬಹುದು.
ಕೆಳದಿ ರಾಜವಂಶದಿಂದ ಪ್ರಸಿದ್ಧವಾದ ಕೆಳದಿ ಪಟ್ಟಣವು ಸಾಗರದಿಂದ ೮ ಕಿ.ಮೀ ದೂರದಲ್ಲಿದೆ. ಕೆಳದಿ ಸಂಸ್ಥಾನದ ಅರಮನೆ, ಸುಂದರ ಕೆತ್ತನೆಗಳಿರುವ ದೇವಸ್ಥಾನ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯ ಈ ಊರಿನ ಆಕರ್ಷಣೆಗಳು.
ಹೊನ್ನೇಮರಡು ಶರಾವತಿ ಹಿನ್ನೀರಿನಿಂದ ಆವೃತವಾದ, ಸುಂದರವಾದ ಪ್ರದೇಶ. ಜೋಗಕ್ಕೆ ಹೋಗುವ ದಾರಿಯಲ್ಲಿ ಸಾಗರದಿಂದ ೨೫ ಕಿ.ಮೀ ಗಳ ದೂರದಲ್ಲಿರುವ ಹೊನ್ನೇಮರಡು ನೀರಿನ ಸಾಹಸಕ್ರೀಡೆಗಳಿಗೆ ಪ್ರಶಸ್ತವಾದ ಸ್ಥಳ.
ಸಾಗರ ಪೇಟೆಯ ಮಧ್ಯದಲ್ಲಿರುವ ಮಾರಿಕಾಂಬ ದೇವಸ್ಥಾನ ಸಾಗರದ ಜನಜೀವನ ಮತ್ತು ಇತಿಹಾಸದ ಜೊತೆಗೆ ಬಹುವಾಗಿ ಬೆಸೆದುಕೊಂಡಿದೆ. ೩ ವರ್ಷಗಳಿಗೊಮ್ಮೆ ನಡೆಯುವ ಸಾಗರ ಮಾರಿಕಾಂಬ ಜಾತ್ರೆ ರಾಜ್ಯದಾದ್ಯಂತ ಜನರನ್ನು ಸಾಗರದೆಡೆಗೆ ಆಕರ್ಷಿಸುತ್ತದೆ.
ಶ್ರೀಧರ ಸ್ವಾಮಿಗಳ ಸಮಾಧಿ ಮತ್ತು ಆಶ್ರಮವಿರುವ ಯಾತ್ರಾಸ್ಥಳವಾದ ವರದಹಳ್ಳಿ ಸಾಗರದಿಂದ ೭ ಕಿ.ಮೀ ದೂರದಲ್ಲಿದೆ. ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಹೆಚ್ಚಿನ ಭಕ್ತರನ್ನು ಹೊಂದಿರುವ ವರದಹಳ್ಳಿ ನಿಸರ್ಗದ ಮಧ್ಯೆ ಪ್ರಶಾಂತವಾಗಿ ನೆಲೆಸಿರುವ, ಆಧ್ಯಾತ್ಮಿಕ ಚಿಂತನೆಗೆ ಪ್ರಶಸ್ಥವಾದ ಸ್ಥಳ.[6]
ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ ೮ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟದ ವನಸಿರಿಯ ಮಡಿಲಲ್ಲಿ ಇರುವ ಪರಮ ಪಾವನ ಕ್ಷೇತ್ರವೇ ವರದಹಳ್ಳಿ (ಆಡು ಭಾಷೆಯಲ್ಲಿ ವದ್ದಳ್ಳಿ). ಇಲ್ಲೇ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ. ಈ ಸ್ಥಳಕ್ಕೆ ವರದಹಳ್ಳಿ ಅಥವ ವರದಪುರ ಎಂಬುದಾಗಿಯೂ ಕರೆಯುತ್ತಾರೆ.
ಸಾಗರದಿಂದ ೪೨ ಕಿ. ಮಿ. ಮತ್ತು ತುಮರಿಯಿಂದ ೨.೫ ಕಿ. ಮಿ. ದೂರದಲ್ಲಿದೆ. ಶರಾವತಿ ಹಿನ್ನೀರಿನಲ್ಲಿರುವ ಈ ದೇವಸ್ಥಾನಕ್ಕೆ ಲಾಂಚಿನ ಮೂಲಕ ಬರಬೇಕಿದೆ.
ಚೌಡಮ್ಮ ಚೌಡೇಶ್ವರಿ ಅಮ್ಮನವರ ದೇವಾಲಯ ಇಲ್ಲಿದೆ. ಸಾಗರದಿಂದ ೩೨ ಕಿ.ಮಿ. ದೂರದಲ್ಲಿದೆ. ಇಲ್ಲಿಗೆ ಹೋಗಲು ಶರಾವತಿ ಹಿನ್ನೀರನ್ನು (ಲಿಂಗನಮಕ್ಕಿ ಜಲಾಶಯ)ತುಮರಿ ಲಾಂಚ್ ಮುಖಾಂತರ ದಾಟಿ ಹೋಗಬೇಕು.
ಸಾಗರದಿಂದ ೧೦ ಕಿ.ಮೀ ದೂರದಲ್ಲಿದೆ.ಈ ದೇವಸ್ಥಾನದ ಮೂಲ ದೇವರು ಶಿವನಾಗಿದ್ದು,ಪೂರ್ಣ ಕಲ್ಲಿನಿಂದ ನಿರ್ಮಿತವಾಗಿದೆ.
ಸಾಗರದಿಂದ ೧೬ ಕಿ.ಮೀ ದೂರದಲ್ಲಿದೆ. ೧೦ನೇ ಶತಮಾನದಲ್ಲಿ ಸಂತರಸರಿಂದ ನಿರ್ಮಾಣಗೊಂಡ ಉಮಾಮಹೇಶ್ವರ ದೇಗುಲ ಇಲ್ಲಿನ ಆಕರ್ಷಣೆ.
ವರದಾ ನದಿಯ ಉಗಮ ಸ್ಥಳ. ಇಲ್ಲಿ ವರದಾಂಬ ದೇವಿಯ ದೇವಸ್ಥಾನವೂ ಇದೆ. ಅಗ್ನಿ, ವರದಾ ಮತ್ತು ಲಕ್ಷ್ಮಿಯೆಂಬ ೩ ನದಿಗಳನ್ನು ಒಳಗೊಂಡಿದೆ. ಪ್ರತೀ ವರ್ಷದ ಎಳ್ಳುಅಮವಾಸ್ಯೆಯಂದು ಜಾತ್ರೆ ನೆಡೆಯುತ್ತದೆ.
ಕರ್ನಾಟಕದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡವಾಗಿ ೧೯೬೪ರಲ್ಲಿ ನಿರ್ಮಿತವಾದ ಒಂದು ಅಣೆಕಟ್ಟು.[7] ಸಮುದ್ರ ಮಟ್ಟದಿಂದ ೧೮೧೯ ಅಡಿ ಏತ್ತರದಲ್ಲಿದೆ. ಆಣೆಕಟ್ಟಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ಇದು ಜೋಗದಿಂದ ಕೇವಲ ೬ ಕಿ.ಮೀ. ದೂರದಲ್ಲಿದೆ.
ಬಿಲಗುಂಜಿ ಕಮಲೇಶ್ವರ ದೇಗುಲದಲ್ಲಿ ಪರಶಿವ ಗಂಗೆಯ ಶಿರದ ಮೇಲೆ ನೆಲೆಸಿದ್ದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಕೀರ್ತಿಗಳಿಸಿದ್ದಾನೆ. ಇಲ್ಲಿ ಶಿವನ ಪದತಳದಲ್ಲಿ ಗಂಗೆ ತೀರ್ಥರೂಪದಲ್ಲಿ ನೆಲೆಸಿದ್ದು ಸದಾ ಹರಿಯುತ್ತಿರುತ್ತಾಳೆ.
ವಿಶ್ವವಿಖ್ಯಾತ ಜೋಗಕ್ಕೆ ಸಮೀಪದಲ್ಲಿ ಬರುವ ಶ್ರೀ ಕ್ಷೇತ್ರ ವಡನ್ ಬೈಲ್ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ವಿಶೇಷವಾಗಿ ಇಲ್ಲಿರುವ ಮಹಾಮಾತೆ ಪದ್ಮಾವತಿ ಹಾಗೂ ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿಯು ವಿಶೇಷ ಆಕರ್ಷಕವಾಗಿದೆ ಇಲ್ಲಿಗೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚುತ್ತಿದೆ ಕ್ಷೇತ್ರದ ಧರ್ಮದರ್ಶಿಗಳಾದ ಹೆಚ್.ಎಂ.ವೀರರಾಜಯ್ಯನವರ ಪರಿಶ್ರಮ ಸಾಕಷ್ಟಿದೆ
ಬಹಳ ಜನ ಕಲಾವಿದರನ್ನು, ಸಾಹಿತಿಗಳನ್ನು ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ.
ಹೆಚ್ಚಿನ ಜನರು ಜೀವನಕ್ಕೆ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಅಡಿಕೆ ಸಾಗರದ ಪ್ರಮುಖ ಬೆಳೆ. ಭತ್ತ, ಕಬ್ಬು, ವೆನಿಲ್ಲಾ, ರಬ್ಬರ್ ಮತ್ತಿತರ ಬೆಳೆಗಳು ಕೂಡ ಪ್ರಚಲಿತದಲ್ಲಿವೆ. ಮುಖ್ಯ ವ್ಯವಹಾರಿಕ ಭಾಷೆ ಕನ್ನಡ. ಹವ್ಯಕರು, ದೀವರು ಜನಾಂಗ ಇಲ್ಲಿ ಪ್ರಮುಖವಾದ ಪಂಗಡ. ಬಹಳ ಹವ್ಯಕ ಬ್ರಾಹ್ಮಣರು ಸಾಗರದಲ್ಲಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಹಜವಾಗಿ ಕನ್ನಡದ ಉಪಭಾಷೆ ಹವ್ಯಕ ಕನ್ನಡ ಇಲ್ಲಿನ ಪ್ರಮುಖ ಭಾಷೆಯಾಗಿದೆ.
ಸಾಗರವು ಗುಡ್ಡ, ಕಾಡು, ಮೇಡುಗಳಿಂದ ಕೂಡಿದ ಪ್ರದೇಶ. ಸಾಗರದ ಬಹುಭಾಗ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಆವೃತವಾಗಿದೆ ಎನ್ನಬಹುದು. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ.[8] ಜೊತೆಗೆ ಭತ್ತ, ತೆಂಗು, ಬಾಳೆ ಮುಂತಾದ ಬೆಳೆಗಳನ್ನೂ ಬೆಳೆಯುತ್ತಾ ರೆ. ಈ ತಾಲ್ಲೂಕು ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವುದರಿಂದ ಯಥೇಚ್ಚ ಕಾಡನ್ನೂ ಸಹ ಹೊಂದಿದೆ. ಈ ಕಾಡಿನಲ್ಲಿ ಕಾಳಿಂಗ ಸರ್ಪ, ಹುಲಿ, ಕಾಡೆಮ್ಮೆ,, ಜಿಂಕೆ, ಕಾಡು ಕುರಿ, ಉಡ, ಕಾಡು ಹಂದಿ, ಕಡವೆ, ನವಿಲು, ಕೆಂದಳಿಲು ಮುಂತಾದ ವಿಶೇಷ ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ.
ಬೆಂಗಳೂರು ನಗರದಿಂದ ನೇರವಾಗಿ ಬಸ್ಸು ಮತ್ತು ರೈಲಿನ ಸಂಪರ್ಕವಿದೆ. ರಾ.ಹೆ.೨೦೬ರಲ್ಲಿ ಚಲಿಸುವ ಖಾಸಗಿ ಮತ್ತು ಸರ್ಕಾರಿ ಹವಾನಿಯಂತ್ರಿತ ಬಸ್ಸುಗಳಲ್ಲಿ ೮ ಗಂಟೆಗಳ ಅವಧಿಯಲ್ಲಿ ಸಾಗರ ತಲುಪಬಹುದು. ಇದಲ್ಲದೆ ರಾಜ್ಯದ ಇತರ ಪ್ರಮುಖ ಪಟ್ಟಣಗಳು ಮತ್ತು ತಿರುಪತಿ,ಚೆನ್ನೈ,ಮುಂಬಯಿ ಮುಂತಾದ ಪಟ್ಟಣಗಳೊಂದಿಗೆ ನೇರವಾದ ಬಸ್ಸಿನ ಸಂಪರ್ಕವಿದೆ.
ಸಾಗರ ಕ್ಷೇತ್ರದ-ಕರ್ನಾಟಕ ವಿಧಾನ ಸಭಾ ಸದಸ್ಯರು
ಇಸವಿ | ವಿಜೇತರು | ಪಕ್ಷ | ಎರಡನೇ ಸ್ಥಾನ |
---|---|---|---|
೧೯೫೨ | ಗೋಪಾಲ ಗೌಡ | ಸೋಸಿಯಲಿಸ್ಟ್ | ಬ.ನಾರಾಯಣ, ಕಾಂಗ್ರೆಸ್ |
೧೯೫೭ | ಡಿ ಮೂಕಪ್ಪ | ಕಾಂಗ್ರೆಸ್ | ಗೋಪಾಲ ಗೌಡ, ಸೋಸಿಯಲಿಸ್ಟ್ |
೧೯೬೨ | ಲಕ್ಷ್ಮಿಕಾಂತಪ್ಪ | ಕಾಂಗ್ರೆಸ್ | ಕಾಗೋಡು ತಿಮ್ಮಪ್ಪ, ಸೋಸಿಯಲಿಸ್ಟ್ |
೧೯೬೭ | ಕೆ ಎಚ್ ಶ್ರೀನಿವಾಸ | ಕಾಂಗ್ರೆಸ್ | ಕಾ.ತಿಮ್ಮಪ್ಪ, ಸೋಸಿಯಲಿಸ್ಟ್ |
೧೯೭೨ | ಕಾಗೋಡು ತಿಮ್ಮಪ್ಪ | ಸೋಸಿಯಲಿಸ್ಟ್ | ಎಲ್ ಟಿ. ತಿಮ್ಮಪ್ಪ ಹೆಗಡೆ, ಕಾಂಗ್ರೆಸ್ |
೧೯೭೮ | ಎಲ್.ಟಿ.ತಿಮ್ಮಪ್ಪ ಹೆಗಡೆ | ಕಾಂಗ್ರೆಸ್ | ಕಾ.ತಿಮ್ಮಪ್ಪ, ಜನತಾಪಕ್ಷ |
೧೯೮೩ | ಎಲ್.ಟಿ.ತಿಮ್ಮಪ್ಪ ಹೆಗಡೆ | ಕಾಂಗ್ರೆಸ್ | ಕೆ.ಜಿ. ಶಿವಪ್ಪ, ಜನತಾಪಕ್ಷ |
೧೯೮೫ | ಬಿ.ಧರ್ಮಪ್ಪ | ಜನತಾ ಪಕ್ಷ | ಎಲ್ ಟಿ. ತಿಮ್ಮಪ್ಪ ಹೆಗಡೆ, ಕಾಂಗ್ರೆಸ್ |
೧೯೮೯ | ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ | ಎಚ್ ವಿ ಚಂದ್ರಶೇಖರ್, ಜನತಾದಳ |
೧೯೯೪ | ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ | ಎಚ್ ವಿ ಚಂದ್ರಶೇಖರ್, ಜನತಾದಳ |
೧೯೯೯ | ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ | ಎಲ್ ಟಿ. ತಿಮ್ಮಪ್ಪ ಹೆಗಡೆ, ಜನತಾದಳ(ಎಸ್) |
೨೦೦೪ | ಗೋಪಾಲ ಕೃಷ್ಣ ಬೇಳೂರು | ಬಿಜೆಪಿ | ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ |
೨೦೦೮ | ಗೋಪಾಲ ಕೃಷ್ಣ ಬೇಳೂರು | ಬಿಜೆಪಿ | ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ |
೨೦೧೩ | ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ | ಬಿ. ಆರ್ ಜಯಂತ ಕೆಜೆಪಿ (ಕರ್ನಾಟಕ ಜನತಾ ಪಾರ್ಟಿ) |
೨೦೧೩ | ಹರತಾಳು ಹಾಲಪ್ಪ | ಬಿಜೆಪಿ | |
೨೦೨೩ | ಗೋಪಾಲ ಕೃಷ್ಣ ಬೇಳೂರು | ಕಾಂಗ್ರೆಸ್ |
ಶಿವಮೊಗ್ಗ ಜಿಲ್ಲಾ ಜನ ಸಂಖ್ಯಾ ಪ್ರಗತಿ | |||||
---|---|---|---|---|---|
ತಾಲ್ಲೂಕು | ಸಾಕ್ಷರತೆ ಪ್ರಮಾಣ -ಶೇ. | ಒಟ್ಟು (೨೦೧೧) | ಗಂಡಸರು | ಹೆಂಗಸರು/ಪ್ರಮಾಣ | ೨೦೦೧ ರ ಗಣತಿ |
ಶಿವಮೊಗ್ಗ ಜನ ಸಂಖ್ಯೆ | -- | ೧೭೫೫೫೧೨ | ಲಭ್ಯವಿಲ್ಲ | ಲಭ್ಯವಿಲ್ಲ | ಲಭ್ಯವಿಲ್ಲ |
ಶಿವಮೊಗ್ಗ ತಾಲ್ಲೂಕು | ೭೭ | ೫,೦೭,೦೮೩ | ೨,೫೫,೩೧೭ | ೨೫೧೭೬೧/೯೬೯ | ೪,೪೫,೧೯೨ |
ಭದ್ರಾವತಿ ತಾಲ್ಲೂಕು | ೭೭ | ೩,೩೯,೯೩೦ | ೧,೭೦,೨೯೧. | ೧,೬೯,೬೩೬/೯೯೭ | ೩,೩೮,೯೮೯ |
ಭದ್ರಾವತಿ ನಗರ | -- | ೧,೫೦,೭೭೬ | ಲಭ್ಯವಿಲ್ಲ | ಲಭ್ಯವಿಲ್ಲ | ೧,೬೦,೬೬೨ |
ತೀರ್ಥಹಳ್ಳಿ | ೮೩.೦೫ | ೧,೪೧,೪೫೩ | ೬೯,೫೯೩ | ೭೧,೮೬೯/೧೦೩೮ | ೧,೪೩,೨೦೭ |
ಶಿವಮೊಗ್ಗ ಗ್ರಾಮೀಣ | -- | ೧,೨೬,೯೧೬ | ಲಭ್ಯವಿಲ್ಲ | ಲಭ್ಯವಿಲ್ಲ | ೧,೨೮,೩೯೯ |
ಸಾಗರ | ೮೧.೦೦ | ೨,೦೬,೧೧೨ | ೧,೦೨,೨೭೬ | ೧,೦೩,೮೩೪/೧೦೧೨ | ೨,೦೦,೯೯೫ |
ಹೊಸನಗರ | ೮೧.೫ | ೧,೧೮,೧೪೮ | ೫೮,೫೦೩ | ೫೯,೬೪೫/೧೦೩೭ | ೧,೧೫,೦೦೦ |
ಶಿಕಾರಿಪುರ | ೭೬.೫ | ೨,೪೧,೯೪೩ | ೧,೨೨,೫೨೭ ೧, | ೧೯,೪೧೩/೯೮೦ | ೨,೧೩,೫೯೦ |
ಸೊರಬ | ೭೭ | ೨,೦೦,೮೪೩ | ೧,೦೧,೨೯೭ | ೯೧,೫೪೬/೯೯೯ | ೧,೮೫,೫೭೨ |
ಸಾಗರದಲ್ಲಿ ಅಡಿಕೆ ವ್ಯಾಪಾರ ತುಂಬಾ ಜೋರಾಗಿದೆ. ಇಲ್ಲಿ ಕೆಲವು ಖಾಸಗಿ ಮಂಡಿಗಳು ಮತ್ತೆ ಕೆಲವು ಸಹಕಾರಿ ವ್ಯಾಪಾರಿ ಸಂಸ್ಥೆಗಳೂ ಇವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.