ಜೀವಸತ್ವ ಪರಿಕಲ್ಪನೆ From Wikipedia, the free encyclopedia
"ಪೌಷ್ಟಿಕತೆಯ ನಿಜಾಂಶಗಳು" ಟೆಬಲ್ನಲ್ಲಿ ನೀವು ಎಷ್ಟು ಪ್ರಮಾಣದ ಪೌಷ್ಟಿಕಾಂಶವನ್ನು ಸೀಮಿತಗೊಳಿಸಬೇಕು ಅಥವಾ ಬೇಕಿರುವ ಪ್ರಮಾಣದಲ್ಲಿ ಸೇವಿಸಬೇಕೆಂದು ಪರಿಣಿತರು ಸಲಹೆ ನೀಡಿರುವುದನ್ನು ಸೂಚಿಸುತ್ತದೆ.ಪೋಷಣೆ (ಪೋಷಕಾಹಾರ ಅಥವಾ ಪೌಷ್ಟಿಕಾಹಾರ )ವು ಜೀವನಕ್ಕೆ ಅಗತ್ಯವಾದ ವಸ್ತುಗಳನ್ನು(ಆಹಾರದ ರೂಪದಲ್ಲಿ) ಕೋಶಗಳಿಗೆ ಮತ್ತು ಜೀವಿಗಳಿಗೆ ಒದಗಿಸುತ್ತದೆ. ಆರೋಗ್ಯಕರ ಆಹಾರಪದ್ಧತಿಯ ಮೂಲಕ ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಒಂದು ಜೀವಿಯ ಆಹಾರಪದ್ಧತಿ ಎಂದರೆ ಅದು ಏನನ್ನು ಸೇವಿಸುತ್ತದೆ ಎಂಬುದು ಹಾಗೂ ಅದನ್ನು ಹೆಚ್ಚಾಗಿ, ಆಹಾರದ ಸ್ವಾದವನ್ನರಿಯುವ ಅರ್ಹತೆಯನ್ನು ತಿಳಿಯುವ ಮೂಲಕ ನಿರ್ಧರಿಸಲಾಗುತ್ತದೆ. ಆಹಾರತಜ್ಞ ಎಂದರೆ ಮನುಷ್ಯರ ಪೌಷ್ಟಿಕಾಹಾರ, ಆಹಾರ ಯೋಜನೆ, ಆರ್ಥಿಕತೆ, ಹಾಗೂ ತಯಾರಿಗಳಲ್ಲಿ ವಿಶೇಷ ಪರಿಣತಿ ಪಡೆದ ಆರೋಗ್ಯ ವೃತ್ತಿನಿರತರು. ಅವರು ಸುರಕ್ಷಿತ, ಸಾಕ್ಷ್ಯಾಧಾರಿತ ಆಹಾರಕ್ರಮದ ಸಲಹೆಗಳನ್ನು ಒದಗಿಸಲು ಹಾಗೂ ವೈಯಕ್ತಿಕವಾಗಿಯೂ (ಆರೋಗ್ಯ ಮತ್ತು ರೋಗಗಳ ವಿಚಾರದಲ್ಲಿ), ಸಂಸ್ಥೆಗಳನ್ನೂ ನಿರ್ವಹಿಸಲು ತರಬೇತಿಯನ್ನು ಪಡೆದವರಾಗಿರುತ್ತಾರೆ. ಗುಣಮಟ್ಟವಿಲ್ಲದ ಪಥ್ಯವು ಸ್ಕರ್ವಿ, ಬೆರಿಬೆರಿ, ಕ್ವಾಶಿಯೋರ್ಕರ್ ಮೊದಲಾದ ನ್ಯೂನತೆಯ ರೋಗಗಳನ್ನು ಉಂಟುಮಾಡುವ ಮೂಲಕ ಆರೋಗ್ಯಕ್ಕೆ ಹಾನಿಕರ ಪ್ರಭಾವ ಬೀರಬಹುದು; ಬೊಜ್ಜು, ಉಪಾವಚಯಿಕ ಲಕ್ಷಣಾವಳಿಯಂಥ ಆರೋಗ್ಯಕ್ಕೆ ಅಪಾಯಕಾರಿಯಾದ ಸ್ಥಿತಿಗಳನ್ನೂ ಹಾಗೂ ಹೃದಯರಕ್ತನಾಳ ಸಂಬಂಧಿ ರೋಗಗಳು, ಸಕ್ಕರೆ ಖಾಯಿಲೆ ಮತ್ತು ಅಸ್ಥಿರಂಧ್ರತೆ ಮೊದಲಾದ ತೀವ್ರವಾದ ರೋಗಗಳನ್ನೂ ತಂದೊಡ್ಡಬಹುದು.
ಪೌಷ್ಟಿಕಾಹಾರ ವಿಜ್ಞಾನವು ಆಹಾರಪದ್ಧತಿಗೆ ದೇಹದ ಉಪವಾಚಯಿಕ ಹಾಗೂ ಶರೀರ ಶಾಸ್ತ್ರೀಯ ಪ್ರತಿಕ್ರಿಯೆಗಳನ್ನು ಪರೀಕ್ಷಿಸುತ್ತದೆ. ಅಣುಜೀವವಿಜ್ಞಾನ, ಜೀವರಸಾಯನಶಾಸ್ತ್ರ, ಹಾಗೂ ತಳಿಶಾಸ್ತ್ರ ಕ್ಷೇತ್ರಗಳಲ್ಲಿನ ಅಭಿವೃದ್ಧಿಯೊಂದಿಗೆ ಪೌಷ್ಟಿಕಾಹಾರದ ಅಧ್ಯಯನವೂ ಹೆಚ್ಚಾಗಿ ಸಂಬಂಧಿಸಿರುವುದು ಉಪವಾಚಯ ಹಾಗೂ ಉಪವಾಚಯಿಕ ಹಾದಿ: ಜೀವಿಗಳಲ್ಲಿನ ದ್ರವ್ಯ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಗುವ ಜೀವರಾಸಾಯನಿಕ ಕ್ರಿಯೆಗಳ ಅನುಕ್ರಮ. ಮನುಷ್ಯದೇಹವು ನೀರು, ಕಾರ್ಬೋಹೈಡ್ರೇಟ್ಗಳನ್ನು ಹೊಂದಿದೆ. zಈ ಸಂಯುಕ್ತಗಳು ಇಂಗಾಲ, ಜಲಜನಕ, ಆಮ್ಲಜನಕ, ನೈಟ್ರೋಜನ್, ಪಾಸ್ಫರಸ್, ಕ್ಯಾಲ್ಸಿಯಮ್, ಕಬ್ಬಿಣ, ಜಿಂಕ್, ಮೆಗ್ನೀಶಿಯಮ್, ಮ್ಯಾಂಗನೀಸ್ ಮೊದಲಾದ ಘಟಕಗಳನ್ನು ಒಳಗೊಂಡಿರುತ್ತವೆ. ಈ ಎಲ್ಲಾ ರಾಸಾಯನಿಕ ಸಂಯುಕ್ತಗಳು ಮನುಷ್ಯದೇಹ ಹಾಗೂ ಸಸ್ಯಗಳೆರಡರಲ್ಲೂ ಮತ್ತು ಮನುಷ್ಯ ತಿನ್ನುವ ಪ್ರಾಣಿಗಳಲ್ಲೂ ವಿವಿಧ ರೂಪಗಳಲ್ಲಿ ಹಾಗೂ ಸಂಯೋಜನೆಗಳಲ್ಲಿ ಇರುತ್ತವೆ (ಉದಾ: ಹಾರ್ಮೋನ್ ಗಳು, ವಿಟಮಿನ್ ಗಳು, ಪಾಸ್ಫೋಲಿಪಿಡ್ ಗಳು, ಹೈಡ್ರಾಕ್ಸಿಎಪಟೈಟ್).ಮನುಷ್ಯದೇಹವು ಆಹಾರವನ್ನು ಸೇವಿಸಿ, ಜೀರ್ಣಿಸಿ, ಹೀರಿಕೊಂಡು ಹಾಗೂ ಕೋಶಗಳಿಗೆ ಒದಗಿಸಲು ರಕ್ತ ನಾಳಗಳ ಮೂಲಕ ಸಾಗಿಸುವ ಧಾತುಗಳು ಹಾಗೂ ಸಂಯುಕ್ತಗಳನ್ನು ಹೊಂದಿದೆ. ಇನ್ನೂ ಹುಟ್ಟದ ಭ್ರೂಣವನ್ನು ಹೊರತುಪಡಿಸಿ ಉಳಿದೆಲ್ಲರಲ್ಲೂ ಒಳಗೊಂಡಿರುವ ಮೊದಲನೆಯ ವ್ಯವಸ್ಥೆ ಜೀರ್ಣಕ್ರಿಯೆಯ ವ್ಯವಸ್ಥೆ.[vague] ಒಬ್ಬ ಮಾದರಿ ಪ್ರಾಪ್ತ ವಯಸ್ಕನಲ್ಲಿ ಸುಮಾರು ಏಳು ಲೀಟರ್ ನಷ್ಟು ಜೀರ್ಣರಸ ಜೀರ್ಣಾಂಗವ್ಯೂಹದ ಲ್ಯುಮೆನ್ ನ್ನು ಪ್ರವೇಶಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು][clarification needed] ಇವು, ಸೇವಿಸಿದ ಪರಮಾಣುಗಳಲ್ಲಿನ ರಾಸಾಯನಿಕ ಬಂಧ ವನ್ನು ಒಡೆಯುತ್ತವೆ ಮತ್ತು ಅವುಗಳ ರೂಪ ಮತ್ತು ಶಕ್ತಿಯ ಮಟ್ಟವನ್ನು ಸಮನ್ವಯಗೊಳಿಸುತ್ತವೆ. ಕೆಲವು ಪರಮಾಣುಗಳು ಏನೂ ಬದಲಾವಣೆಗೊಳ್ಳದೆ ರಕ್ತಪ್ರವಾಹ ಸೇರಿದರೂ, ಜೀರ್ಣಕ್ರಿಯೆಯು ಅವುಗಳನ್ನು ಆಹಾರ ಮಾತೃಕೆಯಿಂದ ಬೇರ್ಪಡಿಸುತ್ತದೆ. ಉಪವಾಚಯದ ಕೆಲವು ವ್ಯರ್ಥ ಉತ್ಪನ್ನಗಳೊಂದಿಗೆ, ಹೀರಿಕೊಳ್ಳಲ್ಪಡದ ವಸ್ತುಗಳು ಮಲದ ಮೂಲಕ ದೇಹದಿಂದ ಹೊರಹಾಕಲ್ಪಡುತ್ತವೆ.ಪೌಷ್ಟಿಕಾಂಶಗಳ ಸ್ಥಿತಿಯ ಅಧ್ಯಯನವು - ಪ್ರಯೋಗದ ಮೊದಲು ಹಾಗೂ ಪ್ರಯೋಗದ ಬಳಿಕದ ದೇಹದ ಸ್ಥಿತಿಗತಿ ಮಾತ್ರವಲ್ಲದೇ ದೇಹದಿಂದ ಹೊರಬಂದ (ಮಲ ಮೂತ್ರಗಳ ರೂಪದಲ್ಲಿ) ಎಲ್ಲಾ ವಸ್ತುಗಳ ರಾಸಾಯನಿಕ ವಿಶ್ಲೇಷಣೆಗಳು - ಇವುಗಳನ್ನು ಒಳಗೊಂಡಿರಬೇಕು. ಆಹಾರವನ್ನು ವ್ಯರ್ಥೌತ್ಪನ್ನಗಳಿಗೆ ಹೋಲಿಸುವುದು ದೇಹ ಹೀರಿಕೊಳ್ಳುವ ಮತ್ತು ಉಪವಾಚಯಿಸಲ್ಪಡುವ ನಿರ್ದಿಷ್ಟ ವಸ್ತುಗಳನ್ನು ಕಂಡುಕೊಳ್ಳಲು ಸಹಾಯಕವಾಗಬಹುದು. ಪೌಷ್ಟಿಕಾಂಶಗಳ ಬಳಕೆಯ ಪರಿಣಾಮವನ್ನು ನಿರ್ದಿಷ್ಟ ಕಾಲಾವಕಾಶದಲ್ಲಿ ತಿಳಿಯಬೇಕು. ಈ ಸಮಯದಲ್ಲಿ ಆಹಾರದ ಸೇವನೆ ಮತ್ತು ವಿಸರ್ಜನೆ -ಎರಡನ್ನೂ ಪರಿಗಣಿಸಬೇಕು. ಅಂಥ ಪ್ರಯೋಗಗಳಲ್ಲಿ ಹೆಚ್ಚಿನ ಬದಲಾವಣೆಗಳು ಒಳಗೊಂಡಿರುವುದು ಪೌಷ್ಟಿಕಾಹಾರದ ಅಧ್ಯಯನವನ್ನು ಅಧಿಕ ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ ಹಾಗೂ ಹೆಚ್ಚು ವೆಚ್ಚದಾಯಕವಾಗಿಸುತ್ತದೆ. ಇದು, ಮಾನವ ಪೌಷ್ಟಿಕಾಹಾರ ವಿಜ್ಞಾನವು ಇನ್ನೂ ನಿಧಾನವಾಗಿ ಬೆಳೆಯುತ್ತಿರುವುದಕ್ಕೆ ಕಾರಣವಾಗಿದೆ. ಸಾಧಾರಣವಾಗಿ ಸಂಸ್ಕರಿಸಿದ ಆಹಾರದ ಮೇಲೆ ಅವಲಂಬಿತ ಏಕತಾನತೆಯ ಪಥ್ಯಕ್ಕಿಂತಲೂ ವಿವಿಧ ರೀತಿಯ ತಾಜಾ, ಸಮಗ್ರ(ಸಂಸ್ಕರಿಸದ) ಆಹಾರವನ್ನು ಸೇವಿಸುವುದು ಉಪಯುಕ್ತ ಎಂಬುದು ಸಾಬೀತಾಗಿದೆ.[4] ನಿರ್ದಿಷ್ಟವಾಗಿ ಹೇಳುವುದಾದರೆ, ಪೂರ್ಣ ಸಸ್ಯಾಹಾರ ಮಾಡುವುದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಉತ್ತಮವಾಗಿ ಹೀರಲ್ಪಡುತ್ತದೆ. ಹಾಗೂ ಕೋಶ ಬೆಳವಣಿಗೆಯ ಉತ್ತಮ ನಿರ್ವಹಣೆ ಮತ್ತು ಮೈಟೋಸಿಸ್(ಕೋಶ ವಿಭಜನೆ) ಮೂಲಕ ಕ್ಯಾಲೋರಿ ಗೆ ತಕ್ಕಂತೆ ಪೌಷ್ಟಿಕಾಂಶಗಳ ಸಮತೂಗಿಸುವಿಕೆಗೂ, ಹಸಿವು ಮತ್ತು ರಕ್ತದಲ್ಲಿನ ಸಕ್ಕರೆಯಂಶದ ಉತ್ತಮ ನಿಯಂತ್ರಣಕ್ಕೂ ಉಪಯುಕ್ತವಾಗಿದೆ.[5] ಮಾಮೂಲಿಯಲ್ಲದ ಅಥವಾ ಅವ್ಯವಸ್ಥಿತ ಆಹಾರ ಸೇವನೆಗಿಂತ ಕ್ರಮಬದ್ಧವಾಗಿ ನಿಶ್ಚಯಗೊಳಿಸಿದ(ಕೆಲವು ಗಂಟೆಗಳಿಗೊಮ್ಮೆಯಂತೆ) ಆಹಾರ ಸೇವನೆ ಆರೋಗ್ಯಕರವೆಂದೂ ಪ್ರಮಾಣೀಕರಿಸಲ್ಪಟ್ಟಿದೆ.[ಸೂಕ್ತ ಉಲ್ಲೇಖನ ಬೇಕು]
ಪೌಷ್ಟಿಕಾಂಶಗಳಲ್ಲಿ ಒಟ್ಟು ಏಳು ವರ್ಗಗಳಿವೆ: ಕಾರ್ಬೋಹೈಡ್ರೇಟ್ಗಳು, ಕೊಬ್ಬು, ಫೈಬರ್, ಖನಿಜಗಳು, ಪ್ರೋಟೀನ್, ವಿಟಮಿನ್ ಹಾಗೂ ನೀರು. ಈ ಪೌಷ್ಟಿಕಾಂಶವರ್ಗಗಳನ್ನು ದೊಡ್ಡಮಟ್ಟಿನ ಪೌಷ್ಟಿಕಾಂಶಗಳು (ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವವು) ಹಾಗೂ ಸಣ್ಣಮಟ್ಟಿನ ಪೌಷ್ಟಿಕಾಂಶಗಳು (ಅಲ್ಪಪ್ರಮಾಣದಲ್ಲಿ ಅಗತ್ಯವಿರುವವು) ಎಂದು ವಿಭಾಗಿಸಬಹುದು. ದೊಡ್ಡಮಟ್ಟಿನ ಪೌಷ್ಟಿಕಾಂಶಗಳೆಂದರೆ ಕಾರ್ಬೋಹೈಡ್ರೇಟ್ಗಳು, ಕೊಬ್ಬು, ಫೈಬರ್, ಪ್ರೋಟೀನ್, ಹಾಗೂ ನೀರು. ಸಣ್ಣಮಟ್ಟಿನ ಪೌಷ್ಟಿಕಾಂಶಗಳೆಂದರೆ ಖನಿಜಗಳು, ಮತ್ತು ವಿಟಮಿನ್ಗಳು.ದೊಡ್ಡಮಟ್ಟಿನ ಪೌಷ್ಟಿಕಾಂಶಗಳು(ಫೈಬರ್ ಮತ್ತು ನೀರನ್ನು ಹೊರತುಪಡಿಸಿ) ರಚನಾ-ಕ್ರಮದ ವಸ್ತುಗಳನ್ನು(ಪ್ರೋಟೀನ್ ರಚಿಸಲ್ಪಡುವ ಅಮೈನೋ ಆಮ್ಲಗಳು, ಕೋಶಪೊರೆ ಮತ್ತು ಕೆಲವು ಸಂಜ್ಞಾ ಪರಮಾಣುಗಳು ರಚಿಸಲ್ಪಡುವ ಲಿಪಿಡ್ಗಳು), ಶಕ್ತಿಯನ್ನು ಒದಗಿಸುತ್ತವೆ. ರಚನಾ-ಕ್ರಮದ ವಸ್ತುಗಳಲ್ಲಿ ಕೆಲವು, ಆಂತರಿಕವಾಗಿ ಶಕ್ತಿ ಬಿಡುಗಡೆ ಮಾಡಲು ಉಪಯುಕ್ತವಾಗಿವೆ. ಹಾಗೂ ಅದನ್ನು ಜೂಲ್ ಗಳಲ್ಲಿ ಅಥವಾ ಕಿಲೋಕ್ಯಾಲೊರಿಗಳಲ್ಲಿ (ಹೆಚ್ಚಾಗಿ "ಕ್ಯಾಲೊರಿಗಳು" ಎಂದೇ ಕರೆಯಲ್ಪಡುತ್ತದೆ ಮತ್ತು ಅದನ್ನು ಸಣ್ಣ ಕ್ಯಾಲೊರಿಯಿಂದ ಬೇರ್ಪಡಿಸಲು ಇಂಗ್ಲಿಷ್ ದೊಡ್ಡಕ್ಷರ C ಯಿಂದ ಬರೆಯಲಾಗುವುದು) ಅಳೆಯಲಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಗಣನೀಯ ಪ್ರಮಾಣದಲ್ಲಿ ಬದಲಾಗುವ, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು ಹಾಗೂ ಕೊಬ್ಬುಗಳು ಒದಗಿಸುವ ನಿವ್ವಳ ಶಕ್ತಿಯು ಹೀರಿಕೊಳ್ಳುವಿಕೆ ಮತ್ತು ಜೀರ್ಣಕ್ರಿಯಾ ಶ್ರಮದ ಮೇಲೆ ಅವಲಂಬಿತವಾದರೂ, ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ ಗಳು ಪ್ರತಿ ಗ್ರಾಂಗೆ ೧೭ ಕಿಲೋಜೂಲ್ (೪ ಕಿಲೋಕ್ಯಾಲೊರಿ)ಗಳಷ್ಟು ಶಕ್ತಿಯನ್ನೊದಗಿಸಿದರೆ, ಕೊಬ್ಬು ಪ್ರತಿ ಗ್ರಾಂ[೧] ಗೆ ೩೭ ಕಿಲೋಜೂಲ್(೯ ಕಿಲೋಕ್ಯಾಲೊರಿ)ಗಳಷ್ಟು ಶಕ್ತಿಯೊದಗಿಸುತ್ತದೆ. ವಿಟಮಿನ್ಗಳು, ಖನಿಜಾಂಶಗಳು, ಫೈಬರ್, ಮತ್ತು ನೀರು ಶಕ್ತಿಯನ್ನೊದಗಿಸುವುದಿಲ್ಲ. ಆದರೆ ಅವು ಬೇರೆ ಕಾರಣಗಳಿಗೆ ಅಗತ್ಯವಾಗಿವೆ. ನಿರ್ದಿಷ್ಟ ಕಾರಣ ಸ್ಪಷ್ಟವಾಗಿ ತಿಳಿಯದಿದ್ದರೂ, ಮೂರನೇ ದರ್ಜೆಯ ಆಹಾರ ಪದಾರ್ಥವಾದ ಫೈಬರ್ (ಎಂದರೆ ಸೆಲ್ಯುಲೋಸ್ ನಂಥ ಜೀರ್ಣವಾಗದ ವಸ್ತು) ಕೂಡ ಯಾಂತ್ರಿಕ ಹಾಗೂ ಜೀವರಾಸಾಯನಿಕ ಕಾರಣಗಳಿಗಾಗಿ ಅಗತ್ಯವಾಗಿದೆ.ಕಾರ್ಬೋಹೈಡ್ರೇಟ್ಗಳ ಮತ್ತು ಕೊಬ್ಬುಗಳ ಪರಮಾಣುಗಳು ಇಂಗಾಲ, ಜಲಜನಕ, ಮತ್ತು ಆಮ್ಲಜನಕದ ಅಣುಗಳನ್ನು ಹೊಂದಿರುತ್ತವೆ. ಕಾರ್ಬೋಹೈಡ್ರೇಟ್ಗಳು ಸರಳ ಮೋನೊಸ್ಯಾಕರೈಡ್(ಗ್ಲೂಕೋಸ್,ಫ್ರೂಕ್ಟೋಸ್,ಗ್ಯಾಲಕ್ಟೋಸ್)ಗಳಿಂದ ಸಂಕೀರ್ಣ ಪಾಲಿಸ್ಯಾಕರೈಡ್(ಸ್ಟಾರ್ಚ್್)ಗಳ ವರೆಗೆ ವ್ಯಾಪಿಸಿವೆ. ಕೊಬ್ಬು ಎಂಬುದು ಗ್ಲಿಸೆರಾಲ್ ಸರಪಳಿಗೆ ಜೋಡಣೆಗೊಂಡ ಮೇದಾಮ್ಲ ದ ಗೊಂಚಲುಗಳ ಟ್ರೈ-ಗ್ಲಿಸರೈಡ್ ರೂಪದಲ್ಲಿರುತ್ತದೆ. ಕೆಲವು ಮೇದಾಮ್ಲಗಳು, ಎಲ್ಲವೂ ಅಲ್ಲ, ಆಹಾರದಲ್ಲಿ ಅಗತ್ಯವಾಗಿವೆ: ಅವು ದೇಹದಲ್ಲಿ ಸಂಶ್ಲೇಷಿಸಲ್ಪಡುವುದಿಲ್ಲ. ಪ್ರೋಟೀನ್ ಪರಮಾಣುಗಳು ಇಂಗಾಲ, ಆಮ್ಲಜನಕ ಮತ್ತು ಜಲಜನಕದೊಂದಿಗೆ ನೈಟ್ರೋಜನ್ ಅಣುಗಳನ್ನು ಒಳಗೊಂಡಿರುತ್ತವೆ. ಪ್ರೋಟೀನ್ ನ ಕೆಲವು ಮೂಲಭೂತ ಘಟಕಗಳೆಂದರೆ, ಮನುಷ್ಯದೇಹದಲ್ಲಿ ಆಂತರಿಕವಾಗಿ ತಯಾರಾಗದಿರುವ ಕಾರಣದಿಂದ ಅತ್ಯಗತ್ಯವಾದ ಅಮೈನೋ ಆಮ್ಲವನ್ನೊಳಗೊಂಡ ನೈಟ್ರೋಜನ್. ಕೆಲವು ಅಮೈನೋ ಆಮ್ಲಗಳು ಗ್ಲೂಕೋಸ್ ಆಗಿ ಪರಿವರ್ತಿಸಲಾಗುವಂಥವು(ಶಕ್ತಿಯ ವ್ಯಯದೊಂದಿಗೆ) ಮತ್ತು ಸಾಮಾನ್ಯ ಗ್ಲೂಕೋಸ್ ನಂತೆ ಇದನ್ನೂ ಕೂಡ ಶಕ್ತಿಯುತ್ಪಾದನೆಗೆ ಬಳಸಬಹುದು. ಇರುವ ಪ್ರೋಟೀನನ್ನು ವಿಭಾಗಿಸುವ ಮೂಲಕ ಆಂತರಿಕವಾಗಿ ಒಂದಷ್ಟು ಗ್ಲೂಕೋಸ್ ಉತ್ಪತ್ತಿಯಾಗುತ್ತದೆ; ಉಳಿದ ಅಮೈನೋ ಆಮ್ಲಗಳು ಯೂರಿಯಾ ರೂಪದಲ್ಲಿ ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಇದು ಸಾಮಾನ್ಯವಾಗಿ ವಿಸ್ತರಿತ ಉಪವಾಸದ ಸಂದರ್ಭದಲ್ಲಿ ಮಾತ್ರ ಉಂಟಾಗುತ್ತದೆ.ಇತರ ಸಣ್ಣಮಟ್ಟಿನ ಪೋಷಕಾಂಶಗಳು ಕೆಲವು ದೈಹಿಕ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ(ಅಥವಾ ಅದನ್ನು ರಕ್ಷಿಸುವ) ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕ ಮತ್ತು ಸಸ್ಯರಾಸಾಯನಿಕಗಳನ್ನು ಒಳಗೊಂಡಿವೆ. ಅವುಗಳ ಅಗತ್ಯವು ವಿಟಮಿನ್ ಗಳಷ್ಟಿದೆಯೇ ಎಂಬುದು ಸರಿಯಾಗಿ ದೃಢೀಕರಿಸಲ್ಪಟ್ಟಿಲ್ಲ.ಹೆಚ್ಚಿನ ಆಹಾರಗಳು, ವಿಷಗಳಂಥ ಅಥವಾ ವಿವಿಧ ಬಗೆಗಳ ಇತರ ವಸ್ತುಗಳೊಂದಿಗೆ ಕೆಲವು ಅಥವಾ ಎಲ್ಲ ಬಗೆಯ ಪೌಷ್ಟಿಕಾಂಶಗಳ ಮಿಶ್ರಣವನ್ನು ಹೊಂದಿರುತ್ತವೆ. ಕೆಲವು ಪೌಷ್ಟಿಕಾಂಶಗಳು ದೇಹದಲ್ಲಿ ಆಂತರಿಕವಾಗಿ ಶೇಖರಿಸಲ್ಪಟ್ಟರೆ (ಉದಾ, ಕೊಬ್ಬು ಕರಗುವ ವಿಟಮಿನ್ ಗಳು), ಉಳಿದವು ಹೆಚ್ಚುಕಮ್ಮಿ ನಿರಂತರವಾಗಿ ಅಗತ್ಯವಿರುತ್ತವೆ. ಅನಾರೋಗ್ಯವು ಅಗತ್ಯ ಪೌಷ್ಟಿಕಾಂಶಗಳ ಕೊರತೆಯಿಂದ ಉಂಟಾಗಬಹುದು ಅಥವಾ ಕೆಲವು ವೈಪರೀತ್ಯ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪೌಷ್ಟಿಕಾಂಶಗಳ ಒದಗುವಿಕೆಯಿಂದಲೂ ಉಂಟಾಗಬಹುದು. ಉದಾಹರಣೆಗೆ ಉಪ್ಪು ಮತ್ತು ನೀರು (ಎರಡೂ ಅತೀಅಗತ್ಯ), ಹೆಚ್ಚಾದಲ್ಲಿ ಅನಾರೋಗ್ಯ ಅಥವಾ ಮರಣವನ್ನೂ ತಂದೊಡ್ಡಬಹುದು.
ಟೊಸ್ಟ್ ಮಾಡಿದ ಬ್ರೆಡ್ ಅಗ್ಗವಾಗಿದ್ದು, ಹೆಚ್ಚು ಕ್ಯಾಲೋರಿ ಪೌಷ್ಟಿಕಾಂಶದ (ಸಾಮಾನ್ಯವಾಗಿ ಅಸಮತೋಲನವಾಗಿದ್ದು, ಬೇಕಿರುವ ಮಿನರಲ್ಗಳು ಹಾಗೂ ವಿಟಮಿನ್ಗಳು ಕಡಿಮೆ ಇದ್ದು, ಹೆಚ್ಚಾಗಿ ಪ್ರಕ್ರಿಯೆಗೊಳಿಸುವಾಗ ಕ್ರಿಮಿಗಳ ಹಾಗೂ ಹೊಟ್ಟು ತೆಗೆಯುವುದರಿಂದ) ಆಹಾರದ ಮೂಲ.]]ಕಾರ್ಬೋಹೈಡ್ರೇಟ್ಗಳನ್ನು ಅವು ಒಳಗೊಂಡಿರುವ ಮೊನೋಮರ್(ಸಕ್ಕರೆ)ಗಳ ಸಂಖ್ಯೆಯ ಆಧಾರದಲ್ಲಿ ಮೊನೊಸ್ಯಾಕರೈಡ್ ಗಳು, ದ್ವಿಸ್ಯಾಕರೈಡ್ಗಳು ಅಥವಾ ಟ್ರೈಸ್ಯಾಕರೈಡ್ಗಳೆಂದು ವಿಭಾಗಿಸಬಹುದು. ಅವು ಅಕ್ಕಿ, ನೂಡಲ್ ಗಳು, ಬ್ರೆಡ್ ಹಾಗೂ ಇತರ ಧಾನ್ಯ ಆಹಾರಗಳಲ್ಲಿ ಪ್ರಮುಖ ಘಟಕಗಳಾಗಿವೆ.ಮೊನೊಸ್ಯಾಕರೈಡ್ಗಳು ಒಂದು , ದ್ವಿಸ್ಯಾಕರೈಡ್ಗಳು ಎರಡು ಹಾಗೂ ಪಾಲಿಸ್ಯಾಕರೈಡ್ಗಳು ಮೂರು ಅಥವಾ ಹೆಚ್ಚು ಸಕ್ಕರೆಯ ಘಟಕಗಳನ್ನು ಹೊಂದಿರುತ್ತವೆ. ಪಾಲಿಸ್ಯಾಕರೈಡ್ಗಳು ಸಕ್ಕರೆ ಘಟಕಗಳ ಉದ್ದವಾದ, ಅನೇಕ ವಿಭಾಗಗಳಾಗಿ ಕವಲೊಡೆದ ಸರಪಳಿಯನ್ನು ಹೊಂದಿರುವುದರಿಂದ, ಅವು ಹೆಚ್ಚಾಗಿ ಸಂಕೀರ್ಣ ಕಾರ್ಬೋಹೈಡ್ರೇಟ್ಗಳೆಂದು ಕರೆಯಲ್ಪಡುತ್ತವೆ. ವ್ಯತ್ಯಾಸವೇನೆಂದರೆ, ಹೀರಿಕೊಳ್ಳುವಿಕೆಯ ಮೊದಲು ಈ ಸಂಕೀರ್ಣ ಕಾರ್ಬೋಹೈಡ್ರೇಟ್ಗಳಲ್ಲಿನ ಸಕ್ಕರೆಯು ಸರಪಳಿಯಿಂದ ಬೇರ್ಪಡಿಸಲ್ಪಡಬೇಕಾದ ಕಾರಣ ಅವು ಜೀರ್ಣವಾಗಲು ಮತ್ತು ದೇಹಗತವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ರಕ್ತಕ್ಕೆ ಸಕ್ಕರೆಯ ಸೇರ್ಪಡಿಸುವಿಕೆಯಿಂದ ಆದ ಗ್ಲೂಕೋಸ್ನ ಕ್ಷಿಪ್ರ ಏರುಪೇರು ಇತ್ತೀಚಿನ ದಿನಗಳಲ್ಲಿ ಕಂಡುಬರುವ ಹೃದಯ ಸಂಬಂಧಿ ರೋಗಗಳಿಗೆ ಕಾರಣವೆಂದು ನಂಬಲಾಗಿದೆ. ಆಧುನಿಕ ಆಹಾರಪದ್ಧತಿಯು ಮೊದಲಿನದ್ದಕ್ಕಿಂತ ಹೆಚ್ಚಿನ ಸಕ್ಕರೆಯಂಶದಿಂದ ಮಾಡಲ್ಪಟ್ಟಿರುತ್ತದೆ. ಇದು ಹೃದಯರಕ್ತನಾಳ ಸಂಬಂಧಿ ರೋಗಗಳಿಗೆ ದಾರಿಮಾಡಿಕೊಡುತ್ತದೆ. ಆದರೆ ಅದರ ಪರಿಣಾಮದ ಪ್ರಮಾಣ ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಸರಳ ಕಾರ್ಬೋಹೈಡ್ರೇಟ್ಗಳು ಬಹಳ ಬೇಗ ಹೀರಿಕೊಳ್ಳಲ್ಪಡುತ್ತವೆ ಮತ್ತು ಹಾಗಾಗಿ ರಕ್ತದಲ್ಲಿ ಸಕ್ಕರೆಯಂಶದ ಪ್ರಮಾಣವನ್ನು ಇತರ ಪೌಷ್ಟಿಕಾಂಶಗಳಿಗಿಂತಲೂ ವೇಗವಾಗಿ ಹೆಚ್ಚುಮಾಡುತ್ತವೆ. ಆದರೆ, ಅತ್ಯಂತ ಪ್ರಮುಖ ಸಸ್ಯ ಕಾರ್ಬೋಹೈಡ್ರೇಟ್ ಪೌಷ್ಟಿಕಾಂಶವಾದ ಸ್ಟಾರ್ಚ್್ನ ಹೀರಿಕೊಳ್ಳುವಿಕೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸಾದಾ ಸ್ಟಾರ್ಚ್್ಗಿಂತ ಜಿಲಾಟಿನೈಜ್ ಮಾಡಿದ ಸ್ಟಾರ್ಚ್್ (ನೀರಿನೊಂದಿಗೆ ಕೆಲವು ನಿಮಿಷ ಬಿಸಿಮಾಡಿದ ಸ್ಟಾರ್ಚ್್) ಹೆಚ್ಚು ಜೀರ್ಣಕಾರಿ. ಹಾಗೂ ಸೂಕ್ಷ್ಮ ಭಾಗಗಳಾಗಿ ವಿಭಾಗಿಸಲ್ಪಟ್ಟ ಸ್ಟಾರ್ಚ್್ ಕೂಡ ಜೀರ್ಣಕ್ರಿಯೆಯ ಸಂದರ್ಭ ಹೆಚ್ಚು ಹೀರಿಕೊಳ್ಳಲ್ಪಡುತ್ತದೆ. ಹೆಚ್ಚಾದ ಶ್ರಮ ಮತ್ತು ಕಡಿಮೆಯಾಗುತ್ತಿರುವ ಸ್ಟಾರ್ಚ್್ ಯುಕ್ತ ಆಹಾರವಸ್ತುಗಳ ದೊರೆಯುವಿಕೆಯು ಅವುಗಳಿಂದ ಸಿಗುವ ಶಕ್ತಿಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಇದನ್ನು ಇಲಿಗಳಲ್ಲಿ ಪ್ರಾಯೋಗಿಕವಾಗಿಯೂ ಹಾಗೂ ಮನುಷ್ಯರಲ್ಲಿ ಕಥಾನಕವಾಗಿಯೂ ಕಾಣಬಹುದು. ಜೊತೆಗೆ, ಕೆಲವು ಯಾಂತ್ರಿಕ ಮತ್ತು ರಾಸಾಯನಿಕ ಕ್ಲಿಷ್ಟತೆಯ ಕಾರಣಗಳಿಂದ ಆಹಾರದಲ್ಲಿರುವ ಸ್ಟಾರ್ಚ್್ನ ಮೂರನೇ ಒಂದು ಭಾಗದಷ್ಟು ಸಿಗದೇ ಹೋಗಬಹುದು.
ಆಹಾರದಲ್ಲಿರುವ ಕೊಬ್ಬಿನ ಒಂದು ಪರಮಾಣು ಪ್ರಾತಿನಿಧಿಕವಾಗಿ ಗ್ಲಿಸೆರಾಲ್ ಗೆ ಬಂಧಿಸಲ್ಪಟ್ಟ ಹಲವಾರು ಮೇದಾಮ್ಲ (ಇಂಗಾಲ ಮತ್ತು ಜಲಜನಕಗಳ ದೀರ್ಘ ಸರಪಳಿಯನ್ನು ಹೊಂದಿರುವವು)ಗಳನ್ನು ಒಳಗೊಂಡಿರುತ್ತದೆ. ಅವು ಲಾಕ್ಷಣಿಕವಾಗಿ ಟ್ರೈಗ್ಲಿಸರೈಡ್(ಒಂದು ಗ್ಲಿಸೆರಾಲ್ ಗೆ ಸೇರಿಕೊಂಡ ಮೂರು ಮೇದಾಮ್ಲಗಳು) ಗಳಾಗಿ ಕಂಡುಬರುತ್ತವೆ. ಕೊಬ್ಬುಗಳು ಹೊಂದಿರುವ ಮೇದಾಮ್ಲಗಳ ವಿಸ್ತರಿತ ಅಧ್ಯಯನವನ್ನು ಆಧರಿಸಿ ಅವುಗಳನ್ನು ಪರ್ಯಾಪ್ತ ಅಥವಾ ಅಪರ್ಯಾಪ್ತವೆಂದು ವಿಭಾಗಿಸಬಹುದು. ಪರ್ಯಾಪ್ತ ಕೊಬ್ಬುಗಳಲ್ಲಿನ ಮೇದಾಮ್ಲ ಸರಪಳಿಗಳು ಜಲಜನಕದ ಅಣುಗಳಿಗೆ ಬಂಧಿಸಲ್ಪಟ್ಟ ಎಲ್ಲಾ ಇಂಗಾಲದ ಅಣುಗಳನ್ನು ಹೊಂದಿದ್ದರೆ, ಅಪರ್ಯಾಪ್ತ ಕೊಬ್ಬುಗಳು ಈ ಇಂಗಾಲದ ಅಣುಗಳಲ್ಲಿ ಕೆಲವನ್ನು ದ್ವಿ-ಬಂಧದಲ್ಲಿ ಹೊಂದಿರುತ್ತವೆ. ಹಾಗಾಗಿ ಅವುಗಳಲ್ಲಿನ ಪರಮಾಣುಗಳು, ಅಷ್ಟೇ ಅಳತೆಯ ಪರ್ಯಾಪ್ತ ಮೇದಾಮ್ಲಕ್ಕಿಂತ ಕಡಿಮೆ ಜಲಜನಕದ ಅಣುಗಳನ್ನು ಹೊಂದಿರುತ್ತವೆ. ಅಪರ್ಯಾಪ್ತ ಕೊಬ್ಬುಗಳನ್ನು ಪುನಃ, ಏಕಾಪರ್ಯಾಪ್ತ (ಒಂದು ದ್ವಿ-ಬಂಧ) ಹಾಗೂ ಬಹುಅಪರ್ಯಾಪ್ತ (ಹಲವು ದ್ವಿ-ಬಂಧಗಳು) ಎಂದು ವಿಂಗಡಣೆ ಮಾಡಬಹುದು. ಇಷ್ಟೇ ಅಲ್ಲದೆ, ಮೇದಾಮ್ಲ ಸರಪಳಿಯಲ್ಲಿ ದ್ವಿ-ಬಂಧವಿರುವ ಸ್ಥಾನದ ಆಧಾರದಲ್ಲಿ, ಅಪರ್ಯಾಪ್ತ ಮೇದಾಮ್ಲಗಳು ಒಮೇಗಾ-3 ಅಥವಾ ಒಮೆಗ-6 ಮೇದಾಮ್ಲಗಳೆಂದು ವಿಭಾಗಿಸಲ್ಪಟ್ಟಿವೆ ರೂಪಾಂತರಿತ ಕೊಬ್ಬುಗಳೆಂದರೆ ಬಹುರೂಪಿ ಅಂತರ್ -ಬಂಧಗಳಿರುವ ಅಪರ್ಯಾಪ್ತ ಕೊಬ್ಬಿನಂಶ. ನಿಸರ್ಗದಲ್ಲಿ ಇವುಗಳ ಅಸ್ತಿತ್ವ ಬಹಳ ಕಡಿಮೆ. ಇವುಗಳನ್ನು ಕಾರ್ಖಾನೆಗಳಲ್ಲಿ ವಿಶೇಷವಾದ ’ಹೈಡ್ರೋಜನೀಕರಣ’ ಎಂಬ ವಿಧಾನದಿಂದ ತಯಾರಿಸುತ್ತಾರೆ. ಅಪರ್ಯಾಪ್ತ ಕೊಬ್ಬುಗಳು, ನಿರ್ದಿಷ್ಟವಾಗಿ ಏಕಾಪರ್ಯಾಪ್ತ ಕೊಬ್ಬುಗಳು ಮನುಷ್ಯ ಆಹಾರ ಪದ್ಧತಿಯಲ್ಲಿ ಅತ್ಯುತ್ತಮವಾದವು ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಸಾಮಾನ್ಯವಾಗಿ ಪ್ರಾಣಿಜನ್ಯ ಪರ್ಯಾಪ್ತ ಕೊಬ್ಬುಗಳು ಅಂತರ್ಬಂಧ ಕೊಬ್ಬಿನಂಶಗಳಾಗಿರುತ್ತವೆ, ಇವುಗಳನ್ನು ಮುಖ್ಯವಾಗಿ ದೂರವಿಡಬೇಕಾಗುತ್ತದೆ. ಪರ್ಯಾಪ್ತ ಮತ್ತು ಕೆಲವು ರೂಪಾಂತರಿತ ಕೊಬ್ಬುಗಳು ಸಾಮಾನ್ಯ ತಾಪಮಾನದಲ್ಲಿ ಘನ ರೂಪ(ಬೆಣ್ಣೆ ಅಥವಾ ಹಂದಿ ಕೊಬ್ಬಿನಂತೆ)ದಲ್ಲಿದ್ದರೆ, ಅಪರ್ಯಾಪ್ತ ಕೊಬ್ಬುಗಳು ದ್ರವರೂಪ(ಆಲಿವ್ ಎಣ್ಣೆ ಅಥವಾ ಅಗಸೆಬೀಜದ ಎಣ್ಣೆಯಂತೆ)ದಲ್ಲಿರುತ್ತವೆ. ರೂಪಾಂತರಿತ ಕೊಬ್ಬು ಪ್ರಾಕೃತಿಕವಾಗಿ ಸಿಗುವುದು ವಿರಳ. ಆದರೆ ಅವು ಆಹಾರ ಸಂಸ್ಕರಣಾ ಉದ್ದಿಮೆಗಳಲ್ಲಿ ಕಮಟುವಾಸನೆಯನ್ನು ತಡೆಯಲು ಉಪಯೋಗವಾಗುವ ವಿಶೇಷ ಗುಣಗಳನ್ನು ಹೊಂದಿವೆ.[12]
ಹೆಚ್ಚಿನ ಮೇದಾಮ್ಲಗಳು ಅವಶ್ಯಕವೇನಲ್ಲ. ಎಂದರೆ, ದೇಹವೇ ಶಕ್ತಿಯನ್ನು ವ್ಯಯಿಸಿ ಇತರ ಮೇದಾಮ್ಲಗಳಿಂದ ಅವುಗಳನ್ನು ಬೇಕಾದಾಗೆಲ್ಲ ತಯಾರು ಮಾಡುತ್ತದೆ. ಆದಾಗ್ಯೂ, ಮನುಷ್ಯರಿಗೆ ಕನಿಷ್ಟ ಎರಡು ಮೇದಾಮ್ಲಗಳು ಅಗತ್ಯ ಮತ್ತು ಅವು ಆಹಾರದಲ್ಲಿ ಇರಲೇಬೇಕು. ನಿಖರ ಪ್ರಾಯೋಗಿಕ ಪ್ರತಿಪಾದನೆ ಸಿಕ್ಕದಿದ್ದರೂ, ಅಗತ್ಯ ಮೇದಾಮ್ಲಗಳ ಸಮತೂಗಿಸುವಿಕೆ -- ಒಮೇಗಾ-3 ಅಥವಾ ಒಮೆಗ-6 ಮೇದಾಮ್ಲಗಳು -- ಕೂಡ ಆರೋಗ್ಯಕ್ಕೆ ಅಗತ್ಯವೆನಿಸಿವೆ. ಈ ಎರಡೂ ’ಒಮೇಗಾ’ದ ಕೊಬ್ಬಿನಾಂಶದ ಸರಪಳಿಯ ಬಹುಅಪರ್ಯಾಪ್ತ ಮೇದಾಮ್ಲ ಗಳು ಐಕೋಸನಾಯ್ಡ್ ಎಂಬ ಪ್ರಬೇಧದ ಉಪವಸ್ತುವಾದ ಪ್ರೊಸ್ಟಾಗ್ಲಾಂಡಿನ್ ಸಂಯುಕ್ತವನ್ನು ಉಂಟುಮಾಡುತ್ತದೆ. ಇದು ಮನುಷ್ಯನ ದೇಹದಾದ್ಯಂತ ಉಪಯುಕ್ತವಾಗಿದೆ. ಕೆಲವು ಅಂಶಗಳಲ್ಲಿ ಅವು ಹಾರ್ಮೋನ್ ಗಳು. ಒಮೇಗ-3 ಐಕೋಸಾಪೆಂಟಿನಾಯಿಕ್ ಆಮ್ಲ ವನ್ನು (EPA) ಮಾನವನ ಶರೀರದಲ್ಲಿ ಅವಶ್ಯವಾಗಿ ಇರುವ ಒಮೇಗ-3 ಆಲ್ಪಾ-ಲಿನೋಲೆನಿಕ್ ಆಮ್ಲ (LNA)ದಿಂದ, ಅಥವಾ ಸಮುದ್ರಜನ್ಯ ಆಹಾರಗಳಿಂದಲೂ ತಯಾರಿಸಬಹುದಾಗಿದೆ. ಇದು ಸೀರೀಸ್-3 ಪ್ರೋಸ್ಟಾಗ್ಲಾಂಡಿ (ದುರ್ಬಲ PGE3)ಸ್ ನ ಅಡಿಪಾಯವಾಗಿದೆ. ಒಮೇಗಾ-6 ಡಿಹೋಮೋ-ಗಾಮಾ-ಲಿನೊಲೆನಿಕ್ ಆಮ್ಲವು ಸೀರೀಸ್ -1 ಪ್ರೋಸ್ಟಾಗ್ಲಾಂಡಿನ್ಸ್ (ಉದಾ: ಬೆಂಕಿಶಮನಕಾರಕ PGE1 )ನ ಅಡಿಪಾಯವಾಗಿದೆ. ಅಂತೆಯೇ, ಎರಾಚಿಡೋನಿಕ್ ಆಮ್ಲವು ಸೀರೀಸ್-2 ಪ್ರೊಸ್ಟಾಗ್ಲಾಂಡಿನ್ಸ್ (ಉದಾ: ಬೆಂಕಿ ವೃದ್ಧಿಕಾರಕ PGE 2). DGLA ಮತ್ತು AA ಗಳನ್ನು ಮಾನವನ ದೇಹದಲ್ಲಿನ ಒಮೇಗಾಾ-6 ಲಿನೊಲೀಕ್ ಆಮ್ಲ (LA)ದಿಂದ ತಯಾರಿಬಹುದಾಗಿದೆ, ಅಥವಾ ಆಮ್ಲವನ್ನೇ ನೇರವಾಗಿ ಸೇವಿಸಿಕೊಳ್ಳಬಹುದು. ಒಮೇಗಾ-6 ಮತ್ತು ಒಮೇಗಾ-3 ರ ಸಂತುಲಿತ ಸೇವನೆಯಿಂದ ವಿವಿಧ ಪ್ರೊಸ್ಟಾಗ್ಲಾಂಡಿನ್ಸ್ ಗಳ ಉತ್ಪಾದನೆಗಳಾಗುತ್ತವೆ. ಹೃದಯದ ಆರೋಗ್ಯಕ್ಕಾಗಿ ಈ ಒಮೇಗಾ-6 ಮತ್ತು ಒಮೇಗಾ-3ರ ನಡುವಿನ ಸಮತೋಲನ ಅತ್ಯಗತ್ಯವಾಗಿದೆ. ಕೈಗಾರೀಕರಣಗೊಂಡ ಸಮಾಜದಲ್ಲಿ, ಸಾಮಾನ್ಯ ಜನರು ಬಹುವಾಗಿ ಬಳಸುವ ತರಕಾರಿ ಎಣ್ಣೆಯಲ್ಲಿ ’ಅಗತ್ಯದ ಕೊಬ್ಬಿನಾಂಶ’ ಕಡಿಮೆಯಾಗಿರುತ್ತದೆ. ಒಮೇಗಾ-6ರ ಅಂಶ ಹೆಚ್ಚಿದ್ದು, ಒಮೇಗಾ-3 ರ ಕಡಿಮೆ ಪ್ರಮಾಣವು ಅಸಮತೋಲನಕ್ಕೆ ಕಾರಣವಾಗಿದೆ.ಒಮೇಗಾ-6 DGLA ನಿಂದ AA ಗೆ ಪರಿವರ್ತಿಸುವ ದರವು, PGE1ಮತ್ತು ಏ2 ಪ್ರೋಸ್ಟಾಗ್ಲಾಂಡಿನ್ಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ತಿಳಿಸುತ್ತದೆ. ಒಮೇಗಾ-3 EPAಯು ಒಳಚರ್ಮದಿಂದ AA ಬಿಡುಗಡೆಯಾಗುವುದನ್ನು ತಡೆಯುತ್ತದೆ. ಇದರಿಂದ ಬೆಂಕಿ ವೃದ್ಧಿಕಾರಕ PGE 2 (AAಯಿಂದ ಮಾಡಲ್ಪಟ್ಟದ್ದು) ಮತ್ತು ಬೆಂಕಿಶಮನಕಾರಕ PGE1 (DGLAಯಿಂದ ಮಾಡಲ್ಪಟ್ಟದ್ದು) ಗಳ ಪ್ರೊಸ್ಟಾಗ್ಲಾಂಡಿನ್ ಸಮತೋಲನ ತಿರುಚಲ್ಪಡುತ್ತದೆ. ಅಲ್ಲದೆ, DGLAಯಿಂದ AAಗೆ ಮಾರ್ಪಡಿಸುವಿಕೆ (ಅಪರ್ಯಾಪ್ತಗೊಳಿಸುವಿಕೆ)ಯು ಡೆಲ್ಟಾ-5-ಡಿಸ್ಯಾಚುರೈಸ್ ಕಿಣ್ವದಿಂದ ನಿಯಂತ್ರಿಸಲ್ಪಡುತ್ತದೆ. ಈ ಪ್ರಕ್ರಿಯೆಯುಇನ್ಸುಲಿನ್(ಮೇಲ್ನಿಯಂತ್ರಣ) ಮತ್ತು ಗ್ಲುಕಾಗಾನ್(ಕೆಳನಿಯಂತ್ರಣ)ಗಳಂಥ ಹಾರ್ಮೋನ್ ಗಳಿಂದ ನಿಯಂತ್ರಿಸಲ್ಪಡುತ್ತದೆ. ಕೆಲವು ವಿಧದ ಅಮೈನೋ ಆಮ್ಲಗಳೊಂದಿಗೆ, ಹೀರಿಕೊಳ್ಳಲ್ಪಟ್ಟ ಕಾರ್ಬೋಹೈಡ್ರೇಟ್ಗಳ ಪ್ರಮಾಣವು ಇನ್ಸುಲಿನ್, ಗ್ಲುಕಗಾನ್, ಮತ್ತು ಇತರ ಹಾರ್ಮೋನುಗಳನ್ನು ಒಳಗೊಂಡಿರುವ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಬಹುದು; ಹಾಗಾಗಿ ಒಮೇಗಾ-3 ಮತ್ತು ಒಮೆಗ-6ರ ಅನುಪಾತವು ಸಾಮಾನ್ಯ ಆರೋಗ್ಯದ ಮೇಲೆ ವಿಸ್ತರಿತ ಪರಿಣಾಮ ಹೊಂದಿದೆ, ಹಾಗೂ ವಿನಾಯಿತ ಕ್ರಿಯೆ ಮತ್ತು ಜ್ವಲನ, ಹಾಗೂ ಮೈಟಾಸಿಸ್(ಎಂದರೆ ಕೋಶವಿಭಜನೆ)ಗಳ ಮೇಲೆ ನಿರ್ದಿಷ್ಟ ಪರಿಣಾಮ ಹೊಂದಿದೆ. ಹೆಚ್ಚಿನ ತರಕಾರಿಗಳು, ಕಾಯಿಗಳು, ಬೀಜಗಳು, ಸಮುದ್ರದಲ್ಲಿ ದೊರೆಯುವ ಎಣ್ಣೆಗಳು[15] ಇವೆಲ್ಲ ಅಗತ್ಯ ಮೇದಾಮ್ಲಗಳ ಉತ್ತಮ ಮೂಲಗಳು. ಮೀನು, ಅಗಸೆ ಬೀಜದ ಎಣ್ಣೆ, ಸೋಯಬೀನ್, ಸಿಹಿಕುಂಬಳ ಬೀಜ, ಸೂರ್ಯಕಾಂತಿ ಬೀಜ ಮತ್ತು ಅಕ್ರೋಟುಕಾಯಿ - ಇವುಗಳೆಲ್ಲ ಅಗತ್ಯ ಮೇದಾಮ್ಲದ ಅತ್ಯುತ್ತಮ ಮೂಲಗಳು.
ಆಹಾರದಲ್ಲಿನ ಫೈಬರ್ ಎಂದರೆ ಮನುಷ್ಯರಲ್ಲಿ ಮತ್ತು ಕೆಲವು ಪ್ರಾಣಿಗಳಲ್ಲಿ ಪೂರ್ತಿಯಾಗಿ ಹೀರಿಕೊಳ್ಳಲ್ಪಡದ ಕಾರ್ಬೋಹೈಡ್ರೇಟ್(ಅಥವ ಪಾಲಿಸ್ಯಾಕರೈಡ್)ಗಳು. ಉಪವಾಚಯಿಸಲ್ಪಟ್ಟಾಗ ಇತರ ಕಾರ್ಬೋಹೈಡ್ರೇಟ್ಗಳಂತೆ ಇದೂ ಕೂಡ ಪ್ರತಿ ಗ್ರಾಂಗೆ ನಾಲ್ಕು ಕ್ಯಾಲೊರಿ(ಕಿಲೊಕ್ಯಾಲೊರಿ)ಗಳಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. ಆದರೆ ಅದರ ಹೀರಿಕೊಳ್ಳುವಿಕೆ ಮತ್ತು ಪಚನವಾಗುವಿಕೆ ಸೀಮಿತವಾದ್ದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಇದಕ್ಕಿಂತ ಕಡಿಮೆ ಶಕ್ತಿ ಉತ್ಪಾದನೆಯಾಗುವುದು. ಆಹಾರದಲ್ಲಿನ ಫೈಬರ್ ಮುಖ್ಯವಾಗಿ ಸೆಲ್ಯುಲೋಸ್ ನ್ನು ಹೊಂದಿದೆ. ಇದನ್ನು ಪಚನಮಾಡಲು ಅಗತ್ಯ ಕಿಣ್ವಗಳು ಇಲ್ಲದಿರುವುದರಿಂದ ಇದು ಮನುಷ್ಯದೇಹದಲ್ಲಿ ಜೀರ್ಣವಾಗದ, ದೊಡ್ಡ ಕಾರ್ಬೋಹೈಡ್ರೇಟ್ ಪಾಲಿಮರ್. ಇದರಲ್ಲಿ ಎರಡು ಉಪವಿಭಾಗಗಳಿವೆ: ಕರಗುವ ಮತ್ತು ಕರಗದ ಫೈಬರ್. ಇಡಿ ಧಾನ್ಯಗಳು, ಹಣ್ಣುಗಳು (ವಿಶೇಷವಾಗಿ ದ್ರಾಕ್ಷಿ, ಒಣದ್ರಾಕ್ಷಿ ಮತ್ತು ಅಂಜೂರದ ಹಣ್ಣುಗಳು), ಹಾಗೂ ತರಕಾರಿಗಳು ಆಹಾರದ ಫೈಬರ್ ನ ಉತ್ತಮ ಮೂಲಗಳು. ಫೈಬರ್, ಆರೋಗ್ಯಕರ ಜೀರ್ಣಕ್ರಿಯೆಗೆ ಅತೀ ಅಗತ್ಯ ಮತ್ತು ಅದು ದೊಡ್ಡ ಕರುಳಿನ ಕ್ಯಾನ್ಸರ್ ಸಂಭನೀಯತೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಯಾಂತ್ರಿಕ ಕಾರಣಗಳಿಗಾಗಿ ಅದು ಮಲಬದ್ಧತೆ ಮತ್ತು ಅತಿಸಾರವನ್ನು ಕಡಿಮೆಮಾಡಲು ಸಹಾಯ ಮಾಡಬಲ್ಲುದು. ಕರುಳಿನ ಒಳಾಂಶಗಳ ಬಹುಭಾಗವನ್ನು ಫೈಬರ್ ಒದಗಿಸುತ್ತದೆ. ಮತ್ತು ಕರಗದ ಫೈಬರ್ ವಿಶೇಷವಾಗಿ, ಪೆರಿಸ್ಟಾಲ್ಸಿಸ್—ಜೀರ್ಣಕವನ್ನು ಜೀರ್ಣನಾಳದ ಮೂಲಕ ಕೊಂಡೊಯ್ಯುವ ಕರುಳಿನ ಲಯಬದ್ಧ ಸ್ನಾಯುಸಂಕೋಚನೆಯನ್ನು ಉತ್ತೇಜಿಸುತ್ತದೆ. ಕೆಲವು ಕರಗುವ ಫೈಬರ್ಗಳು ತುಂಬಾ ಸ್ನಿಗ್ಧತೆಯನ್ನೊಳಗೊಂಡ ದ್ರಾವಣವನ್ನು ಒದಗಿಸುತ್ತವೆ; ಇದು ಕರುಳಿನ ಮೂಲಕ ಆಹಾರ ಸಾಗಣೆಯಾಗುವುದನ್ನು ನಿಧಾನಿಸುವ ಒಂದು ಅಗತ್ಯ ಜೆಲ್. ಜೊತೆಗೆ, ವಿಶೇಷವಾಗಿ ಇಡಿ ಧಾನ್ಯಗಳಿಂದ ಸಿಗುವ ಫೈಬರ್, ಇನ್ಸುಲಿನ್ನ ಏರಿಳಿತವನ್ನು ಕಡಿಮೆ ಮಾಡಿ ಡಯಾಬಿಟಿಸ್ ಪ್ರಕಾರ 2ರ ಸಂಭವನೀಯತೆಯನ್ನು ಕಡಿಮೆಗೊಳಿಸುತ್ತದೆ.
ಪ್ರೋಟಿನ್ಗಳು ಪ್ರಾಣಿಗಳ ಹಲವಾರು ದೇಹಭಾಗ(ಉದಾ: ಸ್ನಾಯುಗಳು, ಚರ್ಮ, ಮತ್ತು ಕೂದಲು)ಗಳಿಗೆ ಆಧಾರ. ಅವು ದೇಹಾದ್ಯಂತ ನಡೆಯುವ ರಾಸಾಯನಿಕ ಕ್ರಿಯೆಗಳನ್ನು ನಿಯಂತ್ರಿಸುವ ಕಿಣ್ವಗಳನ್ನೂ ರೂಪುಗೊಳಿಸುತ್ತವೆ. ಪ್ರತಿಯೊಂದು ಪರಮಾಣುವೂ ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. ಅವು ವಿಶಿಷ್ಟವಾಗಿ ನೈಟ್ರೋಜನ್ ಮತ್ತು ಕೆಲವೊಂದುಬಾರಿ ಸಲ್ಫರ್ನ್ನು ಒಳಗೊಂಡು ರೂಪಿತವಾಗಿರುತ್ತವೆ (ಈ ವಸ್ತುಗಳು ಉರಿಯುತ್ತಿರುವ ಪ್ರೋಟೀನ್ ನ ಅಸಾಮಾನ್ಯ ವಾಸನೆಗೆ ಕಾರಣವಾಗುತ್ತವೆ, ಕೂದಲಿನಲ್ಲಿರುವ ಕೆರಟಿನ್ ನಂತೆ). ದೇಹವು ಹೊಸ ಪ್ರೋಟೀನ್ನ್ನು ಉತ್ಪತ್ತಿ ಮಾಡಲು(ಪ್ರೋಟೀನ್ ಪ್ರತಿಧಾರಣ) ಮತ್ತು ಹಾನಿಗೊಂಡ ಪ್ರೋಟೀನ್ಗಳನ್ನು ಮರುಪೂರಣ ಮಾಡಲು(ನಿರ್ವಹಣೆ) ಅಮೈನೋ ಆಮ್ಲದ ಅಗತ್ಯವಿದೆ. ಪ್ರೋಟೀನ್ ಅಥವಾ ಅಮೈನೋ ಆಮ್ಲಗಳು ದೇಹದಲ್ಲಿ ಸಂಗ್ರಹವಾಗುವ ವ್ಯವಸ್ಥೆ ಇಲ್ಲದಿರುವುದರಿಂದ ಅವು ಆಹಾದರದಲ್ಲಿರುವುದು ಅತ್ಯಗತ್ಯ. ಹೆಚ್ಚಾದ ಅಮೈನೋ ಆಮ್ಲಗಳು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಎಲ್ಲಾ ಪ್ರಾಣಿಗಳಿಗೂ, ಕೆಲವು ಅಮೈನೋ ಆಮ್ಲಗಳು ಅಗತ್ಯ (ದೇಹದೊಳಗೇ ತಯಾರಿಸಲು ಅಸಾಧ್ಯವಾದವು) ಮತ್ತು ಕೆಲವು ಅನಗತ್ಯ (ಇತರ ನೈಟ್ರೋಜನ್ ಹೊಂದಿದ ವಸ್ತುಗಳಿಂದ ಅವುಗಳನ್ನು ತಯಾರಿಸಿಕೊಳ್ಳಬಹುದು). ಸುಮಾರು ಇಪ್ಪತ್ತು ಅಮೈನೋ ಅಮ್ಲಗಳು ಮನುಷ್ಯ ದೇಹದಲ್ಲಿ ಕಂಡುಬಂದಿವೆ, ಇವುಗಳಲ್ಲಿ ಹತ್ತು ಅಗತ್ಯವಾದವು. ಹಾಗಾಗಿ ಅವು ಆಹಾರದಲ್ಲಿ ಒಳಗೊಂಡಿರಬೇಕು. ಸಾಕಷ್ಟು ಪ್ರಮಾಣದ ಅಮೈನೋ ಆಮ್ಲ(ವಿಶೇಷವಾಗಿ ಅಗತ್ಯವಿರುವವು)ಗಳನ್ನು ಹೊಂದಿರುವ ಆಹಾರವು ಕೆಲವು ಸಂದರ್ಭಗಳಲ್ಲಿ ಮುಖ್ಯವೆನಿಸುತ್ತದೆ: ಬಾಲ್ಯದ ಬೆಳವಣಿಗೆಗಳಲ್ಲಿ ಮತ್ತು ಪ್ರೌಢತೆಯ ಹಂತದಲ್ಲಿ, ಗರ್ಭಧಾರಣೆಯ ಸಂದರ್ಭ, ಹಾಲೂಡಿಕೆಯ ಸಂದರ್ಭ, ಅಥವಾ ಗಾಯಗಳಾದಲ್ಲಿ (ಉದಾಹರಣೆಗೆ, ಸುಟ್ಟಗಾಯ). ಒಂದು ಪೂರ್ಣ ಪ್ರೋಟೀನ್ ಮೂಲ ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ; ಅಪೂರ್ಣ ಪ್ರೋಟೀನ್ ಮೂಲ ಒಂದೋ ಎರಡೋ ಅಗತ್ಯ ಅಮೈನೋ ಆಮ್ಲಗಳ ಕೊರತೆ ಹೊಂದಿರುತ್ತದೆ.ಎರಡು ಅಪೂರ್ಣ ಪ್ರೋಟೀನ್ ಮೂಲಗಳನ್ನು ಸೇರಿಸಿ ಒಂದು ಪೂರ್ಣ ಪ್ರೋಟೀನ್ ಮೂಲ ಮಾಡಲು ಸಾಧ್ಯವಿದೆ (ಉದಾ: ಅಕ್ಕಿ ಮತ್ತು ಬೀನ್ಸ್). ಹಾಗೂ ಬೇರೆ ಬೇರೆ ಗುಣಗಳನ್ನು ಒಟ್ಟುಸೇರಿಸುವುದು ವಿವಿಧ ಸಾಂಸ್ಕೃತಿಕ ಆಹಾರ ಪದ್ಧತಿಗಳ ಆಧಾರವಾಗಿದೆ. ಆಹಾರದಲ್ಲಿನ ಪ್ರೋಟೀನ್ ಮೂಲಗಳೆಂದರೆ ಮಾಂಸ, ತೋಫು ಮತ್ತು ಇತರ ಸೋಯಾ-ಪದಾರ್ಥಗಳು, ಮೊಟ್ಟೆ, ಧಾನ್ಯಗಳು, ದ್ವಿದಳ ಧಾನ್ಯಗಳು, ಹಾಗೂ ಹಾಲು ಮತ್ತು ಬೆಣ್ಣೆಯಂಥ ಡೈರಿ ಉತ್ಪನ್ನಗಳು. ಪ್ರೋಟೀನ್ನಲ್ಲಿನ ಕೆಲವು ಅಮೈನೋ ಆಮ್ಲಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸಿ ಗ್ಲುಕೊನಿಯೊಜೆನೆಸಿಸ್ ಎಂಬ ಪ್ರಕ್ರಿಯೆಯಾದ್ಯಂತ ಇಂಧನವಾಗಿ ಬಳಸಬಹುದು; ಇದು ಉಪವಾಸದ ಸಂದರ್ಭಗಳಲ್ಲಿ ಮಾಡಲ್ಪಡುತ್ತದೆ. ಇಂಥ ಪರಿವರ್ತನೆ ಪ್ರಕ್ರಿಯೆಯ ಬಳಿಕ ಉಳಿದ ಅಮೈನೋ ಆಮ್ಲಗಳು ಹೊರಹಾಕಲ್ಪಡುತ್ತವೆ.
ಆಹಾರದಲ್ಲಿನ ಖನಿಜಗಳೆಂದರೆ ಜೀವಿಗಳಿಗೆ ಅಗತ್ಯವಾದ, ಎಲ್ಲಾ ಜೀವಪರಮಾಣುಗಳಲ್ಲಿ ಇರುವ ಇಂಗಾಲ,ಜಲಜನಕ,ನೈಟ್ರೋಜನ್, ಮತ್ತು ಆಮ್ಲಜನಕ- ಈ ನಾಲ್ಕು ಮೂಲವಸ್ತುಗಳನ್ನು ಹೊರತುಪಡಿಸಿ ಇತರ ರಾಸಾಯನಿಕ ಮೂಲವಸ್ತುಗಳು. ಆಹಾರದಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಮೂಲವಸ್ತುಗಳನ್ನು ತಿಳಿಸುವುದರಿಂದ "ಖನಿಜ" ಎಂಬ ಪುರಾತನ ಪದ. ದೇಹದಲ್ಲಿ ಅಯಾನುಗಳಾಗಿ ಕಂಡುಬರುವ ಹಲವು ಲೋಹಗಳೂ ಸೇರಿದಂತೆ ಕೆಲವು ಖನಿಜಗಳು ಈಗಷ್ಟೆ ಹೇಳಿದ ನಾಲ್ಕು ಮೂಲವಸ್ತುಗಳಿಂದ ಹೆಚ್ಚು ಭಾರವಾಗಿರುತ್ತವೆ. ಇವುಗಳನ್ನು ಆಹಾರದಲ್ಲಿರುವಂತೆಯೇ, ಅಥವಾ ಸಂಯುಕ್ತ ವಸ್ತುಗಳ ರೂಪದಲ್ಲಿ, ಅಥವಾ ನೈಸರ್ಗಿಕ ಇನಾರ್ಗಾನಿಕ್ ಮೂಲಗಳಿಂದ (ಉದಾ: ಭೂಮಿಯೊಳಗಿನ ಸುಣ್ಣದ ಚಿಪ್ಪು) ಸೇವಿಸಬೇಕು ಎಂಬುದು ಕೆಲವು ಆಹಾರತಜ್ಞರ ಅಭಿಪ್ರಾಯ. ಕೆಲವು ಖನಿಜಗಳು ಅಯಾನಿನ ರೂಪದಲ್ಲಿ ಇರುವಾಗ ಹೆಚ್ಚು ಬೇಗ ಹೀರಲ್ಪಡುತ್ತದೆ. ಪರ್ಯಾಯವಾಗಿ, ಆಹಾರ ಪದಾರ್ಥಗಳಲ್ಲಿ ಖನಿಜಗಳನ್ನು ಅಯಾನಿನ ರೂಪದಲ್ಲಿ ಸೇರಿಸುತ್ತಾರೆ. ಉದಾ:ಗಾಯ್ಟರ್ ನಿಂದ ರಕ್ಷಿಸುವ ಅಡಿಗೆ ಉಪ್ಪಿನಲ್ಲಿ ಅಯೋಡಿನ್ ನನ್ನು ಅಯಾನ್ ರೂಪದಲ್ಲಿ ಸೇರಿಸಿರುತ್ತಾರೆ.
ಹಲವು ಧಾತುಗಳು ತುಲನಾತ್ಮಕ ಅಳತೆಯಲ್ಲಿ ಬೇಕಾಗುತ್ತವೆ; ಇವುಗಳಿಗೆ ಸಾಮಾನ್ಯವಾಗಿ "ಬಲ್ಕ್ ಮಿನರಲ್ಸ್" ಎನ್ನುತ್ತಾರೆ. ಕೆಲವು ವಿನ್ಯಾಸ ರೂಪದಲ್ಲಿರುತ್ತವೆ, ಆದರೆ ಹಲವು ಎಲೆಕ್ಟ್ರೋಲೈಟ್ಸ್ ಹಾಗೆ ಕೆಲಸ ಮಾಡುತ್ತವೆ.[೨] 200 ಎಂಜಿ/ಪ್ರತಿದಿನ ಕ್ಕಿಂತ ಹೆಚ್ಚು ರೆಕಮೆಂಡೆಡ್ ಡೈಯೆಟರಿ ಅಲೌವನ್ಸ್ (RDA) ಇರುವ ಧಾತುಗಳು ಈ ರೀತಿ ವರ್ಣಮಾಲೆಗೆ ಹೊಂದಿಸಿದ ಸರಣಿಯಲ್ಲಿ (ಅನೌಪಚಾರಿಕ ಅಥವಾ ಜನಸಾಮಾನ್ಯರ-ಔಷಧಿಯ ದೃಷ್ಟಿಕೋನ ಕಂಸದೊಳಗಿವೆ) ಇವೆ:
ಹಲವು ಧಾತುಗಳು ಚಿಕ್ಕ ಪ್ರಮಾಣದಲ್ಲಿ ಆವಶ್ಯಕವಾಗಿರುತ್ತದೆ, ಏಕೆಂದರೆ ಸಾಮಾನ್ಯವಾಗಿ ಇವು ಕಿಣ್ವಗಳಲ್ಲಿ ಕ್ರಿಯಾವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ.[೪] ಕೆಲವು ಸಣ್ಣ ಪ್ರಮಾಣದ ಖನಿಜಗಳ ಧಾತುಗಳು (RDA < 200 ಎಂಜಿ/ಪ್ರತಿದಿನ), ವರ್ಣಮಾಲೆಗೆ ಹೊಂದಿಸಿದ ಸರಣಿಯಲ್ಲಿ ಈ ರೀತಿಯಾಗಿವೆ:
ಮನುಷ್ಯರಲ್ಲಿ ಇದರ ಯಾವುದೇ ನಿಗದಿತವಾದ ಬೈಯೋಕೆಮಿಕಲ್ ಕಾರ್ಯ ಗುರುತಿಸಲಾಗಿಲ್ಲ, ಆದರೆ, ವೆನೆಡಿಯಂ ಕೆಲವು ಕೆಳಗಿನ ಜೀವಿಗಳಿಗೆ ಆವಶ್ಯಕವಿದೆ.)
ಮೇಲೆ ಚರ್ಚಿಸಿದಂತೆ ಖನಿಜಾಂಶಗಳು, ಕೆಲವು ಜೀವಸತ್ವಗಳು ಅಗತ್ಯವಾದ ಪೋಷಕಾಂಶಗಳಾಗಿ ಗುರುತಿಸಲ್ಪಡುತ್ತವೆ. ಅವು ಉತ್ತಮ ಆರೋಗ್ಯಕ್ಕಾಗಿ ರೂಢಿಸಿಕೊಂಡಿರುವ ಆಹಾರ ಪದ್ಧತಿಯಲ್ಲಿ ಅಗತ್ಯವಾಗಿವೆ. (ಜೀವಸತ್ವ ಡಿ ಯ ಹೊರತಾಗಿ: ಅದು ಚರ್ಮದಲ್ಲಿ, ಯುವಿಬಿ ವಿಕಿರಣದ ಉಪಸ್ಥಿತಿಯಲ್ಲಿ ಪರ್ಯಾಯವಾಗಿ ಸಂಯೋಜಿಸಬಹುದು.) ಕೆಲವು ಜೀವಸತ್ವ-ದಂತಹ ಸಂಯುಕ್ತಗಳು ಆಹಾರ ಕ್ರಮದಲ್ಲಿ ಕೆಲವು ಕಾರ್ನಿಟಿನ್ನನ್ನು ಸೂಚಿಸಲ್ಪಟ್ಟಿವೆ, ಅದು ಅವಶೇಷ ಮತ್ತು ಆಹಾರಗಳಿಗೆ ಉಪಯೋಗಾರ್ಹವಾಗಿವೆ, ಆದರೆ ಇವುಗಳು "ಅಗತ್ಯವಾದ" ಆಹಾರ ಕ್ರಮದ ಪೋಷಕಾಂಶಗಳಲ್ಲ, ಏಕೆಂದರೆ ಮಾನವನ ದೇಹವು ಇನ್ನಿತರ ಸಂಯುಕ್ತಗಳಿಂದ ಅವುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೆಚ್ಚಿನದಾಗಿ, ಸಾವಿರಾರು ವಿಭಿನ್ನ ಫೈಟೊಕೆಮಿಕಲ್ಸ್ನ್ನು ಇತ್ತೀಚೆಗೆ ಆಹಾರದಲ್ಲಿ (ನಿರ್ದಿಷ್ಟವಾಗಿ ತಾಜಾ ತರಕಾರಿಗಳಲ್ಲಿ) ಕಂಡುಕೊಳ್ಳಲಾಗಿದೆ, ಅವು ಆಯ್೦ಟಿಆಕ್ಸಿಡೆಂಟ್ ಚಟುವಟಿಕೆಯು ಸೇರಿದಂತೆ ಪಡೆಯಬಹುದಾದ ವಿಶೇಷ ಗುಣಗಳನ್ನು ಹೊಂದಬಹುದು; ಪ್ರಾಯೋಗಿಕ ಪ್ರದರ್ಶನವು ಸಲಹಾತ್ಮಕವಾಗಿವೆ ಆದರೂ ಅತೃಪ್ತಿಕರ ಎನಿಸಿವೆ. ಇತರೆ ಅಗತ್ಯವಾದ ಪೋಷಕಾಂಶಗಳು, ಅಗತ್ಯವಾದ ಅಮಿನೊ ಆಮ್ಲಗಳು(ಮೇಲೆನೋಡಿ), ಕೊಲೀನ್, ಅಗತ್ಯವಾದ ಮೇಧಾಮ್ಲಗಳನ್ನು(ಮೇಲೆ ನೋಡಿ) ಒಳಗೊಂಡಂತಹ ಜೀವಸತ್ವಗಳಾಗಿ ವರ್ಗೀಕರಿಸಲ್ಪಟ್ಟಿಲ್ಲ ಮತ್ತು ಖನಿಜಾಂಶಗಳನ್ನು ಪೂರ್ವದ ವಿಭಾಗದಲ್ಲಿ ಚರ್ಚಿಸಲಾಗಿದೆ.ಜೀವಸತ್ವ ನ್ಯೂನತೆಗಳು ಅನಾರೋಗ್ಯ ಸ್ಥಿತಿಗಳಲ್ಲಿ ಪ್ರಭಾವ ಬೀರಬಹುದು:ಗಾಯ್ಟರ್, ಸ್ಕರ್ವೀ, ಅಸ್ಥಿರಂಧ್ರತೆ,ದುರ್ಬಲಗೊಂಡ ರೋಗ ನಿರೋಧಕ ವ್ಯವಸ್ತೆ, ಜೀವರಾಸಾಯನಿಕ ಕ್ರಿಯೆ ಜೀವಕೋಶಗಳ ಅಸ್ವಸ್ಥತೆಗಳು, ಕ್ಯಾನ್ಸರ್ನ ವಿವಿಧ ರೂಪಗಳು, ಅಕಾಲಿಕ ಏಜಿಂಗ್ನ ಲಕ್ಷಣಗಳು ಮತ್ತು ವಿಫಲ ಮನೋವೈಜ್ಞಾನಿಕ ಆರೋಗ್ಯ(ಸೇವಿಸುವಿಕೆಯ ಅಸ್ವಸ್ಥತೆಗಳು ಸೇರಿದಂತೆ)ಇತ್ಯಾದಿಗಳು.[೫] ಕೆಲವು ಜೀವಸತ್ವಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದಾಗ ಅವು ಆರೋಗ್ಯಕ್ಕೆ ಹಾನಿಕರವಾಗಿವೆ (ಪ್ರಮುಖವಾಗಿ ಜೀವಸತ್ವ ಎ). ಅದರಲ್ಲಿಯೂ ಬಿ6 ದಂತಹ ಒಂದು ಜೀವಸತ್ವವನ್ನು ಅಗತ್ಯಕ್ಕಿಂತ ಸ್ವಲ್ಪವೇ ಹೆಚ್ಚು ಸೇವಿಸಿದರೂ ಕೂಡಾ ಅದು ದೇಹದಲ್ಲಿ ವಿಷಯುಕ್ತತೆಯನ್ನು ಉಂಟುಮಾಡುತ್ತದೆ.ಖನಿಜಾಂಶಗಳ ನ್ಯೂನತೆ ಅಥವಾ ವಿಪುಲತೆಯು ಗಂಭೀರ ಆರೋಗ್ಯ ಪರಿಣಾಮಗಳನ್ನು ಸಹ ಹೊಂದಬಹುದು.
ಕೊಬ್ಬಿನಾಂಶವಿಲ್ಲದ ಮಾನವ ದೇಹದ 70%ರಷ್ಟು ಭಾಗವು ನೀರಿನಿಂದ ರಚಿತವಾಗಿದೆ.[ಸೂಕ್ತ ಉಲ್ಲೇಖನ ಬೇಕು] ನಿರ್ದಿಷ್ಟವಾಗಿ ಕಾರ್ಯನಿರ್ವಹಿಸುವ ದೇಹಕ್ಕೆ ನಿರ್ಜಲೀಕರಣವನ್ನು ನಿಯಂತ್ರಿಸಲು, ಒಂದು ದಿನಕ್ಕೆ ಒಂದು ಅಥವಾ ಏಳು ಲೀಟರುಗಳ ನೀರಿನ ಅಗತ್ಯವಿದೆ;ಖಚಿತವಾದ ಪರಿಮಾಣವು ಚಟುವಟಿಕಾ ಹಂತ,ದೇಹದ ಉಷ್ಣತೆ, ಆರ್ದ್ರತೆ ಮತ್ತು ಇನ್ನಿತರ ಅಂಶಗಳ ಮೇಲೆ ಅವಲಂಭಿತವಾಗಿವೆ.[ಸೂಕ್ತ ಉಲ್ಲೇಖನ ಬೇಕು] ದೈಹಿಕ ಶ್ರಮ ಮತ್ತು ಉಷ್ಣತೆಗೆ ತೆರೆದುಕೊಳ್ಳುವುದರಿಂದ ದೇಹದಲ್ಲಿನ ನೀರಿನ ಅಂಶ ಹೊರಹೋಗುವುದು ಹೆಚ್ಚಾಗುತ್ತದೆ, ಮತ್ತು ಅಂತಿಮವಾಗಿ ದೇಹದಲ್ಲಿ ಜಲದ ಅಗತ್ಯ ಹೆಚ್ಚಾಗುತ್ತದೆ ಸ್ವಸ್ಥ ಜನರು ಎಷ್ಟು ಪ್ರಮಾಣದ ನೀರನ್ನು ಕುಡಿಯುತ್ತಾರೆಂಬುದನ್ನು ಮೊದಲು ಕಂಡೂಕೊಳ್ಳಬೇಕಾಗುತ್ತದೆ. ಆದರೂ ನಿತ್ಯವು 8–10 ಲೋಟಗಳ(ಸುಮಾರು 2 ಲೀಟರುಗಳು) ನೀರು ಕುಡಿಯುವುದು ನಿರ್ದಿಷ್ಟ ಜಲಸಂಚಯನವನ್ನು ನಿಯಂತ್ರಿಸುವುದಕ್ಕೆ ಕನಿಷ್ಟ ಅಗತ್ಯ ಎಂದು ಕೆಲವು ಪರಿಣಿತರು ಹೇಳಿದ್ದಾರೆ.[೬] ಒಬ್ಬ ವ್ಯಕ್ತಿಯು ಪ್ರತಿನಿತ್ಯ ಎಂಟು ಲೋಟಗಳಷ್ಟು ನೀರನ್ನು ಕುಡಿಯಬೇಕು ಎಂಬುದನ್ನು ನಂಬಲರ್ಹ ವೈಜ್ಞಾನಿಕ ಮೂಲಗಳು ಗುರುತಿಸಿಲ್ಲ ಎಂಬುದು ಸಾಮಾನ್ಯ ಭಾವನೆ.[೭] ಹೆಚ್ಚು ಅಥವಾ ಕಡಿಮೆ ನೀರು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಹಾಗೂ ಮಲಬದ್ಧತೆಗೆ ಕಾರಣವಾಗುತ್ತದೆ ಎಂಬುದೂ ಕೂಡ ಸ್ಪಷ್ಟವಾಗಿಲ್ಲ.[೮] 1945ರಲ್ಲಿ ನ್ಯಾಷನಲ್ ರಿಸರ್ಚ್ ಕೌನ್ಸಿಲ್ನ ಪುಡ್ ಆಯ್೦ಡ್ ನ್ಯೂಟ್ರಿಷನ್ ಬೋರ್ಡ್ ಶಿಫಾರಸ್ಸು ಮಾಡಿರುವ ಪ್ರಕಾರ "ಬೇರೆ ಬೇರೆ ರೀತಿಯ ವ್ಯಕ್ತಿಗಳಿಗೆ ಇದು ಒಂದು ಸಾಮಾನ್ಯ ಪ್ರಮಾಣವಾಗಿ ಒಂದು ಕ್ಯಾಲೋರಿ ಆಹಾರಕ್ಕೆ ಒಂದು ಮಿಲಿ ಲೀಟರ್ ನೀರನ್ನು ತೆಗೆದುಕೊಳ್ಳಬೇಕು ಇಷ್ಟು ಪ್ರಮಾಣದ ನೀರಿನ ಹೆಚ್ಚಿನ ಭಾಗವು ತಯಾರಿಸಲ್ಪಟ್ಟ ಆಹಾರಗಳಲ್ಲಿ ಅಡಕವಾಗಿರುತ್ತದೆ"ಎಂದು ಹೇಳುತ್ತದೆ.[೯] ಇತ್ತೀಚಿನ ಆಹಾರಕ್ರಮವನ್ನು ಗಮನಿಸುತ್ತಾ ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಶಿಫಾರಸ್ಸು ಮಾಡಿರುವ ಅದರ ಪ್ರಕಾರ ಸಾಮಾನ್ಯವಾಗಿ, (ಆಹಾರ ಮೂಲಗಳು ಸೇರಿದಂತೆ):ಮಹಿಳೆಯರಿಗೆ 2.7 ಲೀಟರು ನೀರು ಮತ್ತು ಪುರುಷರಿಗೆ 3.7 ಲೀಟರು ನೀರಿನ ಅಗತ್ಯವಿದೆ.[೧೦] ನಿರ್ದಿಷ್ಟವಾಗಿ, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಲ್ಲಿ ಜಲಸಂಯುಕ್ತಗೊಳಿಸುವಷ್ಟು ಹೆಚ್ಚು ನೀರಿನ ಅಗತ್ಯವಿರುತ್ತದೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ನ ಪ್ರಕಾರ- ಸಾಮಾನ್ಯವಾಗಿ ಮಹಿಳೆಯರಿಗೆ 2.2 ಲೀಟರು ನೀರು ಮತ್ತು ಪುರುಷರಿಗೆ 3.0 ಲೀಟರು ನೀರು ಅಗತ್ಯವಾಗುತ್ತದೆ. ಗರ್ಭಿಣಿ ಮಹಿಳೆಯರಿಗೆ 2.4 ಲೀಟರು ನೀರು (ಸುಮಾರು 9 ಕಪ್ಗಳು) ಅಗತ್ಯವಾಗಿದೆ. ಶೂಶ್ರೂಷೆ ಅವಧಿಯಲ್ಲಿ ಅಧಿಕ ಪ್ರಮಾಣದ ನೀರಿನಂಶ ಕಡಿಮೆಯಾಗುವುದರಿಂದ ಹಾಲುಣಿಸುವ ಮಹಿಳೆಯರಿಗೆ 3 ಲೀಟರು (ಸುಮಾರು 12.5 ಕಪ್ಗಳು) ನೀರು ಅಗತ್ಯ ಎಂದು ಇದು ಶಿಫಾರಸ್ಸು ಮಾಡಿದೆ.[೧೧] ಆರೋಗ್ಯಕರ ಕಿಡ್ನಿಗಳನ್ನು ಹೊಂದಿರುವವರಿಗೆ ಹೆಚ್ಚು ನೀರನ್ನು ಕುಡಿಯುವುದು ಕಷ್ಟವಾಗುತ್ತದೆ,[ಸೂಕ್ತ ಉಲ್ಲೇಖನ ಬೇಕು] ಆದರೆ (ಅದರಲ್ಲೂ ಬೆಚ್ಚಗಿನ ಆರ್ದ್ರ ವಾತಾವರಣ ಮತ್ತು ಕೆಲಸ ಮಾಡುವ ಸಂದರ್ಭದಲ್ಲಿ) ಕಡಿಮೆ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಜನರು ವ್ಯಾಯಾಮ ಮಾಡುವ ವೇಳೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ನೀರನ್ನು ಕುಡಿಯಬಹುದು, ಅವರನ್ನು ನೀರು ಕುಡಿಯದಂತೆ ತಡೆಯುವುದು ಮಾರಕವಾಗಬಹುದಾದ ಪರಿಣಾಮಗಳನ್ನುಂಟು ಮಾಡಬಹುದಾಗಿದೆ. ನಿರ್ದಿಷ್ಟವಾಗಿ ಅಧಿಕ ಪ್ರಮಾಣದ ಅಯಾನಿಕರಣಗೊಳ್ಳದ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ.ಸಾಮಾನ್ಯವಾಗಿ 20%ರಷ್ಟು ಭಾಗ ನೀರು ಆಹಾರದಲ್ಲಿ ಸಿಗುತ್ತದೆ, ಉಳಿದ ಪ್ರಮಾಣವು ಕುಡಿಯುವ ನೀರು ಮತ್ತು ವಿವಿಧ ಪಾನೀಯಗಳಿಂದ ಸಿಗುತ್ತದೆ (ಇದರಲ್ಲಿ ಕೆಫಿನ್ ಅಂಶಗಳಿರುವ ಪಾನಿಯಗಳೂ ಸೇರುತ್ತವೆ). ನೀರನ್ನು ವಿವಿಧ ರೂಪಗಳಲ್ಲಿ ದೇಹದಿಂದ ವಿಸರ್ಜಿಸಲಾಗುತ್ತದೆ; ಇದರಲ್ಲಿ ಮೂತ್ರ ಮತ್ತು ಮಲ,ಬೆವರುವಿಕೆ ಮತ್ತು ಉಸಿರಾಟ ಕ್ರಿಯೆಯಲ್ಲಿನ ನೀರಿನ ಆವಿಯಾಗುವಿಕೆಗಳು ಸೇರಿಕೊಂಡಿವೆ.
ಕೆಲವು ಸೂಕ್ಷ್ಮಪೌಷ್ಟಿಕಾಹಾರಗಳು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು ಮತ್ತು ಪೈಟೊಕೆಮಿಕಲ್ಗಳನ್ನು ಒಳಗೊಂಡಿದೆ. ಈ ವಸ್ತುಗಳು ಅಗತ್ಯವಾದ ಅಥವಾ ಜೀವಸತ್ವಗಳೆಂದು ಗುರುತಿಸಲ್ಪಡದಂತಹವುಗಳನ್ನು ಸಾಮಾನ್ಯವಾಗಿ ಇತ್ತೀಚೆಗಷ್ಟೆ ಪತ್ತೆ ಮಾಡಿವೆ. ಸಸ್ಯರಸಾಯನಿಕಗಳು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕ ಆಗಿ ಕಾರ್ಯನಿರ್ವಹಿಸಬಹುದು, ಆದರೆ ಎಲ್ಲಾ ಫೈಟೋಕೆಮಿಕಲ್ಗಳು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳಾಗಿರುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು]
ಆಯ್೦ಟಿಯೊಕ್ಸಿಡೆಂಟ್ಸ್(ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು) ಇತ್ತೀಚಿನ ಅನ್ವೇಷಣೆಯಾಗಿವೆ. ಕೋಶಗಳ ಜೀವರಸಾಯನಿಕ/ಶಕ್ತಿ ಉತ್ಪಾದನೆಗೆ ಆಮ್ಲಜನಕ ಅಗತ್ಯವಾಗಿದೆ,ಅವು ಸಮರ್ಥವಾದ ಹಾನಿಕಾರಕ (ಉದಾ:ಹೊಸ ಪರಿವರ್ತನೆಯ ಕಾರಣ) ಸಂಯುಕ್ತಗಳು ಪರಿಚಯಿಸಿರುವಂಥ ಫ್ರೀ ರಾಡಿಕಲ್ಸ್ನ ರೂಪದಲ್ಲಿರಬಹುದು. ಹೆಚ್ಚಿನವುಗಳು ಆಮ್ಲಜನಕ ಸಂಯುಕ್ತಗಳಾಗಿವೆ (ಉದಾ:ಎಲೆಕ್ಟ್ರಾನ್ಗಳನ್ನು ಒಪ್ಪಿಕೊಂಡವರು) ಮತ್ತು ಕೆಲವು ಬಹಳ ಪ್ರಬಲವಾಗಿ ಪ್ರತಿಕ್ರಿಯಿಸುತ್ತವೆ. ಸಾಮಾನ್ಯ ಕೋಶಗಳ ನಿರ್ವಹಣೆ, ಬೆಳವಣಿಗೆ ಮತ್ತು ವಿಭಜನೆಗಾಗಿ, ಈ ಫ್ರೀ ರಾಡಿಕಲ್ಗಳು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕ ಸಂಯುಕ್ತಗಳಿಂದ ಸಾಕಷ್ಟು ತಟಸ್ಥವಾಗಿವೆ. ಇತ್ತೀಚೆಗೆ ಕೆಲವು ಸಂಶೋಧಕರು ಆಹಾರಕ್ರಮದ ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳ ವಿಕಸನದ ಆಸಕ್ತಿದಾಯಕ ಸಿದ್ಧಾಂತವನ್ನು ಸೂಚಿಸಿದ್ದಾರೆ. ಕೆಲವು ಸಾಕಷ್ಟು ಮುನ್ಸೂಚಕಗಳ (ಗ್ಲುಟಥೈನ್, ಜೀವಸತ್ವ ಸಿ)ಜೊತೆಗೆ ಮಾನವನ ದೇಹದಿಂದ ಉತ್ಪತ್ತಿಯಾಗುತ್ತವೆ. ಆ ದೇಹವು ಆಹಾರಕ್ರಮದ ಮೂಲಕ ನೇರ ಮೂಲಗಳಲ್ಲಿ(ಮಾನವನಲ್ಲಿ ಜೀವಸತ್ವ ಸಿ, ಜೀವಸತ್ವ ಎ, ಜೀವಸತ್ವ ಕೆ) ಮಾತ್ರ ಚಾಲ್ತಿಯಲ್ಲಿರುವುದನ್ನು ಉತ್ಪಾದಿಸುವುದಿಲ್ಲ ಅಥವಾ ಕೆಲವು ಸಂಯುಕ್ತಗಳಿರುವ (ಬೀಟಾ-ಕಾರೊಟೆನೆಯು ದೇಹದಿಂದ ಜೀವಸತ್ವ ಎ ಅನ್ನು ಬದಲಾಯಿಸುತ್ತದೆ, ಜೀವಸತ್ವ ಡಿಯು ಸೂರ್ಯನ ಬೆಳಕಿನ ಕೊಬ್ಬಿನಿಂದ ಸಂಯೋಜಿಸಲ್ಪಟ್ಟಿದೆ) ದೇಹದಿಂದ ಉತ್ಪಾದಿಸಲ್ಪಡುತ್ತವೆ. ಸಸ್ಯರಸಾಯನಿಕಗಳು (ಕೆಳಗಡೆಯ ವಿಭಾಗ ) ಮತ್ತು ಅವುಗಳ ಉಪಗುಂಪಿನ ಪೊಲೆಫೆನಾಲ್ಗಳು ಬಹುತೇಕ ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳಾಗಿವೆ;ಅವು 4,000 ದಷ್ಟಿವೆ. ವಿವಿಧ ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು ಸಹಕಾರ ಜಾಲದಲ್ಲಿ ಕಾರ್ಯನಿರ್ವಹಿಸಲು ಪರಿಚಿತವಾಗಿವೆ, ಉದಾ:ಸಿ ಜೀವಸತ್ವವು ಫ್ರೀ ರಾಡಿಕಲ್-ಒಳಗೊಂಡಿರುವ ಗ್ಲುಟಥೈನ್ನನ್ನು ಅಥವಾ ಫ್ರೀ ರಾಡಿಕಲ್ ಸ್ವತಃ ಒಪ್ಪಿಕೊಳ್ಳುವುದರಿಂದ ಇ ಜೀವಸತ್ವವನ್ನು ಪುನಃ ಸಕ್ರಿಯಗೊಳಿಸಬಲ್ಲದು. ಕೆಲವು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು ತಟಸ್ಥವಾಗಿರುವ ವಿವಿಧ ಫ್ರೀ ರಾಡಿಕಲ್ಗಳಲ್ಲಿ ಉಳಿದವುಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಕೆಲವು ಫ್ರೀ ರಾಡಿಕಲ್ಗಳನ್ನು ತಟಸ್ಥವಾಗಿಸುವುದಿಲ್ಲ. ಕೆಲವು ಫ್ರೀ ರಾಡಿಕಲ್ ಅಭಿವೃದ್ಧಿಯ ಕ್ಷೇತ್ರದಲ್ಲಿ ಉಪಸ್ಥಿತವಿರುವುದಿಲ್ಲ(ಎ ಜೀವಸತ್ವವು ಕೊಬ್ಬು-ಕರಗಿಸಬಲ್ಲದಾಗಿದೆ ಮತ್ತು ಕೊಬ್ಬಿನ ಕ್ಷೇತ್ರವನ್ನು ರಕ್ಷಿಸುತ್ತದೆ, ಸಿ ಜೀವಸತ್ವವು ಜಲದ್ರಾವ್ಯವಾಗಿದೆ ಮತ್ತು ಆ ಕ್ಷೇತ್ರವನ್ನು ರಕ್ಷಿಸುತ್ತದೆ) ಫ್ರೀ ರಾಡಿಕಲ್ನೊಂದಿಗೆ ಸಂಪರ್ಕದಲ್ಲಿರುವಾಗ, ಕೆಲವು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು ವಿವಿಧ ಫ್ರೀ ರಾಡಿಕಲ್ ಸಂಯುಕ್ತವನ್ನು ಉತ್ಪತ್ತಿ ಮಾಡುತ್ತದೆ. ಅದು ಕಡಿಮೆ ಹಾನಿಕಾರಕವಾಗಿದೆ ಅಥವಾ ಮುಂಚಿನ ಸಂಯುಕ್ತಗಳಿಗಿಂತ ಹೆಚ್ಚು ಹಾನಿಕಾರಕವಾಗಿದೆ. ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳ ಪ್ರಭೇದವು ಯಾವುದೇ ಉಪ ಉತ್ಪನ್ನಗಳನ್ನು ತಟಸ್ಥಗೊಳ್ಳುತ್ತಿರುವ ಫ್ರೀ ರಾಡಿಕಲ್ನ ಚಿಟ್ಟೆಯ ಪ್ರಭಾವದಲ್ಲಿ ಹೆಚ್ಚು ದಕ್ಷ ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳಿಂದ ಸುರಕ್ಷಿತವಾಗಿ ವಿತರಿಸಲು ಅನುಮತಿ ನೀಡುತ್ತದೆ.
ಮಾನವನ ಆರೋಗ್ಯದ ಮೇಲೆ ಫೈಟೋ ಕೆಮಿಕಲ್ಗಳ ಪ್ರಭಾವವನ್ನು ಅಧ್ಯಯನ ಮಾಡುವುದು ಇತ್ತೀಚೆಗೆ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಈ ಪೋಷಿಕಾಹಾರಗಳು ತಿನ್ನಲಾರ್ಹವಾದ ಸಸ್ಯಗಳಲ್ಲಿ ಅದರಲ್ಲೂ ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುತ್ತದೆ, ಆದರೆ ಸಮುದ್ರಾಹಾರ,ಪಾಚಿ ಮತ್ತು ಅಣಬೆಯನ್ನೊಳಗೊಂಡಂತಹ ಇತರೆ ಸಸ್ಯಗಳಲ್ಲಿಯೂ ಸಹ ಇರುತ್ತವೆ. ಸಸ್ಯರಸಾಯನಿಕಗಳ ಪ್ರಭಾವಗಳು ಹೆಚ್ಚಾಗಿ ನಿರ್ಧಿಷ್ಟ ಆರೋಗ್ಯ ಸಂಘಟನೆಗಳಿಂದ ಕಠಿಣ ಪ್ರಯೋಗಗಳನ್ನು ಎದುರಿಸುತ್ತವೆ. ಪ್ರಮುಖ ವರ್ಗಗಳಲ್ಲಿ ಒಂದಾದ ಸಸ್ಯರಸಾಯನಿಕಗಳು ಪೊಲಿಫೆನಾಲ್ ಆಂಟಿಯೊಕ್ಸೈಡ್ಸ್, ರಸಾಯನಿಕಗಳಾಗಿವೆ, ಅವು ಕೆಲವು ಆರೋಗ್ಯ ಪ್ರಯೋಜನಗಳನ್ನು ಕಾರ್ಡಿಯೊವ್ಯಾಸ್ಕುಲರ್ ವ್ಯವಸ್ಥೆ ಮತ್ತು ನಿರೋಧಕ ವ್ಯವಸ್ಥೆಗಳಿಗೆ ಒದಗಿಸುವುದನ್ನು ತಿಳಿದಿವೆ. ಈ ರಸಾಯನಿಕಗಳು ಪ್ರತಿಕ್ರಿಯಾತ್ಮಕ ಆಮ್ಲಜನಕ ಸ್ಪೈಸಿಸ್ ರಚನೆಯನ್ನು, ಕಾರ್ಡಿಯೊವ್ಯಾಸ್ಕುಲರ್ ಕಾಯಿಲೆಯಲ್ಲಿನ ಕೀ ಕೆಮಿಕಲ್ಸ್ ಅನ್ನು ಕೆಳಮಟ್ಟದಲ್ಲಿ-ನಿಯಂತ್ರಿಸುವುದನ್ನು ತಿಳಿದಿವೆ. ಆದರೆ ಹೆಚ್ಚು ಕಠಿಣವಾದ ಪರೀಕ್ಷೆಗೊಳಪಟ್ಟ ಸಸ್ಯರಸಾಯನಿಕವು ಜಿಯಾಕ್ಸಾಂಥಿನ್ ಆಗಿದೆ, ಇದು ಅನೇಕ ಅರಿಶಿನ ಮತ್ತು ಕಿತ್ತಲೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕ್ಯಾರಟೀನ್ ವರ್ಗಕ್ಕೆ ಸೇರಿದ ವರ್ಣದ್ರವ್ಯವನ್ನು ಪರಿಚಯಿಸುವ ಅರಿಶಿನ-ವರ್ಣದ್ರವ್ಯವಾಗಿದೆ. ಪುನರಾವರ್ತಿತ ಅಧ್ಯಯನಗಳು ಜಿಯಾಕ್ಸಾಂಥಿನ್ ಚುಚ್ಚುಮದ್ದು ಮತ್ತು ವಯಸ್ಸಾಗುವಿಕೆಯನ್ನು ತಡೆಯುವಿಕೆಯ (AMD)ನಡುವೆ ಪರಸ್ಪರ ಗಾಡ ಸಂಬಂಧ ಇರುವುದನ್ನು ಗುರುತಿಸಿವೆ.[೧೨] ಝಿಯಾಕ್ಸಾಂಥಿನ್ ತೆಗೆದುಕೊಳ್ಳುವಿಕೆ ಮತ್ತು ಕಣ್ಣಪೊರೆಯ ನಡುವಿನ ಪರಸ್ಪರ ಸಂಬಂಧವನ್ನು ಕಠಿಣವಾದ ವಿರಳ ಅಧ್ಯಯನಗಳು ಪ್ರಸ್ತಾಪಿಸಿವೆ.[೧೩] AMD ಸಂಕುಚನೆಯ ದುಷ್ಪರಿಣಾಮವನ್ನು ತಗ್ಗಿಸುವುದಕ್ಕೋಸ್ಕರ ಎರಡನೆಯ ಕ್ಯಾರೋಟಿನಾಯ್ಡ್, ಲ್ಯುಟೆಯಿನ್ಗಳನ್ನು ಕೂಡ ತೋರಿಸಲಾಯಿತು. ಎರಡೂ ಸಂಯುಕ್ತಕಗಳನ್ನು ಮೌಖಿಕವಾಗಿ ತೆಗೆದುಕೊಂಡಾಗ ರೆಟಿನಾದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸಲಾಯಿತು. ಇವು ದುಷ್ಪರಿಣಾಮ ಬೀರುವ ಬೆಳಕಿನ ಕಿರಣಗಳ ಹಾಗೂ ಕೋನಗಳನ್ನು ತಡೆದು ಕಾಪಾಡುವ ಕೆಲಸ ಮಾಡುತ್ತವೆ. ಸಂದಿವಾತದಂತಹ ತೀವ್ರವಾದ ಕೀಲು ಉರಿಯೂತ ವ್ಯಾಧಿಯಿಂದ ರಕ್ಷಿಸುವುದಕ್ಕೋಸ್ಕರ ಮತ್ತೊಂದು ಕ್ಯಾರೋಟಿನಾಯ್ಡ್, ಬೆಟಾ-ಕ್ರಿಪ್ಟೊಕ್ಸಾಂತಿನ್ ಅಸ್ತಿತ್ವಕ್ಕೆ ಬಂದಿತು. ಆ ವೇಳೆಯಲ್ಲಿ, ಬೆಟಾ-ಕ್ರಿಪ್ಟೊಕ್ಸಾಂತಿನ್ನಿಂದ ರಕ್ತದ ತೆಳುಪಾರದರ್ಶಕ ಮಟ್ಟಗಳು ಮತ್ತು ಗಣನೀಯ ಪ್ರಮಾಣದಲ್ಲಿ ಕಡಿಮೆಯಾದ ಕೀಲುನೋವು ವ್ಯಾಧಿಯು ಕಡಿಮೆಯಾಯಿತು.ಈ ರೀತಿಯ ರಕ್ಷಣೆಗಾಗಿ ಸಮರ್ಪಕವಾದಂತಹ ಯಾವುದೇ ಯಾಂತ್ರಿಕ ರಚನೆಯಾಗಲಿ ಅಥವಾ ಕಾರಣ-ಮತ್ತು-ಪರಿಣಾಮಗಳನ್ನು ಕೂಲಂಕುಷವಾಗಿ ಈವರೆಗೆ ಅಧ್ಯಯನ ಮಾಡಿರಲಿಲ್ಲ.[೧೪] ಅದೇ ರೀತಿಯಲ್ಲಿ, ಒಂದು ಕೆಂಪು ಫಿಟೋಕೆಮಿಕಲ್, ಲೈಕೊಪೇನ್ಗಳು ಗಣನೀಯವಾಗಿ ಪ್ರೊಸ್ಟೇಟ್ ಕ್ಯಾನ್ಸರ್ನ ಬೆಳವಣಿಗೆಗೆ ನಂಬಲರ್ಹ ಋಣಾತ್ಮಕ ಅಂಶಗಳನ್ನು ಹೊಂದಿರುವುದು ಕಂಡುಬಂದಿತು.ಕೆಲವು ಫೋಟೋಕೆಮಿಕಲ್ಗಳ ಚುಚ್ಚುಮದ್ದು ಮತ್ತು ರೋಗ ಬರದಂತೆ ತಡೆಯುವ ಪ್ರಕ್ರಿಯೆಯು ಪರಸ್ಪರ ಸಂಬಂಧವನ್ನು ಹೊಂದಿದ್ದವು, ಕೆಲವು ಪ್ರಕರಣಗಳಲ್ಲಿ ಇದು ಅಗಾಧವಾದ ಪ್ರಾಧಾನ್ಯತೆಯನ್ನು ಹೊಂದಿತ್ತು. ಸಾಕ್ಷಿಯನ್ನು ಸಂಗ್ರಹಿಸಿದಾಗಲೂ ಕೂಡ ಇದನ್ನು ಪ್ರಾಯೋಗಿಕವಾಗಿ ಆಹಾರ ಪದ್ಧತಿಯಲ್ಲಿ ಬದಲಾಯಿಸುವುದು ಕಷ್ಟದಾಯಕ ಹಾಗೂ ಅಂತಸ್ಪುರಣೆಗೆ ವಿರುದ್ಧವಾದುದಾಗಿತ್ತು. ಉದಾಹರಣೆಗೆ ಲ್ಯೂಟೈನ್ ಇದು ಕೆಲವು ಹಳದಿ ಮತ್ತು ಕಿತ್ತಳೆ ಬಣ್ಣದ ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿ ಕಂಡುಬರುತ್ತಿದ್ದು ಇದು ಕಣ್ಣಿಗೆ ಸಂಬಂಧಿಸಿದ ಹಲವಾರುಕಾಯಿಲೆಗಳನ್ನು ತಡೆಯುತ್ತದೆ. ಅದೇನೆ ಇದ್ದರೂ, ಇದು ಕಣ್ಣುಗಳನ್ನು ಜಿಯಾಕ್ಸಾಂತಿನ್ ಕಾಪಾಡಿದಷ್ಟು ಸೂಕ್ತವಾಗಿ ಕಾಪಾಡಲಾರದು ಅಲ್ಲದೆ ರೆಟಿನಾದಲ್ಲಿ ಲ್ಯೂಟೈನ್ ಇದ್ದರೆ, ಜಿಯಾಕ್ಸೈಂತನ್ ತೆಗೆದುಕೊಳ್ಳುವುದನ್ನು ತಡೆಯಬಹುದು. ಇದರ ಜೊತೆಗೆ, ಸಾಕ್ಷಿಗಳು ತೋರಿಸಿದ ಪ್ರಕಾರ ಲ್ಯೂಟೈನ್ ಅನ್ನು ಮೊಟ್ಟೆಯ ಹಳದಿಬಾಗದಿಂದ, ತರಕಾರಿಗಳಿಂದ ಲ್ಯೂಟೇನ್ ತೆಗೆದುಕೊಳ್ಳುವುದಕ್ಕಿಂತ ನೇರವಾಗಿ ತೆಗೆದುಕೊಳ್ಳಬಹುದು, ಏಕೆಂದರೆ ಕರಗುವ ಕೊಬ್ಬು ಕಾರಣವಾಗಿರಬಹುದು.[೧೫] ಆದರೂ ಪ್ರಶ್ನೆ ಹುಟ್ಟುತ್ತದೆ, ತುಂಬಾ ಪ್ರಾಥಮಿಕ ಹಂತದಲ್ಲಿ "ಮೊಟ್ಟೆಗಳನ್ನು ನಾವು ಸೇವಿಸಬಹುದೇ ?" ಎಂಬುದು ನಿರಾಶವಾದಕ್ಕೆ ಸಂಕೀರ್ಣವಾದಕ್ಕೆ ಸಂಬಂಧಿಸಿದ್ದಾಗಿದೆ. ಅದಲ್ಲದೆ ಮೊಟ್ಟೆಯ ಹಳದಿ ಭಾಗದಲ್ಲಿರುವ ಕೊಲೆಸ್ಟ್ರಾಲ್ನ ಆರೋಗ್ಯ ಸಂಬಂಧಿ ಪರಿಣಾಮಗಳ ಕುರಿತಾದ ಹಲವಾರು ತಪ್ಪು ಗ್ರಹಿಕೆಗಳಿವೆ ಮತ್ತು ಇದು ಸಂಪೂರಣಗೊಳಿಸಿದ ಕೊಬ್ಬು ಆಗಿದೆ.ಇನ್ನೊಂದ ಉದಾಹರಣೆಯೆಂದರೆ, ಲೈಕೋಫಿನ್ ಇದು ಟೊಮೆಟೊನಲ್ಲಿ ಸಾಕಷ್ಟು ಇರುತ್ತದೆ. (ನಿಜವಾಗಿ ಇದೇ ರಾಸಾಯನಿಕವು ಟೊಮೆಟೊಗಳಿಗೆ ಕೆಂಪು ಬಣ್ಣವನ್ನು ನೀಡುವುದಾಗಿದೆ.) ಇದು ಹೆಚ್ಚು ಸಾಂದ್ರವಾದುದಾಗಿದೆ, ಅದೇನೆ ಇದ್ದರು, ಪ್ರಕ್ರಿಯೆಗೊಳಪಟ್ಟ ಟೊಮೆಟೊವಿನಲ್ಲಿ ಉದಾಹರಣೆಗೆ ವಾಣಿಜ್ಯ ಉತ್ಪನ್ನಗಳಾದ ಪಾಸ್ತಾ ಸಾಸ್ ಅಥವಾ ಟೊಮೆಟೊ ಸೂಪ್ಗಿಂತ ಹೆಚ್ಚಾಗಿ ತಾಜಾ ಹಾಗೂ "ಆರೋಗ್ಯಕರ" ಟೊಮೆಟೊನಲ್ಲಿ ಹೆಚ್ಚಾಗಿರುತ್ತದೆ. ಆದಾಗ್ಯೂ, ಈ ರೀತಿಯ ಸಾಸ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಹಾಗೂ ಸಕ್ಕರೆಯ ಅಂಶ ಮುಂತಾದವುಗಳನ್ನು ವ್ಯಕ್ತಿಯು ಬಯಸಬಹುದು ಅಥವಾ ಅದನ್ನು ನಿರಾಕರಿಸಬಹುದು.ಈ ಕೆಳಗಿನ ಪಟ್ಟಿಯು ಫೋಟೊಕೆಮಿಕಲ್ ಗುಂಪುಗಳನ್ನು ಮತ್ತು ಅವುಗಳ ಸಾಮಾನ್ಯ ಆಕರವನ್ನು ಅವುಗಳ ಸಸ್ಯ ಕುಟುಂಬದ ಪ್ರಕಾರ ನೀಡಲಾಗಿದೆ:
ಕೌಟುಂಬಿಕ ವ್ಯವಸ್ಥೆ | ಮೂಲಗಳು | ತೃಪ್ತಿಕರ ಪ್ರಯೋಜನಗಳು |
---|---|---|
ಪ್ಲವೊನೈಡ್ಗಳು | ಬೆರ್ರಿ ಹಣ್ಣುಗಳು, ಗಿಡ ಮೂಲಿಕೆಗಳು, ತರಕಾರಿಗಳು, ದ್ರಾಕ್ಷಾರಸ, ದ್ರಾಕ್ಷಿ ಹಣ್ಣು, ಚಹಾ | ಸಾಮಾನ್ಯಆಯ್೦ಟಿಯಿಕ್ಸಿಡೆಂಟ್,[[ಎಲ್ಡಿಎಲ್/0}ಗಳ ಆಕ್ಸಿಡಿಕರಣ, ಆರ್ಟೆರಿಯೊಸೆಲ್ರಾಸಿಸ್ ಮತ್ತು ಹೃದಯ ಖಾಯಿಲೆ|ಎಲ್ಡಿಎಲ್/0}ಗಳ ಆಕ್ಸಿಡಿಕರಣ, ಆರ್ಟೆರಿಯೊಸೆಲ್ರಾಸಿಸ್ ಮತ್ತು ಹೃದಯ ಖಾಯಿಲೆ]]ಗಳ ರಕ್ಷಣೆ |
ಐಸೊಫ್ಲವೊನ್ಗಳು(ಫೈಟೊಈಸ್ಟ್ರೋಜೆನ್ಗಳು) | ಸೋಯಾ, ರೆಡ್ ಕ್ಲವರ್, ಕುಡ್ಜು ರೂಟ್ | ಸಾಮಾನ್ಯ ಆಯ್೦ಟಿಯೊಕ್ಸಿಡೆಂಟ್ಗಳು, ಆರ್ಟೆರಿಯೊಸೆಲ್ರಾಸಿಸ್ ಮತ್ತುಹೃದಯ ಖಾಯಿಲೆಗಳ ನಿರೋಧಕ, ಮುಟ್ಟು ತೀರಿಕೆಯ ಲಕ್ಷಣಗಳು, ಕ್ಯಾನ್ಸರ್ ನಿರೋಧಕ[೧೬] |
ಐಸೊಥಿಯೊಸಿಯನೆಟ್ಗಳು | ನಾಲ್ಕಾರು ದಳಗಳುಳ್ಳ ತರಕಾರಿಗಳು | ಕ್ಯಾನ್ಸರ್ ನಿರೋಧಕ |
ಮಾನೊಟರ್ಪೆನೆಗಳು | ನಿಂಬೆಜಾತಿಯ ಹಣ್ಣಿನ ಸಿಪ್ಪೆಗಳು, [[ಪ್ರಮುಖವಾದ ಎ
ಣ್ಣೆ]]ಗಳು, ಮೂಲಿಕೆಗಳು, ಮಸಾಲೆ ಪದಾರ್ಥಗಳು, ಹಸಿರು ಸಸ್ಯಗಳು, ವಾತಾವರಣ[೧೭] |
ಕ್ಯಾನ್ಸರ್ ನಿರೋಧಕ, ಗಾಲ್ಸ್ಟೋನ್ಸ್ಚಿಕಿತ್ಸೆ |
ಅರ್ಗೋನೊಸಲ್ಫರ್ ಸಂಯೋಜಕಗಳು | ಚೀವ್ಸ್, ಬೆಳ್ಳುಳ್ಳಿ, ಈರುಳ್ಳಿಗಳು | ಕ್ಯಾನ್ಸರ್ ನಿರೋಧಕ, ಲೋವರ್ಡ್ ಎಲ್ಡಿಎಲ್ಗಳು, ಇಮ್ಮುನೆ ಸಿಸ್ಟಮ್ನ ಸಹಾಯಕ |
ಸ್ಯಾಪೊನಿನ್ಗಳು | ಬೀನ್ಸ್, ಆಹಾರಧಾನ್ಯಗಳು, ಗಿಡ ಮೂಲಿಕೆ | ಹೈಪರ್ಕೊಲೆಸ್ಟರೊಲೆಮಿಯಾ, ಹೈಪರ್ಗ್ಲೈಸಿಮಿಯಾ, ಆಯ್೦ಟಿಯೊಕ್ಸಿಡೆಂಟ್ಸ್, ಕ್ಯಾನ್ಸರ್ ನಿರೋಧಕ, ಆಯ್೦ಟಿ-ಇನ್ಫ್ಲಾಮರಿ |
ಕ್ಯಾಪ್ಸಾಸಿನೈಡ್ | ಎಲ್ಲಾದೊಡ್ಡ ಮೆಣಸಿನಕಾಯಿ (ಮೆಣಸಿನಕಾಯಿ) ಮೆಣಸುಗಳು | ಪ್ರಸಕ್ತ ನೋವು ನಿವಾರಕ, ಕ್ಯಾನ್ಸರ್ ನಿರೋಧಕ, ಕ್ಯಾನ್ಸರ್ ಸೆಲ್ ಅಪಾಪ್ಟೊಸಿಸ್ |
ಬೂದಿ ರೀತಿಯ ವಸ್ತುಗಳು ಪೌಷ್ಟಿಕಾಂಶಗಳಲ್ಲದಿದ್ದರೂ ಕೂಡ ಕೆಲವೊಮ್ಮೆ ಇದೂ ಕೂಡ ಪೌಷ್ಟಿಕಾಂಶದ ಲೇಬಲ್ ಹೊಂದಿರುತ್ತದೆ ಹೆಚ್ಚಾಗಿ ಸಾಕುಪ್ರಾಣಿಗಳ ಆಹಾರದಲ್ಲಿ ಇದನ್ನು ಕಾಣಬಹುದಾಗಿದೆ. ಆಹಾರವನ್ನು 600°Cನಲ್ಲಿ ಎರಡು ತಾಸುಗಳ ಕಾಲ ಸುಟ್ಟಾಗ ಉಳಿದುಕೊಳ್ಳುವ ಅಜೈವಿಕ ವಸ್ತುಗಳ ತೂಕವನ್ನು ಅವಲಂಬಿಸಿ ಇದರ ಪ್ರವೇಶವನ್ನು ಆಹಾರ ಪಟ್ಟಿಯಲ್ಲಿ ನಿರ್ಧರಿಸಲಾಗುತ್ತದೆ. ಇದು ನೀರು, ನಾರು ಮತ್ತು ಕ್ಯಾಲೋರಿಗಳನ್ನು ನೀಡುವ ಪೋಷಕಾಂಶಗಳನ್ನು ಹೊಂದಿರುವುದಿಲ್ಲ ಆದರೆ ಖನಿಜಗಳಂತಹ ಕೆಲವು ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ[೧೮] ಕೆಲವರ ಪ್ರಕಾರ ಅತಿ ಹೆಚ್ಚು ಬೂದಿಯಂತಹ ಆಹಾರ ಸೇವನೆಯಿಂದ ಪ್ರಾಣಿಗಳಿಗೆ ಮೂತ್ರನಾಳ ಸೋಂಕು ಲಕ್ಷಣಗಳು ಮನೆ ಬೆಕ್ಕುಗಳಲ್ಲಿ ಕಂಡುಬರಬಹುದಾಗಿದೆ.[೧೯]
ಪ್ರಾಣಿಗಳ ಕರುಳುಗಳು ಸಹ ಅಧಿಕ ಪ್ರಮಾಣದ ಅನ್ನನಾಳದ ಸಸ್ಯ ಸೂಕ್ಷ್ಮಜೀವಿಯನ್ನು ಒಳಗೊಂಡಿವೆ. ಮಾನವನಲ್ಲಿಯೂ ಬ್ಯಾಕ್ಟೆರೈಡ್ಸ್, ಎಲ್.ಆಸಿಡೊಫಿಲಸ್ ಮತ್ತು ಇ.ಕೊಲೈ ಮುಂತಾದ ವರ್ಗಗಳನ್ನು ಹೊಂದಿರುತ್ತದೆ. ಇವುಗಳು ಜೀರ್ಣಕ್ರಿಯೆಗೆ ಅತ್ಯಗತ್ಯವಾದುದಾಗಿವೆ ಮತ್ತು ನಾವು ಸೇವಿಸುವ ಆಹಾರದಿಂದಲೂ ಕೂಡಾ ಪ್ರಭಾವಕ್ಕೊಳಪಡುತ್ತವೆ. ಕರುಳಿನಲ್ಲಿರುವ ಬ್ಯಾಕ್ಟಿರಿಯಾಗಳು ಮಾನವನಿಗೆ ತುಂಬಾ ಉಪಯುಕ್ತವಾದ ಕಾರ್ಯಗಳನ್ನು ನಿರ್ವಹಿಸುತ್ತವೆ. ಅದರಲ್ಲಿ ಪಚನವಾಗದ ಆಹಾರವನ್ನು ಪಚನಕ್ರಿಯೆಗೆ ಒಳಪಡಿಸುವುದು; ಕೋಶಗಳ ಬೆಳವಣಿಗೆಯನ್ನು ಪ್ರಚೋಧಿಸುವುದು; ಅಪಾಯಕರ ಬ್ಯಾಕ್ಟಿರಿಯಾಗಳ ಬೆಳವಣಿಗೆಯನ್ನು ತಡೆಯುವುದು; ರೋಗಕಾರಕಗಳಿಗೆ ಮಾತ್ರ ಪ್ರಚೋದನೆ ನೀಡುವಂತೆ ರೋಗ ನಿರೋಧಕಗಳನ್ನು ತರಬೇತಿಗೊಳಿಸುವುದು. ವಿಟಾಮಿನ್ ಬಿ12 ಅನ್ನು ಉತ್ಪಾದಿಸುವುದು ಮತ್ತು ಕೆಲವು ಸೋಂಕು ರೋಗಗಳ ವಿರುದ್ಧ ಹೋರಾಡುವ ಕಾರ್ಯಗಳನ್ನು ಮಾಡುತ್ತವೆ.
USDA ನವೀಕರಿಸಿದ ಆಹಾರದ ಪಿರಾಮಿಡ, 2005 ರಲ್ಲಿ ಪ್ರಕಾಶನವಾಯಿತು, ಇದು ಮಾನವರಿಗೆ ಎಷ್ಟು ಆಹಾರ ಸೇವಿಸಬೇಕೆಂದು ಶಿಫಾರಸ್ಸು ಮಾಡುವ ಒಂದು ಸಾಮಾನ್ಯ ಪೌಷ್ಟಿಕತೆಯ ಕೈಪಿಡಿ. ]] ಯುಎಸ್ನಲ್ಲಿ, ಆಹಾರತಜ್ಞರನ್ನು, ಆಹಾರ ತಜ್ಞರ ನೋಂದಣಿ ಆಯೋಗ ಮತ್ತು ದಿ ಅಮೆರಿಕನ್ ಡೈಯೆಟಿಕ್ ಅಸೋಸಿಯೇಷನ್ನಲ್ಲಿ ನೋಂದಾಯಿಸಲಾಗುತ್ತದೆ(RD) ಇಲ್ಲವೇ ಪರವಾನಗಿ (LD) ನೀಡಲಾಗುತ್ತದೆ. ಇವರು ಕೇವಲ ’ಆಹಾರತಜ್ಞರು’ ಎನ್ನುವ ಅಭಿದಾನವನ್ನು ಮಾತ್ರ ಉಪಯೋಗಿಸಬಲ್ಲರು, ಪ್ರತಿಯೊಂದು ರಾಜ್ಯದ ವ್ಯವಹಾರ ಮತ್ತು ವೃತ್ತಿಯ ನಿಯಮದನ್ವಯ ಪೂರ್ವಾಪೇಕ್ಷಿತ ಶಿಕ್ಷಣ ಮತ್ತು ಅನುಭವವನ್ನು ಪಡೆದಿರುವವರು ಮತ್ತು ರಾಷ್ಟ್ರೀಯ ನೋಂದಾವಣೆ ಅಥವಾ ಪರವಾನಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರು ಕ್ರಮವಾಗಿ ಈ ಅಭಿದಾನವನ್ನು ಉಪಯೋಗಿಸಿಕೊಳ್ಳಬಲ್ಲರು. ಕ್ಯಾಲಿಫೋರ್ನಿಯಾದಲ್ಲಿ, ನೋಂದಾಯಿತ ’ಆಹಾರತಜ್ಞರು’ ಈ ನಿಯಮವನ್ನು ಗಮನಿಸಬೇಕಾಗುತ್ತದೆ [61]ಯಾರು ಬೇಕಾದರೂ ತಮ್ಮನ್ನು ತಾವು ’ಪುಷ್ಟಿಕಾಹಾರತಜ್ಞರು’ (ನ್ಯೂಟ್ರಿಷನಿಸ್ಟ್) ಎಂದು ಕರೆದುಕೊಳ್ಳಬಹುದು, ಈ ಪದವು ಯಾವುದೇ ನಿಬಂಧನೆಗೆ ಒಳಪಟ್ಟಿಲ್ಲ. ಫ್ಲೋರಿಡಾದಂತಹ ಕೆಲವು ರಾಜ್ಯಗಳು "ಪೌಷ್ಟಿಕಾಹಾರತಜ್ಞರು" ಎನ್ನುವ ಅಭಿದಾನವನ್ನು ತಮ್ಮ ಪರವಾನಗಿ ಪಡೆಯಬೇಕಾದ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಿವೆ. ಹಲವು ಸರ್ಕಾರಗಳು ಪೌಷ್ಟಿಕಾಹಾರದ ಬಗೆಗೆ ಮಾರ್ಗದರ್ಶನವನ್ನು ಕೊಡುತ್ತವೆ, ಮತ್ತು ಕೆಲವು ಸರ್ಕಾರಗಳು ಗ್ರಾಹಕರಿಗೆ ಈ ಬಗ್ಗೆ ಅನುಕೂಲವಾಗುವಂತೆ ಮಾಡಲು, ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಕರ ಮೇಲೆ ಮತ್ತು ರೆಸ್ಟೋರೆಂಟ್ಗಳ ಮೇಲೆ ಕಡ್ಡಾಯವಾಗಿ ಪ್ರಕಟಿಸಬೇಕೆಂದು/ಪಟ್ಟಿಹಾಕಬೇಕೆಂದು ನಿಯಮಿಸುತ್ತವೆ. ಯುಎಸ್ನಲ್ಲಿ, ಪೌಷ್ಟಿಕಾಂಶದ ನಿರ್ದಿಷ್ಟಮಾನಗಳನ್ನು ಮತ್ತು ಗುಣವರ್ಣನೆಗಳನ್ನು ಯುಎಸ್ ವ್ಯವಸಾಯ ಇಲಾಖೆ ಮತ್ತು ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ಜಂಟಿಯಾಗಿ ನಿರ್ಧರಿಸುತ್ತವೆ. ಯುಎಸ್ಡಿಎ ಹೊರಡಿಸಿರುವ ಆಹಾರ ಮತ್ತು ದೈಹಿಕ ಚಟುವಟಿಕೆಯ ಮಾರ್ಗದರ್ಶಿಆಹಾರದ ಪಿರಮಿಡ್ ಎನ್ನುವ ಪರಿಕಲ್ಪನೆ, ’ಆಹಾರದಲ್ಲಿ ನಾಲ್ಕು ಗುಂಪು’ ಎನ್ನುವ ಪರಿಕಲ್ಪನೆಯನ್ನು ಅತಿಕ್ರಮಿಸಿಬಿಟ್ಟಿದೆ. ವ್ಯವಸಾಯ, ಪೌಷ್ಟಿಕಾಂಶ ಮತ್ತು ಅರಣ್ಯ ಸಮಿತಿ ಯು ಯುಎಸ್ಡಿಎಯ ಕಣ್ತಪ್ಪುಗಳಿಗೆ ಜವಾಬ್ದಾರಿ ಹೊಂದಿದ ಸೆನೆಟ್ ಸಮಿತಿಯಾಗಿದೆ. ಸಮಿತಿಯ ಕಲಾಪಗಳನ್ನು ಅನೇಕ ಸಾರಿ ಸಿ-ಸ್ಪ್ಯಾನ್ (C-SPAN)ನಲ್ಲಿ ಪ್ರಸಾರ ಮಾಡಲಾಗುತ್ತದೆ.ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗವು ಮಾದರಿ ’ವಾರದ ಮೆನು’ಗಳನ್ನು ಬಿಡುಗಡೆ ಮಾಡುತ್ತವೆ, ಇವು ಸರ್ಕಾರವು ಶಿಫಾರಸು ಮಾಡಿದ ಪೌಷ್ಟಿಕತೆಯನ್ನು ಪೂರೈಸುತ್ತವೆ.[62] ಕೆನಡಾದ ಆಹಾರ ಮಾರ್ಗದರ್ಶಿ (ಕೆನಡಾಸ್ ಫುಡ್ ಗೈಡ್) ಎನ್ನುವುದು ಸರ್ಕಾರದ ಮತ್ತೊಂದು ಶಿಫಾರಸು.
ಪೌಷ್ಟಿಕ ಆಹಾರದ ಕುರಿತು ಹಲವು ದೇಶಗಳ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ವೈಯುಕ್ತಿಕ ಮತ್ತು ಸಾಮಾಜಿಕ ಶಿಕ್ಷಣ ಮತ್ತು ಆಹಾರ ತಂತ್ರಜ್ಞಾನ ಅಭ್ಯಾಸ ಪಟ್ಟಿಯಲ್ಲಿ ಸಮತೋಲಿತ ಆಹಾರ ಪದ್ಧತಿಯ ಕುರಿತಾದ ಹೆಚ್ಚು ಒತ್ತು ನೀಡಲಾಗುತ್ತಿದೆ. ಪೌಷ್ಟಿಕಾಂಶ ಕುರಿತಾದ ಆಹಾರ ಪಟ್ಟಿಯನ್ನು ಹೇಗೆ ಓದಬೇಕು ಎಂಬುದನ್ನು ಕೂಡಾ ಕಲಿಸಲಾಗುತ್ತದೆ. ಇನ್ನೂ ಕೆಲವು ಶಾಲೆಗಳಲ್ಲಿ ಪೌಷ್ಟಿಕ ಆಹಾರ ತರಗತಿಗಳನ್ನು ಕುಟುಂಬದ ಒಳಗೇ ಅಥವಾ ಬಳಕೆದಾರರ ವಿಜ್ಞಾನ ಅಥವಾ ಆರೋಗ್ಯ ಇಲಾಖೆಗಳಲ್ಲಿ ನಡೆಸಲಾಗುತ್ತದೆ. ಕೆಲವು ಅಮೇರಿಕಾದ ಶಾಲೆಗಳಲ್ಲಿ, ವಿದ್ಯಾರ್ಥಿಗಳು ಕೆಲವು ಸಂಖ್ಯೆಯ FCS ಅಥವಾ ಆರೋಗ್ಯ ಸಂಬಂಧೀ ತರಗಗತಿಗಳನ್ನು ತೆಗೆಗೆದುಕೊಳ್ಳಬೇಕಾಗುತ್ತದೆ. ಪೌಷ್ಟಿಕ ಆಹಾರ ತರಗತಿಗಳನ್ನು ಆಯ್ಕೆಯ ವಿಷಯವಾಗಿಡಲಾಗುತ್ತದೆ. ಇದು ವಿಶೇಷ ತರಗತಿಯಾಗಿಲ್ಲದಿದ್ದಲ್ಲಿ, ಪೌಷ್ಟಿಕಾಂಶ ಆಹಾರ ತರಗತಿಯನ್ನು ಇತರೆ FCSಗಳ ಅಥವಾ ಆರೊಗ್ಯ ತರಗತಿಗಳ ಜೊತೆ ಸೇರಿಸಲಾಗಿರುತ್ತದೆ. ಉದಾಹರಣೆಗೆ, ಜೀವನ ಕಲೆ, ಸ್ವತಂತ್ರವಾಗಿ ಬದುಕುವಿಕೆ, ಒಂಟಿ ಬದುಕುವಿಕೆ, ಫ್ರೆಷ್ಮೆನ್ ಕನೆಕ್ಷನ್, ಆರೋಗ್ಯ ಇತ್ಯಾದಿಗಳನ್ನು ನೀಡಬಹುದು. ಇನ್ನು ಕೆಲವು ಪೌಷ್ಟಿಕಾಂಶ ಆಹಾರ ತರಗತಿಗಳಲ್ಲಿ, ವಿದ್ಯಾರ್ಥಿಗಳು ಆಹಾರ ಗುಂಪುಗಳ ಬಗ್ಗೆ, ಆಹಾರ ಫಿರಾಮಿಡ್, ದಿನನಿತ್ಯದ ಆಹಾರ, ಕ್ಯಾಲೋರಿಗಳು, ವಿಟಾಮಿನ್ಗಳು, ಖನಿಜಾಂಶಗಳು, ಪೌಷ್ಟಿಕಾಂಶ ಕಲಬೆರಕೆ ಮತ್ತು ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಆಯ್ಕೆಗಳು ಮತ್ತು ಆರೋಗ್ಯಕರ ಜೀವನವನ್ನು ಹೇಗೆ ನಡೆಸಬಹುದು ಎಂಬುದರ ಕುರಿತು ತರಗತಿಗಳನ್ನು ನಡೆಸಲಾಗುತ್ತದೆ.
1985ರ ಯುಎಸ್ ರಾಷ್ಟ್ರೀಯ ಸಂಶೋಧನಾ ಸಮಿತಿಯ ’ಯುಎಸ್ ವೈದ್ಯಕೀಯ ಶಾಲೆಗಳಲ್ಲಿ ಪೌಷ್ಟಿಕ ಆಹಾರ ಶಿಕ್ಷಣ’ ಎಂಬ ವಿಷಯದ ಕುರಿತ ವರದಿಯು ವೈದ್ಯಕೀಯ ಶಾಲೆಗಳಲ್ಲಿ ಪೌಷ್ಟಿಕ ಆಹಾರ ಕುರಿತ ಶಿಕ್ಷಾಣವು ಅತ್ಯಂತ ಪ್ರಾಮುಖ್ಯವಾಗಿದೆ ಎಂದು ತೀರ್ಮಾನ ನೀಡಿದೆ.[೨೦] ಸಮೀಕ್ಷೆ ನಡೆಸಿದ ಕೇವಲ 20% ಶಾಲೆಗಳು ಮಾತ್ರ ಪೌಷ್ಟಿಕಾಂಶ ಆಹಾರ ಕುರಿತ ವಿಷಯವನ್ನು ಬೇರೆಯಾಗಿ ಅಥವಾ ಅಗತ್ಯ ಕೋರ್ಸ್ ಆಗಿ ಕಲಿಸುತ್ತಿವೆ. 2006ರಲ್ಲಿ ನಡೆಸಿದ ಸಮೀಕ್ಷೆಯೊಂದು ಈ ಪ್ರಮಾಣವು 30%ಕ್ಕೆ ಏರಿದೆ ಎಂದು ತಿಳಿಸಿದೆ.[೨೧]
ಹೃದಯ ಸಂಬಂಧಿತ ಖಾಯಿಲೆ, ಕ್ಯಾನ್ಸರ್, ಸ್ಥೂಲಕಾಯ ಮತ್ತು ಮಧುಮೇಹ-ಇವುಗಳನ್ನು ಸಾಮಾನ್ಯವಾಗಿ "ಪಾಶ್ಚಿಮಾತ್ಯ" ಖಾಯಿಲೆಗಳೆಂದು ಕರೆಯುತ್ತಾರೆ. ಏಕೆಂದರೆ ಈ ಖಾಯಿಲೆಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಹಿಂದೊಮ್ಮೆ ನಿಧಾನವಾಗಿ ಕಾಣಿಸಿಕೊಂಡವು. ಚೀನಾದ ಒಂದು ಅಧ್ಯಯನವು ಕೆಲವು ಪ್ರದೇಶಗಳು ಕ್ಯಾನ್ಸರ್ ಅಥವಾ ಹೃದಯ ಸಂಬಂಧಿ ಖಾಯಿಲೆಗಳನ್ನು ಪ್ರಮುಖವಾಗಿ ಹೊಂದಿಲ್ಲ ಎಂಬುದನ್ನು ಕಂಡುಹಿಡಿಯಿತು, ಆದರೆ ಅದರ ಸುತ್ತಲಿನ ಇತರೆ ಪ್ರದೇಶಗಳಲ್ಲಿ, 100-ಪಟ್ಟು ಏರಿಕೆಯಿತ್ತು. ಇದು ಆಹಾರಪದ್ಧತಿಗೆ ಕಾಕತಾಳೀಯವಾಗಿ ಸಂಬಂಧಿಸಿದಂತೆ ಮೊದಲನೆಯ ಪ್ರದೇಶದಲ್ಲಿ ಸಂಪೂರ್ಣ ಸಸ್ಯಾಹಾರ ಮತ್ತು ನಂತರದರಲ್ಲಿ ಅತ್ಯಂತ ಹೆಚ್ಚಿನ ಮಾಂಸಾಹಾರ ಪದ್ಧತಿಯು ಕಂಡುಬಂತು.[೨೨] ಇದಕ್ಕೆ ವಿರುದ್ಧವಾಗಿ, ಕ್ಯಾನ್ಸರ್ ಮತ್ತು ಹೃದಯ ರೋಗಗಳಂಥ ಖಾಯಿಲೆಗಳು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಎಲ್ಲೆಡೆಯೂ ಸಾಮಾನ್ಯವಾಗಿವೆ. ಚೀನಾ ದೇಶದಲ್ಲಿ ವಯಸ್ಸು ಮತ್ತು ವ್ಯಾಯಾಮಕ್ಕೆ ಹೊಂದಿಕೊಂಡಂತೆ, ಬೃಹತ್ ಪ್ರಾದೇಶಿಕ ಸಮೂಹದ ಜನರು ಈ "ಪಾಶ್ಚಿಮಾತ್ಯ" ಖಾಯಿಲೆಗಳಿಂದ ನರಳುವುದು ಅಪರೂಪ. ಏಕೆಂದರೆ ಅವರ ಆಹಾರಕ್ರಮದಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಎಲ್ಲಾ ಧಾನ್ಯಗಳು ಹೇರಳವಾಗಿವೆ.[೨೨] ದ ಯುನೈಟೆಡ್ ಹೆಲ್ತ್ಕೇರ್/ಪೆಸಿಫಿಕೇರ್ನ ಪೋಷಕಾಂಶ ಮಾರ್ಗಸೂಚಿಯು ಎಲ್ಲಾ ಸಸ್ಯಾಹಾರದ ಆಹಾರ ಪದ್ಧತಿಯನ್ನು ಸೂಚಿಸುತ್ತದೆ ಮತ್ತು ಪ್ರೋಟೀನ್ ಅನ್ನು ಊಟದೊಂದಿಗಿನ ಮಸಾಲೆ ಪದಾರ್ಥವಾಗಿ ಮಾತ್ರ ಬಳಸಲು ಸಲಹೆ ನೀಡುತ್ತದೆ. ನವೆಂಬರ್ 2005ರ ನ್ಯಾಷನಲ್ ಜಿಯೊಗ್ರಾಫಿಕ್ ನ ದ ಸಿಕ್ರೆಟ್ಸ್ ಆಫ್ ಲಿವಿಂಗ್ ಲಾಂಗರ್ ಎಂಬ ಶೀರ್ಷಿಕೆಯ ಲೇಖನವು ಎಲ್ಲಾ ರೀತಿಯ ಸಸ್ಯಾಹಾರ ಆಹಾರಕ್ರಮವನ್ನು ಸೂಚಿಸಿದೆ. ಸಾರ್ಡಿನಿಯಾ ದೇಶದವರು,ಒಕಿನವಾನ್ ದೇಶದವರು ಮತ್ತು ಅಡ್ವೆಂಟಿಸ್ಟ್ ದೇಶದವರು- ಮೂರುದೇಶದ ಜನಸಂಖ್ಯಾ ಸಮೀಕ್ಷೆಯ ಜೀವನಶೈಲಿಯನ್ನು ಈ ಲೇಖನ ಹೊಂದಿದೆ. ಇದರಲ್ಲಿ ಅವರು ಸಾಮಾನ್ಯವಾಗಿ ದೀರ್ಘಾಯುಷಿಗಳು ಮತ್ತು "ಅಭಿವೃದ್ಧಿ ಹೊಂದಿದ ಪ್ರಪಂಚದ ಇತರೆ ಭಾಗಗಳಲ್ಲಿ ಜನರನ್ನು ಸಾಮಾನ್ಯವಾಗಿ ಕೊಲ್ಲುವಂಥ ಖಾಯಿಲೆಗಳಿಂದ ಅವರು ಹೆಚ್ಚೇನೂ ನರಳಲಿಲ್ಲ ಮತ್ತು ಅವರು ಜೀವನದ ಅತ್ಯಂತ ಆರೋಗ್ಯಕರ ವರ್ಷಗಳನ್ನು ಸಂತೋಷವಾಗಿ ಅನುಭವಿಸಿದರು" ಎಂದು ಬಿಂಬಿಸಲಾಗಿದೆ. ಒಟ್ಟಾರೆಯಾಗಿ, ಮೂರು ಗುಂಪುಗಳ "ಉತ್ತಮ ಅಭ್ಯಾಸಗಳನ್ನು" ಅನುಕರಿಸುವಂತೆ ಅವರು ಸೂಚಿಸಿದ್ದಾರೆ. ಉಳಿದದ್ದು ನಿಮಗೆ ಬಿಟ್ಟದ್ದು. ಈ ಮೂರು ಗುಂಪುಗಳಲ್ಲಿ ಸಾಮಾನ್ಯವಾಗಿರುವುದೆಂದರೆ "ಹಣ್ಣುಗಳು, ತರಕಾರಿಗಳು ಮತ್ತು ಎಲ್ಲಾ ವಿಧದ ಧಾನ್ಯಗಳನ್ನು ತಿನ್ನುವುದು". 1976 ಮತ್ತು 1988 ರ ಮಧ್ಯೆ ಸೆವೆಂತ್-ಡೇ ಅಡ್ವೆಂಟಿಸ್ಟ್ ಸಮ್ಮೇಳನದಲ್ಲಿ 34,೦೦೦ ಜನರನ್ನು ಎನ್ಐಹೆಚ್ ಅಧ್ಯಯನ ಮಾಡಿದೆ..." ಆ ಅಡ್ವೆಂಟಿಸ್ಟ್ನ ಜನರು ಬೀನ್ಸ್, ಸೊಯಾ ಮಿಲ್ಕ್, ಟೊಮ್ಯಾಟೋಗಳನ್ನು ಮತ್ತು ಕ್ಯಾನ್ಸರ್ನ ಒತ್ತಡವನ್ನು ಕಡಿಮೆ ಮಾಡುವಂತಹ ಇನ್ನಿತರ ಹಣ್ಣುಗಳನ್ನು ಬಳಸುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಎಲ್ಲಾ ರೀತಿಯ ಧಾನ್ಯದ ಆಹಾರಗಳನ್ನು ತಿನ್ನುವುದು ಮತ್ತು ಒಂದು ದಿನಕ್ಕೆ ಐದು ಲೋಟಗಳ ನೀರನ್ನು ಕುಡಿಯುವುದು ಮತ್ತು ಯಾವುದಾದರೂ ಬೀಜಗಳನ್ನು ಒಂದು ವಾರಕ್ಕೆ ನಾಲ್ಕುದಿನ ಸೇವಿಸುವುದು ಹೃದಯ ಸಂಬಂಧಿ ಖಾಯಿಲೆಯನ್ನು ಕಡಿಮೆ ಮಾಡುತ್ತದೆ, ಎಂದು ದ {0}ನ್ಯಾಷನಲ್ ಜಿಯಾಗ್ರಪಿಕ್{/0} ಲೇಖನದಲ್ಲಿ ತಿಳಿಸಲಾಗಿದೆ"
ಫ್ರಾನ್ಸ್ನಲ್ಲಿ ಜೀವಿಸುವ ಜನರು ಹೆಚ್ಚು ಕಾಲ ಬದುಕುತ್ತಾರೆ ಎಂದು ಸಂಶೋಧನೆಗಳು ಕಂಡುಕೊಂಡಿವೆ.[vague] ಅವರು ಅಮೇರಿಕಾದ ಜನರಿಗಿಂತ ಹೆಚ್ಚಿನ ಪ್ರಮಾಣದ ಸಂಪೂರ್ಣ ಕೊಬ್ಬನ್ನು ಬಳಸುತ್ತಿದ್ದು ಆದರೂ ಕೂಡ ಫ್ರಾನ್ಸ್ನಲ್ಲಿಯ ಹೃದಯ ರೋಗದ ತೊಂದರೆಯ ಜನರ ಪ್ರಮಾಣವು ಉತ್ತರ ಅಮೇರಿಕಾದಲ್ಲಿಯ ಜನರ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಹಲವಾರು ವಿವರಣೆಗಳನ್ನು ಈ ಕುರಿತು ನೀಡಲಾಗಿದೆ:
ಅದೇನೆ ಇದ್ದರೂ, ವಿಶ್ವ ಆರೋಗ್ಯ ಸಂಸ್ಥೆಯಿಂದ 1990-2000ರವರೆಗೆ ಸಂಗ್ರಹಿಸಲ್ಪಟ್ಟ ಅಂಕಿಅಂಶಗಳು ಹೇಳುವ ಪ್ರಕಾರ ಫ್ರಾನ್ಸ್ನಲ್ಲಿಯ ಹೃದಯರೋಗ ಪ್ರಕರಣಗಳನ್ನು ಕಡೆಗಣಿಸಲಾಗಿದೆ, ಅಲ್ಲದೆ ಇದು ಅಕ್ಕಪಕ್ಕದ ದೇಶಗಳಿಗೆ ಹೋಲಿಸಿದರೆ ಅದೇ ರೀತಿಯಲ್ಲಿದೆ.[೨೪]
ಪ್ರೋಟಿನ್ ಮಿಲ್ಕ್ಶೇಕಗಳು, ಪ್ರೋಟಿನ್ ಪೌಡರ್ (ಮಧ್ಯ) ಹಾಗೂ ಹಾಲು (ಎಡ) ಯಿಂದ ತಯಾರಿಸಲಾಗಿದ್ದು, ಇವು ಸಾಮಾನ್ಯವಾಗಿ ಶರೀರ ನಿರ್ಮಾಣದ ಪೂರಕ. ]] ಪ್ರೋಟೀನ್ ಎನ್ನುವುದು ದೇಹದ ಪ್ರತಿಯೊಂದು ಜೀವಕೋಶದ ಬಹುಮುಖ್ಯ ಅಂಗ. ಕೂದಲು ಮತ್ತು ಉಗುರುಗಳಲ್ಲಿ ಬಹುಪಾಲು ಪ್ರೋಟೀನೇ ಇದೆ. ದೇಹವು ಅಂಗಾಂಶಗಳನ್ನು ತಯಾರಿಸಲು ಮತ್ತು ರಿಪೇರಿ ಮಾಡಲು ಪ್ರೋಟೀನನ್ನೇ ಬಳಸುತ್ತದೆ. ಹಾಗೆಯೇ, ಕಿಣ್ವ, ಹಾರ್ಮೋನು ಮತ್ತು ದೇಹದ ಇತರೆ ರಾಸಾಯನಿಕಗಳನ್ನು ಮಾಡಲು ಪ್ರೋಟೀನ್ ಬಳಕೆಯಾಗುತ್ತದೆ. ಮೂಳೆಗಳು, ಮಾಂಸಖಂಡಗಳು, ಮೃದುಎಲುಬು, ಚರ್ಮ ಮತ್ತು ರಕ್ತ - ಇವುಗಳ ತಯಾರಿಕೆಯಲ್ಲಿ ಪ್ರೋಟೀನ್ ಬಹುಮುಖ್ಯ ಅಂಗ. ಪ್ರತಿಯೊಬ್ಬ ಮನುಷ್ಯನ ಪ್ರೋಟೀನ್ ಅಗತ್ಯತೆಯೂ ಬೇರೆ-ಬೇರೆಯಾಗಿರುತ್ತದೆ. ಅದರಂತೆಯೇ, ದೈಹಿಕ ಕ್ರಿಯೆಗಳನ್ನು ಮಾಡುವವರಿಗೆ ಪ್ರೋಟೀನ್ ಹೆಚ್ಚಾಗಿ ಬೇಕೆ ಎಂಬುದರ ಬಗೆಗಿನ ಅಭಿಪ್ರಾಯಗಳು ಬೇರೆ-ಬೇರೆಯಾಗಿವೆ. ಸಾಮಾನ್ಯ ಆರೋಗ್ಯವಂತ ವಯಸ್ಕರನ್ನು ಗಮನದಲ್ಲಿರಿಸಿಕೊಂಡ 2005ರ ರೆಕಮೆಂಡೆಡ್ ಡೈಯಟರಿ ಅಲೋವನ್ಸ್ಗಳು, 1 ಕೆಜಿ ದೇಹದ ತೂಕಕ್ಕೆ 0.8 - 1 ಗ್ರಾಮ್ವರೆಗೆ ಪ್ರೋಟೀನ್ ತೆಗೆದುಕೊಳ್ಳಬಹುದು ಎನ್ನುತ್ತದೆ (ಬಿಎಮ್ಐ ಸೂತ್ರದ ಪ್ರಕಾರ), ಜೊತೆಗೆ ಪರೀಕ್ಷಕ ಮಂಡಲಿ ಹೀಗೆ ಹೇಳುತ್ತದೆ -[78]"ರೆಸಿಸ್ಟೆನ್ಸ್ ಅಥವಾ ಎಂಡುರೆನ್ಸ್ ವ್ಯಾಯಾಮಗಳನ್ನು ಮಾಡುವ ಆರೋಗ್ಯವಂತ ವಯಸ್ಕರು ಇದಕ್ಕಿಂತ ಹೆಚ್ಚಿನ ಪ್ರೊಟೀನ್ ತೆಗೆದುಕೊಳ್ಳುವುದನ್ನು ಸಮ್ಮತಿಸಲಾಗುವುದಿಲ್ಲ"[78]. ಇದಕ್ಕೆ ಸಂವಾದಿಯಾಗಿ, ಡಿ ಫಾಸ್ಖ್ವಾಲ್ರವರು (2008), ಇತ್ತೀಚಿನ ಅಧ್ಯಯನಗಳನ್ನು ಉದಾಹರಿಸುತ್ತಾ, ಒಂದು ಕೆಜಿಗೆ ಕನಿಷ್ಠ 2.2 ಗ್ರಾಂ ಪ್ರೋಟೀನ್ ತೆಗೆದುಕೊಳ್ಳಬೇಕೆಂಬ ಸಲಹೆ ನೀಡುತ್ತಾರೆ. "ಇದು ಸ್ಪರ್ಧಾತ್ಮಕ ಅಥವಾ ತೀವ್ರತರವಾದ ಕ್ರೀಡೆಗಳಲ್ಲಿ ಭಾಗವಹಿಸುವ, ತೆಳು ದೇಹದ ಮೊತ್ತವನ್ನು ಗರಿಷ್ಠ ಮಾಡಿಕೊಳ್ಳಲು ಬಯಸುವ ಆದರೆ ತೂಕ ಹೆಚ್ಚಿಸಿಕೊಳ್ಳಲು ಇಷ್ಟವಿಲ್ಲದ ಎಲ್ಲರಿಗೂ" ಎನ್ನುತ್ತಾರೆ.
ಒಬ್ಬ ಕ್ರೀಡಾಪಟುವಿಗೆ ನೀರು ಬಹಳ ಮುಖ್ಯವಾದ ಪೋಷಕಾಂಶಗಳಲ್ಲಿ ಒಂದು. ಅದು ದೇಹದಲ್ಲಿನ ಆಹಾರೋತ್ಪನ್ನ ತ್ಯಾಜ್ಯವನ್ನು ದೇಹದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ, ಚಟುವಟಿಕೆಯ ಸಮಯದಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ಪಚನಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ದೈಹಿಕಶ್ರಮದ ಸಂದರ್ಭದಲ್ಲಿ ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳುವುದೇ ಉತ್ತಮ ಪ್ರದರ್ಶನದ ಹಿಂದಿರುವ ಗುಟ್ಟು. ಚಟುವಟಿಕೆಯ ಸಂದರ್ಭಗಳಲ್ಲಿ ಅತಿಯಾಗಿ ನೀರು ಕುಡಿಯುವುದು ಮುಜುಗರಕ್ಕೀಡುಮಾಡಬಹುದಾದರೂ, 2%ಕ್ಕಿಂತ ಹೆಚ್ಚಿಗೆ ದೇಹ ಒಣಗುವುದರಿಂದ (ದೇಹದ ತೂಕಕ್ಕೆ ಅನುಗುಣವಾಗಿ) [81]ಕ್ರೀಡಾಪಟುಗಳ ಸಾಧನೆಯು ಗಣನೀಯವಾಗಿ ಕುಂಠಿತವಾಗುತ್ತದೆ[81]. ವ್ಯಾಯಾಮದ ಮೊದಲು, ಮಧ್ಯ ಮತ್ತು ನಂತರ ಹೆಚ್ಚಿನ ಅಂಗಾರ ಮತ್ತು ಪ್ರೊಟೀನ್ಗಳ ಸೇವನೆಯಿಂದ ದಣಿವನ್ನು ದೂರಮಾಡಬಹುದು ಮತ್ತು ಬೇಗನೆ ಸುಧಾರಿಸಿಕೊಳ್ಳಬಹುದು. ಮಾಡಿದ ಕೆಲಸ, ತೆಳು ದೇಹದ ಮೊತ್ತ, ಮತ್ತು ಪರಿಸರಾತ್ಮಕ ಅಂಶಗಳು, ವಿಶೇಷವಾಗಿ ವಾತಾವರಣದ ಉಷ್ಣಾಂಶ ಮತ್ತು ತೇವಾಂಶ ಇವುಗಳ ಆಧಾರದ ಮೇಲೆ ಪ್ರಮಾಣವು ನಿರ್ಧಾರಿತವಾಗುತ್ತವೆ. ಸರಿಯಾದ ಪ್ರಮಾಣವನ್ನು ಕಾಪಾಡಿಕೊಳ್ಳುವುದೇ ಬಹಳ ಮುಖ್ಯ.
ವ್ಯಾಯಾಮ ಮಾಡುವಾಗ ದೇಹದಲ್ಲಿ ಬಳಸಲ್ಪಡುವ ಮುಖ್ಯ ಇಂಧನವೆಂದರೆ, ಸಕ್ಕರೆಯ ಒಂದು ರೂಪವಾದ ಗ್ಲೈಕೋಜನ್ ಆಗಿ ಸ್ನಾಯುಗಳಲ್ಲಿ ಸಂಗ್ರಹಿಸಲ್ಪಟ್ಟಿರುವ ಕಾರ್ಬೋಹೈಡ್ರೇಟ್ಗಳು. ವ್ಯಾಯಾಮ ಮಾಡುವ ಸಂದರ್ಭದಲ್ಲಿ, ವಿಶೇಷವಾಗಿ ಅದು 90 ನಿಮಿಷಗಳ ಅವಧಿ ಮೀರಿದಾಗ, ಸ್ನಾಯುಗಳಲ್ಲಿ ಶೇಖರಗೊಂಡ ಗ್ಲೈಕೋಜನ್ ಉಪಯೋಗಿಸಲ್ಪಡುತ್ತದೆ.[82] ದೇಹದಲ್ಲಿ ಶೇಖರಗೊಂಡಿರುವ ಕಾರ್ಬೋಹೈಡ್ರೇಟ್ಗಳ ಪ್ರಮಾಣವು ನಿರ್ದಿಷ್ಟ ಮಟ್ಟದ್ದಾದ್ದರಿಂದ ಕ್ರೀಡಾಪಟುಗಳು ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಆಹಾರ ತೆಗೆದುಕೊಳ್ಳುವ ಮೂಲಕ ಗ್ಲೈಕೋಜನ್ ಅನ್ನು ಮರುಪೂರಣಗೊಳಿಸಿಕೊಳ್ಳುವುದು ಅಗತ್ಯ. ಅಗತ್ಯ ಶಕ್ತಿಯ ಮಟ್ಟವನ್ನು ಹೊಂದುವುದು ಕ್ರೀಡಾಸಾಮರ್ಥ್ಯವನ್ನು ಉತ್ತಮಗೊಳಿಸುತ್ತದೆ, ಜೊತೆಗೆ ಒಟ್ಟು ದೇಹಬಲ ಮತ್ತು ಸಹಿಷ್ಣುತೆಯನ್ನೂ ಉತ್ತಮಗೊಳಿಸುತ್ತದೆ.ಕಾರ್ಬೋಹೈಡ್ರೇಟ್ಗಳಲ್ಲಿ ಹಲವು ವಿಧಗಳಿವೆ - ಸರಳ ಅಥವಾ ಸಂಸ್ಕರಿತ ಮತ್ತು ಸಂಸ್ಕರಿಸದ ಕಾರ್ಬೋಹೈಡ್ರೇಟ್ಗಳು. ಒಬ್ಬ ಸಾಮಾನ್ಯ ಅಮೆರಿಕನ್ ಪ್ರಜೆ ತನ್ನ ಕಾರ್ಬೋಹೈಡ್ರೇಟ್ಗಳ ಶೇಕಡಾ 50ರಷ್ಟನ್ನು, ಪ್ರಾಕೃತಿಕವಾಗಿ ಹಣ್ಣು ಮತ್ತು ತರಕಾರಿಗಳ ಮೂಲಕ ಬರುವ ಸಕ್ಕರೆಗೆ ವಿರೋಧವಾಗಿ ಆಹಾರಕ್ಕೆ ಸೇರಿಸಲ್ಪಟ್ಟ ಸರಳ ಸಕ್ಕರೆಯ ಮೂಲಕ ಹೊಂದುತ್ತಾನೆ. ಈ ಸರಳ ಸಕ್ಕರೆಯು ಸೋಡಾಗಳಲ್ಲಿ ಮತ್ತು ಫಾಸ್ಟ್ಫುಡ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಒಂದು ವರ್ಷದ ಅವಧಿಯಲ್ಲಿ ಸರಾಸರಿ ಅಮೆರಿಕನ್ ಪ್ರಜೆಯೊಬ್ಬ 54 ಗ್ಯಾಲನ್ ಗಳಷ್ಟು ತಂಪು ಪಾನೀಯಗಳನ್ನು ಸೇವಿಸುತ್ತಾನೆ. ಇವು ಅತ್ಯಧಿಕ ಪ್ರಮಾಣದ ಸೇರ್ಪಡಿತ ಸಕ್ಕರೆಯನ್ನು ಹೊಂದಿರುತ್ತವೆ.[೨೫] ಮನುಷ್ಯರಿಗೆ ಕೆಲಸ ಮಾಡಲು ಕಾರ್ಬೋಹೈಡ್ರೇಟ್ಗಳು ಅಗತ್ಯವಾದರೂ ಅವೆಲ್ಲವೂ ಏಕರೂಪವಾಗಿ ಆರೋಗ್ಯಕರವಲ್ಲ. ಯಂತ್ರೋಪಕರಣಗಳು ಫೈಬರ್ ಕಣಗಳನ್ನು ಬೇರ್ಪಡಿಸುವಾಗ ಕಾರ್ಬೋಹೈಡ್ರೇಟ್ಗಳು ಸಂಸ್ಕರಿಸಲ್ಪಡುತ್ತವೆ. ಇವು ಬಿಳಿ ರೊಟ್ಟಿ ಮತ್ತು ಫಾಸ್ಟ್ ಫುಡ್ ಗಳಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್ಗಳು.[೨೬]
ಅಪೌಷ್ಟಿಕತೆ ಎಂದರೆ ಅಗತ್ಯಕ್ಕಿಂತ ಕಡಿಮೆ, ಹೆಚ್ಚು ಅಥವಾ ಅಸಂತುಲಿತ ಪೌಷ್ಟಿಕಾಂಶಗಳ ಸೇವನೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಪೌಷ್ಟಿಕತೆ ಸಂಬಂಧಿ ರೋಗಗಳು ಹೆಚ್ಚಾಗಿ ಅಸಂತುಲಿತ ಅಥವಾ ಅಗತ್ಯಕ್ಕಿಂತ ಹೆಚ್ಚಿನ ಪೌಷ್ಟಿಕಾಂಶಗಳ ಸೇವನೆಯಿಂದ ಬರುತ್ತವೆ. ಪ್ರಪಂಚದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪೌಷ್ಟಿಕಾಂಶಗಳ ಸೇವನೆಯಿಂದ ಅಪೌಷ್ಟಿಕತೆಗೆ ಒಳಗಾದವರ ಸಂಖ್ಯೆ ಹೆಚ್ಚಿದ್ದರೂ, ಅಮೆರಿಕದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇವತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮುಂದಿರುವ ನಿಜವಾದ ಸವಾಲೆಂದರೆ ಉಪವಾಸಕ್ಕಿಂತಲೂ ಹೆಚ್ಚಾಗಿ ಸಾಕಷ್ಟು ಪ್ರಮಾಣದಲ್ಲಿ ದೊರೆಯದಿರುವ, ಬೆಳವಣಿಗೆ ಮತ್ತು ದೇಹಪ್ರಕ್ರಿಯೆಗಳ ನಿರ್ವಹಣೆಗೆ ಅಗತ್ಯವಿರುವ ಪೌಷ್ಟಿಕಾಂಶಗಳ ಕೊರತೆಯ ವಿರುದ್ಧ ಹೋರಾಡುವುದು.
ಪೌಷ್ಟಿಕಾಂಶಗಳು | ಕೊರತೆ | ಹೆಚ್ಚುವರಿ |
---|---|---|
ಶಕ್ತಿಮೂಲ | ಹಸಿವು, ದೇಹ ಕ್ಷಯ | ಬೊಜ್ಜು, ಸಿಹಿಮೂತ್ರರೋಗ, ಹೃದಯನಾಳ ಸಂಬಂಧಿ ಖಾಯಿಲೆಗಳು |
ಸರಳ ಕಾರ್ಬೋಹೈಡ್ರೇಟ್ಗಳು | ಯಾವುದು ಇಲ್ಲ | ಸಿಹಿಮೂತ್ರರೋಗ, ಬೊಜ್ಜು |
ಸಂಕೀರ್ಣ ಕಾರ್ಬೋಹೈಡ್ರೇಟ್ಗಳು | ಯಾವುದು ಇಲ್ಲ | ಬೊಜ್ಜು |
ಪರ್ಯಾಪ್ತ ಕೊಬ್ಬು | ಲೈಂಗಿಕ ಹಾರ್ಮೋನುಗಳ ಕೊರತೆ[೨೭] | ಹೃದಯರಕ್ತನಾಳ ಸಂಬಂಧಿ ಖಾಯಿಲೆಗಳು(ಹೆಚ್ಚಿನ ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರಿಂದ ಪ್ರತಿಪಾದಿಸಲ್ಪಟ್ಟದ್ದು) |
ರೂಪಾಂತರಿತ ಕೊಬ್ಬು | ಯಾವುದು ಇಲ್ಲ | ಹೃದಯರಕ್ತನಾಳ ಸಂಬಂಧಿ ಖಾಯಿಲೆ |
ಅಪರ್ಯಾಪ್ತ ಕೊಬ್ಬು | ಯಾವುದು ಇಲ್ಲ | ಬೊಜ್ಜು |
ಕೊಬ್ಬು | ಕೊಬ್ಬು ಕರಗುವ ವಿಟಮಿನ್ ಗಳ ಹೀರುವಿಕೆಯಲ್ಲಿ ಕೊರತೆ, ರೇಬಿಟ್ ಸ್ಟಾರ್ವೇಶನ್ (ಮೊಲ ಇತ್ಯಾದಿ ಮಾಂಸವನ್ನು ಸೇವಿಸಿ ಪ್ರೋಟೀನ್ ಪ್ರಮಾಣ ಅಧಿಕವಾಗಿದ್ದರೆ) | ಹೃದಯರಕ್ತನಾಳ ಸಂಬಂಧಿ ಖಾಯಿಲೆ (ಕೆಲವರಿಂದ ಪ್ರತಿಪಾದಿಸಲ್ಪಟ್ಟದ್ದು) |
ಒಮೇಗಾ-3 ಕೊಬ್ಬುಗಳು | ಹೃದಯರಕ್ತನಾಳ ಸಂಬಂಧಿ ಖಾಯಿಲೆ | ರಕ್ತಸ್ರಾವ, ಹ್ಯಾಮರೇಜ್ |
ಒಮೇಗಾ-6 ಕೊಬ್ಬುಗಳು | ಯಾವುದು ಇಲ್ಲ | ಹೃದಯರಕ್ತನಾಳ ಸಂಬಂಧಿ ಖಾಯಿಲೆ, ಕ್ಯಾನ್ಸರ್ |
ಕೊಲೆಸ್ಟರಾಲ್ | ಯಾವುದು ಇಲ್ಲ | ಹೃದಯರಕ್ತನಾಳ ಸಂಬಂಧಿ ಖಾಯಿಲೆ (ಕೆಲವರಿಂದ ಪ್ರತಿಪಾದಿಸಲ್ಪಟ್ಟದ್ದು) |
ಪ್ರೋಟೀನ್ | ಕ್ವಾಶಿಯೋರ್ಕರ್ | ರೇಬಿಟ್ ಸ್ಟಾರ್ವೇಶನ್ |
ಸೋಡಿಯಂ | ಹೈಪೊನಟ್ರೀಮಿಯಾ | ಹೈಪರ್ ನಟ್ರೀಮಿಯಾ, ಏರೊತ್ತಡ |
ಕಬ್ಬಿಣ | ಅನಿಮಿಯಾ | ಯಕೃತ್ತಿನ ತೀವ್ರರೋಗ, ಹೃದ್ರೋಗ |
ಅಯೋಡಿನ್ | ಗಾಯಿಟರ್, ಹೈಪೋಥೈರಾಯಿಡಿಸಮ್ | ಅಯೋಡಿನ್ ವಿಷಕರತೆ (ಗಾಯಿಟರ್, ಹೈಪೋಥೈರಾಯಿಡಿಸಮ್) |
ಜೀವಸತ್ವ A | ಒಣಗಣ್ಣು, ಮತ್ತು ಇರುಳುಗಣ್ಣು, ಟೆಸ್ಟೋಸ್ಟಿರಾನ್ ಕೊರತೆ | ಹೈಪರ್ ವಿಟಮಿನೋಸಿಸ್ A (ಯಕೃತ್ತಿನ ತೀವ್ರರೋಗ, ಕೂದಲು ಉದುರುವಿಕೆ) |
ಜೀವಸತ್ವ B1 | ಬೆರಿ ಬೆರಿ | |
ಜೀವಸತ್ವ B2 | ಚರ್ಮ ಒಡೆಯುವಿಕೆ ಮತ್ತು ಕಾರ್ನಿಯಾ ದ ದೃಷ್ಟಿ ಮಂದತೆ | |
ನಿಯಾಸಿನ್ | ಪೆಲಾಗ್ರಾ | ಅಗ್ನಿಮಾಂದ್ಯ, ಹೃದಯ ಸ್ತಂಭನ, ಜನ್ಮದತ್ತ ನ್ಯೂನತೆಗಳು |
ಜೀವಸತ್ವ B12 | ಹಾನಿಕರ ರಕ್ತಹೀನತೆ | |
ಜೀವಸತ್ವ C | ಸ್ಕರ್ವಿ | ನಿರ್ಜಲೀಕರಣ ಕ್ಕೆ ಕಾರಣವಾಗುವ ಅತಿಸಾರ |
ಜೀವಸತ್ವ D | ರಿಕೆಟ್ಸ್ | ಹೈಪರ್ ವಿಟಮಿನೋಸಿಸ್ D (ನಿರ್ಜಲೀಕರಣ, ವಾಂತಿ, ಮಲಬದ್ಧತೆ) |
ಜೀವಸತ್ವ E | ನರಗಳ ಅಸ್ತವ್ಯಸ್ತತೆಗಳು | ಹೈಪರ್ ವಿಟಮಿನೋಸಿಸ್ E (ಕರಣೆರೋಧಕ: ಅತಿಯಾದ ರಕ್ತಸ್ರಾವ) |
K ಜೀವಸತ್ವ | ಹೆಮರೇಜ್ | |
ಕ್ಯಾಲ್ಸಿಯಂ | ಆಸ್ಟಿಯೋಪೋರೋಸಿಸ್, ಟೆಟಾನಿ, ಕೈ,ಕಾಲು ಅಥವಾ ಹೆಬ್ಬೆರಳ ಸ್ನಾಯುಗಳ ಹಠಾತ್ ಸೆಳೆತ, ಶ್ವಾಸನಾಳದ ಸ್ನಾಯುಗಳ ಹಠಾತ್ ಸೆಳೆತ, ಹೃದಯ ಸ್ತಂಭನ | ಆಯಾಸ, ಖಿನ್ನತೆ, ಗೊಂದಲ, ಅನೊರೆಕ್ಸಿಯಾ, ಓಕರಿಕೆ, ವಾಂತಿ, ಮಲಬದ್ಧತೆ, ಪ್ಯಾಂಕ್ರಿಯಾಟಿಟಿಸ್, ಬಹುಮೂತ್ರ |
ಮೆಗ್ನೀಶಿಯಮ್ | ಅಧಿಕ ರಕ್ತದೊತ್ತಡ | ನಿಶ್ಶಕ್ತಿ, ಓಕರಿಕೆ, ವಾಂತಿ, ದುರ್ಬಲಗೊಂಡ ಉಸಿರಾಟ, ಇಳಿಯೊತ್ತಡ |
ಪೊಟಾಸಿಯಂ | ಹೈಪೋಕಲೇಮಿಯಾ, ಹೃದಯ ಸ್ತಂಭನ | ಹೈಪರ್ ಕಲೇಮಿಯಾ, ನಾಡಿಮಿಡಿತಗಳು |
ಪೌಷ್ಟಿಕಾಂಶಯುಕ್ತ ಆಹಾರದ ಆಯ್ಕೆಯ ಕುರಿತಾಗಿ ಅರಿವನ್ನು ಹೆಚ್ಚಿಸುವುದು ಹಾಗೂ ಆರೋಗ್ಯಯುತ ಆಹಾರಗಳನ್ನು ಸೇವಿಸುವ ಸುದೀರ್ಘ ಅಭ್ಯಾಸವನ್ನು ರೂಢಿಸುವುದು ವಿದ್ಯಾರ್ಥಿಯ ಶೈಕ್ಷಣಿಕ ವಿವರಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಚಿಂತನಾ ಸ್ಮರಣ ಶಕ್ತಿ, ಹಾಗೂ ಭೌತಿಕ ಸ್ಮರಣ ಶಕ್ತಿಯ ಮೇಲೆ ಧನಾತ್ಮಕ ಪರಿಣಾಮ ಹೊಂದಿದೆ ಎಂದು ಸಂಶೋಧನೆಗಳು ಹೇಳುತ್ತವೆ.ಕೆಲವು ಸಂಸ್ಥೆಗಳು ಶಿಕ್ಷಕರೊಂದಿಗೆ, ವಿಮೆದಾರರೊಂದಿಗೆ, ಹಾಗೂ ಆಹಾರ ಸೇವೆಯ ಗುತ್ತಿಗೆದಾರರೊಂದಿಗೆ ಸೇರಿ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿನ ಕೆಫೆಟೇರಿಯಾಗಳಲ್ಲಿ ಪೌಷ್ಟಿಕಾಂಶದ ಪ್ರಮಾಣ ಅಧಿಕವಾಗಿರುವ ಮತ್ತು ಪೌಷ್ಟಿಕಾಂಶದ ಮೂಲಗಳು ಹೆಚ್ಚಿರುವ ಆಹಾರ ಸಿಗುವಂತೆ ಮಾಡಲು ಕೆಲಸ ಮಾಡುತ್ತಿವೆ. ಆರೋಗ್ಯ ಮತ್ತು ಪೌಷ್ಟಿಕಾಂಶಗಳು ಒಟ್ಟಾರೆಯಾಗಿ ಶೈಕ್ಷಣಿಕ ಪ್ರಗತಿಯೊಂದಿಗೆ ಹತ್ತಿರದ ಸಂಬಂಧ ಹೊಂದಿವೆ ಎಂಬುದು ಸಾಬೀತಾಗಿದೆ.[೨೮] ಪ್ರಸ್ತುತ ಶೇಕಡಾ ಹತ್ತಕ್ಕಿಂತಲೂ ಕಡಿಮೆ ಅಮೆರಿಕನ್ ವಿದ್ಯಾರ್ಥಿಗಳು ತಾವು ದಿನನಿತ್ಯ ಶಿಫಾರಸು ಮಾಡಿದ ಐದು ಬಗೆಯ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದಾಗಿ ವರದಿ ನೀಡಿದ್ದಾರೆ.[೨೯] ಉತ್ತಮ ಪೌಷ್ಟಿಕಾಂಶವು ಚಿಂತನಾ ಸ್ಮರಣ ಶಕ್ತಿ, ಹಾಗೂ ಭೌತಿಕ ಸ್ಮರಣ ಶಕ್ತಿ ಎರಡರ ಮೇಲೂ ಮಹತ್ತರ ಪರಿಣಾಮ ಬೀರುತ್ತದೆ; ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದವರು ಕೆಲವು ನೆನಪು ಶಕ್ತಿ ಪರೀಕ್ಷೆಗಳಲ್ಲಿ ಉತ್ತಮವಾಗಿ ಪಾಲ್ಗೊಳ್ಳುತ್ತಾರೆಂದು ಒಂದು ಅಧ್ಯಯನವು ತೋರಿಸಿದೆ.[೩೦] ಇನ್ನೊಂದು ಅಧ್ಯಯನದ ಪ್ರಕಾರ, ಕೆಫಿನ್ ರಹಿತ ಆಹಾರವಾದ ಸೋಡಾ ಅಥವಾ ಮಿಶ್ರಿತ ತಿಂಡಿಗಳನ್ನು ಸೇವಿಸುವವರಿಗೆ ಹೋಲಿಸಿದರೆ ಮೊಸರನ್ನು ತಿಂದವರು, ಯೋಚಿಸುವ ಕೆಲಸಗಳಲ್ಲಿ ಉತ್ತಮವಾಗಿ ಪಾಲ್ಗೊಳ್ಳುತ್ತಾರೆಂದು ಕಂಡುಬಂದಿದೆ.[೩೧] ಪೌಷ್ಟಿಕಾಂಶದ ಕೊರತೆಯು ಇಲಿಗಳ ಕಲಿಯುವ ಅಭ್ಯಾಸದ ಮೇಲೆ ಋಣಾತ್ಮಕ ಪರಿಣಾಮ ಹೊಂದಿವೆಯೆಂದು 1951ರಲ್ಲೇ ತಿಳಿದುಬಂದಿದೆ.[೩೨]
ಪೌಷ್ಟಿಕ ಆಹಾರ ಪೂರಕ ಚಿಕಿತ್ಸೆಯು ಖಿನ್ನತೆ, ಬೈಪೊಲಾರ್ ಅಸ್ವಸ್ಥತೆ, ದ್ವಂದ್ವ ವ್ಯಕ್ತಿತ್ವ, ಹಾಗೂ ಗೀಳುರೋಗ ಇರುವವರಿಗೆ ಸೂಕ್ತ ಚಿಕಿತ್ಸೆಯಾಗಬಹುದಾಗಿದೆ. ಇವು ಮು೦ದುವರಿದ ರಾಷ್ತ್ರಗಳಲ್ಲಿ ಕ೦ಡುಬರುವ ನಾಲ್ಕು ಪ್ರಮುಖ ಅಸ್ವಸ್ಥತೆಗಳು.[೩೮] ಮನಸ್ಥಿತಿಯನ್ನು ಚೇತನಗೊಳಿಸುವುದಕ್ಕೆ ಹಾಗೂ ಸ್ಥಿರತೆ ತರುವುದಕ್ಕೆ ಪೂರಕವಾಗುವ ಆಹಾರಗಳೆಂದರೆ, ಐಕೊಸೆಪೆಂಟಾಎನೊಯಿಕ್ ಆಮ್ಲ ಮತ್ತು ಡೊಕೊಸಾಹೆಕ್ಸಾಎನೊಯಿಕ್ ಆಮ್ಲ (ಪ್ರತಿಯೊಂದೂ ಕೂಡಾ ಮೀನೆಣ್ಣೆಯಲ್ಲಿರುವ ಒಮೆಗಾ-3 ಮೇದಾಮ್ಲದಲ್ಲಿ ದೊರೆಯುವಂತವಾಗಿವೆ, ಆದರೆ ಫ್ಲಾಕ್ಸ್ಸೀಡ್ನಲ್ಲಿ ಇದು ದೊರೆಯಲಾರದು.)ವಿಟಾಮಿನ್ ಬಿ12, ಫೋಲಿಕ್ ಆಮ್ಲ, ಮತ್ತು ಇನೊಸಿಟೋಲ್.
ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಸಾಮಾನ್ಯವಾದ ಕಾಯಿಲೆಯಾಗಿದೆ. ಕ್ಯಾನ್ಸರ್ ಸಂಶೋಧನಾ ಅಂತರಾಷ್ಟ್ರೀಯ ಸಂಸ್ಥೆಯ ಸಂಶೋಧನೆಯ ಪ್ರಕಾರ "ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಪಿತ್ತ ಜನಕಾಂಗ, ಹೊಟ್ಟೆ ಮತ್ತು ಅನ್ನನಾಳದ ಕ್ಯಾನ್ಸರ್ ಸರ್ವೇ ಸಾಮಾನ್ಯವಾಗಿದೆ. ಇದು ಸಾಮಾನ್ಯವಾಗಿ ಕಾರ್ಸಿನೋಜೆನಿಕ್ನಿಂದ ಸಂರಕ್ಷಿಸಲ್ಪಟ್ಟ ಆಹಾರದ ಬಳಕೆಯಿಂದಾಗಿ ಉದಾಹರಣೆಗೆ ಹೊಗೆಯಿಂದ ಬೇಯಿಸಲ್ಪಟ್ಟ ಅಥವಾ ಉಪ್ಪು ಮಿಶ್ರಿತ ಆಹಾರ ಬಳಕೆಯಿಂದಾಗಿ ಮತ್ತು ಬೇರೆ ಬೇರೆ ಅಂಗಗಳನ್ನು ಪರಾವಲಂಬಿ ಸೋಂಕಿಗೆ ಒಳಪಡಿಸುವ ಕಾಯಿಲೆಗಳಿಂದಾಗಿ ಇದು ಉಂಟಾಗುತ್ತದೆ". ಶ್ವಾಸಕೋಶ ಕ್ಯಾನ್ಸರ್ ಪ್ರಮಾಣವು ತ್ವರಿತವಾಗಿ ಬಡರಾಷ್ಟ್ರಗಳಲ್ಲಿ ಹೆಚ್ಚು ತಂಬಾಕು ಬಳಕೆಯಿಂದಾಗಿ ಹೆಚ್ಚುತ್ತಿದೆ. ಮುಂದುವರೆದ ರಾಷ್ಟ್ರಗಳಲ್ಲಿ " ಪಾಶ್ಚಿಮಾತ್ಯ ಜೀವನಶೈಲಿಯು ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಿದೆ. ಕರುಳು, ಗುದನಾಳ, ಸ್ತನ ಮತ್ತು ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಬೊಜ್ಜು ಮತ್ತು ವ್ಯಾಯಾಮ ಮಾಡದಿರುವಿಕೆ, ಆಹಾರ ಪದ್ಧತಿ ಮತ್ತು ವಯಸ್ಸಿನಿಂದ ಕೂಡ ಉಂಟಾಗುತ್ತದೆ.[೩೯]
ವಿವಿಧ ಪುರಾವೆಗಳು, ಜೀವನಶೈಲಿ-ಪ್ರೇರಿತ ಹೈಪರ್ಇನ್ಸುಲಿನೆಮಿಯಾ ಮತ್ತು ಕಡಿಮೆಯಾದ ಇನ್ಸುಲಿನ್ ಕೆಲಸ (ಎಂದರೆ ಇನ್ಸುಲಿನ್ ಪ್ರತಿರೋಧ ಶಕ್ತಿ) ಗಳು ಹಲವಾರು ರೋಗ ಸ್ಥಿತಿಗಳನ್ನು ನಿರ್ಧರಿಸುವವೆಂದು ತೋರಿಸುತ್ತವೆ. ಉದಾಹರಣೆಗೆ, ಹೈಪರ್ಇನ್ಸುಲಿನೆಮಿಯಾ ಮತ್ತು ಇನ್ಸುಲಿನ್ ಪ್ರತಿರೋಧ ಶಕ್ತಿಗಳು ತೀವ್ರ ಜ್ವಲನದೊಂದಿಗೆ ತೀಕ್ಷ್ಣ ಸಂಬಂಧ ಹೊಂದಿವೆ. ಇದು ಧಮನಿಯ ಅತಿಸೂಕ್ಷ್ಮ ನೋವುಗಳಂಥ ವ್ಯತಿರಿಕ್ತ ಬೆಳವಣಿಗೆಗಳೊಂದಿಗೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ(ಎಂದರೆ ಹೃದ್ರೋಗ) ಮತ್ತು ಅತಿಶಯವಾದ ಕೋಶ ವಿಭಜನೆ (ಎಂದರೆ ಕ್ಯಾನ್ಸರ್)ಯೊಂದಿಗೆ ತೀಕ್ಷ್ಣ ಸಂಬಂಧ ಹೊಂದಿದೆ. ಹೈಪರ್ಇನ್ಸುಲಿನೆಮಿಯಾ ಮತ್ತು ಇನ್ಸುಲಿನ್ ಪ್ರತಿರೋಧ ಶಕ್ತಿಗಳು (ಹೆಚ್ಚಾಗಿ ಕಂಡುಬರುವ ಉಪಾವಚಯ ಲಕ್ಷಣಾವಳಿಗಳು) ಉದರದ ಬೊಜ್ಜು, ಏರಿದ ರಕ್ತದಲ್ಲಿನ ಸಕ್ಕರೆಯಂಶ, ಏರಿದ ರಕ್ತದೊತ್ತಡ, ಹೆಚ್ಚಾದ ರಕ್ತದಲ್ಲಿನ ಟ್ರೈಗ್ಲಿಸರೈಡ್ಗಳು ಹಾಗೂ ಕಡಿಮೆಯಾದ HDL ಕೊಲೆಸ್ಟರಾಲ್ - ಇವುಗಳ ಸಂಯೋಜನೆಯಿಂದ ನಿರೂಪಿತವಾಗಿವೆ. ಪ್ರೋಸ್ಟಾಗ್ಲಾಂಡಿನ್ PGE1/PGE2 ಮೇಲೆ ಹೈಪರ್ಇನ್ಸುಲಿನೆಮಿಯಾದ ಋಣಾತ್ಮಕ ಪರಿಣಾಮವು ಮಹತ್ವದ್ದಾಗಿರಬಹುದು.ಬೊಜ್ಜಿನ ಸ್ಥಿತಿಯು ಇನ್ಸುಲಿನ್ ಪ್ರತಿರೋಧ ಶಕ್ತಿಗೆ ಸ್ಪಷ್ಟವಾಗಿ ಹೊಣೆಯಾಗುತ್ತದೆ. ಇದು ಸಕ್ಕರೆ ಖಾಯಿಲೆ-ವರ್ಗ 2 ಕ್ಕೆ ಕಾರಣವಾಗಬಹುದು. ವಾಸ್ತವವಾಗಿ ಎಲ್ಲಾ ಬೊಜ್ಜುಮೈಯುಳ್ಳವರು ಮತ್ತು ವರ್ಗ 2ರ ಸಕ್ಕರೆ ಖಾಯಿಲೆ ಇರುವ ವ್ಯಕ್ತಿಗಳು ಇನ್ಸುಲಿನ್ ಪ್ರತಿರೋಧ ಶಕ್ತಿ ಹೊಂದಿರುತ್ತಾರೆ. ಹೆಚ್ಚಿದ ದೇಹತೂಕ ಮತ್ತು ಇನ್ಸುಲಿನ್ ಪ್ರತಿರೋಧ ಶಕ್ತಿಯ ನಡುವಿನ ಸಂಬಂಧ ಸ್ಪಷ್ಟವಾಗಿದ್ದರೂ, ಇನ್ಸುಲಿನ್ ಪ್ರತಿರೋಧ ಶಕ್ತಿಗೆ ನಿರ್ದಿಷ್ಟ (ಬಹುಶಃ ನಾನಾವಿಧದ) ಕಾರಣ ಪೂರ್ಣ ಸ್ಪಷ್ಟವಾಗಿ ತಿಳಿದಿಲ್ಲ. ಮುಖ್ಯವಾಗಿ, ಸರಿಯಾದ ವ್ಯಾಯಾಮ, ಹೆಚ್ಚು ವ್ಯವಸ್ಥಿತ ಆಹಾರ ಸೇವನೆ ಹಾಗೂ ಗ್ಲಿಸಮಿನ ಹೊರೆ ಯನ್ನು ಕಡಿಮೆಗೊಳಿಸುವುದು (ಕೆಳಗೆ ಅವಲೋಕಿಸಿ) - ಇವೆಲ್ಲವೂ ಹೆಚ್ಚಿದ ದೇಹತೂಕವಿರುವ ವ್ಯಕ್ತಿಗಳಲ್ಲಿ ಇನ್ಸುಲಿನ್ ಪ್ರತಿರೋಧ ಶಕ್ತಿಯನ್ನು ವ್ಯತಿರಿಕ್ತಗೊಳಿಸಬಲ್ಲವು (ಮತ್ತು ಇದರಿಂದ ವರ್ಗ 2 ಸಕ್ಕರೆ ಖಾಯಿಲೆ ಹೊಂದಿರುವವರಲ್ಲಿ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ) ಎಂದು ತೋರಿಸಲಾಗಿದೆ.ಬೊಜ್ಜು ಯಾವುದೇ ಪಕ್ಷಪಾತವಿಲ್ಲದೇ ಹಾರ್ಮೋನ್ ಲೆಪ್ಟಿನ್ ಮೂಲಕ ಹಾರ್ಮೋನಿನ ಮತ್ತು ಉಪಾವಚಯದ ಮಟ್ಟವನ್ನು ವ್ಯತ್ಯಾಸಗೊಳಿಸಬಲ್ಲದು, ಹಾಗೂ ಇನ್ಸುಲಿನ್/ಲೆಪ್ಟಿನ್ ಪ್ರತಿರೋಧ ಶಕ್ತಿ ಮತ್ತು ಬೊಜ್ಜು ಪರಸ್ಪರ ಕೆಣಕುವ ವಿಷಸರಪಳಿ ಕಂಡುಬಂದೀತು. ಇನ್ಸುಲಿನ್/ಲೆಪ್ಟಿನ್ ಉದ್ದೀಪನಗೊಳಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನಿರಂತರವಾಗಿ ಇನ್ಸುಲಿನ್/ಲೆಪ್ಟಿನ್ ಉದ್ದೀಪನಗೊಳಿಸುವುದರಿಂದ ಮತ್ತು ಮೇಧಸ್ಸಿನ ಸಂಚಯ ಉಂಟಾಗುವುದರಿಂದ ಇಂತಹ ವಿಷ ಸರಪಳಿ ಬೆಳೆಯುತ್ತದೆ. ಇನ್ಸುಲಿನ್ ಮತ್ತು ಲೆಪ್ಟಿನ್ ಇವೆರಡೂ ಸಾಮಾನ್ಯವಾಗಿ ತೃಪ್ತಿಯ ಸೂಚನೆಯನ್ನು ಮೆದುಳಿನಲ್ಲಿರುವ ಹೈಪೋಥಾಲಮಸ್ ಕಳುಹಿಸುವ ಕೆಲಸವನ್ನು ಮಾಡುತ್ತವೆ. ಆದರೆ, ಇನ್ಸುಲಿನ್/ಲೆಪ್ಟಿನ್ ನಿಯಂತ್ರಣವು ಈ ಸೂಚನೆ ಕಳಿಸುವಿಕೆಯನ್ನು ಕಡಿಮೆಗೊಳಿಸಬಹುದು ಮತ್ತು ಇದರಿಂದಾಗಿ ದೇಹದಲ್ಲಿ ಹೆಚ್ಚಿನ ಮೇಧಸ್ಸು ಸಂಗ್ರಹವಾಗಿದ್ದರೂ ಅತೀ ತಿನ್ನುವಿಕೆಯನ್ನು ಮುಂದುವರೆಸುವಂತೆ ಮಾಡುತ್ತವೆ. ಜೊತೆಗೆ, ಮೆದುಳಿಗೆ ಲೆಪ್ಟಿನ್ ಸೂಚನೆಗಳು ತಲುಪುವುದು ಕಡಿಮೆಯಾದರೆ, ಅದು ಉಪವಾಚಯದ ನಿರ್ದಿಷ್ಟವಾದ ದರದ ಮೇಲಿನ ಲೆಪ್ಟಿನ್ನ ಪರಿಣಾಮವನ್ನು ಕೂಡಾ ಕಡಿಮೆಗೊಳಿಸುತ್ತದೆ. ಬೇರೆ ಬೇರೆ ರೀತಿಯ ಆಹಾರ ಪದ್ಧತಿಯ ಅಂಶಗಳು - ಅಂದರೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳನ್ನು ಸೇವಿಸುವುದು, ಒಟ್ಟು ಪ್ರೋಟೀನ್ಗಳು, ಮೇಧಸ್ಸು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸೇವಿಸುವುದು, ಸಂಪೂರಣಗೊಳಿಸಿದ ಮತ್ತು ಇತರ ಮೇಧಾಮ್ಲಗಳನ್ನು ಸೇವಿಸುವುದು, ವಿಟಮಿನ್/ಮಿನರಲ್ಗಳನ್ನು ಕಡಿಮೆ ಸೇವಿಸುವುದು ಇವೆಲ್ಲವೂ - ಹೇಗೆ ಮತ್ತು ಎಷ್ಟರ ಮಟ್ಟಿಗೆ ಇನ್ಸುಲಿನ್ ಮತ್ತು ಲೆಪ್ಟಿನ್ ಪ್ರತಿರೋಧ ಬೆಳೆಯುವುದಕ್ಕೆ ನೆರವಾಗುತ್ತವೆ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಹೇಗಿದ್ದರೂ, ಆಧುನಿಕ ಮಾನವ-ನಿರ್ಮಿತವಾದ ಮಾಲಿನ್ಯವು ಸಹಾ ಹೋಮಿಯೋಸ್ಟೇಸಿಸ್ ನಿರ್ವಹಣೆಯ ಪಾರಿಸಾರಿಕ ಸಾಮರ್ಥ್ಯವನ್ನು ಧ್ವಂಸಮಾಡಬಹುದು. ಇತ್ತೀಚಿಗೆ ಉನ್ನತ ಗ್ಲೈಸೇಮಿಕ್ ಇಂಡೆಕ್ಸ್ ಇರುವ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸುತ್ತಿರುವುದು ಮನುಷ್ಯನ ಹೋಮಿಯೋಸ್ಟೇಸಿಸ್ ಮತ್ತು ಆರೋಗ್ಯದ ನಿರ್ವಹಣೆಯ ಪಾರಿಸಾರಿಕ ಸಾಮರ್ಥ್ಯವನ್ನು ಧ್ವಂಸಮಾಡಬಹುದು(ಇದು ಉಪವಾಚಯ ರೋಗ ಲಕ್ಷಣಾವಳಿ ಸೋಂಕಿನಿಂದ ದೃಢವಾಗಿದೆ).
ಸೋಡಿಯಂ ಮತ್ತು ಪೊಟ್ಯಾಷಿಯಮ್ ಲವಣಗಳ ಮರುಪೂರಣವಿಲ್ಲದೇ ಹೆಚ್ಚಿನ ನೀರಿನ ಸೇವನೆ ಮಾಡುವುದರಿಂದಾಗಿ ಹೈಪೋನೆಟ್ರೇಮಿಯಾ ಉಂಟಾಗುತ್ತದೆ. ಇದು ಮುಂದುವರೆದು ಅಪಾಯದ ಮಟ್ಟದ ನೀರಿನಿಂದ ಮತ್ತೇರಿರುವಿಕೆ ಉಂಟಾಗುವುದೂ ಸಾಧ್ಯವಿದೆ. ಇದಕ್ಕೆ ಸಂಬಂಧಿಸಿ ತುಂಬಾ ಪ್ರಚಾರ ಪಡೆದ ಘಟನೆಯೊಂದು 2007 ರಲ್ಲಿ ನಡೆಯಿತು. ಜೆನ್ನಿಫರ್ ಸ್ಟ್ರೇಂಜ್ ಎಂಬುವವಳು ನೀರು ಕುಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ಮರಣ ಹೊಂದಿದ್ದಳು.[೪೦] ಇಂತಹ ಘಟನೆ ಹೆಚ್ಚಾಗಿ ತುಂಬಾ ಹೊತ್ತು ಸಹಿಸಿಕೊಳ್ಳಬೇಕಾದಂತಹ ಸಂದರ್ಭಗಳಲ್ಲಿ (ಅಂದರೆ ಮ್ಯಾರಾಥಾನ್ ಅಥವಾ ಟ್ರಿಯಥ್ಲಾನ್ ಸ್ಪರ್ಧೆ ಮತ್ತು ತರಬೇತಿ ಸಮಯಗಳಲ್ಲಿ) ಸಂಭವಿಸುತ್ತದೆ, ಮತ್ತು ಕ್ರಮವಾಗಿ ಮಾನಸಿಕ ಜಡತೆ, ತಲೆನೋವು, ತೂಕಡಿಕೆ, ನಿಶ್ಯಕ್ತಿ, ಗೊಂದಲ, ಮತ್ತು ಅಂತಿಮವಾಗಿ ಕೋಮಾಗೆ ಹೋಗಬಹುದು, ಸೆಟೆತ ಅಥವಾ ಸಾಯಲೂಬಹುದು. ಪ್ರಾಥಮಿಕ ಹಾನಿಯು ಮೆದುಳಿನ ಉಬ್ಬುವಿಕೆಯಿಂದ ಪ್ರಾರಂಭವಾಗುತ್ತದೆ. ಇದು ಹೆಚ್ಚಿದ ಪರಾಸರಣದಿಂದ ರಕ್ತದ ಲವಣತ್ವ ಕಡಿಮೆಯಾಗುವುದರಿಂದಾಗಿ ಉಂಟಾಗುತ್ತದೆ.ಆಟಗಾರರ ದೇಹದಲ್ಲಿ ಜಲಮರುಪೂರಣವನ್ನು ಮಾಡುವುದಕ್ಕಾಗಿ ಬಳಸುವ ತಂತ್ರಗಳಲ್ಲಿ ಓಡುವಿಕೆ/ಸೈಕ್ಲಿಂಗ್ ಸಮಯದಲ್ಲಿ ಅಲ್ಲಲ್ಲಿ ನೀರನ್ನು ಒದಗಿಸುವ ಕೇಂದ್ರಗಳನ್ನು ಮಾಡಿಕೊಳ್ಳುವುದು, ಸಾಕರ್ ಮುಂತಾದ ಆಟಗಳ ಸಮಯದಲ್ಲಿ ತರಬೇತುದಾರರು ನೀರನ್ನು ಆಟಗಾರರಿಗೆ ಒದಗಿಸುವುದು, ಕ್ಯಾಮೆಲ್ ಬ್ಯಾಕ್ದಂತಹ ಸಾಧನಗಳನ್ನು ಒದಗಿಸುವುದು ಅವರಿಗೆ ನೀರನ್ನು ಕುಡಿಯುವುದು ಸುಲಭವಾಗಿಸುತ್ತದೆ.
ಸುಮಾರು ಎರಡು ನೂರು ವರ್ಷಗಳ ಹಿಂದೆ ಉದ್ಯೋಗಿಕ ಕ್ರಾಂತಿ ಆದಾಗಿನಿಂದ, ಆಹಾರ ಸಂಸ್ಕರಣಾ ಉದ್ಯೋಗ ಆಹಾರವನ್ನು ಹೆಚ್ಚು ಕಾಲದವರೆಗೆ ತಾಜಾವಾಗಿಡಲು ಮತ್ತು ಆಹಾರದ ತಾಜಾ ಅವಸ್ಥೆಯನ್ನು ಪರಿವರ್ತಿಸಿ ನಿಸರ್ಗದಲ್ಲಿರುವಂತೆ ಮಾಡಲು ಹಲವು ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಿದೆ. ತಾಜಾತನ ಇರಿಸಲು ತಂಪಾಗಿಸುವಿಕೆಯಂಥಹ ಮೂಲ ತಂತ್ರಜ್ಞಾನವನ್ನು ಬಳಸಲಾಗುವುದು, ಇದಲ್ಲದೆ ಆಹಾರ ಕೆಡದೆ ಹೆಚ್ಚು ಕಾಲದವರೆಗೂ ತಾಜಾವಾಗಿರಿಸಲು ಇನ್ನು ಹಲವಾರು ತಂತ್ರಜ್ಞಾನಗಳನ್ನು ಆವಿಷ್ಕರಿಸಲಾಗಿದೆ. ಈ ನಂತರದ ತಂತ್ರಜ್ಞಾನಗಳಲ್ಲಿ ಪಾಶ್ಚರೀಕರಣ, ಆಟೋಕ್ಲಾವೆಷನ್, ಒಣಗಿಸುವಿಕೆ, ಉಪ್ಪು ಬೆರೆಸುವಿಕೆ, ಹಾಗೂ ಹಲವು ಅಂಶಗಳ ಬೇರ್ಪಡಿಸುವಿಕೆ ಸೇರಿದೆ, ಮತ್ತು ಈ ಎಲ್ಲ ತಂತ್ರಜ್ಞಾನಗಳು ಆಹಾರದ ಮೂಲ ಪೌಷ್ಟಿಕತೆಯನ್ನು ಪರಿವರ್ತಿಸುವಂತೆ ಕಾಣುತ್ತದೆ. ಪಾಶ್ಚರೀಕರಣ ಮತ್ತು ಆಟೋಕ್ಲಾವೆಷನ್ (ಬಿಸಿ ಮಾಡುವ ತಂತ್ರಜ್ಞಾನಗಳು) ನಿಸ್ಸಂದೇಹವಾಗಿ ಹಲವು ಸಾಮಾನ್ಯ ಆಹಾರಗಳ ಸುರಕ್ಷತೆಯನ್ನು ಉತ್ತಮಗೊಳಿಸಿ, ಬ್ಯಾಕ್ಟಿರಿಯಾ ಸೋಂಕಿನಿಂದಾಗುವ ಸಾಂಕ್ರಾಮಿಕ ರೋಗಗಳನ್ನು ಪ್ರತಿಬಂಧಿಸಿದೆ. ಆದರೆ ಕೆಲವು (ಹೊಸ) ಆಹಾರ ಸಂಸ್ಕರಣ ತಂತ್ರಜ್ಞಾನಗಳಲ್ಲಿ ಕೆಲವು ಅವನತಿಗಳು ಕೂಡ ಇವೆ ಎಂಬುದರಲ್ಲಿ ಸಂದೇಹವೆ ಇಲ್ಲ.
ಧಾನ್ಯಬೀಸುವಿಕೆ, ಸೆಂಟ್ರಿಫ್ಯುಗೇಷನ್, ಮತ್ತು ಒತ್ತುವಿಕೆ ಅಥವಾ ಹಿಂಡುವಿಕೆಯಂಥಹ ಆಧುನಿಕ ವಿಂಗಡನೆ ತಂತ್ರಜ್ಞಾನಗಳಿಂದ ಆಹಾರದ ಪ್ರತ್ಯಕ ಅಂಶಗಳನ್ನು ಒಟ್ಟುಗೂಡಿಸಲು ಸಾಧ್ಯವಾಗಿದೆ, ಇದರಿಂದ ಹಿಟ್ಟು, ಎಣ್ಣೆ, ರಸಗಳು ಹಾಗೂ ಮುಂತಾದವುಗಳ ಉತ್ಪನವಾಗುತ್ತದೆ, ಮತ್ತು ಬೇರೆ ಬೇರೆ ಮೇಧಾಮ್ಲಗಳು, ಅಮೈನೊ ಆಮ್ಲಗಳು, ವಿಟಮಿನ್ಗಳು, ಹಾಗೂ ಮಿನರಲ್ಗಳು ಕೂಡ ದೊರೆಯುತ್ತದೆ. ಅನಿವಾರ್ಯವಾಗಿ, ಈ ತರಹದ ದೊಡ್ಡ ಗಾತ್ರದ ಒಟ್ಟುಗೂಡಿಸುವಿಕೆ ಆಹಾರದ ಪೌಷ್ಟಿಕತೆಯನ್ನು ಪರಿವರ್ತಿಸುತ್ತದೆ, ಕೆಲವು ಪೌಷ್ಟಿಕಾಂಶವನ್ನು ಇರಿಸಿ ಇನ್ನು ಕೆಲವುಗಳನ್ನು ತೆಗೆಯುತ್ತದೆ. ಬಿಸಿ ಮಾಡುವ ತಂತ್ರಜ್ಞಾನಗಳು ಕೂಡ ಬಿಸಿ-ಪರಿವರ್ತನೆಯಿಂದ ಆಹಾರದಲ್ಲಿನ ವಿಟಾಮಿನ್ಗಳು ಹಾಗೂ ಫೈಟೊಕೆಮಿಕಲ್ಸ್ ಅಂಥಹ ಪೌಷ್ಟಿಕಾಂಶಗಳು ಮತ್ತು ಇನ್ನು ಇತರ ಸಂಶೋಧಿಸಬೇಕಾದ ಅಂಶಗಳ ಪೌಷ್ಟಿಕಾಂಶವು ಕಡಿಮೆಯಾಗುತ್ತದೆ.[೪೧] ಸಂಸ್ಕರಣವಾದ ಆಹಾರದಲ್ಲಿ ಪೌಷ್ಟಿಕ ಮೌಲ್ಯ ಕಡಿಮೆಯಾದ್ದರಿಂದ, ಅವುಗಳನ್ನು ಕೆಲವು ಮುಖ್ಯ ಪೌಷ್ಟಿಕಾಂಶಗಳಿಂದ (ಸಾಮಾನ್ಯವಾಗಿ ವಿಟಮಿನ್ಗಳು) ’ಉತ್ಕೃಷ್ಟ’ ಹಾಗೂ ’ಬಲವರ್ಧಕ’ವನ್ನಾಗಿ ಮಾಡಲಾಗುವುದು. ಇಲ್ಲವಾದಲ್ಲಿ ಇವು ಸಂಸ್ಕರಣ ಸಮಯದಲ್ಲಿ ಕಳೆದು ಹೋಗಿರುತ್ತವೆ. ಆದರೂ, ಎರಡು ಆಹಾರದ ಸಕ್ಕರೆ ಹಾಗೂ ಹೆಚ್ಚು GI ಸ್ಟಾರ್ಚ್ಗಳು, ಪೊಟಾಷಿಯಂ/ಸೊಡಿಯಂ, ವಿಟಮಿನ್ಗಳು, ಫೈಬರ್, ಮತ್ತು ಒಟ್ಟಿಗಿರುವ ಅನ್ಆಕ್ಸಿಡೈಸ್ಡ್ (ಅಗತ್ಯವಾದ) ಮೇಧಾಮ್ಲಗಳನ್ನು ಹೋಲಿಕೆ ಮಾಡಿದಾಗ ಸಂಸ್ಕರಿಸಿದ ಆಹಾರದ ಪೌಷ್ಟಿಕಾಂಶದ ಗುಣಮಟ್ಟ ಪೂರ್ಣ, ತಾಜಾ ಆಹಾರಗಳಿಗಿಂತ ಕಡಿಮೆಯಿರುತ್ತದೆ. ಇದಲ್ಲದೆ, ಸಂಸ್ಕರಿತ ಆಹಾರಗಳಲ್ಲಿ ಸಾಮಾನ್ಯವಾಗಿ ಆಕ್ಸಿಡೈಸ್ ಮಾಡಿದ ಮೇಧಸ್ಸು ಮತ್ತು ಬೇರೆ ಮೇಧಾಮ್ಲಗಳು ಅಂತಹ ಸಂಭಾವ್ಯ ಅಪಾಯಕಾರಿ ಪಧಾರ್ಥಗಳಿರುತ್ತವೆ. ಪಾಲಿಷ್ ಮಾಡಿದ ಅನ್ನವನ್ನು ಸೇವಿಸಿ ಜೀವನ ಮಾಡುತ್ತಿದ್ದ ಜನರಲ್ಲಿ ಬೆರಿ-ಬೆರಿ ಎಂಬ ಸಾಂಕ್ರಾಮಿಕ ರೋಗ ಉಂಟಾದ ಇತಿಹಾಸವು, ಸಂಸ್ಕರಣ ಆಹಾರದ ಪರಿಣಾಮಗಳ ಕುರಿತ ಭಾವೋದ್ವೇಗ ತರುವ ಉದಾಹರಣೆಯಾಗಿದೆ. ಅಕ್ಕಿಯ ಹೊರ ಪದರವನ್ನು ಪಾಲಿಷ್ ಮಾಡಿ ತೆಗೆಯುವುದರಿಂದ ಅದರಲ್ಲಿ ಇರುವ ಅಗತ್ಯ ವಿಟಮಿನ್ ಥೈಮಿನ್ ಕಳೆದು, ಬೆರಿ-ಬೆರಿ ರೋಗಕ್ಕೆ ಕಾರಣವಾಗುತ್ತದೆ. ಇನ್ನೊಂದು ಉದಾಹರಣೆ ಎಂದರೆ ಅಮೇರಿಕಾ ಸಂಯುಕ್ತಸಂಸ್ಥಾನದಲ್ಲಿ 1800ರ ಕೊನೆಯಲ್ಲಿ ಚಿಕ್ಕ ಮಕ್ಕಳಲ್ಲಿ ಸ್ಕರ್ವಿ ಅಂದರೆ ರಕ್ತ ಪಿತ್ತ ವ್ಯಾಧಿ ಬೆಳೆದಿದ್ದು. ಇದರಲ್ಲಿ ಹೆಚ್ಚು ಜನ ನೋವು ಅನುಭವಿಸುವವರು, ಸೂಕ್ಷ್ಮಕ್ರಿಮಿಗಳ ರೋಗ ತಡೆಯಲು ಬಿಸಿ ಮಾಡಿದ ಹಾಲನ್ನು (ಪಾಸ್ಚರ್ನ ಸಲಹೆಯಂತೆ) ಸೇವಿಸುತ್ತಿದ್ದರು. ಪಾಸ್ಚರೈಸೇಷನ್ ಸೂಕ್ಷ್ಮಕ್ರಿಮಿಗಳ ಮೇಲೆ ಪರಿಣಾಮಕಾರಿಯಾಗಿತ್ತು, ಆದರೆ ಅದು ವಿಟಮಿನ್ ಸಿ ಯನ್ನು ನಾಶಪಡಿಸುತ್ತಿತ್ತು. ಮೊದಲೇ ಹೇಳಿದ ಹಾಗೆ, ಜೀವನಶೈಲಿ- ಮತ್ತು ಬೊಜ್ಜು-ಸಂಬಂಧಿತ ರೋಗಗಳು ಇತ್ತೀಚೆಗೆ ಹೆಚ್ಚು ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡಿದೆ. ಈ ಅಭಿವೃದ್ಧಿಗೆ ವ್ಯಾಪಕವಾಗಿ ಹೆಚ್ಚುತ್ತಿರುವ ಕೆಲವು ಆಧುನಿಕ ಆಹಾರ ಸಂಸ್ಕರಣಾ ತಂತ್ರಜ್ಞಾನ ನೆರವಾಗಿದೆ ಎಂಬುದರಲ್ಲಿ ಸ್ವಲ್ಪ ಸಂದೇಹವಿದೆ. ಆಹಾರ ಸಂಸ್ಕರಣಾ ಉದ್ಯಮ ಆಧುನಿಕ ಆರ್ಥಿಕತೆಯ ಒಂದು ಮುಖ್ಯ ಭಾಗ, ಮತ್ತು ಹಾಗಾಗಿ ರಾಜನೈತಿಕ ತೀರ್ಮಾನಗಳ ಮೇಲೆ ಪ್ರಭಾವ ಬೀರುತ್ತದೆ ( ಉದಾ: ಪೌಷ್ಟಿಕತೆಯ ಸಲಹೆಗಳು, ವ್ಯವಸಾಯದ ಸಹಾಯಧನ ಪೂರೈಕೆ). ಯಾವುದೇ ಆರ್ಥಿಕತೆಯ ಲಾಭ-ದೃಷ್ಟಿಯ ಪ್ರಯತ್ನದಲ್ಲಿ, ಆರೋಗ್ಯದ ಕಾಳಜಿಗೆ ಆದ್ಯತೆ ಕೊಡುವುದು ಕಷ್ಟ; ಅಗ್ಗವಾದ ಆಹಾರಗಳನ್ನು ಹೆಚ್ಚು ಕಾಲ ಶೇಖರಿಸಿಡುವಂತೆ ಪ್ರಭಾವಾಕಾರಿಯಾಗಿ ಉತ್ಪಾದಿಸುವುದು ಈಗಿನ ಪ್ರವೃತ್ತಿಯಾಗಿದೆ. ಒಟ್ಟಾರೆ, ಪೂರ್ಣ,ತಾಜಾ ಆಹಾರಗಳು ಸ್ವಲ್ಪ ಕಾಲಕ್ಕೆ ಮಾತ್ರ ಶೇಖರಿಸಿಡಬಹುದು ಮತ್ತು ಇವು ಉತ್ಪಾದಿಸಲು ಹಾಗೂ ಮಾರಾಟ ಮಾಡಲು ಸಂಸ್ಕರಿಸಿದ ಆಹಾರಗಳಿಂದ ಕಡಿಮೆ ಲಾಭದಾಯಕ. ಹೀಗಾಗಿ ಗ್ರಾಹಕನ ಬಳಿ ಎರಡು ಆಯ್ಕೆಗಳಿವೆ, ಒಂದು ಹೆಚ್ಚು ಬೆಲೆಯ ಆದರೆ ಉತ್ತಮ ಪೌಷ್ಟಿಕತೆಯುಳ್ಳ ಪೂರ್ಣ, ತಾಜಾ ಆಹಾರ ಅಥವಾ ಅಗ್ಗದ, ಸಾಮಾನ್ಯವಾಗಿ ಕಡಿಮೆ ಪೌಷ್ಟಿಕತೆಯುಳ್ಳ ಸಂಸ್ಕರಿಸಿದ ಆಹಾರ. ಏಕೆಂದರೆ ಸಂಸ್ಕರಿಸಿದ ಆಹಾರ ಸಾಮಾನ್ಯವಾಗಿ ಅಗ್ಗ ಬೆಲೆಯಲ್ಲಿ ದೊರೆಯುತ್ತದೆ, ಹೆಚ್ಚು ಸರಳವಾಗಿರುತ್ತದೆ (ಖರೀದಿಸಲು, ಶೇಖರಿಸಿಡಲು, ಮತ್ತು ತಯಾರಿಸಲು), ಮತ್ತು ಹೆಚ್ಚಾಗಿ ಸಿಗುವುದು, ಪೌಷ್ಟಿಕತೆಯಲ್ಲಿ ಕಡಿಮೆಯಿರುವ ಆಹಾರದ ಸೇವನ ಜಗತ್ತಿನೆಲ್ಲೆಡೆ ಹೆಚ್ಚಾಗಿದ್ದು ಪೌಷ್ಟಿಕತೆ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.
ಕಳೆದ 250,000 ವರ್ಷಗಳಲ್ಲಿ ಮಾನವರು ಸರ್ವಭಕ್ಷಕ ಬೇಟೆಗಾರರು-ಒಟ್ಟುಗೂಡಿಸುವರಾಗಿ ಬೆಳೆದಿದ್ದಾರೆ. ಆರಂಭದ ಆಧುನಿಕ ಮಾನವರ ಆಹಾರ ಪದ್ಧತಿಯು ಸ್ಥಳ ಮತ್ತು ಹವಾಮಾನದ ಅನುಸಾರ ಮಹತ್ತರವಾಗಿ ಬದಲಾಗಿದೆ. ಅಕ್ಷಾಂಶರೇಖೆಯ ಬಳಿಯ ಜನರ ಆಹಾರ ಪದ್ಧತಿಯು ಹೆಚ್ಚಾಗಿ ಸಸ್ಯಾಹಾರವಾಗಿರುತ್ತಿತ್ತು, ಹಾಗೆಯೆ ಅಕ್ಷಾಂಶದ ಎತ್ತರಕ್ಕೆ ಹೋದಂತೆಯೇ ಮಾಂಸಾಹಾರ ಪದ್ಧತಿಯಿತ್ತು. ಹೊಸ ಶಿಲಾಯುಗದ ಮನುಷ್ಯರ ಹಾಗೂ ಪ್ರಾಣಿಗಳ ಪೋಸ್ಟ್ಕ್ರೇನಿಯಲ್ ಮತ್ತು ಕ್ರೇನಿಯಲ್ ಅವಶೇಷಗಳ ವಿಶ್ಲೇಷಣೆಯಿಂದ ಸ್ವಜಾತಿ ಭಕ್ಷಕ ಪ್ರವೃತ್ತಿ ಮುಂಚಿನ ಐತಿಹಾಸಿಕ ಮಾನವರಲ್ಲಿ ಇತ್ತು ಎಂಬುದನ್ನು ಮೂಳೆಗಳ ಪರಿವರ್ತನೆಯ ವಿವರವಾದ ಅಧ್ಯಯನ ಸಹಿತ ತೋರಿಸಿದೆ.[೪೨] ಬೇಸಾಯ ಸುಮಾರು 10,000 ವರ್ಷಗಳ ಹಿಂದೆ ಜಗತ್ತಿನೆಲ್ಲೆಡೆಯ ಹಲವು ಸ್ಥಳಗಳಲ್ಲಿ ಅಭಿವೃದ್ಧಿಗೊಂಡಿತು, ಗೋಧಿ, ಅಕ್ಕಿ, ಆಲುಗಡ್ಡೆ, ಮತ್ತು ಮುಸುಕಿನ ಜೋಳ, ಬ್ರೆಡ್, ಪಾಸ್ತಾ, ಮತ್ತು ಟೊರ್ಟಿಲ್ಲ ಅಂತಹ ಮುಖ್ಯ ಆಹಾರಗಳನ್ನು ಆಗ ಬೆಳೆಯಲಾಗುತ್ತಿತ್ತು. ವ್ಯವಸಾಯ ಹಾಲು ಮತ್ತು ಡೇರಿ ಉತ್ಪನ್ನಗಳನ್ನು ಒದಗಿಸುತ್ತದೆ, ಮತ್ತು ಮಾಂಸ ಹಾಗೂ ಹಲವು ವೈವಿದ್ಯ ತರಕಾರಿಗಳ ಲಭ್ಯತೆಯನ್ನು ಹೆಚ್ಚಿಸಿದೆ. ದೊಡ್ಡ ಪ್ರಮಾಣದ ಶೇಖರಣೆಯಲ್ಲಿ ಕ್ರಿಮಿಕೀಟಗಳ ಪಸರಿಸುವಿಕೆ ಹಾಗೂ ಕಲುಷಿತಗೊಳ್ಳುವಿಕೆಗೆ ದಾರಿಯಾದಾಗ ಆಹಾರದ ಸ್ವಚ್ಛತೆಯನ್ನು ಗುರುತಿಸಲಾಯಿತು. ಉತ್ತಮ ಆಹಾರದ ಅಗತ್ಯ ಹಾಗೂ ಅದರ ವಿಶ್ವಾಸಾರ್ಹತೆಯ ಅಗತ್ಯದ ಕಾಳಜಿಯ ಕಾರಣದಿಂದ ಶಿಸ್ತಿನ ಪಾಕವಿಧಾನ ಹಾಗೂ ಕಾರ್ಯವಿಧಾನಕ್ಕೆ ಅಗತ್ಯವಾಯಿತು, ಮತ್ತು ಆಹಾರ ಸ್ವಚ್ಛತೆ ಹಾಗು ನಿರಂತರತೆಯ ಅಗತ್ಯದಿಂದಾಗಿ ಅಡುಗೆ ಸಾಮಾನ್ಯವಾಗಿ ವಿಧಿವತ್ತಾಗಿ ಮಾಡುವ ಪ್ರಕ್ರಿಯೆಯಾಗಿ ಅಭಿವೃದ್ಧಿಗೊಂಡಿತು,[೪೩]
ಬೈಬಲ್ನ ಬುಕ್ ಅಫ್ ಡ್ಯಾನಿಯಲ್ನಲ್ಲಿ ಪ್ರಥಮ ದಾಖಲಿತ ಪೌಷ್ಟಿಕತೆಯ ಪ್ರಯೋಗಗಳು ಲಭ್ಯವಾಗಿದೆ. ಇಸ್ರೇಲ್ನ ದಾಳಿಯ ಸಮಯದಲ್ಲಿ ಬ್ಯಾಬಿಲೊನ್ನ ರಾಜ ಡ್ಯಾನಿಯಲ್ ಮತ್ತು ಅವನ ಸ್ನೇಹಿತರನ್ನು ಸೆರೆಹಿಡಿದನು. ಅವರನ್ನು ಆಸ್ಥಾನದ ಆಳುಗಳಾಗಿ ಆಯ್ಕೆಮಾಡಲಾಯಿತು, ಅದರಿಂದ ಅವರಿಗೆ ರಾಜನ ಉತ್ತಮ ಆಹಾರಗಳು ಮತ್ತು ದ್ರಾಕ್ಷಾರಸದಲ್ಲಿ (ವೈನ್) ಪಾಲು ದೊರಕುತ್ತಿತ್ತು. ಆದರೆ ಅವರು ಅದನ್ನು ವಿರೋಧಿಸಿ, ತಮ್ಮ ಯಹೂದಿ ಆಹಾರ ಕ್ರಮದ ಪ್ರಕಾರ ತರಕಾರಿಗಳು ಮತ್ತು ನೀರನ್ನು ಆಯ್ಕೆಮಾಡಿಕೊಂಡರು. ರಾಜನ ಮುಖ್ಯ ಪರಿಚಾರಕ ಇಷ್ಟವಿಲ್ಲದೆ ಈ ಪ್ರಯೋಗಕ್ಕೆ ಒಪ್ಪಿಕೊಂಡನು. ಡ್ಯಾನಿಯಲ್ ಮತ್ತು ಅವನ ಸ್ನೇಹಿತರು 10 ದಿನಗಳಿಗೆ ಅವರ ಗೊತ್ತುಪಡಿಸಿದ ಆಹಾರವನ್ನು ಪಡೆದರು ಮತ್ತು ನಂತರ ಅವರನ್ನು ರಾಜನ ಜನರೊಂದಿಗೆ ಹೋಲಿಸಿದಾಗ ಆರೋಗ್ಯವಂತರಾಗಿ ಕಾಣಿಸಿದರು. ಆಗ ಅವರ ಆಹಾರ ಪದ್ಧತಿಯನ್ನು ಮುಂದುವರಿಸಲು ಅನುವು ಮಾಡಿಕೊಡಲಾಯಿತು.[೪೪]
ಕ್ರಿಸ್ತ ಪೂರ್ವ 475ರ ಸುಮಾರಿಗೆ, ಅನಾಕ್ಸಾಗೋರಸ್ ಹೀಗೆ ಹೇಳುತ್ತಾನೆ, ಮನುಷ್ಯನ ದೇಹವು ಆಹಾರವನ್ನು ಹೀರಿಕೊಳ್ಳುತ್ತದೆ ಮತ್ತು ಆದ್ದರಿಂದ ಪುಷ್ಟಿದಾಯಕಗಳ ಅಸ್ತಿತ್ವವನ್ನು ಸೂಚಿಸುವ, "ಹೋಮಿಯೋಮೆರಿಕ್ಸ್"ಗಳನ್ನು (ಉತ್ಪಾದಕ ಘಟಕಗಳು) ಹೊಂದಿದೆ.[೪೩] ಕ್ರಿಸ್ತ ಪೂರ್ವ 400ರ ಸುಮಾರಿಗೆ, ಹಿಪ್ಪೊಕ್ರೇಟ್ಸ್ ಹೀಗೆ ಹೇಳುತ್ತಾರೆ, " ಆಹಾರ ನಿಮ್ಮ ಔಷಧಿಯಾಗಲಿ ಮತ್ತು ಔಷಧಿ ನಿಮ್ಮ ಆಹಾರವಾಗಲಿ."[೪೫] 1500ರಲ್ಲಿ,ವಿಜ್ಙಾನಿ ಮತ್ತು ಕಲಾವಿದ ಲಿಯಾನಾರ್ಡೊ ಡಾ ವಿಂಚಿ ಚಯಾಪಚಯವನ್ನು (ಮೆಟಬಾಲಿಸಮ್) ಉರಿಯುವ ಒಂದು ಮೇಣದ ಬತ್ತಿಗೆ ಹೋಲಿಸಿದರು. 1747ರಲ್ಲಿ ಬ್ರಿಟಿಷ್ ನೌಕಾಪಡೆಯ ವೈದ್ಯ ಡಾ.ಜೇಮ್ಸ್ ಲಿಂಡ್ ಮೊದಲವೈಜ್ಞಾನಿಕಪೌಷ್ಟಿಕ ಆಹಾರ ಪ್ರಯೋಗವನ್ನು ನೆರವೇರಿಸಿದರು, ಹಲವು ವರ್ಷಗಳ ಕಾಲ ಸಮುದ್ರದಲ್ಲಿರುವ ನಾವಿಕರನ್ನು ರಕ್ತ ಪಿತ್ತ ವ್ಯಾಧಿಯಿಂದ ನಿಂಬೆ ರಸ ಉಳಿಸಿತು ಎಂದು ಕಂಡುಹಿಡಿದರು, ಇದು ಒಂದು ಮಾರಕ ಮತ್ತು ನೋವಿನಿಂದ ಕೂಡಿದ ರಕ್ತಸ್ರಾವವಾಗುವ ಕಾಯಿಲೆ. ಈ ಶೋಧನೆಯನ್ನು ನಲವತ್ತು ವರ್ಷಗಳ ಕಾಲ ನಿರ್ಲಕ್ಷಿಸಲಾಯಿತು, ನಂತರ ಬ್ರಿಟಿಷ್ ನಾವಿಕರು "ಲೈಮಿಸ್" ಎಂದು ಪರಿಚಿತರಾದರು. ನಿಂಬೆ ರಸದಲ್ಲಿರುವ ಪ್ರಮುಖ ವಿಟಮಿನ್ ಸಿಯನ್ನು 1930ರವರೆಗೆ ವಿಜ್ಞಾನಿಗಳು ಗುರುತಿಸಿರಲಿಲ್ಲ. 1770ರ ಸುಮಾರಿಗೆ, "ಪೌಷ್ಟಿಕ ಆಹಾರ ಮತ್ತು ರಾಸಾಯಾನ ಶಾಸ್ತ್ರದ ಪಿತಾಮಹ" ಆಯ್೦ಟೈನ್ ಲ್ಯಾವೋಸಿಸರ್, ಆಹಾರದ ಆಕ್ಸಿಡೇಷನ್ ಶರೀರದ ಉಷ್ಣತೆಗೆ ಆಧಾರ ಎಂದು ರುಜುವಾತು ಪಡಿಸುವ, ಚಯಾಪಚಯದ ವಿವರಗಳನ್ನು ಕಂಡು ಹಿಡಿದನು. 1790ರಲ್ಲಿ, ಜಾರ್ಜ್ ಫೋರ್ಡಿಸ್ ಆಹಾರಕ್ಕಾಗಿ ಸಾಕುವ ಹಕ್ಕಿ ಪಕ್ಷಿಗಳ ಉಳಿಯುವಿಕೆಗೆ ಕ್ಯಾಲ್ಷಿಯಂ ಅವಶ್ಯಕ ಎಂದು ಕಂಡುಹಿಡಿದನು. 1800ರ ಆರಂಭದಲ್ಲಿ, ಇಂಗಾಲ, ಸಾರಜನಕ, ಜಲಜನಕ ಮತ್ತು ಅಮ್ಲಜನಕಗಳ ಅಂಶಗಳನ್ನು ಆಹಾರದ ಪ್ರಾಥಮಿಕ ಘಟಕವನ್ನು ಮತ್ತು ಅವುಗಳ ಪ್ರಮಾಣಗಳ ಬೆಳವಣಿಗೆಯನ್ನು ಮಾಪನ ಮಾಡುವ ವಿಧಾನವನ್ನು ಗುರುತಿಸಲಾಯಿತು.ನಾಯಿಗಳಿಗೆ ಬರೀ ಕಾರ್ಬೋಹೈಡ್ರೇಟ್ಗಳನ್ನು ಆಹಾರವಾಗಿ ಕೊಡಲಾಯಿತು ಮತ್ತು ಅವುಗಳ ಶರೀರದ ಪ್ರೋಟಿನ್ನ ಕೊಬ್ಬು ನಾಶವಾಯಿತು ಮತ್ತು ಕೆಲವು ವಾರಗಳಲ್ಲಿ ಆ ನಾಯಿಗಳು ಸತ್ತವು, ಆದರೆ ಪ್ರೋಟಿನ್ ಆಹಾರವಾಗಿ ಕೊಟ್ಟ ನಾಯಿಗಳು ಬದುಕಿ ಉಳಿದವು ಎಂಬುದನ್ನು 1816ರಲ್ಲಿ ಫ್ರಾನ್ಕೊಸಿಸ್ ಮಗೆಂಡೈ ಕಂಡು ಹಿಡಿದರು, ಇದರಿಂದ ಪ್ರೋಟಿನ್ ಆಹಾರ ಪದ್ಧತಿಯ ಒಂದು ಪ್ರಮುಖ ಘಟಕ ಎಂದು ಗುರುತಿಸಿದರು. 1840ರಲ್ಲಿ, ಜಸ್ಟಸ್ ಲೀಬಿಗ್ ಕಾರ್ಬೋಹೈಡ್ರೇಟ್ಗಳ (ಸಕ್ಕರೆ), ಕೊಬ್ಬುಗಳ (ಮೇಧಾಮ್ಲ) ಮತ್ತು ಪ್ರೋಟಿನ್ಗಳ (ಅಮೈನೊ ಆಮ್ಲ) ರಾಸಾಯಿನಿಕ ಸಂಯೋಜನೆಗಳನ್ನು ಶೋಧಿಸಿದರು. 1860ರಲ್ಲಿ, ಕ್ಲಾಡಿ ಬರ್ನಾರ್ಡ್ ಕಾರ್ಬೋಹೈಡ್ರೇಟ್ ಮತ್ತು ಪ್ರೋಟಿನ್ಗಳಿಂದ ಶರೀರದ ಕೊಬ್ಬನ್ನು ಸಂಯೋಜಿಸಲು ಸಾಧ್ಯ ಎಂದು ಕಂಡುಹಿಡಿದರು, ರಕ್ತದ ಗ್ಲೂಕೋಸು ಕೊಬ್ಬು ಅಥವಾ ಗ್ಲೈಕೊಜೆನ್ ಆಗಿ ಶೇಖರಿಸಲು ಸಾಧ್ಯ ಎಂದು ತೋರಿಸಿದರು.1880ರ ಆರಂಭದಲ್ಲಿ, ಕನೆಹಿರೋ ಟಕಾಕಿ, ಜಪಾನ್ ದೇಶದ ನಾವಿಕರಲ್ಲಿ (ಅವರ ಆಹಾರ ಪದ್ಧತಿ ಹೆಚ್ಚು ಕಮ್ಮಿ ಪೂರ್ತಿಯಾಗಿ ಬಿಳಿ ಅನ್ನವನ್ನು ಒಳಗೊಂಡಿರುತ್ತಿತು) ಬೆರಿಬೆರಿ (ಅಥವಾ ನರಗಳ ಉರಿಯೂತ ವ್ಯಾಧಿ, ಹೃದಯ ಸಂಬಂಧಿ ತೊದರೆಗಳು ಮತ್ತು ಪಾರ್ಶ್ವವಾಯು ಉಂಟು ಮಾಡುವ ಒಂದು ರೋಗ) ರೋಗ ವೃದ್ಧಿಯಾಯಿತು. ಆದರೆ, ಬ್ರಿಟಿಷ್ ನಾವಿಕರು ಮತ್ತು ಜಪಾನ್ ದೇಶದ ಹಡಗಿನ ಅಧಿಕಾರಿಗಳು ಆ ರೋಗಕ್ಕೆ ಗುರಿಯಾಗಲಿಲ್ಲ. ವಿಭಿನ್ನ ರೀತಿಯ ತರಕಾರಿಗಳು ಮತ್ತು ಮಾಂಸಗಳನ್ನು ಜಪಾನಿನ ನಾವಿಕರ ಆಹಾರ ಕ್ರಮಕ್ಕೆ ಸೇರಿಸುವುದರ ಮೂಲಕ ರೋಗವನ್ನು ನಿವಾರಿಸಲಾಯಿತು.1896ರಲ್ಲಿ, ಬೌಮನ್ ಎಂಬುವನು ಥೈರಾಯಿಡ್ ಗ್ರಂಥಿಗಳಲ್ಲಿ ಐಯೋಡಿನ್ ಅನ್ನು ಗಮನಿಸಿದನು. 1897ರಲ್ಲಿ, ಕ್ರಿಸ್ಟಿಯಾನ್ ಈಜ್ಕ್ಮನ್ ಜಾವಾದ ಸ್ಥಳೀಯರೊಂದಿಗೆ ಕೆಲಸ ಮಾಡಿದರು, ಅವರು ಕೂಡ ಬೆರಿಬೆರಿ ರೋಗದಿಂದ ನರಳುತ್ತಿದ್ದರು. ಈಜ್ಕ್ಮನ್ ಕೋಳಿ ಮರಿಗಳಿಗೆ ಸ್ಥಳೀಯ ಆಹಾರ ಪದ್ಧತಿಯ ಬಿಳಿಯ ಅನ್ನವನ್ನು ಮೇವಾಗಿ ಉಣಿಸಿದಾಗ ಅವುಗಳಲ್ಲಿ ಬೆರಿಬೆರಿ ರೋಗದ ಲಕ್ಷಣಗಳು ವೃದ್ಧಿಯಾಯಿತು, ಆದರೆ ಅವುಗಳಿಗೆ ಸಂಸ್ಕರಿಸದ ಕಂದು ಅನ್ನದ ಜೊತೆಗೆ ಪೂರ್ಣವಾಗಿರುವ ಹೊರ ತವಡನ್ನು ಉಣಿಸಿದಾಗ ಅವುಗಳು ಆರೋಗ್ಯವಂತವಾಗಿ ಉಳಿದವು ಎಂಬುದನ್ನು ಗಮನಿಸಿದರು. ಈಜ್ಕ್ಮನ್ ಕಂದು ಅನ್ನ ರೋಗವನ್ನು ವಾಸಿ ಮಾಡಬಹುದು ಎಂದು ಶೋಧಿಸಿ ಸ್ಥಳಿಯರಿಗೆ ಕಂದು ಅನ್ನವನ್ನು ಆಹಾರವಾಗಿ ನೀಡಿ ರೋಗವನ್ನು ಗುಣಪಡಿಸಿದರು. ಎರಡು ದಶಕಗಳ ನಂತರ, ಪೋಷಣಶಾಸ್ತ್ರಜ್ಞ ಅಕ್ಕಿಯ ಹೊರ ತವಡು/ಹೊಟ್ಟು B1 ವಿಟಮಿನ್ ಹೊಂದಿದೆ ಎಂದು ಅಧ್ಯಯನ ಮಾಡಿದರು, ಇದು ಥೈಯಾಮೈನ್ ಎಂದು ಸಹ ಪರಿಚಿತವಾಗಿದೆ.
1900ರ ಆರಂಭದಲ್ಲಿ, ಕಾರ್ಲ್ ವೊನ್ ವೋಯ್ಟ್ ಮತ್ತು ಮ್ಯಾಕ್ಸ್ ರಬ್ನರ್ ಸ್ವಾತಂತ್ರವಾಗಿ ಪೌಷ್ಟಿಕ ಆಹಾರಗಳಲ್ಲಿ ಭೌತಶಾಸ್ತ್ರದ ಸಿದ್ಧಾಂತಗಳನ್ನು ಅನ್ವಯಿಸಿ, ವಿವಿಧ ಪ್ರಾಣಿಗಳ ಗುಂಪುಗಳಲ್ಲಿ ಕ್ಯಾಲರಿಗಳಿಗೆ ಸಂಬಂಧಿಸಿದ ಶಕ್ತಿಯ ವ್ಯಯದ ಮಾಪನ ಮಾಡಿದರು. 1906ರಲ್ಲಿ, ವಿಲ್ಕಾಕ್ ಮತ್ತು ಹಾಪ್ಕಿನ್ಸ್ ಆಮೈನೊ ಆಮ್ಲ ಟ್ರಿಪ್ಟೋಫನ್ ಇಲಿಗಳ ಉಳಿಯುವಿಕೆಗೆ ಅವಶ್ಯಕವಾಗಿತ್ತು ಎಂದು ತೋರಿಸಿದರು. ಅವನು ಇಲಿಗಳ ಉಳಿಯುವಿಕೆಗೆ ಮುಖ್ಯ ಎಂದು ಭಾವಿಸಿದ್ದ ಎಲ್ಲಾ ಪೋಷಕಾಂಶಗಳನ್ನು ಹೊಂದಿದ ಒಂದು ವಿಶೇಷ ಮಿಶ್ರಣದ ಆಹಾರವನ್ನು ಉಣಿಸಿದನು, ಆದರೆ ಇಲಿಗಳು ಸತ್ತವು. ಎರಡನೆಯ ಗುಂಪಿನ ಇಲಿಗಳಿಗೆ ವಿಟಮಿನ್ಗಳನ್ನು ಹೊಂದಿದ ಹಾಲನ್ನು ಸಹ ಸ್ವಲ್ಪ ಪ್ರಮಾಣದಲ್ಲಿ ನೀಡಿದನು. ಗೌಲ್ಯಾಂಡ್ ಹಾಪ್ಕಿನ್ಸ್, ಕ್ಯಾಲರಿ, ಪ್ರೋಟಿನ್ ಮತ್ತು ಖನಿಜಾಂಶಗಳು, ಹೊರತು ಪಡಿಸಿ "ಅನುಬಂಧಕವಾದ ಆಹಾರ ಆಂಶಗಳನ್ನು" ಗುರುತಿಸಿದರು ಹಾಗೆ ಸಾವಯವ ವಸ್ತುಗಳು ಆರೋಗ್ಯಕ್ಕೆ ಮುಖ್ಯ ಆದರೆ ಶರೀರಕ್ಕೆ ಅದನ್ನು ಸಂಶ್ಲೇಷಣೆಗೊಳಿಸಲು ಸಾಧ್ಯವಿಲ್ಲ ಎಂದು ಗುರುತಿಸಿದರು. 1907ರಲ್ಲಿ, ಸ್ಟೀಫನ್ ಎಂ. ಬಾಬ್ಕಾಕ್ ಮತ್ತು ಎಡ್ವಿನ್ ಬಿ. ಹರ್ಟ್ ಏಕ-ಧಾನ್ಯ ಪ್ರಯೋಗವನ್ನು ನಡೆಸಿದರು. ಈ ಪ್ರಯೋಗವು 1911ರ ಪೂರ್ತಿ ನೆಡೆಯುತ್ತದೆ. 1912ರಲ್ಲಿ, ಕಾಸಿಮಿರ್ ಫಂಕ್ ವಿಟಮಿನ್ ಪದವನ್ನು ಸೃಷ್ಟಿಸಿದರು, ಆಹಾರ ಕ್ರಮದಲ್ಲಿ ಜೀವಿಸಲು ಅಗತ್ಯವಾದ ಒಂದು ಅಂಶ,ಇದು "vital" ಮತ್ತು "amine" ಪದಗಳಿಂದ ಉದಯವಾಯಿತು, ಏಕೆಂದರೆ ಈ ಅಪರಿಚಿತ ವಸ್ತುಗಳು ರಕ್ತ ಪಿತ್ತ ವ್ಯಾಧಿ, ಬೆರಿಬೆರಿ, ಮತ್ತು ಪೆಲ್ಲಾಗ್ರಗಳನ್ನು ಗುಣಪಡಿಸುತ್ತಾವೆ ಎಂದು ಭಾವಿಸಲಾಗಿತ್ತು, ನಂತರ ಅಮೋನಿಯಾದಿಂದ ಉದ್ಭವಿಸಿದ್ದು ಎಂದು ಭಾವಿಸಲಾಯಿತು. ಇಪ್ಪತ್ತನೆ ಶತಮಾನದ ಮೊದಲ ಅರ್ಧದಲ್ಲಿ ವಿಟಮಿನ್ಗಳನ್ನು ಅಧ್ಯಯನ ಮಾಡಲಾಯಿತು. 1913ರಲ್ಲಿ, ಎಲ್ಮೆರ್ ಮ್ಯಾಕ್ಕೊಲ್ಲಮ್ ಮೊದಲ ವಿಟಮಿನ್ಗಳಾದ, ಕೊಬ್ಬಿನಲ್ಲಿ ಕರಗುವ A ವಿಟಮಿನ್, ಮತ್ತು ನೀರಿನಲ್ಲಿ ಕರಗುವ B ವಿಟಮಿನ್ಗಳನ್ನು ಶೋಧಿಸಿದರು, (1915ರಲ್ಲಿ; ಈಗ ಹಲವು ನೀರಿನಲ್ಲಿ ಕರಗುವ ವಿಟಮಿನ್ಗಳ ಒಂದು ಸಂಯುಕ್ತ ಎಂದು ಪರಿಚಿತ)ಮತ್ತು ಆಗ ಅಪರಿಚಿತವಾಗಿದ್ದ ರಕ್ತ ಪಿತ್ತ ವ್ಯಾಧಿಯನ್ನು ಗುಣಪಡಿಸುವ ವಸ್ತುಗಳಾದ C ವಿಟಮಿನ್ ಅನ್ನು ಹೆಸರಿಸಿದರು. ಲಾಫೆಯಟ್ಟೆ ಮೆಂಡಲ್ ಮತ್ತು ಥಾಮಸ್ ಓಸ್ಬೋರ್ನ್ ಸಹ A ವಿಟಮಿನ್ ಮತ್ತು B ವಿಟಮಿನ್ ಮೇಲೆ ಪ್ರಥಮಾನ್ವೇಷಕನ ಕೆಲಸ ನಿರ್ವಹಿಸಿದರು, ಸರ್ ಎಡ್ವರ್ಡ್ ಮೆಲ್ಲಾಂಬಿ ಮೆತುಮೂಳೆ ರೋಗ ಕಾಯಿಲೆಯನ್ನು A ವಿಟಮಿನ್ನ ಕೊರೆತೆಯಿಂದ ಉಂಟಾದದ್ದು ಎಂದು ತಪ್ಪಾಗಿ ಗುರುತಿಸಿದರು, ಏಕೆಂದರೆ ಅವನಿಗೆ ಆ ರೋಗವನ್ನು ನಾಯಿಗಳಲ್ಲಿ ಕಡಲ ಹೆಮ್ಮೀನಿನ ಯಕೃತಿನ ಎಣ್ಣೆಯಿಂದ(ಕಾಡ್ ಲಿವರ್ ಆಯಿಲ್) ಗುಣಪಡಿಸಲು ಸಾಧ್ಯವಾಗಿತ್ತು. 1922ರಲ್ಲಿ, ಮ್ಯಾಕ್ಕೊಲ್ಲಮ್ ಕಡಲ ಹೆಮ್ಮೀನಿನ ಯಕೃತಿನ ಎಣ್ಣೆಯಿಂದ A ವಿಟಮಿನ್ನನ್ನು ನಾಶಮಾಡಿದರು, ಆದರೆ ಅದು ಇನ್ನೂ ಮೆತುಮೂಳೆ ರೋಗವನ್ನು ಗುಣಪಡಿಸುತ್ತಿತು, 1922ರಲ್ಲೇ D ವಿಟಮಿನ್ ಎಂದು ಹೆಸರಿಸಲಾಯಿತು , ಎಚ್.ಎಮ್. ಈವನ್ಸ್ ಮತ್ತು ಎಲ್.ಎಸ್.ಬಿಷಪ್ E ವಿಟಮಿನ್ ಇಲಿಗಳ ಗರ್ಭಧಾರಣೆ ಅಗತ್ಯವಾದದ್ದು ಎಂಬುದನ್ನು ಕಂಡುಹಿಡಿದರು , ಮೂಲತಃ ಇದನ್ನು "ಆಹಾರ ಅಂಶ X" 1925ರ ವರೆಗೆ ಕರೆಯಲಾಗುತ್ತಿತ್ತು. 1925ರಲ್ಲಿ, ಹರ್ಟ್ ತಾಮ್ರದ ಸುಳುಹು ಪರಿಮಾಣಗಳು ಕಬ್ಬಿಣ ಮಗ್ನತೆಗೆ ಅವಶ್ಯಕ ಎಂದು ಅನ್ವೇಷಿಸಿದರು. 1927ರಲ್ಲಿ, ಅಡೊಲ್ಫ್ ಒಟ್ಟೊ ರೇನ್ಹೋಲ್ಡ್ ವಿಂಡೌಸ್ ವಿಟಮಿನ್ D ಯನ್ನು ಸಂಯೋಜಿಸಿದರು, ಅದಕ್ಕಾಗಿ ಅವರು 1928ರಲ್ಲಿ ರಾಸಾಯನಶಾಸ್ತ್ರದಲ್ಲಿ ನೊಬೆಲ್ ಬಹುಮಾನವನ್ನು ಗೆದ್ದುಕೊಂಡರು. 1928ರಲ್ಲಿ, ಅಲ್ಬರ್ಟ್ ಝೆಂಟ್-ಗ್ಯೋರ್ಗಿಯು ಅಸ್ಕ್ರೊಬಿಕ್ ಆಮ್ಲವನ್ನು ಬೇರ್ಪಡಿಸಿದ್ದರು, ಮತ್ತು 1932ರಲ್ಲಿ ವಿಟಮಿನ್ C ರಕ್ತ ಪಿತ್ತ ವ್ಯಾಧಿಯನ್ನು ನಿವಾರಿಸುತ್ತದೆ ಎಂದು ಸಾಬಿತು ಮಾಡಿದರು. 1935ರಲ್ಲಿ ಇದನ್ನು ಅವರು ಸಂಯೊಜಿಸಿದರು ಮತ್ತು 1937ರಲ್ಲಿ ಅವರ ಶ್ರಮಕ್ಕಾಗಿ ನೊಬೆಲ್ ಬಹುಮಾನವನ್ನು ಪಡೆದುಕೊಂಡರು. ಝೆಂಟ್-ಗ್ಯೋರ್ಗಿಯು ಜೊತೆಯಾಗಿ ಸಿಟ್ರಿಕ್ ಆಮ್ಲ ಚಕ್ರದ ಕುರಿತು ಹೆಚ್ಚಿನದನ್ನು ಸ್ಪಷ್ಟಪಡಿಸಿದರು. 1930ರ ದಶಕದಲ್ಲಿ, ವಿಲಿಯಮ್ ಕಮ್ಮಿಂಗ್ ರೋಸ್ ಅವರು ಪ್ರಮುಖ ಅಮೈನೊ ಆಮ್ಲಗಳು, ಶರೀರ ಸಂಯೋಜಿಸದ ಅವಶ್ಯಕ ಪ್ರೋಟಿನ್ ಘಟಕಗಳನ್ನು ಗುರುತಿಸಿದರು. 1935ರಲ್ಲಿ ಅಂಡರ್ವುಡ್ ಮತ್ತು ಮಾರ್ಸ್ಟನ್ ಸ್ವತಂತ್ರವಾಗಿ ಕೊಬಲ್ಟ್ನ ಅವಶ್ಯಕತೆಯನ್ನು ಶೋಧಿಸಿದರು. 1936ರಲ್ಲಿ, ಯೂಜಿನ್ ಫ್ಲಾಯ್ಡ್ ಡ್ಯೂಬಿಯೋಸ್ ಕೆಲಸ ಮತ್ತು ಶಾಲೆಯಲ್ಲಿ ಕಾರ್ಯ ನಿರ್ವಹಣೆಯು ಕ್ಯಾಲರಿಗಳಿಗೆ ಸಂಬಂಧಿಸಿದ ಸೇವನೆಗೆ ಸಂಬಂಧಿಸಿದೆ ಎಂದು ತೋರಿಸಿದರು. 1938ರಲ್ಲಿ, ಏರ್ಹಾರ್ಡ್ ಫರ್ನಾಲ್ಸ್ ವಿಟಮಿನ್ E ಯ ರಾಸಾಯಿನಿಕ ಬಂಧವನ್ನು ಕಂಡುಹಿಡಿದರು. ಅದನ್ನು ಪೌಲ್ ಕಾರರ್ ಸಮನ್ವಯಗೊಳಿಸಿದರು.1940ರಲ್ಲಿ, ವಿ[[ಶ್ವ ಸಮರ II ರ ಸಮಯದಲ್ಲಿ ಮತ್ತು ನಂತರದಲ್ಲಿ ಎಲ್ಸೀ ವಿಡ್ಡೋಸನ್ ಮತ್ತು ಇತರರು ರಚಿಸಿದ ಪೋಷಾಂಶಗಳ ಸಿದ್ಧಾಂತಗಳ ಪ್ರಕಾರ ಯುನೈಟೆಡ್ ಕಿಂಗ್ಡಂನಲ್ಲಿ|ಶ್ವ ಸಮರ II ರ ಸಮಯದಲ್ಲಿ ಮತ್ತು ನಂತರದಲ್ಲಿ ಎಲ್ಸೀ ವಿಡ್ಡೋಸನ್ ಮತ್ತು ಇತರರು ರಚಿಸಿದ ಪೋಷಾಂಶಗಳ ಸಿದ್ಧಾಂತಗಳ ಪ್ರಕಾರ ಯುನೈಟೆಡ್ ಕಿಂಗ್ಡಂನಲ್ಲಿ]] ಪಡಿತರ ವ್ಯವಸ್ಥೆಮಾಡಲಾಗಿತ್ತು. 1941ರಲ್ಲಿ, ಶಿಫಾರಸುಮಾಡಿದ ಆಹಾರ ಪದ್ಧತಿ ಭತ್ಯಗಳನ್ನು (RDAಗಳು) ನ್ಯಾಶನಲ್ ರಿಸರ್ಚ್ ಕೌನ್ಸಿಲ್ ಸ್ಥಾಪಿಸಿತು. 1992ರಲ್ಲಿ, U.S. ಕೃಷಿ ಇಲಾಖೆ ಆಹಾರ ಮಾರ್ಗದರ್ಶಕ ಪಿರಮಿಡ್ನ್ನು ಪರಿಚಯಿಸಿತು. 2002ರಲ್ಲಿ, ನ್ಯಾಚುರಲ್ ಜಸ್ಟೀಸ್ ಅಧ್ಯಯನ ಪೌಷ್ಟಿಕ ಆಹಾರ ಮತ್ತು ಹಿಂಸಾತ್ಮಕ ನಡುವಳಿಕೆಯ ನಡುವೆ ಸಂಬಂಧವನ್ನು ತೋರಿಸಿತು. ಸ್ಥೂಲಕಾಯತೆಯು ಅಡೆನೋವೈರಸ್ ಜೊತೆಗೆ ಕೆಟ್ಟ ಪೋಷಕ ಆಹಾರಗಳಿಂದಾಗಿ ಉಂಟಾಗುತ್ತದೆ ಎಂದು 2005ರ ಒಂದು ಅಧ್ಯಯನದಲ್ಲಿ ಕಂಡುಬಂದಿದೆ.[೪೬]
ಸಮತೋಲಿತ ಸೇವನೆ:
ಜೀವಶಾಸ್ತ್ರ
ಕಡಿಮೆ ಪೌಷ್ಟಿಕ ಆಹಾರದ ಅಪಾಯಗಳು
ಆಹಾರ
|
ಆರೋಗ್ಯಕರವಾದ ಆಹಾರ ಕ್ರಮ:
ಪಟ್ಟಿಗಳು:
ಪೌಷ್ಟಿಕಾಂಶಗಳು:
|
ವೃತ್ತಿ:
ಉಪಕರಣಗಳು
ಸಂಸ್ಥೆಗಳು:
ಸಂಬಂಧಿತ ವಿಚಾರಗಳು
|
ಉತ್ತಮ ಆರೋಗ್ಯಕ್ಕೆ ನಿಸರ್ಗವೇ ಮಾರ್ಗದರ್ಶಿ , ಲೆಫಯೆಟ್ಟೆ, ಲೂಸಿಯಾನ, ಶ್ರೇಷ್ಟ ಪ್ರಕಟಣೆ
{{cite book}}
: |author=
has generic name (help)CS1 maint: multiple names: authors list (link){{cite journal}}
: Unknown parameter |month=
ignored (help)Seamless Wikipedia browsing. On steroids.