ವರ್ಣಾಶ್ರಮ ಪದ್ಧತಿ
From Wikipedia, the free encyclopedia
ವರ್ಣಾಶ್ರಮ ಪದ್ಧತಿಯು ನಾಲ್ಕು ವರ್ಗಗಳನ್ನು ಹೊಂದಿದ ಹಿಂದೂ ಧರ್ಮದ ಒಂದು ಪದ್ಧತಿ. ವರ್ಣ ಒಂದು ಸಂಸ್ಕೃತ ಶಬ್ದ, ಇದರರ್ಥ ಪ್ರಕಾರ, ಕ್ರಮ, ಬಣ್ಣ ಅಥವಾ ವರ್ಗ.[1] ವರ್ಣ ಪದವು ಮನುಸ್ಮೃತಿಯಂತಹ ಬ್ರಾಹ್ಮಣೀಯ ಪುಸ್ತಕಗಳಲ್ಲಿ ಸಾಮಾಜಿಕ ವರ್ಗಗಳನ್ನು ಸೂಚಿಸುತ್ತದೆ. ಇವು ಮತ್ತು ಇತರ ಹಿಂದೂ ಸಾಹಿತ್ಯ ಸಮಾಜವನ್ನು ತಾತ್ವಿಕವಾಗಿ ನಾಲ್ಕು ವರ್ಣಗಳಾಗಿ ವರ್ಗೀಕರಿಸಿದವು:
- ಬ್ರಾಹ್ಮಣರು: ಯಾರು ಶುದ್ಧವಾಗಿ ಇರುತ್ತಾರೆ, ಜ್ಞಾನವಂತರಾಗಿರುತ್ತರೆ, ಇತರರನ್ನು ಅಜ್ಞಾನದಿಂದ ಹೊರತರುವರು ಅವರು ಬ್ರಾಹ್ಮಣ, (ಅಧ್ಯಾಪಕರು, ಶಿಕ್ಷಕರು ಮತ್ತು ವಿದ್ವಾಂಸರು) .
- ಕ್ಷತ್ರಿಯರು: ಯಾರು ಭಯವನ್ನು ಹೋಗಲಾಡಿಸಿ ಸುರಕ್ಷತೆ ನೀಡುತ್ತಾರೆ ಅವರು ಕ್ಷತ್ರಿಯ, (ಯೋಧರು ಮತ್ತು ಆಡಳಿತಗಾರರು)
- ವೈಶ್ಯರು: ವ್ಯವಸಾಯ ಮಾಡುವ ಬೆಳೆಗಳನ್ನು ಬೆಳೆಯುವ, ಯಾವುದೇ ರೀತಿಯ ವ್ಯಾಪಾರ ಮಾಡುವವರು ವೈಶ್ಯ (ಎಲ್ಲಾ ರೀತಿಯ ವರ್ತಕರು)
- ಶೂದ್ರರು: ಕೊನೆಯ ವರ್ಗ ಪರಿಸರವನ್ನು ಶುದ್ಧವಾಗಿ ಇಡುವ ಎಲ್ಲರು ಶೂದ್ರ.
ಹಿಂದೂ ತತ್ತ್ವಶಾಸ್ತ್ರ ಸರಣಿಯ ಲೇಖನ | |
![]() | |
ಪಂಥಗಳು | |
---|---|
ಸಾಂಖ್ಯ · ನ್ಯಾಯ | |
ವೈಶೇಷಿಕ · ಯೋಗ | |
ಪೂರ್ವ ಮೀಮಾಂಸಾ · ವೇದಾಂತ | |
ವೇದಾಂತ ಪಂಥಗಳು | |
ಅದ್ವೈತ · ವಿಶಿಷ್ಟಾದ್ವೈತ | |
ದ್ವೈತ | |
ಪ್ರಮುಖ ವ್ಯಕ್ತಿಗಳು | |
ಕಪಿಲ · ಗೋತಮ | |
ಕಣಾದ · ಪತಂಜಲಿ | |
ಜೈಮಿನಿ · ವ್ಯಾಸ | |
ಮಧ್ಯಕಾಲೀನ | |
ಆದಿಶಂಕರ · ರಾಮಾನುಜ | |
ಮಧ್ವ · ಮಧುಸೂದನ | |
ವೇದಾಂತ ದೇಶಿಕ · ಜಯತೀರ್ಥ | |
ಆಧುನಿಕ | |
ರಾಮಕೃಷ್ಣ · ರಮಣ | |
ವಿವೇಕಾನಂದ · ನಾರಾಯಣ ಗುರು | |
ಅರವಿಂದ ·ಶಿವಾನಂದ | |
ಇದನ್ನು ಸ್ಥೂಲವಾಗಿ ಬುದ್ಧಿ, ಪರಾಕ್ರಮ, ಸಂಪತ್ತು ಹಾಗೂ ಪರಿಶ್ರಮಗಳ ಆಧಾರದ ಮೇಲೆ ಮಾಡಿದ್ದು. ಪ್ರತಿಯೊಂದು ವರ್ಣದವರೂ ಕೂಡಾ ಒಂದೇ ಪುರುಷನ ಅಂದರೆ ಜಗದ ಕುಟುಂಬದ ವಿವಿಧ ಅಂಗಗಳೇ ಆಗಿದ್ದು ಯಾರು ಯಾರಿಗೆ ಮೇಲಾಗಲೀ ಕೀಳಾಗಲೀ ಆಗಿರುವುದಿಲ್ಲ ಮತ್ತು ಈ ವರ್ಗ ವಿಭಾಗಗಳನ್ನು ವ್ಯಕ್ತಿಯ ಗುಣ-ಕರ್ಮಗಳಿಗೆ ಅನುಸಾರವಾಗಿ ಮಾಡಲಾಗಿದೆ ಎಂಬುದನ್ನು ಹಿಂದೂ ಧರ್ಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ನಾಲ್ಕು ವರ್ಣಗಳಲ್ಲಿ ಒಂದಕ್ಕೆ ಸೇರಿದ ಸಮುದಾಯಗಳನ್ನು ಸವರ್ಣ ಎಂದು ಕರೆಯಲಾಗುತ್ತದೆ. ಇಂದಿನ ಸಂದರ್ಭದಲ್ಲಿ, ಇವುಗಳಲ್ಲಿ ಎಲ್ಲ ಪ್ರಗತಿಶೀಲ ಜಾತಿಗಳು ಸೇರಿವೆ. ಯಾವುದೇ ವರ್ಣಕ್ಕೆ ಸೇರದ ದಲಿತರು ಮತ್ತು ಪರಿಶಿಷ್ಟ ಪಂಗಡದವರನ್ನು ಅವರ್ಣ ಎಂದು ಕರೆಯಲಾಗುತ್ತದೆ.
ಈ ನಾಲ್ಕು ವರ್ಣಗಳಲ್ಲಿ ವಿಭಜನೆಯು ಸಾಮಾಜಿಕ ಶ್ರೇಣೀಕರಣದ ಒಂದು ರೂಪ ಮತ್ತು ಇದನ್ನು ಇನ್ನೂ ಹೆಚ್ಚು ಸೂಕ್ಷ್ಮ ವ್ಯತ್ಯಾಸದ ಜಾತಿಯೊಂದಿಗೆ ತಪ್ಪುತಿಳಿಯಬಾರದು.
ವರ್ಣ ಪದ್ಧತಿಯನ್ನು ಹಿಂದೂ ಪಠ್ಯಗಳಲ್ಲಿ ಚರ್ಚಿಸಲಾಗಿದೆ, ಮತ್ತು ಆದರ್ಶೀಕೃತ ಮಾನವ ವೃತ್ತಿಗಳು ಎಂದು ಅರ್ಥಮಾಡಿಕೊಳ್ಳಲಾಗಿದೆ. ಈ ಪರಿಕಲ್ಪನೆಯನ್ನು ಸಾಮಾನ್ಯವಾಗಿ ಋಗ್ವೇದದ ಪುರುಷ ಸೂಕ್ತದ ಶ್ಲೋಕಕ್ಕೆ ಪತ್ತೆಹಚ್ಚಲಾಗಿದೆ. ಆದರೆ, ಬಹುಶಃ ಮೂಲದ ಮಿಥ್ಯಾಕಲ್ಪನೆಯನ್ನು ಸೃಷ್ಟಿಸಲು ಈ ಶ್ಲೋಕವನ್ನು ನಂತರದ ದಿನಾಂಕದಲ್ಲಿ ಸೇರಿಸಲಾಗಿದೆ ಎಂದು ಆಧುನಿಕ ವಿದ್ವತ್ತು ನಂಬುತ್ತದೆ.
ಮನುಸ್ಮೃತಿಯಲ್ಲಿನ ವರ್ಣ ಪದ್ಧತಿ ಮೇಲಿನ ಭಾಷ್ಯವನ್ನು ಹಲವುವೇಳೆ ಉಲ್ಲೇಖಿಸಲಾಗುತ್ತದೆ. ಈ ಪಠ್ಯ ವರ್ಗೀಕರಣಗಳ ವಿರುದ್ಧ, ಅನೇಕ ಹಿಂದೂ ಪಠ್ಯಗಳು ಮತ್ತು ಸಿದ್ಧಾಂತಗಳು ಸಾಮಾಜಿಕ ವರ್ಗೀಕರಣದ ವರ್ಣ ಪದ್ಧತಿಯನ್ನು ಪ್ರಶ್ನಿಸಿ ಅದಕ್ಕೆ ಅಸಮ್ಮತಿ ಸೂಚಿಸುತ್ತವೆ.