From Wikipedia, the free encyclopedia
ಬೆಳ್ತಂಗಡಿ ವಲಯ | |
---|---|
ಮಂಗಳುರು ಪೂರ್ವ ವಲಯ | |
12.993321°N 75.26839°E | |
Denomination | ರೋಮನ್ ಕಥೋಲಿಕ (Latin rite) |
Administration | |
Parish | ಅತಿ ಪವಿತ್ರ ರಕ್ಷಕ ಯೇಸು ಚರ್ಚು, ಬೆಳ್ತಂಗಡಿ |
Deanery | ಬೆಳ್ತಂಗಡಿ ವಲಯ |
Archdeaconry | ಮಂಗಳೂರು ಧರ್ಮಪ್ರಾಂತ್ಯ |
Archdiocese | ಬೆಂಗಳುರು ಮಹಾಧರ್ಮಪ್ರಾಂತ್ಯ |
Diocese | ರೋಮನ್ ಕಥೋಲಿಕ ಧರ್ಮಪ್ರಾಂತ್ಯ ಮಂಗಳೂರು |
Province | ರೋಮನ್ ಕಥೋಲಿಕ ಧರ್ಮಪ್ರಾಂತ್ಯ ಬೆಂಗಳೂರು |
District | ದಕ್ಷಿಣ ಕನ್ನಡ |
Division | ಬೆಳ್ತಂಗಡಿ |
Clergy | |
Archbishop | ಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್ |
Bishop(s) | ವಂ. ಅಲೋಷಿಯಸ್ ಪೌಲ್ ಡಿ'ಸೋಜಾ |
Vicar(s) | ಅತಿ. ವಂ. ಬೊನವೆಂಚರ್ ನಜ್ರೆತ್ |
ಈ ಬೆಳ್ತಂಗಡಿ ನಿಕಾಯ ಅಥವಾ ಬೆಳ್ತಂಗಡಿ ನಿಕಾಯವು ಭಾರತ ದಲ್ಲಿರುವ ಕರ್ನಾಟಕರಾಜ್ಯದ ಮಂಗಳೂರು ಧರ್ಮಪ್ರಾಂತ್ಯ ಕ್ಕೆ ಒಳಪಟ್ಟಿರುವ ನಿಕಾಯ ಗಳಲ್ಲಿ ಒಂದಾಗಿದ್ದು, ಬೆಳ್ತಂಗಡಿ[ಪ್ರದೇಶದಲ್ಲಿದೆ. ಈ ನಿಕಾಯ ೧೦ ಚರ್ಚುಗಳನ್ನು ಹೊಂದಿದ್ದು [1] ಅಲ್ಲದೇ ಅತಿ ಪವಿತ್ರ ರಕ್ಷಕ ಯೇಸು ಚರ್ಚು (ಬೆಳತಂಗಡಿ) ಇದರ ಪ್ರಧಾನ ಚರ್ಚು ನಿಕಾಯ ಆಗಿರುತ್ತದೆ. ವಂ. ಬೊನವೆಂಚರ್ ನಜ್ರೆತ್ ಇದರ ಪ್ರಸ್ತುತ ನಿಕಾಯ ಪುರೋಹಿತರಾಗಿರುತ್ತಾರೆ .
In೧೯೦೮ರಲ್ಲಿ ವಂ. ಪಿಯದಾದೆ ಡಿ'ಸೋಜಾರವರು ಹೊಸ ಚರ್ಚನ್ನು ಕಟ್ಟಿದರು. ೧೯೮೨ರಲ್ಲಿ ವಂ. ಕ್ಲಿಫರ್ಡ್ ಡಿ'ಸೋಜಾರವರು ಹೊಸ ಪ್ರಾಂತೀಯ ಮನೆಯನ್ನು ಕಟ್ಟಿದರು. ವಂ. ಗ್ರೆಗೊರಿ ಡಿ'ಸೋಜಾರವರು ಹೊಸ ಪ್ರಾರ್ಥನಾ ಮಂದಿರವನ್ನು ಚಾರ್ಮಾಡಿಯಲ್ಲಿ ಕಟ್ಟಿದ್ದರು. ೧೦ ಆಗಸ್ಟ್ ೧೯೩೯ರಲ್ಲಿ, ವಂ. ಜೊನ್ ಜಿ. ಪಿಂಟೊ ಅವರು ಚಾಪೆಲ್ ಅನ್ನು ಬಂಗಾಡಿ(ಇಂದುಬೆಟ್ಟು), ನಿರ್ಮಿಸಿದ್ದು ತದನಂತರ ಅದು ಚರ್ಚು ಆಗಿ ಮಾರ್ಪಾಡಾಯ್ತು. ಅರ್ವ(ಅಳದಂಗಡಿ), ಇಮಧುಬೆಟ್ಟು ಮತ್ತು ನಾರಾವಿ ಚರ್ಚುಗಳು ಬೆಳ್ತಂಗಡಿಯಿಂದ ಹೊರಗುಳಿದವು. ವಂ. ರೊಸಾರಿಯೊ ಫೆರ್ನಾಡಿಸ್ ಚರ್ಚನ್ನು ವಿಸ್ತರಿಸಿದರು.[2]
ಮೈಸೂರು ರಾಜ ಟಿಪ್ಪು ಸುಲ್ತಾನ್ ಕಟ್ಟಿದ ಜಮಲಾಬಾದ್ ಕೋಟೆ ಗೆ ಈ ಚರ್ಚು ಹತ್ತಿರವಿರುವದರಿಂದ, ಇದಕ್ಕೆ ೧೨೫ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಇದು ಟಿಪ್ಪು ಸುಲ್ತಾನ ನ ದುಷ್ಕೃತ್ಯಗಳನ್ನು ಹೊರತಾಗಿಯೂ ನಂಬಿಕೆ ನಿರತ ಕ್ರಿಶ್ಚಿಯನ್ನರ ಪುರಾವೆಯನ್ನೊಳಗೊಂಡಿದೆ. ಸುಮಾರು ೮೦೦ ಮಂದಿ ಕ್ರಿಶ್ಚಿಯನ್ ಬಂಧುಗಳು ಹುತಾತ್ಮ ರಾಗಿ ಕ್ರಿಶ್ಚಿಯನ್ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಲು ಇತರರಿಗೆ ಸ್ಪೂರ್ತಿಯಾಗಿದ್ದಾರೆ .[3] ರಾಜಕೀಯ ಕಾರಣಗಳಿಂದಾಗಿ ಟಿಪ್ಪು ಸುಲ್ತಾನ್ ಅವರು ಕ್ರಿಶ್ಚಿಯನ್ನರಿಗೆ ನೀಡಿದ ಕಿರುಕುಳ ಹಾಗೂ ಚರ್ಚಿನ ಮೇಲಿನ ಅವರ ಆಕ್ರಮಣವನ್ನು ಇತಿಹಾಸದಿಂದ ಮರೆಮಾಚಲಾಗಿದ್ದು, ಟಿಪ್ಪು ಸುಲ್ತಾನ್ ಅವರನ್ನು ದಕ್ಷಿಣ ಕರ್ನಾಟಕ ದ ಸ್ವಾತಂತ್ರ್ಯದ ಹೋರಾಟಗಾರನಾಗಿ ಬಿಂಬಿಸಲಾಗಿದೆ.
ಸುತ್ತಲಿನ ಹತ್ತು ಚರ್ಚುಗಳ ನಿಕಾಯವನ್ನು ಹೊಂದಿದ್ದು[1] ಮತ್ತು ಅತಿ ಪವಿತ್ರ ರಕ್ಷಕ ಯೇಸು ಚರ್ಚು, (ಬೆಳ್ತಂಗಡಿ)ಇದರ ಪ್ರಮುಖ ಚರ್ಚ್ಉ ಆಗಿರುತ್ತದೆ.
ಬೆಳ್ತಂಗಡಿ ನಿಕಾಯಗೊಳಪಟ್ಟ ಸದಸ್ಯ ಚರ್ಚುಗಳ ವಿವರ ಕೆಳಗಿನಂತಿದೆ.[1]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.