ದಯಾನಂದ ಸರಸ್ವತಿ
From Wikipedia, the free encyclopedia
ಸ್ವಾಮಿ ದಯಾನಂದ ಸರಸ್ವತಿ 'ದಯಾನಂದ ಸರಸ್ವತಿ' (೧೨ ಫೆಬ್ರವರಿ ೧೮೨೪ - ೩೦ ಅಕ್ಟೋಬರ್ ೧೮೮೩) ಭಾರತೀಯ ಧಾರ್ಮಿಕ ಮುಖಂಡ ಮತ್ತು ವೇದ ಧರ್ಮದ ಹಿಂದೂ ಸುಧಾರಣಾ ಚಳವಳಿಯ ಆರ್ಯ ಸಮಾಜದ ಸ್ಥಾಪಕ. ಅವರು ವೈದಿಕ ಸಿದ್ಧಾಂತ ಮತ್ತು ಸಂಸ್ಕೃತ ಭಾಷೆಯ ಪ್ರಖ್ಯಾತ ವಿದ್ವಾಂಸರಾಗಿದ್ದರು. ೧೮೭೬ ರಲ್ಲಿ ಅವರು ಸ್ವರಾಜ್ಯಕ್ಕಾಗಿ "ಇಂಡಿಯ ಫಾರ್ ಇಂಡಿಯನ್ಸ್" ಎಂಬ ಕರೆ ಕೊಟ್ಟರು. ಆ ಕರೆಯನ್ನು ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು ಉಪಯೋಗಿಸಿಕೊಂಡು ಸ್ವರಾಜ್ಯದ ಕರೆ ಕೊಟ್ಟರು. ಆ ಸಮಯದಲ್ಲಿ ಹಿಂದೂ ಧರ್ಮದಲ್ಲಿ ಧಾರ್ಮಿಕ ಕ್ರಿಯೆಗಳು ಮೂರ್ತಿಪೂಜೆ, ಅಥವಾ ಮೂರ್ತಿ ಆರಾಧನೆಯನ್ನು ನಿರಾಕರಿಸಿ ತೆಗಳಿದ ಅವರು ವೈದಿಕ ಸಿದ್ಧಾಂತಗಳನ್ನು ಪುನರುಜ್ಜೀವನಗೊಳಿಸುವ ಕಡೆಗೆ ಕೆಲಸ ಮಾಡಿದರು. ತರುವಾಯ, ದಯಾನಂದ ಸರಸ್ವತಿ - ವೇದಗಳ ಅಧಾರದ ಮೇಲೆ ಹಿಂದು ಸಮಾಜವನ್ನು ಶುದ್ಧೀಕರಿಸಲು ಪ್ರಯತ್ನಿಸಿದ ಮೊದಲ ತತ್ವಜ್ಞಾನಿ. ತಮ್ಮ ಪ್ರಸಿದ್ದ ಕೃತಿಯಾದ ಸತ್ಯಾರ್ಥ ಪ್ರಕಾಶ ದಲ್ಲಿ ವೇದಗಳಿಗೆ ಹಿಂತಿರುಗಿ ಎಂದು ಕರೆಕೊಟ್ಟರು. ಸ್ವರಾಜ್ಯ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು. ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಹೊಂದಿದ್ದ ಹಿಂದುಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಶುದ್ಧಿ ಚಳುವಳಿಯನ್ನು ಆರಂಭಿಸಿದರು, ಇವರು ವೈದಿಕ ಧರ್ಮದ ರಕ್ಷಣೆ ಮತ್ತು ಪ್ರಚಾರ ಮಾಡಿದ್ದರಿಂದ ಇವರನ್ನು ಆಧುನಿಕ ಭಾರತದ ಹಿಂದೂ ಧರ್ಮದ ಪ್ರಥಮ ಸುಧಾರಕ ಎಂದು ಕರೆಯುತ್ತಾರೆ. ಇವರ ಇತರ ಕೃತಿಗಳು : ವೇದ ಭಾಷ್ಯ ಭೂಮಿಕ, 'ಭಾರತ ಭಾರತೀಯರಿಗೆ'. ವೈದಿಕ ಸಿದ್ಧಾಂತಗಳನ್ನು ಪುನರುಜ್ಜೀವನಗೊಳಿಸುವ ದಿಕ್ಕಿನಲ್ಲಿ ಕೆಲಸ ಮಾಡಿದ ಅವರನ್ನು, ಭಾರತದ ತತ್ವಜ್ಞಾನಿ ಮತ್ತು ರಾಷ್ಟ್ರಾಧ್ಯಕ್ಷ ಎಸ್. ರಾಧಾಕೃಷ್ಣನ್, ಶ್ರೀ ಅರಬಿಂದೋ ಅವರಂತೆ, ದಯಾನಂದ ಸರಸ್ವತಿಯವರು ಆಧುನಿಕ ಭಾರತದ ನಿರ್ಮಾಪಕರು ಎಂದು ಕರೆದರು. [1][2][3][4]
ದಯಾನಂದ ಸರಸ್ವತಿ | |
---|---|
![]() | |
ಜನನ | (೧೮೨೪-೦೨-೧೨)೧೨ ಫೆಬ್ರವರಿ ೧೮೨೪ ಟಂಕಾರ, ಗುಜರಾತ್ |
ಮರಣ | 30 October 1883(1883-10-30) (aged 59) ಅಜ್ಮೇರ್, ರಾಜಸ್ಥಾನ |
ಜನ್ಮ ನಾಮ | ಮೂಲಶಂಕರ ತಿವಾರಿ or Mulshankar Karasandas Tiwari /Shuddha Chaitanya as Brahmachari |
ಗೌರವಗಳು | Sindhi Marhu |
ಸಂಸ್ಥಾಪಕರು | ಆರ್ಯ ಸಮಾಜ |
ಗುರು | ವಿರಜಾನಂದ ದಂಡಿ |
ತತ್ವಶಾಸ್ತ್ರ | ನಾಲ್ಕು ವೇದಗಳ ಸಂಹಿತವನ್ನು ಆಧರಿಸಿದ ತ್ರೈತದ್ವೇದ, ವೈದಿಕ ತತ್ತ್ವಶಾಸ್ತ್ರ ಮತ್ತು ಅದರ ಸಿದ್ಧಾಂತವನ್ನು ಪಾಣಿನಿಯ ವ್ಯಾಕರಣವನ್ನು ಬೆಂಬಲಿಸಿದ ಆರು ದರ್ಶನಗಳೊಂದಿಗೆ ನಿಘಂಟು ಮತ್ತು ನಿರುಕ್ತಗಳು |
ನುಡಿ | "Om vishwani dev savitar duritani parasuv yad bhadram tanna aasuva.""ಓಂ ವಿಶ್ವಾನಿ ದೇವ ಸವಿತ್ ದುರಿತಾನಿ ಪರಾಸುವ್ ಯದ್ ಭದ್ರಮ್ ತನ್ನಾ ಅಸುವಾ." |