![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/26/%25E0%25B2%25AE%25E0%25B3%2581%25E0%25B2%25B3%25E0%25B3%258D%25E0%25B2%25B3%25E0%25B2%25AF%25E0%25B3%258D%25E0%25B2%25AF%25E0%25B2%25A8%25E0%25B2%2597%25E0%25B2%25BF%25E0%25B2%25B0%25E0%25B2%25BF4.jpg/640px-%25E0%25B2%25AE%25E0%25B3%2581%25E0%25B2%25B3%25E0%25B3%258D%25E0%25B2%25B3%25E0%25B2%25AF%25E0%25B3%258D%25E0%25B2%25AF%25E0%25B2%25A8%25E0%25B2%2597%25E0%25B2%25BF%25E0%25B2%25B0%25E0%25B2%25BF4.jpg&w=640&q=50)
ಚಿಕ್ಕಮಗಳೂರು
ಕರ್ನಾಟಕದ ಜಿಲ್ಲೆ, ಭಾರತ / From Wikipedia, the free encyclopedia
ಚಿಕ್ಕಮಗಳೂರು ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು ಸಹ ಕರೆಯಲ್ಪಡುತ್ತದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ/ ಚಂದ್ರದ್ರೋಣ ಪರ್ವತ ಭಾಗಗಳಲ್ಲಿ ಬೆಳೆಯಲಾಯಿತು.[2] ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ತುಂಗಾ ಮತ್ತು ಭದ್ರಾ ನದಿಗಳ ಮೂಲಸ್ಥಾನವಾಗಿದೆ. ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನ ಗಿರಿ ಚಿಕ್ಕಮಗಳೂರಿನಲ್ಲಿದೆ. ಈ ಜಿಲ್ಲೆಯು ಮಲೆನಾಡು, ಅರೆಮಲೆನಾಡು, ಹಾಗೂ ಬಯಲುಸೀಮೆಗಳನ್ನೊಳಗೊಂಡಿದೆ, ಈ ಜಿಲ್ಲೆಯ ಹೆಚ್ಚು ಪ್ರದೇಶ ಮಲೆನಾಡು'. ವಿವಿಧ ಜಾತಿಯ ಪ್ರಾಣಿಗಳನ್ನೊಳಗೊಂಡ ಅಭಯಾರಣ್ಯಗಳು, ನಿತ್ಯಹರಿದ್ವರ್ಣಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು ಹಾಗೂ ಅನೇಕ ಜಲಪಾತಗಳು ಮತ್ತು ಕಾಫಿ, ಟೀ, ಏಲಕ್ಕಿ, ಮೆಣಸು, ಅಡಿಕೆ,ಬಾಳೆ, ತೆಂಗುಗಳನ್ನು ಬೆಳೆಯುವ ನಾಡಾಗಿದೆ. ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ಧಿ ಪಡೆದಿದೆ.
![](http://upload.wikimedia.org/wikipedia/commons/thumb/7/74/Z_Point_Chikamagaluru.jpg/640px-Z_Point_Chikamagaluru.jpg)
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಚಿಕ್ಕಮ ಗಳೂರು ಜಿಲ್ಲೆ
ಕಾಫಿ ನಾಡು | |
---|---|
ಜಿಲ್ಲೆ | |
![]() ಮುಳ್ಳಯ್ಯನ ಗಿರಿ ,ಚಿಕ್ಕಮಗಳೂರು | |
Nickname(s): ಕಾಫಿಯ ನಾಡು | |
![]() ಕರ್ನಾಟಕದಲ್ಲಿ ಚಿಕ್ಕಮಗಳೂರು ಇರುವ ಸ್ಥಳ | |
ದೇಶ | ![]() |
ರಾಜ್ಯ | ಕರ್ನಾಟಕ |
ಊಗಮ | ೧೯೪೭ |
ಸ್ಥಾಪಿಸಿದವರು | ರುಕ್ಮಾಂಗದ ರಾಜ |
ಹೆಸರಿಡಲು ಕಾರಣ | ಕಾಫಿ, ಪರ್ವತ ಶ್ರೇಣಿ. |
ಕೇಂದ್ರ ಕಛೇರಿ | ಚಿಕ್ಕಮಗಳೂರು |
ತಾಲ್ಲೂಕುಗಳು | ಚಿಕ್ಕಮಗಳೂರು, ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಕಳಸ, ಅಜ್ಜಂಪುರ ನರಸಿಂಹರಾಜಪುರ |
ಸರ್ಕಾರ | |
• ಮಾದರಿ | ಜಿಲ್ಲಾಧಿಕಾರಿ ಕಚೇರಿ |
• ಪಾಲಿಕೆ | ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ |
• ಜಿಲ್ಲಾಧಿಕಾರಿ | ಷಡಕ್ಷರಿ ಸ್ವಾಮಿ ಎಸ್ ಪಿ |
Area | |
• Total | ೭,೨೦೧ km೨ (೨,೭೮೦ sq mi) |
• ಕಾಡು | ೨,೧೦೮ km೨ (೮೧೪ sq mi) |
Elevation | ೧,೯೨೬ m (೬,೩೧೮ ft) |
Population (೨೦೧೧)[1] | |
• Total | ೧೧,೩೭,೯೬೧ |
• ಶ್ರೇಣಿ | ೪೦೮ ಭಾರತದಲ್ಲಿ |
• ಸಾಂದ್ರತೆ | ೧೫೮,೧೯/km೨ (೪೦,೯೭೦/sq mi) |
Demonym(s) | ಚಿಕ್ಕಮಗಳೂರಿಗರು |
ಭಾಷೆ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+೫:೩೦ (ಐ. ಎಸ್. ಟಿ) |
ಪಿನ್ ಕೋಡ್ | ೫೭೭೧xx |
ವಾಹನ ನೋಂದಣಿ | ಕೆ.ಏ-೧೮, ಕೆ.ಏ-೬೬ |
ಜಾಲತಾಣ | ಚಿಕ್ಕಮಗಳೂರು ಮಿಂಬಲೆ ತಾಣ |
ಚಿಕ್ಕಮಗಳೂರನ್ನು ಪ್ರವಾಸಿಗರ ತಾಣ. ಪ್ರಕುತಿಯ ಸೌಂದರ್ಯವನ್ನು ಒಳಗೊಂಡಿರುವ ಮಲೆನಾಡು ಯೆಂದು ಹೆಸರನ್ನು ಪಡೆದುಕೊಂಡಿದೆ