ಶೃಂಗೇರಿ
ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು / From Wikipedia, the free encyclopedia
ಶೃಂಗೇರಿಯು ,ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ತಾಲೂಕು.https://www.karnataka.com/sringeri/about-sringeri/ ೮ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ಮತ್ತಿತರೆ ಮಠಗಳನ್ನು ಅವರು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಸ್ಥಾಪಿಸಿದರು. ಶೃಂಗೇರಿಯು ತುಂಗಾ ನದಿ ತಟದಲ್ಲಿರುವ ಚಿಕ್ಕ ಊರು. ಶ್ರೀ ಭಾರತೀ ಕೃಷ್ಣತೀರ್ಥರು ಮತ್ತು ಶ್ರೀ ವಿದ್ಯಾರಣ್ಯರು ಕೇರಳ ಶೈಲಿಯಲ್ಲಿ ಮರದ ಮತ್ತು ಹಂಚಿನ ಚಾವಣಿಯೊಂದಿಗೆ ದೇವಾಲಯವನ್ನು ನಿರ್ಮಿಸಿದರು ಮತ್ತು ಪ್ರಸ್ತುತ ಚಿನ್ನದ ವಿಗ್ರಹದೊಂದಿಗೆ ಶ್ರೀ ಗಂಧದ ವಿಗ್ರಹವನ್ನು ಬದಲಿಸಿದರು.
Quick Facts ಶೃಂಗೇರಿ Sringeri, ದೇಶ ...
ಶೃಂಗೇರಿ
Sringeri | |
---|---|
ತಾಲ್ಲೂಕು | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಮಗಳೂರು |
ಸರ್ಕಾರ | |
• ಶಾಸಕ | ಟಿ.ಡಿ.ರಾಜೇಗೌಡ |
Elevation | ೬೭೨ m (೨,೨೦೫ ft) |
Population (2001) | |
• Total | ೪,೨೫೩ |
ಭಾಷೆ | |
• ಅಧಿಕೃತ | ಕನ್ನಡ |
• ಪ್ರಾದೇಶಿಕ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ಪಿನ್ | 577139 |
ದೂರವಾಣಿ ಕೋಡ್ | 08265 |
ವಾಹನ ನೋಂದಣಿ | KA-18 |
Close