ಈಶಾವಾಸ್ಯೋಪನಿಷತ್
From Wikipedia, the free encyclopedia
ಈಶಾವಾಸ್ಯೋಪನಿಷತ್ ಮುಖ್ಯವಾದ ಹನ್ನೆರಡು ಉಪನಿಷತ್ತುಗಳಲ್ಲಿ ಮೊದಲನೆಯದು.ಇದರ ಪ್ರಥಮ ಶಬ್ದ ಈಶಾವಾಸ್ಯಮ್ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ. ಹದಿನೆಂಟು ಶ್ಲೋಕಗಳನ್ನು ಮಾತ್ರ ಹೊಂದಿದ್ದು ಗಾತ್ರದಲ್ಲಿ ಚಿಕ್ಕದು. ಇದು ಶುಕ್ಲ ಯಜುರ್ವೇದದ ವಾಜಸನೇಯ ಸಂಹಿತೆಗೆ ಸೇರಿದುದರಿಂದ ಇದಕ್ಕೆ 'ವಾಜಸನೇಯ ಸಂಹಿತೋಪನಿಷತ್'ಎಂದೂ ಹೆಸರಿದೆ. ಇದರಲ್ಲಿ ಜೀವನಕ್ಕೆ ಬೇಕಾದ ನಿಜವಾದ ಬೆಳಕು ಅಡಗಿದೆ ಎಂದು ಗಾಂಧೀಜಿ ಅಭಿಪ್ರಾಯ ಪಟ್ಟಿದ್ದಾರೆ. ಈ ಉಪನಿಷತ್ತು ಜ್ಞಾನ-ಅಜ್ಞಾನ,ವಿದ್ಯೆ-ಅವಿದ್ಯೆ,ಕರ್ಮ-ಆತ್ಮಗಳ ಕುರಿತಾಗಿ ಬೆಳಕನ್ನು ಬೀರುತ್ತದೆ.ಭಗವಂತನನ್ನು ಈಶ ಎಂದು ಕರೆದಿರುವ ಈ ಉಪನಿಷತ್ತು,ಜಗತ್ತೆಲ್ಲಾ ಈಶನಿಂದ ಆವೃತವಾಗಿದೆ ಎಂದು ನಂಬುತ್ತದೆ.ಪರದ್ರವ್ಯವನ್ನು ಮುಟ್ಟದೆ,ಜಗತ್ತಿನಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಬೋಧಿಸುತ್ತದೆ. ಇದರ ಪ್ರಥಮ ಶ್ಲೋಕ ಹೀಗಿದೆ: ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ | ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ || ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಇದೆಲ್ಲವೂ ಈಶನಿಂದ ಮುಚ್ಚಲ್ಪಡತಕ್ಕದ್ದು. ಅದರ ತ್ಯಾಗದಿಂದ (ನಿನ್ನನ್ನು)ಕಾಪಾಡಿಕೊ.ಯಾರ ಧನವನ್ನೂ ಬಯಸಬೇಡ.,[1]
ಹಿಂದೂ ಧರ್ಮಗ್ರಂಥಗಳು | |
![]() | |
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ | |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ | |
[[ಮಾಹಕಾವ್ಯ |
ಮಾಹಕಾವ್ಯಗಳು]] |
ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |