From Wikipedia, the free encyclopedia
ಹೋಮಿಯೋಪಥಿ ಒಂದು ವೈದ್ಯ ಪದ್ಧತಿ. ಇದನ್ನು ಸ್ಯಾಮ್ಯುಯೆಲ್ ಹಾನಿಮನ್ ೧೮೦೦ ರ ಸುಮಾರಿಗೆ ಬಳಕೆಗೆ ತಂದರು. ಇದು ನೈಸರ್ಗಿಕ ಕ್ಷಮತೆಯನ್ನು ಚೇತರಿಸಿ, ರೋಗಿಯನ್ನು ಗುಣಪಡಿಸುವ ಸಿದ್ಧಾಂತವನ್ನು ಹೊಂದಿದೆ. ಆರೋಗ್ಯವಂತರಿಗೆ ನೀಡಿ, ಅದರ ಪರಿಣಾಮವನ್ನು ವೀಕ್ಷಿಸಿ, ರೋಗಿಗಳಿಗೆ, ಹೋಮಿಯೋಪಥಿ ವೈದ್ಯರು, ಹೋಮಿಯೋಪಥಿ ಔಷಧವನ್ನು, ಅದೇ ರೋಗಲಕ್ಷಣಗಳು ಕಂಡುಬಂದಾಗ ನೀಡಿ, ರೋಗಿಯನ್ನು ಗುಣಪಡಿಸುತ್ತಾರೆ. ಉದಾಹರಣೆಗೆ, ಈರುಳ್ಳಿ ಕಣ್ಣಿನಿಂದ ಹಾಗೂ ಮೂಗಿನಿಂದ, ನೀರನ್ನು ಸುರಿಸುವ ಗುಣ ಹೊಂದಿದೆ. ಹಾಗಾಗಿ, ಈರುಳ್ಳಿಯಿಂದ ತಯಾರಿಸಿದ ಹೋಮಿಯೋಪಥಿ ಔಷಧವನ್ನು, ಕೆಲವು ತರಹದ ಶೀತವನ್ನು ಗುಣಪಡಿಸಲು ನೀಡಲಾಗುತ್ತದೆ. ಹೋಮಿಯೋಪಥಿ ವೈದ್ಯರು, ಒಮ್ಮೆಗೆ, ಒಂದು ರೋಗಕ್ಕೆ, ಒಂದೇ ಔಷಧವನ್ನು ನೀಡುತ್ತಾರೆ.[1] ‘ಪುಟ್ಟ ಗುಟ್ಟಿ ಪ್ರಮಾಣ (ಡೋಸೇಜ್) ದೊಡ್ಡದಕ್ಕಿಂತ ಪರಿಣಾಮಕಾರಿ’ ಎಂಬ ತತ್ತ್ವವನ್ನಾಧರಿಸಿ ಔಷಧಿ ಪ್ರಯೋಗ.
ಈ ವೈದ್ಯಕೀಯ ಚಿಕಿತ್ಸಾಕ್ರಮವನ್ನು ‘ಆಧುನಿಕ’ ವೈದ್ಯವಿಜ್ಞಾನ ಒಪ್ಪುವುದಿಲ್ಲವಾದರೂ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾನೂನುಬದ್ಧ ಚಿಕಿತ್ಸಾಕ್ರಮಗಳ ಪೈಕಿ ಒಂದೆಂದು ಮಾನ್ಯತೆ ಪಡೆದಿದೆ.
ಆರೋಗ್ಯವಂತ ಮನುಷ್ಯರಲ್ಲಿ ರೋಗವನ್ನು ಉಂಟುಮಾಡುವ ವಸ್ತುಗಳನ್ನು ಉಪಯೋಗಿಸಿ ಅದರಿಂದ ಔಷಧಿಯನ್ನು ಸಿದ್ದಪಡಿಸಿ, ರೋಗದಿಂದ ಬಳಲುತ್ತಿರುವ ಮಾನವರಿಗೆ ಇದನ್ನೇ ನೀಡುವುದು (ಸಿಮಿಲಿಯಾ ಸಿಮಿಲಿಬಸ್ ಕ್ಯೂರೆಂಟರ್) ಈ ಪದ್ಧತಿಯ ವಿಶೇಷತೆ.[2]
೧೭೯೦ರಲ್ಲಿ ಡಾ. ಸ್ಯಾಮ್ಯುಯೆಲ್ ಹಾನಿಮನ್ ಅವರು ಡಾ.ಕುಲೆನ್ ಅವರ ಟ್ರೀಟೀಸ್ ಆಫ್ ಮೆಟೀರಿಯಾ ಮೆಡಿಕ ಎಂಬ ಪುಸ್ತಕವನ್ನು ಭಾಷಾಂತರಿಸುವಾಗ, ಪೆರೂವಿಯನ್ ತೊಗಟೆಯ ಔಷಧೀಯ ಗುಣಗಳನ್ನು ವಿವರಿಸಬೇಕಾದರೆ ಡಾ.ಕುಲೆನ್ ಅವರು ಈ ತೊಗಟೆಯ ಮರುಕಳಿಸುವ ಜ್ವರವನ್ನು ನಿವಾರಿಸುವ ಗುಣವು ಅದರ ಕಹಿ ರುಚಿಯಿಂದಾಗಿ ಎಂದು ಬರೆದಿರುತ್ತಾರೆ. ಇಂತಹ ವಿವರಣೆಯಿಂದ ಅಸಮಧಾನಗೊಂಡ ಸ್ಯಾ.ಹಾನಿಮನ್ ಅವರು ಸ್ವತಃ ತಮ್ಮ ಮೇಲೆ ಈ ಔಷಧಿಯನ್ನು ಪ್ರಯೋಗಿಸಲು ಮುಂದಾಗುತ್ತಾರೆ. ಈ ಪ್ರಯೋಗವನ್ನು ತನ್ನ ಮೇಲೆಯಷ್ಟೇ ಸೀಮಿತವಿಡದೆ ತನ್ನ ಬಂಧು ಮಿತ್ರರ ಮೇಲೂ ನಡೆಸಿ ಕೊನೆಗೆ ಈ ತೀರ್ಮಾನಕ್ಕೆ ಬರುತ್ತಾರೆ. ‘ಆರ್ಗನನ್ ಡೆರ್ ರೇಶನೆಲ್ಲೆನ್ ಹೆಯಿಲ್ಕನ್ಸ್ಟ್’ (ಆರ್ಗನನ್ ಆಫ್ ರೇಶನಲ್ ಮೆಡಿಸಿನ್) ಎಂಬ ಗ್ರಂಥ ಮುಖೇನ ತನ್ನ ಸಿದ್ಧಾಂತವನ್ನು ಪ್ರಕಟಿಸಿದ (1810). ಆರೋಗ್ಯವಂತರ ಮೇಲೆ ಔಷಧವಸ್ತುಗಳನ್ನು ವ್ಯವಸ್ಥಿತವಾಗಿ ಪ್ರಯೋಗಿಸಿದಾಗ (ಈ ತಂತ್ರಕ್ಕೆ ಆತ ನೀಡಿದ ಹೆಸರು ‘ಪ್ರೂವಿಂಗ್’) ಅವರಲ್ಲಿ ಕಾಣಿಸಿಕೊಂಡ ಲಕ್ಷಣಗಳನ್ನು ವಿವರವಾಗಿ ದಾಖಲಿಸಿ ‘ರೆಯ್ನೆ ಅರ್ಝ್ನೆಯ್ಮಿಟ್ಟೆಲೆಹ್ರೆ’ (ಶುದ್ಧ ಔಷಧಿ ಪ್ರಭಾವ ವಿಜ್ಞಾನ) ಎಂಬ ಹೆಸರಿನ 6 ಸಂಪುಟಗಳಲ್ಲಿ ಪ್ರಕಟಿಸಿದ (1811). ಯಾವ ಔಷಧಿ ಕಾಯಿಲೆಯನ್ನು ಗುಣಪಡಿಸುತ್ತದೆಯೋ ಅದೇ ಔಷಧಿಗೆ ಆ ಕಾಯಿಲೆಯನ್ನು ಉತ್ಪಾದಿಸುವ ಕ್ಷಮತೆಯೂ ಇರುತ್ತದೆ. ಈ ತತ್ವವೇ ಹೋಮಿಯೋಪತಿಯೆಂಬ ಪರ್ಯಾಯ ಔಷಧೀಯ ವ್ಯವಸ್ಥೆಯ ಅಡಿಪಾಯವಾಯಿತು. ಇಂತಹ ಪದ್ಧತಿಯು ಭಾರತದಲ್ಲಿ ಸ್ಥಾಪನೆಗೊಂಡದ್ದು ೧೮೧೦ರಲ್ಲಿ. ಜರ್ಮನಿಯಿಂದ ಭೂವೈಜ್ಞಾನಿಕ ತನಿಖೆಗೆಂದು ಭಾರತಕ್ಕೆ ಬಂದ ಜರ್ಮನಿಯ ಒಂದು ವೈದ್ಯ ಹಾಗು ಭೂವಿಜ್ಞಾನಿ ಅವರ ಗುಂಪಿನ ಸದಸ್ಯರೊಂದಿಗೆ ಬಂಗಾಲದಲ್ಲಿ ಈ ಔಷಧಿಯನ್ನು ಅಲ್ಲಿಯ ಜನರ ಮೇಲೆ ಪ್ರಯೋಗಿಸಿದರು. ಹೀಗೆ ಹೋಮಿಯೋಪತಿ ಎಂಬ ಪದ್ಧತಿಯು ಬಂಗಾಲ, ಕಲ್ಕತ್ತಾ, ಪಂಜಾಬ್ನಂತಹ ಕೆಲ ಪ್ರದೇಶಗಳಲ್ಲೂ ಪಸರಿಸಲಾರಂಭಿಸಿತು. ೧೮೩೯ರಲ್ಲಿ ಡಾ.ಜಾನ್ ಮಾರ್ಟಿನ್ ಹೋನಿಗ್ಬರ್ಗರ್ ಭಾರತಕ್ಕೆ ಬಂದಿದ್ದಾಗ ಪಂಜಾಬಿನ ಮಹರಾಜ ರಂಜಿತ್ ಸಿಂಗ್ ಅವರಿಗೆ ಗಂಟಲಿನ ತೊಂದರೆಗೆ ಡಲ್ಕಾಮೆರ ಎಂಬ ಹೋಮಿಯೋಪತಿ ಔಷಧಿ ಕೊಟ್ಟು ರೋಗಮುಕ್ತಗೊಳಿಸಿದ್ದರು.[3][4] ಇದರಿಂದ ಪ್ರಭಾವಿತರಾದ ರಾಜ ರಂಜಿತ್ ಸಿಂಗ್ ಅವರನ್ನು ಅಲ್ಲೇ ವೈದ್ಯರಾಗಿ ಇದೇ ಪದ್ಧತಿಯನ್ನು ಅಭ್ಯಸಿಸಲು ಅನುಮತಿ ನೀಡಿದರು.
ಈ ಪದ್ಧತಿಯ ಜನಕ ಹಾನಿಮನ್ ಪ್ರಕಾರ ‘ಆರೋಗ್ಯಸ್ಥಿತಿ ಹಳಿತಪ್ಪುವಿಕೆಯೇ ರೋಗ.’ ರೋಗವನ್ನು ಯಾಂತ್ರಿಕವಾಗಿ ದೇಹದಿಂದ ನಿರ್ಮೂಲಿಸಲು ಸಾಧ್ಯವಿಲ್ಲ. ರೋಗವನ್ನು ಬೇಗನೆ ವಿಶ್ವಾಸಾರ್ಹವಾಗಿಯೂ ಶಾಶ್ವತವಾಗಿಯೂ ವಾಸಿ ಮಾಡಬಲ್ಲ ಚಿಕಿತ್ಸಾಕ್ರಮ ಅತ್ಯುತ್ತಮವಾದದ್ದು. ಎಂದೇ, ಈ ಎಲ್ಲ ಗುಣಗಳುಳ್ಳದ್ದು ಸಮಗ್ರತಾದೃಷ್ಟಿಯ (ಹೋಲಿಸ್ಟಿಕ್) ಔಷಧೋಪಚಾರ ಪದ್ಧತಿ ಎಂದಾತ ನಂಬಿದ್ದ. ರೋಗಗಳಲ್ಲಿ ಎರಡು ಬಗೆ: ತಾತ್ಕಾಲಿಕವಾಗಿ ವ್ಯಕ್ತಿಯನ್ನು ಶಕ್ತಿಗುಂದಿಸುತ್ತದಾದರೂ ಯುಕ್ತ ಚಿಕಿತ್ಸೆಯಿಂದ ವಾಸಿಮಾಡಬಹುದಾದ ತೀವ್ರ ರೋಗ ಮತ್ತು ಅನೇಕ ಬಾರಿ ರೋಗಬಾಧಿತನಾಗಿ ಅಪಾಯಕಾರಿ ಎನ್ನಬಹುದಾದಷ್ಟು ಶಕ್ತಿಗುಂದಿಸುವ ದೀರ್ಘಕಾಲಿಕ ರೋಗ. ಇಂಥ ರೋಗಗಳಿಗೆ ಚಿಕಿತ್ಸೆ ಮಾಡಬಯಸುವ ಹೋಮಿಯೊಪತಿ ವೈದ್ಯನಲ್ಲಿ ಇರಬೇಕಾದ ಸಾಮರ್ಥ್ಯಗಳು ನಾಲ್ಕು:
ರೋಗಗ್ರಸ್ತ ಭಾಗಕ್ಕೆ ಮಾತ್ರ ಚಿಕಿತ್ಸೆ ನೀಡುವುದಕ್ಕೆ ಬದಲಾಗಿ ರೋಗಿಯ ಸಮಗ್ರ ದೇಹಸ್ಥಿತಿಯನ್ನು ಪರಿಗಣಿಸಿ ಸಮಗ್ರಚಿಕಿತ್ಸೆ ನೀಡುವ ಗುರಿಸಾಧನೆಗೆ ಇವು ಅನಿವಾರ್ಯ.
ತನಗೆ ತಗಲುವ ರೋಗಗಳನ್ನು ನಿವಾರಿಸಿಕೊಳ್ಳುವ ನೈಸರ್ಗಿಕ ಶಕ್ತಿ ದೇಹಕ್ಕೆ ಇದೆ ಎಂಬ ನಂಬಿಕೆಯನ್ನು ಆಧರಿಸಿ ಹೋಮಿಯೊಪತಿ ವೈದ್ಯ ಚಿಕಿತ್ಸೆ ನೀಡುತ್ತಾನೆ. ಚಿಕಿತ್ಸಾವಿಧಾನ ನಾಲ್ಕು ಮೂಲ ತತ್ತ್ವಗಳನ್ನು ಆಧರಿಸಿದೆ:
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.