ಸಾಗರ
ನಗರ ಸಭೆ / From Wikipedia, the free encyclopedia
ಸಾಗರ ಅಥವಾ ಸಾಗರ ಜಂಬಗಾರು ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ಊರು ಮತ್ತು ಅದೇ ಹೆಸರಿನ ಉಪವಿಭಾಗೀಯ ಮತ್ತು ತಾಲೂಕು ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ ೩೬೦ ಕಿ.ಮೀ ಮತ್ತು ಶಿರಸಿ ನಗರದಿಂದ ಸುಮಾರು ೭೨.೨ ಕಿ.ಮೀ ದೂರದಲ್ಲಿರುವ ಸಾಗರ ನಗರ ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ಮತ್ತು ಹವ್ಯಕ ಬ್ರಾಹ್ಮಣರ ತವರಾಗಿದೆ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ.[3] ಇಲ್ಲಿನ ಜನರು ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಹಾಗೂ ಗೌರಿ-ಗಣೇಶ ಚತುರ್ಥಿಯನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ.
ಸಾಗರ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಶಿವಮೊಗ್ಗ |
ನಿರ್ದೇಶಾಂಕಗಳು | 13.9167° N 75.5667° E |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (2011) - ಸಾಂದ್ರತೆ |
206112 - /ಚದರ ಕಿ.ಮಿ. |
ಶಾಸಕರು | ಹರತಾಳು ಹಾಲಪ್ಪ, ಶಾಸಕರು ಸಾಗರ |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೭೭೪೦೧ - +೯೧-(೦)೮೧೮೩ - ಕೆಎ-೧೫ |
ಸಾಗರ
ಸಾಗರ ಜಂಬಗಾರು | |
---|---|
ನಗರಸಭೆ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಪ್ರದೇಶ | ಮಲೆನಾಡು |
ಜಿಲ್ಲೆ | ಶಿವಮೊಗ್ಗ ಜಿಲ್ಲೆ |
Subdivision | ಸಾಗರ |
ಸರ್ಕಾರ | |
• ಮಾದರಿ | ಪ್ರಜಾಸತ್ತಾತ್ಮಕ |
• ಪಾಲಿಕೆ | ಸಾಗರ ಸಿಟಿ ಮುನ್ಸಿಪಲ್ ಕೌನ್ಸಿಲ್ ನಗರಸಭಾ() |
Area | |
• ನಗರಸಭೆ | ೧೯.೭೫ km೨ (೭.೬೩ sq mi) |
Elevation | ೫೭೯ m (೧,೯೦೦ ft) |
Population (೨೦೧೧) | |
• ನಗರಸಭೆ | ೫೪,೫೫೦[1] |
• ಸಾಂದ್ರತೆ | ೭,೧೬೦/km೨ (೧೮,೫೦೦/sq mi) |
• ಗ್ರಾಮೀಣ | ೧,೪೦,೯೨೨ [2] |
Languages | |
• Official | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
Telephone code | ೦೮೧೮೩ |
ವಾಹನ ನೋಂದಣಿ | ಕೆಎ-೧೫(ಸಾಗರ ಉಪ ವಿಭಾಗ) |
ಜಾಲತಾಣ | www |
ಸಂಪೂರ್ಣ ಜಗತ್ತು ಭಾರತದಲ್ಲಿ ಹಾಗೂ ಇಡೀ ಭಾರತ ಕರ್ನಾಟಕದಲ್ಲಿ ಇರುವಂತೆಯೇ ಪ್ರವಾಸಿಗರ ಸ್ವರ್ಗವೇ ಆದ ಸಾಗರದಲ್ಲಿ ಸಂಪೂರ್ಣ ಕರ್ನಾಟಕವನ್ನು ಕಾಣಬಹುದು. ಇಲ್ಲಿನ ಜನರು ಹಿಂದುತ್ವವನ್ನು ಅಳವಡಿಸಿಕೊಂಡಿದ್ದಾರೆ ಹಾಗೂ ಕ್ಷಾತ್ರ ಭಾವದವರು.