ವಿಷ್ಣು
From Wikipedia, the free encyclopedia
ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಸಕಲ ಲೋಕಗಳ ಪಾಲಕ ಎಂದು ಹಿಂದೂ ಧರ್ಮ ನಂಬುತ್ತದೆ. ಭಗವದ್ಗೀತೆಯಲ್ಲಿ ವರ್ಣಿಸಿದಂತೆ 'ವಿಶ್ವರೂಪಿ' ನಾರಾಯಣ ಎಂದೂ ಕರೆಯುತ್ತಾರೆ. ಧರ್ಮ ಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ.
ವಿಷ್ಣು | |
---|---|
ಪರಮಾತ್ಮ, ಪರಬ್ರಹ್ಮ, ದೇವರ ರಕ್ಷಣೆ, ಒಳ್ಳೆಯದನ್ನು ಸಂರಕ್ಷಿಸುವುದು, ಇಡೀ ವಿಶ್ವವನ್ನು ನಿಯಂತ್ರಿಸುವವನು, ಕರ್ಮ ಪುನಃಸ್ಥಾಪನೆ, ಮೋಕ್ಷ[1][2] | |
Member of ತ್ರಿಮೂರ್ತಿ | |
ಇತರ ಹೆಸರುಗಳು | ನಾರಾಯಣ, ಜಗನ್ನಾಥ, ಜಗದೀಶ್ವರ, ಸುರೇಶ, ಪದ್ಮನಾಭ, ರಮಾಪತಿ, ಲಕ್ಷ್ಮಿಪತಿ, ಕಮಲನಯನ |
ದೇವನಾಗರಿ | विष्णु |
ಸಂಸ್ಕೃತ ಲಿಪ್ಯಂತರಣ | Viṣṇu |
ಸಂಲಗ್ನತೆ | ದಶಾವತಾರ, ಪರಬ್ರಹ್ಮ (Vaishnavism), ತ್ರಿಮೂರ್ತಿ, ಭಗವಾನ್, ಈಶ್ವರ, ತ್ರಿದೇವ್ |
ನೆಲೆ | ವೈಕುಂಠ, ಕ್ಷೀರಸಾಗರ |
ಮಂತ್ರ | ॐ नमो नारायणाय (ಓಂ ನಮೋ ನಾರಾಯಣ) ॐ नमो भगवते वासुदेवाय (ಓಂ ನಮೋ ಭಗವತೆ ನಾರಾಯಣ) |
ಆಯುಧ | ಸುದರ್ಶನ ಚಕ್ರ, Mace (Kaumodaki gada), Conch (Panchajanya)[3], Bow (Sharanga), Sword (Nandaka) |
ಲಾಂಛನಗಳು | ಶಾಲಿಗ್ರಾಮ್, ಕಮಲ |
ಸಂಗಾತಿ | ಲಕ್ಷ್ಮಿ (ಶ್ರೀದೇವಿ, ಭೂದೇವಿ, ನೀಲಾದೇವಿ, ತುಳಸಿ, ಪದ್ಮಾವತಿ) |
ಒಡಹುಟ್ಟಿದವರು | ಆದಿಪರಾಶಕ್ತಿ alias ಪಾರ್ವತಿ (in some traditions) |
ಮಕ್ಕಳು | ಬ್ರಹ್ಮ |
ವಾಹನ | ಗರುಡ[3] |
ಹಬ್ಬಗಳು | ಹೋಳಿ, ರಾಮನವಮಿ, ಕೃಷ್ಣ ಜನ್ಮಾಷ್ಟಮಿ, ನರಸಿಂಹ ಜಯಂತಿ, ದೀಪಾವಳಿ, ಓಣಂ, ವಿವಾಹ ಪಂಚಮಿ, ವಿಜಯದಶಮಿ, ಅನಂತ ಚತುರ್ದಶಿ, ದೇವಶಯನೀ ಏಕಾದಶಿ, ಕಾರ್ತಿಕ ಪೌರ್ಣಮಿ, ತುಳಸಿ ವಿವಾಹ[4] |
ವಿಷ್ಣುವು ತ್ರಿಮೂರ್ತಿಗಳಲ್ಲೊಬ್ಬ. ವೈಷ್ಣವ ಪಂಥದ ಆರಾಧ್ಯದೈವ. ವಿಶ್ವರಕ್ಷಕ, ವಿಶ್ವದ ಚೈತನ್ಯ ಹಾಗೂ ಸಕಲ ಜೀವರಾಶಿಗಳನ್ನು ತನ್ನ ಶಕ್ತಿಯಿಂದ ನಿಯಂತ್ರಿಸುವವ ಎಂದು ಈತನನ್ನು ಪುರಾಣಗಳು ವರ್ಣಿಸುತ್ತವೆ. ವೈಕುಂಠ ಈತನ ವಾಸಸ್ಥಾನ. ಮಹಾಲಕ್ಷ್ಮಿ ಈತನ ಹೆಂಡತಿ. ಭೂಲೋಕದಲ್ಲಿ ಪಾಪದ ಕೊಡ ತುಂಬಿದಾಗ ವಿಷ್ಣು ಅವತಾರಗಳನ್ನು ತಳೆದು ಪಾಪಕ್ಕೆ ಕಾರಣರಾದವರನ್ನು ಶಿಕ್ಷಿಸಿ, ಜನರನ್ನು ಸಂರಕ್ಷಿಸುವನೆಂಬ ನಂಬಿಕೆಯಿದೆ. ಕಷ್ಟದಲ್ಲಿರುವ ಭಕ್ತರನ್ನು ಕಾಪಾಡಿ ಮುಕ್ತಿ ನೀಡುವ ಈತ ಜನಸಾಮಾನ್ಯರಿಗೆ ಸ್ಪಂದಿಸುವ ದೇವನಾಗಿ ಕಂಡುಬರುತ್ತಾನೆ. ವಿಷ್ಣು ಅವತಾರಗಳನ್ನು ತಾಳಿದಾಗಲ್ಲೆಲ್ಲಾ ಲಕ್ಷ್ಮಿಯೂ ಅವತಾರಗಳನ್ನು ತಳೆದು ಈತನ ಪತ್ನಿಯಾಗಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನೆರವಾಗುತ್ತಾ ಬರುವಳೆಂಬ ನಂಬಿಕೆಯಿದೆ.
ಆದಿ ಅಂತ್ಯ ಇಲ್ಲದವನು