![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/06/Uma_Bharati_in_2014.jpg/640px-Uma_Bharati_in_2014.jpg&w=640&q=50)
ಉಮಾ ಭಾರತಿ
From Wikipedia, the free encyclopedia
ಉಮಾಭಾರತಿ (ಜನನ ೩ಮೇ ೧೯೫೯) ಒಬ್ಬ ಭಾರತೀಯ ರಾಜಕಾರಣಿ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ. ಅವರು ಚಿಕ್ಕ ವಯಸ್ಸಿನಲ್ಲೇ ಭಾರತೀಯ ಜನತಾ ಪಾರ್ಟಿಯಲ್ಲಿ ತೊಡಗಿಸಿಕೊಂಡಿದ್ದರು. ೧೯೮೪ ರಲ್ಲಿ ತಮ್ಮ ಮೊದಲ ಸಂಸತ್ತಿನ ಚುನಾವಣೆಯಲ್ಲಿ ವಿಫಲರಾದರು. ೧೯೮೯ ರಲ್ಲಿ, ಅವರು ಖಜುರಾಹೊ ಸ್ಥಾನಕ್ಕೆ ಸ್ಪರ್ಧಿಸಿ ಯಶಸ್ವಿಯಾದರು ಮತ್ತು ೧೯೯೧, ೧೯೯೬ ಮತ್ತು ೧೯೯೮ ರಲ್ಲಿ ನಡೆದ ಚುನಾವಣೆಗಳಲ್ಲಿ ಅದನ್ನು ಉಳಿಸಿಕೊಂಡರು. ೧೯೯೬ ರಲ್ಲಿ, ಅವರು ಕ್ಷೇತ್ರಗಳನ್ನು ಬದಲಾಯಿಸಿದರು ಮತ್ತು ಭೋಪಾಲ್ ಸ್ಥಾನವನ್ನು ಗೆದ್ದರು.
ಉಮಾ ಭಾರತಿ | |
---|---|
![]() | |
೨೦೧೪ರಲ್ಲಿ ಉಮಾಭಾರತಿ | |
ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷೆ | |
ರಾಷ್ಟ್ರಪತಿ | ಅಮಿತ್ ಶಾ ಜಗತ್ ಪ್ರಕಾಶ್ ನಡ್ಡಾ |
ಪೂರ್ವಾಧಿಕಾರಿ | ಜಗತ್ ಪ್ರಕಾಶ್ ನಡ್ಡಾ |
ಕೇಂದ್ರ ಸಂಪುಟ ಸಚಿವರು | |
ಅಧಿಕಾರ ಅವಧಿ ೧೬ ಮೇ ೨೦೧೪ – ೨೪ ಮೇ ೨೦೧೯ | |
ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ | ೩ ಸೆಪ್ಟೆಂಬರ್ ೨೦೧೭ - ೨೪ ಮೇ ೨೦೧೯ |
ಜಲ ಸಂಪನ್ಮೂಲಗಳು, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯ | ೧೬ ಮೇ ೨೦೧೪ - ೩ ಸೆಪ್ಟೆಂಬರ್ ೨೦೧೭ |
ಅಧಿಕಾರ ಅವಧಿ ೭ ನವೆಂಬರ್ ೨೦೦೦ – ೨೯ ಜನವರಿ ೨೦೦೩ | |
ಕಲ್ಲಿದ್ದಲು ಸಚಿವಾಲಯ | ೨೬ ಆಗಸ್ಟ್ ೨೦೦೨ - ೨೯ ಜನವರಿ ೨೦೦೩ |
ಗಣಿ ಸಚಿವಾಲಯ | ೨೬ ಅಗಸ್ಟ್ ೨೦೦೨ - ೨೯ ಜನವರಿ ೨೦೦೩ |
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ | ೭ ನವೆಂಬರ್ ೨೦೦೦ - ೨೫ ಅಗಸ್ಟ್ ೨೦೦೨ |
ಸಂಸತ್ ಸದಸ್ಯ, ಲೋಕಸಭೆ | |
ಅಧಿಕಾರ ಅವಧಿ ೧೬ ಮೇ ೨೦೧೪ – ೨೮ ಮೇ ೨೦೧೯ | |
ಪೂರ್ವಾಧಿಕಾರಿ | ಪ್ರದೀಪ್ ಜೈನ್ ಆದಿತ್ಯ |
ಉತ್ತರಾಧಿಕಾರಿ | ಅನುರಾಗ್ ಶರ್ಮಾ |
ಮತಕ್ಷೇತ್ರ | ಝಾನ್ಸಿ |
ಅಧಿಕಾರ ಅವಧಿ ೧೯೯೯ – ೨೦೦೪ | |
ಪೂರ್ವಾಧಿಕಾರಿ | ಸುಶೀಲ್ ಚಂದ್ರ ವರ್ಮಾ |
ಉತ್ತರಾಧಿಕಾರಿ | ಕೈಲಾಶ್ ಜೋಶಿ |
ಮತಕ್ಷೇತ್ರ | ಭೋಪಾಲ್ |
ಅಧಿಕಾರ ಅವಧಿ ೧೯೮೯ – ೧೯೯೯ | |
ಪೂರ್ವಾಧಿಕಾರಿ | ವಿದ್ಯಾವತಿ ಚತುರ್ವೇದಿ |
ಉತ್ತರಾಧಿಕಾರಿ | ಸತ್ಯವ್ರತ್ ಚತುರ್ವೇದಿ |
ಮತಕ್ಷೇತ್ರ | ಕಜುರಾಹೊ |
ಮಧ್ಯಪ್ರದೇಶದ ೧೫ ನೇ ಮುಖ್ಯಮಂತ್ರಿ | |
ಅಧಿಕಾರ ಅವಧಿ ೮ ಡಿಸೆಂಬರ್ ೨೦೦೩ – ೨೨ ಅಗಸ್ಟ್ ೨೦೦೪ | |
ಪೂರ್ವಾಧಿಕಾರಿ | ದಿಗ್ವಿಜಯ ಸಿಂಗ್ |
ಉತ್ತರಾಧಿಕಾರಿ | ಬಾಬುಲಾಲ್ ಗೌರ್ |
ಮಧ್ಯಪ್ರದೇಶ ವಿಧಾನಸಭೆ ಸದಸ್ಯ | |
ಅಧಿಕಾರ ಅವಧಿ 2003 (2003) – 2006 (2006) | |
ಪೂರ್ವಾಧಿಕಾರಿ | ಸ್ವಾಮಿ ಪ್ರಸಾದ್ ಲೋಧಿ |
ಉತ್ತರಾಧಿಕಾರಿ | ಕಪೂರ್ ಚಂದ್ ಘುವರಾ |
ಮತಕ್ಷೇತ್ರ | ಮಲ್ಹಾರಾ |
ಉತ್ತರ ಪ್ರದೇಶ ವಿಧಾನಸಭೆ ಸದಸ್ಯ | |
ಅಧಿಕಾರ ಅವಧಿ 2012 (2012) – 2014 (2014) | |
ಪೂರ್ವಾಧಿಕಾರಿ | ಅನಿಲ್ ಕುಮಾರ್ ಅಹಿರ್ವಾರ್ |
ಉತ್ತರಾಧಿಕಾರಿ | ಕಪ್ತಾನ್ ಸಿಂಗ್ |
ಮತಕ್ಷೇತ್ರ | ಚರ್ಖಾರಿ |
ವೈಯಕ್ತಿಕ ಮಾಹಿತಿ | |
ಜನನ | (1959-05-03) ೩ ಮೇ ೧೯೫೯ (ವಯಸ್ಸು ೬೫) ಟಿಕಮ್ಗಢ, ಮಧ್ಯಪ್ರದೇಶ, ಭಾರತ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಭಾರತಿ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ, ಪ್ರವಾಸೋದ್ಯಮ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಲ್ಲಿ ವಿವಿಧ ರಾಜ್ಯ-ಮಟ್ಟದ ಮತ್ತು ಕ್ಯಾಬಿನೆಟ್-ಮಟ್ಟದ ಖಾತೆಗಳನ್ನು ಹೊಂದಿದ್ದರು. ಇವರು ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ಮತ್ತು ಮೂರನೇ ಸಚಿವಾಲಯದ ಅವಧಿಯಲ್ಲಿ ಕಲ್ಲಿದ್ದಲು ಮತ್ತು ಗಣಿ ಇಲಾಖೆಯಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ೨೦೧೪ ರಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾದ ನಂತರ, ಅವರು ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನದ ಸಚಿವರಾಗಿ ನೇಮಕಗೊಂಡರು ಮತ್ತು ಸೆಪ್ಟೆಂಬರ್ ೨೦೧೭ ರವರೆಗೆ ಈ ಕಚೇರಿಯ ಕಾರ್ಯವನ್ನು ನಿರ್ವಸಿದರು.
೧೯೮೦ ಮತ್ತು ೧೯೯೦ ರ ದಶಕಗಳಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರಾಮ ಜನ್ಮಭೂಮಿ ಚಳವಳಿಯಲ್ಲಿ ಭಾರತಿ ಅವರು ಪ್ರಮುಖರಾಗಿದ್ದರು. ಅವರು ಬಾಬರಿ ಮಸೀದಿ ಧ್ವಂಸದಲ್ಲಿ ಹಾಜರಿದ್ದರು ಮತ್ತು ನಂತರ ಘಟನೆಯಲ್ಲಿ ಉಮಾ ಭಾರತಿ ಅವರ ವಿರುದ್ದ ಸಲ್ಲಿಸಲಾದ ಆರೋಪಗಳಿಗೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು.
೨೦೦೩ ರ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ, ಅವರು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದರು . ಅವರು ತಮ್ಮ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ ಎನ್ ಎಸ್) ಎದುರಾಳಿಯನ್ನು ಮಲೆಹ್ರಾ ಸ್ಥಾನದಿಂದ ೨೫ ಪ್ರತಿಶತ ಅಂತರದಿಂದ ಸೋಲಿಸಿದರು. ೧೯೯೪ ರ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿದಾಗ ಅವರು ಆಗಸ್ಟ್ ೨೦೦೪ ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯದ ನಂತರ, ಅವರು ಸ್ವಲ್ಪ ಸಮಯದವರೆಗೆ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು ಮತ್ತು ಉತ್ತರ ಪ್ರದೇಶ ರಾಜ್ಯದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ನಂತರ ಅವರು ಭಾರತದ ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ ಮರು ಆಯ್ಕೆಯಾದರು.
ಉಮಾ ಭಾರತಿ ಅವರನ್ನು ಸಾಂದರ್ಭಿಕವಾಗಿ ಹಿಂದೂ ಗೌರವಾನ್ವಿತ ಸಾಧ್ವಿ ಎಂಬ ಹೆಸರಿನಿಂದ ಸಂಬೋಧಿಸಲಾಗುತ್ತದೆ, ಇದು ಗೌರವಾನ್ವಿತ ಸಂಸ್ಕೃತ ಶೀರ್ಷಿಕೆಯಾಗಿದೆ.