From Wikipedia, the free encyclopedia
ವಿಲ್ಲಿಯಂ ಕ್ಯಾರಿ (ಆಗಸ್ಟ್ ೧೭, ೧೭೬೧ ರಿಂದ ಜೂನ್ ೯, ೧೮೩೪ ರವರೆಗೆ)ಯು ಇಂಗ್ಲಿಷ್ ಬ್ಯಾಪ್ಟಿಸ್ಟ್ಪ್ರಚಾರಕನಾಗಿದ್ದು "ಆಧುನಿಕ ನಿಯೋಗದ ಜನಕ" ಎಂದು ಕರೆಯಲ್ಪಡುವ ಸುಧಾರಣೆಗೊಂಡ ಬ್ಯಾಪ್ಟಿಸ್ಟ್ ಸಚಿವನಾಗಿದ್ದಾನೆ.[1] ಕ್ಯಾರಿಯು ಬ್ಯಾಪ್ಟಿಸ್ಟ್ ಧರ್ಮಪ್ರಚಾರಕ ಸಮಾಜದ ಸ್ಥಾಪಕರಲ್ಲಿ ಒಬ್ಬನಾಗಿದ್ದಾನೆ. ಭಾರತದ ಸೇರಂಪುರದ ಡ್ಯಾನಿಷ್ ಸಮುದಾಯದ ಧರ್ಮಪ್ರಚಾರಕನಾದ ಇವನು ಬೈಬಲ್ನ್ನು ಬಂಗಾಳಿ, ಸಂಸ್ಕೃತ ಮತ್ತು ಹಲವಾರು ಇನ್ನಿತರ ಭಾಷೆಗಳಿಗೆ ಮತ್ತು ಉಪಭಾಷೆಗಳಿಗೆ ಭಾಷಾಂತರಿಸಿದ್ದಾನೆ.
William Carey | |
---|---|
ಜನನ | Paulerspury, ಇಂಗ್ಲೆಂಡ್ | ೧೭ ಆಗಸ್ಟ್ ೧೭೬೧
ಮರಣ | 9 June 1834 72) Serampore, India | (aged
ಐವರು ಮಕ್ಕಳಲ್ಲಿ ಹಿರಿಯವನಾದ ಕ್ಯಾರಿಯು ನಾರ್ಥಾಂಪ್ಟನ್ಶೈರ್ನ ಪಾಲರ್ಪರಿ ಎಂಬ ಹಳ್ಳಿಯಲ್ಲಿ ಉದ್ಯೋಗದಲ್ಲಿ ನೇಕಾರರಾಗಿದ್ದ ಎಡ್ಮಂಡ್ ಮತ್ತು ಎಲಿಜಬೆತ್ ಕ್ಯಾರಿ ದಂಪತಿಗಳಿಗೆ ಜನಿಸಿದನು. ತನ್ನ ಆರನೇ ವಯಸ್ಸಿನಲ್ಲಿ ವಿಲಿಯಂ ಇಂಗ್ಲೆಂಡಿನ ಚರ್ಚಿನಲ್ಲಿ ಉನ್ನತ ಪದವಿಗೇರಿಸಲ್ಪಟ್ಟನು. ಅವನ ತಂದೆಯು ಪ್ಯಾರಿಶ್ ಕ್ಲರ್ಕ್ ಮತ್ತು ಗ್ರಾಮಶಾಲಾ ಶಿಕ್ಷಕರನ್ನು ನೇಮಕ ಮಾಡಿದನು. ಹುಡುಗನಾಗಿದ್ದಾಗ ಸಹಜವಾಗಿಯೇ ಅನ್ವೇಷಣಾಶೀಲ ಮನೋಭಾವ ಹೊಂದಿದ್ದ ಇವನು ಸ್ವಾಭಾವಿಕ ವಿಜ್ಞಾನ, ಅದರಲ್ಲೂ ವಿಶೇಷವಾಗಿ ಸಸ್ಯಶಾಸ್ತ್ರದತ್ತ ತೀವ್ರ ಆಸಕ್ತನಾಗಿದ್ದ. ಲ್ಯಾಟಿನ್ ಭಾಷೆಯನ್ನು ಸ್ವತಃ ಅರಿಯುವಂತಹ ಸಹಜವಾದ ಭಾಷಾ ಪಾಂಡಿತ್ಯವನ್ನು ಈತ ಹೊಂದಿದ್ದ.
೧೪ನೇ ವಯಸ್ಸಿನಲ್ಲಿ ಕ್ಯಾರಿಯ ತಂದೆಯು ಇವನನ್ನು ನಾರ್ಥಾಂಪ್ಟನ್ಶೈರ್ನ ಸಮೀಪದ ಹ್ಯಾಕ್ಲೆಟನ್ ಹಳ್ಳಿಯಲ್ಲಿ ಬೂಟು ತಯಾರಿಕೆಯ ತರಬೇತಿಗೆ ಸೇರಿಸಿದನು.[2] ಅವನ ಶಿಕ್ಷಕನಾದ ಕ್ಲಾರ್ಕೆ ನಿಕೋಲಸ್ ಇವನಂತೆಯೇ ಚರ್ಚಿನ ಬೆಂಬಲಿಗನಾಗಿದ್ದನು. ಆದರೆ, ಇನ್ನೊಬ್ಬ ಅಭ್ಯಾಸಿ ಜಾನ್ ವಾರ್ ಭಿನ್ನಮತೀಯನಾಗಿದ್ದನು. ಕೊನೆಯದಾಗಿ ಈತನ ಬೆಂಬಲದೊಂದಿಗೆ ಕ್ಯಾರಿ ಇಂಗ್ಲೆಂಡಿನ ಚರ್ಚ್ನ್ನು ತ್ಯಜಿಸಿ ಇತರ ಭಿನ್ನಮತೀಯರೊಂದಿಗೆ ಸೇರಿ ಹ್ಯಾಕ್ಲೆಟನ್ನಲ್ಲಿ ಸ್ಥಳೀಯ ಸ್ವಾಯತ್ತತೆಯನ್ನು ಹೊಂದಿರುವ ಮತ್ತು ಅದನ್ನು ಅನುಸರಿಸುವ ಪುಟ್ಟದಾದ ಚರ್ಚ್ ಒಂದನ್ನು ನಿರ್ಮಾಣ ಮಾಡಿದನು. ನಿಕೋಲಸ್ಗೆ ತರಬೇತಿ ನೀಡುತ್ತಿರುವ ಸಮಯದಲ್ಲೇ, ಅವನು ಕಾಲೇಜು ಶಿಕ್ಷಣ ಮುಗಿಸಿದ ಸ್ಥಳೀಯ ಹಳ್ಳಿಗರೊಬ್ಬರ ಸಹಾಯದಿಂದ ಗ್ರೀಕ್ ಭಾಷೆಯನ್ನು ಸ್ವತಃ ಕಲಿತುಕೊಂಡನು.
೧೭೭೯ರಲ್ಲಿ ನಿಕೋಲಸ್ ಮರಣಹೊಂದಿದಾಗ ಕ್ಯಾರಿ ಇನ್ನೊಬ್ಬ ಸ್ಥಳೀಯ ಬೂಟುತಯಾರಕನಿಗಾಗಿ ಕೆಲಸ ಮಾಡಲು ಆತನನ್ನು ಸೇರಿಕೊಂಡನು. ಥಾಮಸ್ ಓಲ್ಡ್, ಈತ ಓಲ್ಡ್ನ ಅತ್ತಿಗೆಯಾದ ಡರೋಥಿ ಪ್ಲಾಕೆಟ್ನ್ನು ೧೭೮೧ರಲ್ಲಿ ಮದುವೆಯಾದನು. ವಿಲ್ಲಿಯಂನಂತಲ್ಲದೆ, ಡರೋಥಿಯು ಅನಕ್ಷರಸ್ಥಳಾಗಿದ್ದು ಮದುವೆ ನೋಂದಣಿ ಪತ್ರದಲ್ಲಿ ಆಕೆಯ ಸಹಿಯು ಒರಟು ಶಿಲುಬೆ ಮಾತ್ರವಾಗಿತ್ತು. ವಿಲ್ಲಿಯಂ ಮತ್ತು ಡರೋಥಿ ಕ್ಯಾರಿ ಐವರು ಗಂಡು ಮತ್ತು ಎರಡು ಹೆಣ್ಣು ಮಕ್ಕಳ ಸಹಿತ ಏಳು ಜನ ಮಕ್ಕಳನ್ನು ಹೊಂದಿದ್ದರು. ಎರಡೂ ಹೆಣ್ಣುಮಕ್ಕಳು ಬಾಲ್ಯದಲ್ಲಿಯೇ ಮರಣಹೊಂದಿದ್ದು ಅವರ ಮಗನಾದ ಪೀಟರ್ ತನ್ನ ಐದನೇ ವಯಸ್ಸಿನಲ್ಲೇ ಮರಣಹೊಂದಿದ್ದನು. ನಂತರ ಸ್ವಲ್ಪ ಸಮಯದಲ್ಲೇ ಓಲ್ಡ್ ಕೂಡಾ ಮರಣಹೊಂದಿದನು ಮತ್ತು, ಆ ಸಮಯದಲ್ಲಿ ಹೆಬ್ರ್ಯೂ, ಇಟಾಲಿಯನ್, ಡಚ್ ಮತ್ತು ಫ್ರೆಂಚ್ ಭಾಷೆಗಳನ್ನು ಸ್ವಯಂ ಅಭ್ಯಾಸ ಮಾಡಿ ಬೂಟಿನೊಂದಿಗೆ ಕೆಲಸ ಮಾಡುತ್ತಿರುವಾಗ ಸದಾ ಓದುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಕ್ಯಾರಿ ಆತನ ವ್ಯವಹಾರವನ್ನು ತನ್ನ ಕೈಗೆ ತೆಗೆದುಕೊಂಡನು.
ನಂತರದಲ್ಲಿ ಆಗಷ್ಟೇ ರಚಿತವಾದ ಸ್ಥಳೀಯ ವಿಶೇಷ ಬ್ಯಾಪ್ಟಿಸ್ಟ್ಗಳ ಸಹಯೋಗದೊಂದಿಗೆ ಕ್ಯಾರಿ ಬೆರೆಯಲ್ಪಟ್ಟನು. ಇಲ್ಲಿ ಆತ ಜಾನ್ ರೈಲ್ಯಾಂಡ್, ಜಾನ್ ಸಟ್ಕ್ಲಿಫ್ ಮತ್ತು ಆಂಡ್ರ್ಯೂ ಫುಲ್ಲರ್ರ ಪರಿಚಯ ಹೊಂದಿ ನಂತರದ ವರ್ಷಗಳಲ್ಲಿ ಇವರು ಈತನ ಆಪ್ತ ಗೆಳೆಯರಾದರು. ಅರ್ಲ್ಸ್ ಬಾರ್ಟನ್ ಸಮೀಪದ ತಮ್ಮ ಚರ್ಚಿನಲ್ಲಿ ಪ್ರತಿ ಪರ್ಯಾಯ ಭಾನುವಾರಗಳಲ್ಲಿ ಬೋಧನೆ ನೀಡುವಂತೆ ಅವರು ಈತನನ್ನು ಆಹ್ವಾನಿಸಿದರು. ೧೭೮೩ರ ಅಕ್ಟೋಬರ್ ೫ ರಂದು ವಿಲ್ಲಿಯಂ ಕ್ಯಾರಿಯು ರೈಲ್ಯಾಂಡ್ರಿಂದ ಬ್ಯಾಪ್ಟಿಸ್ಟ್ ಪದವಿ ಪಡೆದನು ಮತ್ತು ಬ್ಯಾಪ್ಟಿಸ್ಟ್ ಪಂಥಕ್ಕೆ ತನ್ನನ್ನು ಅರ್ಪಿಸಿಕೊಂಡನು.
೧೭೮೫ರಲ್ಲಿ ಕ್ಯಾರಿ ಮೌಲ್ಟನ್ ಗ್ರಾಮಕ್ಕೆ ಶಾಲಾಶಿಕ್ಷಕನೋರ್ವನನ್ನು ನೇಮಕ ಮಾಡಿದನು. ಅವನು ಕೂಡಾ ಸ್ಥಳೀಯ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ಉಪದೇಶ ನೀಡಲು ಆಹ್ವಾನಿಸಲ್ಪಟ್ಟನು. ಈ ಸಮಯದಲ್ಲಿ ಅವನು ಜೊನಾಥನ್ ಎಡ್ವರ್ಡ್ರ "ಅಕೌಂಟ್ ಆಫ್ ದ ಲೈಫ್ ಆಫ್ ದ ಲೇಟ್ ರೆವೆರೆಂಡ್ ಡೇವಿಡ್ ಬ್ರೈನರ್ಡ್" ಮತ್ತು ಪರಿಶೋಧಕ ಜೇಮ್ಸ್ ಕುಕ್ನ ನಿಯತಕಾಲಿಕಗಳನ್ನು ಓದಿದನು ಮತ್ತು ಪ್ರಪಂಚದೆಲ್ಲೆಡೆ ಕ್ರೈಸ್ತರ ಜೀವನ ಚರಿತ್ರೆಯನ್ನು ಪ್ರಸಾರಮಾಡುವಲ್ಲಿ ಆಳವಾದ ಆಸ್ಥೆವಹಿಸಿದನು. ಆತನ ಗೆಳೆಯ ಆಂಡ್ರ್ಯೂ ಫುಲ್ಲರ್ ಈ ಮೊದಲೇ ೧೭೮೧ರಲ್ಲಿ, ಆ ಕಾಲದಲ್ಲಿ ಅತಿಯಾಗಿ ಪ್ರಚಲಿತವಾಗಿದ್ದ ಎಲ್ಲಾ ಪುರುಷರು ಕ್ರೈಸ್ತ ಜೀವನಚರಿತ್ರೆಯನ್ನು ನಂಬಲು ಜವಾಬ್ಧಾರರಾಗಿರಲಿಲ್ಲ ಎಂಬ ಕ್ಯಾಲ್ವಿನ್ ಪಂಥೀಯರ ನಂಬಿಕೆಗಳಿಗೆ ಉತ್ತರವಾಗಿ "ದ ಗೋಸ್ಪೆಲ್ ವರ್ಥಿ ಆಫ್ ಆಲ್ ಅಸೆಪ್ಟೇಶನ್" ಎಂಬ ಶೀರ್ಷಿಕೆಯುಳ್ಳ ಪ್ರಭಾವಶಾಲಿ ಹಸ್ತಪತ್ರಿಕೆಗಳನ್ನು ಬರೆದನು. ೧೭೮೬ರಲ್ಲಿ ನಡೆದ ಸಚಿವರೊಂದಿಗಿನ ಬೇಟಿಯಲ್ಲಿ ಕ್ಯಾರಿ ಕ್ರೈಸ್ತ ತತ್ವಗಳನ್ನು ಪ್ರಪಂಚದುದ್ದಕ್ಕೂ ಹರಡುವುದು ಎಲ್ಲಾ ಕ್ರೈಸ್ತರ ಕರ್ತವ್ಯವೇ ಎಂಬ ಪ್ರಶ್ನೆಯೆತ್ತಿದನು. ಜಾನ್ ರೈಲ್ಯಾಂಡ್ನ ತಂದೆ ಜೆ. ಆರ್ ರೈಲಾಂಡ್, "ತರುಣನೇ, ಕುಳಿತುಕೋ; ಅಕ್ರೈಸ್ತರನ್ನು ಪರಿವರ್ತಿಸಲು ದೇವರು ಇಚ್ಛಿಸಿದಾಗ ಅದನ್ನು ಅವನು ನನ್ನ ಅಥವಾ ನಿನ್ನ ನೆರವಿಲ್ಲದೆಯೇ ಮಾಡುತ್ತಾನೆ" ಎಂದು ಪ್ರತ್ಯುತ್ತರ ನೀಡಿದನು ಎಂದು ಹೇಳಲಾಗಿದೆ. ಆದಾಗ್ಯೂ, ರೈಲಾಂಡ್ನ ಮಗ ಕಿರಿಯ ಜಾನ್ ರೈಲಾಂಡ್ ತನ್ನ ತಂದೆಯು ಈ ರೀತಿಯ ಹೇಳಿಕೆಯನ್ನು ಹೇಳಿದ್ದಾನೆ ಎಂಬುದನ್ನು ಪ್ರತಿಭಟಿಸಿದನು.[3]
೧೭೮೯ ರಲ್ಲಿ ಕ್ಯಾರಿ ಲೀಸೆಸ್ಟರ್ನ ಸಣ್ಣ ಬ್ಯಾಪ್ಟಿಸ್ಟ್ ಚರ್ಚಿನ ಪೂರ್ಣಕಾಲಿಕ ಬೋಧಕನಾದನು. ಮೂರು ವರ್ಷಗಳ ನಂತರ, ೧೭೯೨ರಲ್ಲಿ ಅವನು "ಆನ್ ಎಂಕ್ವಯರಿ ಇನ್ ಟು ದ ಆಬ್ಲಿಗೇಶನ್ಸ್ ಆಫ್ ಕ್ರಿಸ್ತಿಯನ್ಸ್ ಟು ಯೂಸ್ ಮೀನ್ಸ್ ಫಾರ್ ದ ಕನ್ವರ್ಶನ್ ಆಫ್ ದ ಹಿದನ್ಸ್" ಎಂಬ ನೆಲಬಿರಿಯುವಂತಹ ಧರ್ಮಪ್ರಚಾರಕ, ಸಾರ್ವಜನಿಕ ಘೋಷಣೆಯನ್ನು ಹೊತ್ತ ಪುಸ್ತಕವನ್ನು ಪ್ರಕಟಿಸಿದನು. ಈ ಚಿಕ್ಕ ಪುಸ್ತಕ ಐದು ಭಾಗಗಳನ್ನು ಹೊಂದಿತ್ತು. ಮೊದಲ ಭಾಗವು ಜಗತ್ತಿನ ಎಲ್ಲಾ ಕ್ರೈಸ್ತಾನುಯಾಯಿಗಳು ಕ್ರೈಸ್ತರೊಡನೆ ಬಂಧಿಸಲ್ಪಟ್ಟಿದ್ದಾರೆ ಎಂಬ ಜೀಸಸ್ನ ಆದೇಶವನ್ನು (ಮ್ಯಾಥ್ಯೂ ೨೮:೧೮-೨೦) ವಾದಿಸುವುದರೊಂದಿಗೆ ಧರ್ಮಪ್ರಚಾರಕ ನಿಯೋಗದ ಕಾರ್ಯಚಟುವಟಿಕೆಗಳ ಬಗೆಗಿನ ಮತಧರ್ಮಶಾಸ್ತ್ರೀಯ ಸಮರ್ಥನೆಯಾಗಿದೆ. ಎರಡನೇ ಭಾಗವು ಧರ್ಮಪ್ರಚಾರಕ ನಿಯೋಗದ ಕಾರ್ಯಚಟುವಟಿಕೆಗಳ ಚರಿತ್ರೆಯ ರೂಪರೇಖೆಗಳಾಗಿದ್ದು ಚರ್ಚ್ ಪೂರ್ವದ ವಿಚಾರಗೊಳೊಂದಿಗೆ ಆರಂಭಗೊಂಡು ಡೇವಿಡ್ ಬ್ರೈನಾರ್ಡ್ ಮತ್ತು ಜಾನ್ ವೆಸ್ಲಿಯರೊಂದಿಗೆ ಕೊನೆಗೊಳ್ಳುತ್ತದೆ. ಮೂರನೇ ಭಾಗವು ೨೬ ಪುಟಗಳ ಕೋಷ್ಟಕಗಳನ್ನು ಹೊಂದಿದ್ದು ಪ್ರಪಂಚದ ಎಲ್ಲಾ ರಾಷ್ಟ್ರಗಳ ಪ್ರದೇಶ, ಜನಸಂಖ್ಯೆ ಮತ್ತು ಧಾರ್ಮಿಕ ಅಂಕಿಅಂಶಗಳನ್ನು ಹೊಂದಿದೆ. ತಾನು ಶಾಲಾ ಶಿಕ್ಷಕನಾಗಿದ್ದ ವರ್ಷಗಳನ್ನು ಇವನ್ನೆಲ್ಲಾ ಕ್ಯಾರಿ ಸಂಗ್ರಹಿಸಿದ್ದನು. ನಾಲ್ಕನೇ ಭಾಗವು ಭಾಷಾ ಕಲಿಕೆಯ ಕ್ಲಿಷ್ಟತೆ ಅಥವಾ ಬದುಕಿನ ಅಪಾಯಗಳ ಮೇರೆಗೆ ಧರ್ಮಪ್ರಚಾರಕ ಕೇಂದ್ರಗಳಿಗೆ ಕಳುಹಿಸುವಲ್ಲಿನ ವಿರೋಧಕ್ಕೆ ಉತ್ತರವಾಗಿದೆ. ಕೊನೆಯದಾಗಿ, ಐದನೇ ಭಾಗವು ಧರ್ಮಪ್ರಚಾರಕ ಸಮಾಜದ ರಹನೆಗಾಗಿ ಬ್ಯಾಪ್ಟಿಸ್ಟ್ ಪಂಥದ ಕರೆಗಳನ್ನು ಹೊಂದಿದ್ದು ಇದು ತಾನು ಬೆಂಬಲಿಸಬಹುದಾದ ಪ್ರಾಯೋಗಿಕ ಯೋಜನೆಗಳನ್ನು ವಿವರಿಸುತ್ತದೆ. ಕ್ಯಾರಿಯ ಮೂಲ ಹಸ್ತಪತ್ರಿಕೆಯು ಧರ್ಮಪ್ರಚಾರಕೇಂದ್ರದ ತಳಹದಿಯ ರೂಪರೇಖೆಗಳನ್ನು ಅಂದರೆ, ಕ್ರೈಸ್ತ ನಿರ್ಬಂಧಗಳು, ಲಭ್ಯವಿರುವ ಸಂಪನ್ಮೂಲಗಳ ಸೂಕ್ಷ್ಮ ಬಳಕೆ ಮತ್ತು ನಿಖರವಾದ ಮಾಹಿತಿ ಇವುಗಳನ್ನು ಸೂಚಿಸುತ್ತದೆ.
ನಂತರದಲ್ಲಿ ಕ್ಯಾರಿ ಧರ್ಮಪ್ರಚಾರಕ ಕೇಂದ್ರಗಳ ಧರ್ಮಬೋಧನೆಗಳನ್ನು (ಅಂತ್ಯರಹಿತ ಧರ್ಮಬೋಧನೆ) ಇಸಾಯಿ ೫೪:೨-೩ನ್ನು ಎಂಬುದನ್ನು ತನ್ನ ಪಠ್ಯವನ್ನಾಗಿ ಬಳಸಿಕೊಂಡು ತನ್ನ ಚಮಾತ್ಕಾರೀ ಚುಟುಕವನ್ನು ಪದೇ ಪದೇ ಬಳಸಿದ್ದು ಅಲ್ಲದೆ ಇದು ಅವನ ಸುಪ್ರಸಿದ್ಧ ಉಲ್ಲೇಖಿತ ಪಠ್ಯವಾಗಿದ್ದು, ಈ ಮೂಲಕ ಅದನ್ನು ಸಮರ್ಥಿಸಿಕೊಂಡನು.
“ | Expect great things from God; attempt great things for God. | ” |
ಕೊನೆಗೆ ಕ್ಯಾರಿಯು ಧರ್ಮಪ್ರಚಾರಕ ಕೇಂದ್ರಗಳ ಪ್ರಯತ್ನಗಳಿಗಿದ್ದ ಎಲ್ಲಾ ಪ್ರತಿಬಂಧಗಳನ್ನು ಜಯಿಸಿದನು ಮತ್ತು ಕ್ರೈಸ್ತ ಧರ್ಮಶಾಸ್ತ್ರವನ್ನು ಅಕ್ರೈಸ್ತರಿಗೆ ಹರಡಲು ವಿಶೇಷ ಬ್ಯಾಪ್ಟಿಸ್ಟ್ ಸಮಾಜವು (ಆ ಬಳಿಕ ಬ್ಯಾಪ್ಟಿಸ್ಟ್ ಮಿಶನರಿ ಸೊಸೈಟಿ ಎಂದು ಗುರುತಿಸಲ್ಪಟ್ಟ ಮತ್ತು ೨೦೦೦ ದ ಬಳಿಕ ಬಿಎಮ್ಎಸ್ ವರ್ಲ್ಡ್ ಮಿಶನ್ ಎಂದು ಕರೆಯಲ್ಪಟ್ಟ.) ೧೭೯೨ರ ಅಕ್ಟೋಬರ್ನಲ್ಲಿ ಸ್ಥಾಪನೆಗೊಂಡು ಕ್ಯಾರಿ, ಆಂಡ್ರ್ಯೂ ಫುಲ್ಲರ್, ಜಾನ್ ರೈಲಾಂಡ್ ಮತ್ತು ಜಾನ್ ಸಟ್ಕ್ಲಿಫ್ರನ್ನು ವಿಶೇಷಾಧಿಕಾರವುಳ್ಳ ಸದಸ್ಯರನ್ನಾಗಿ ಹೊಂದಿತ್ತು. ಅವರು ಹಣ ಸಂಗ್ರಹಿಸುವ ಯೋಜನೆ ಅಂತೆಯೇ, ಎಲ್ಲಿ ಮತ್ತು ಹೇಗೆ ತಮ್ಮ ಪ್ರಯತ್ನಗಳನ್ನು ಸಫಲಗೊಳಿಸಬಹುದು ಇತ್ಯಾದಿ ವ್ಯವಹಾರೋಪಯುಕ್ತ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ತಮ್ಮಷ್ಟಕ್ಕೆ ತಾವೇ ಚಿಂತಿಸಬಹುದಾಗಿತ್ತು. ವೈದ್ಯಕೀಯ ನಿಯೋಗ, ಡಾ.ಜಾನ್ ಥಾಮಸ್ ಕಲ್ಕತ್ತಾಗೆ ಬಂದಿದ್ದು ಪ್ರಸ್ತುತ ಇಂಗ್ಲೆಂಡಿನಲ್ಲಿ ಧನ ಸಂಗ್ರಹಿಸುವ ಜವಾಬ್ಧಾರಿಹೊತ್ತಿದ್ದು ಅವರು ಆತನನ್ನು ಬೆಂಬಲಿಸಲು ಒಪ್ಪಿದರು ಮತ್ತು ಕ್ಯಾರಿ ಅವರನ್ನು ಭಾರತದಲ್ಲಿ ಬೆಂಬಲಿಸಲಿದ್ದನು.
ಕ್ಯಾರಿ, ಆತನ ಹಿರಿಯ ಪುತ್ರ ಫೆಲಿಕ್ಸ್, ಥಾಮಸ್ ಮತ್ತು ಆತನ ಪತ್ನಿ ಮತ್ತು ಮಗಳು ೧೭೯೩ರ ಎಪ್ರಿಲ್ನಲ್ಲಿ ಲಂಡನ್ನಿಂದ ಇಂಗ್ಲಿಷ್ ನೌಕೆಯೊಂದನ್ನು ಏರಿ ಪ್ರಯಾಣ ಆರಂಭಿಸಿದರು. ಡರೋಥಿ ಕ್ಯಾರಿ ತಾನು ತಮ್ಮ ನಾಲ್ಕನೇ ಮಗನ ಗರ್ಭವತಿಯಾದುದರಿಂದ ಹಾಗೂ ಮನೆಯಿಂದ ಕೇವಲ ಕೆಲವು ಮೈಲುಗಳಷ್ಟೇ ಪ್ರಯಾಣ ಮಾಡಬಹುದಾದ್ದರಿಂದ ಇಂಗ್ಲೆಂಡ್ನಿಂದ ಹೊರಡಲು ಆಕೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದಳು. ಆದರೆ, ಅವರು ಇಂಗ್ಲೆಂಡ್ ಬಿಡುವುದಕ್ಕಿಂತ ಮೊದಲು ಮತ್ತೊಮ್ಮೆ ಆಕೆಯನ್ನು ತಮ್ಮೊಂದಿಗೆ ಬರುವಂತೆ ಕರೆದರು ಮತ್ತು ಆಕೆ ಸ್ವಇಚ್ಛೆಯಿಂದ ಹಾಗೂ ಪೂರ್ಣ ಅರಿವಿನಿಂದ ತನ್ನ ಸಹೋದರಿಯಾದ ಕಿಟ್ಟಿಯು ತನ್ನ ಹೆರಿಗೆ ಸಂದರ್ಭದಲ್ಲಿ ಸಹಾಯ ಮಾಡಬಲ್ಲಳು ಎಂದು ಹೇಳಿ ತಾನು ಬರುವುದನ್ನು ನಿರಾಕರಿಸಿದಳು. ಇವರ ಪ್ರಯಾಣವು ವೈಟ್ ದ್ವೀಪದಲ್ಲಿ ವಿಳಂಬವಾಯಿತು. ಈ ಸಮಯದಲ್ಲಿ ನೌಕಾಧಿಕಾರಿಯು ವಿಶೇಷವಾರ್ತೆಯನ್ನೊಂದನ್ನು ಕೇಳಿದನು, ಅದು, ಅವನು ಈ ಧರ್ಮ ಪ್ರಚಾರಕರನ್ನು ಕಲ್ಕತ್ತಾಗೆ ತಲುಪಿಸಿದರೆ ಆತ ತನ್ನನ್ನು ತಾನು ವಿಪತ್ತಿಗೆ ಸಿಲುಕಿಸಿಕೊಳ್ಳುತ್ತಾನೆ ಮತ್ತು ಇದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರ ಏಕಸ್ವಾಮ್ಯ ನೀತಿಯನ್ನು ಉಲ್ಲಂಘಿಸುವಂತಿದ್ದು ಈ ಪ್ರಯಾಣವು ಅನಧಿಕೃತವಾದುದು ಎಂಬುದಾಗಿತ್ತು. ಇದರಿಂದಾಗಿ ಆತ ಈ ಧರ್ಮಪ್ರಚಾರಕರನ್ನು ಬಿಟ್ಟು ಪ್ರಯಾಣ ಮುಂದುವರಿಸಲು ನಿರ್ಧರಿಸಿದನು. ಹಾಗೆಯೇ ಇವರ ಪ್ರಯಾಣವು ಮುಂದಿನ ಜೂನ್ವರೆಗೆ ತಡೆಹಿಡಿಯಲ್ಪಟ್ಟು ನಂತರದಲ್ಲಿ ಥಾಮಸ್ ಇನ್ನೋರ್ವ ಡ್ಯಾನಿಶ್ ಕ್ಯಾಪ್ಟೈನ್ನನ್ನು ಕಂಡು ಆತ ಇವರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟನು. ಇದೇ ಸಮಯದಲ್ಲಿ ಕ್ಯಾರಿಯ ಪತ್ನಿ ಪ್ರಸವಿಸಿದ್ದು ತನ್ನ ಸಹೋದರಿಯೊಂದಿಗೆ ಪ್ರಯಾಣದಲ್ಲಿ ಇವನನ್ನು ಸೇರಿಕೊಳ್ಳಲು ಒಪ್ಪಿದಳು. ನವಂಬರ್ ತಿಂಗಳಲ್ಲಿ ಇವರು ಕಲ್ಕತ್ತಾಗೆ ಬಂದಿಳಿದರು.
ಕಲ್ಕತ್ತಾದಲ್ಲಿ ಮೊದಲನೇ ವರ್ಷದಲ್ಲಿ ಈ ಧರ್ಮಪ್ರಚಾರಕರು ತಮಗೆ ತಾವೇ ಬೆಂಬಲಿಸಿಕೊಳ್ಳಲಿಚ್ಛಿಸಿದರು ಮತ್ತು ತಮ್ಮ ನಿಯೋಗವನ್ನು ಸ್ಥಾಪಿಸಲು ಸೂಕ್ತ ಸ್ಥಳವನ್ನು ಬಯಸಿದರು. ಸ್ಥಳೀಯರೊಂದಿಗೆ ಸಂಪರ್ಕ ಸಾಧಿಸುವ ಸಲುವಾಗಿ ಅವರು ಬಂಗಾಳಿ ಭಾಷೆಯನ್ನೂ ಸಹ ಕಲಿಯತೊಡಗಿದರು. ಥಾಮಸ್ನ ಗೆಳೆಯನೋರ್ವನು ಎರಡು ಇಂಡಿಗೋ ಫ್ಯಾಕ್ಟರಿಗಳನ್ನು ಸ್ವಾಧೀನಪಡಿಸಿಕೊಂಡನು ಮತ್ತು ಇದಕ್ಕಾಗಿ ಆತನಿಗೆ ವ್ಯವಸ್ಥಾಪಕರ ಅಗತ್ಯವಿತ್ತು. ಆದುದರಿಂದ ಕ್ಯಾರಿ ತನ್ನ ಕುಟುಂಬದೊಂದಿಗೆ ಉತ್ತರದಿಂದ ಮಿಡ್ನಾಪುರದತ್ತ ಚಲಿಸಿದನು. ಇಂಡಿಗೋ ಸ್ಥಾವರವನ್ನು ಕ್ಯಾರಿ ಆರು ವರ್ಷಗಳ ಕಾಲ ನಿರ್ವಹಿಸುವ ಸಂದರ್ಭದಲ್ಲಿ ಆತನು ತನ್ನ ಹೊಸ ಬಂಗಾಳೀ ಒಡಂಬಡಿಕೆಗಳ ಪುನರಾವರ್ತನೆಯನ್ನು ಮುಗಿಸಿದನು ಮತ್ತು ಸಮುದಾಯ ಜೀವನ, ಆರ್ಥಿಕ ಸ್ವಾವಲಂಭನೆ ಮತ್ತು ಸ್ಥಳೀಯ ಸಚಿವರುಗಳನ್ನು ತರಬೇತಿಗೊಳಿಸುವುದೇ ಮೊದಲಾದ ತನ್ನ ಧರ್ಮಪ್ರಚಾರಕ ಕೇಂದ್ರ ಸಮುದಾಯಗಳು ಪ್ರಸ್ತುತಪಡಿಸಿದ ತತ್ವಗಳನ್ನು ಸೂತ್ರೀಕರಿಸಲು ಸಿದ್ಧತೆ ನಡೆಸಿದನು. ಆತನ ಮಗ ಪೀಟರ್ ಆಮಶಂಕೆ ವ್ಯಾಧಿಯಿಂದ ಮರಣಹೊಂದಿದನು ಮತ್ತು ಇದರಿಂದ ನರದೌರ್ಬಲ್ಯಕ್ಕೊಳಗಾಗಿ ಬಳಲಿದ ಡರೋಥಿಯು ಮತ್ತೆ ಚೇತರಿಸಿಕೊಳ್ಳಲೇ ಇಲ್ಲ.
ಇದೇ ಸಂದರ್ಭದಲ್ಲಿ ಧರ್ಮಪ್ರಚಾರಕ ಸಮಾಜವು ಭಾರತಕ್ಕೆ ಇನ್ನೂ ಹೆಚ್ಚಿನ ಪ್ರಚಾರಕರನ್ನು ಕಳುಹಿಸಲು ಆರಂಭಿಸಿದುವು. ಮೊತ್ತಮೊದಲ ಭಾರಿಗೆ ಬಂದವನೆಂದರೆ, ಮಿಡ್ನಾಪುರದಲ್ಲಿ ಬಂದಿಳಿದು ಶಾಲೆಯಲ್ಲಿ ಬೋಧಿಸಲಾರಂಭಿಸಿದ ಜಾನ್ ಫೌಂಟೈನ್. ಅನಂತರದಲ್ಲಿ ಇವನ ಹಿಂದೆ ಬಂದವರೆಂದರೆ, ಮುದ್ರಕನಾದ ವಿಲಿಯಮ್ ವಾರ್ಡ್, ಶಾಲಾ ಶಿಕ್ಷಕನಾದ ಜೋಶಾ ಮಾರ್ಶ್ಮ್ಯಾನ್, ಮಾರ್ಶ್ಮ್ಯಾನ್ನ ವಿದ್ಯಾರ್ಥಿಗಳಲ್ಲೊಬ್ಬನಾದ ಡೇವಿಡ್ ಬ್ರನ್ಸ್ಡನ್ ಮತ್ತು ತಾನು ಬಂದ ಮೂರು ವಾರಗಳಲ್ಲೇ ಮೃತನಾದ ವಿಲಿಯಮ್ ಗ್ರಾಂಟ್. ಈ ಧರ್ಮ ಪ್ರಚಾರಕ ಕೇಂದ್ರಗಳಿಗೆ ಈಸ್ಟ್ ಇಂಡಿಯಾ ಕಂಪನಿಯಿನ್ನೂ ಶತ್ರುವಾಗಿದ್ದುದರಿಂದ, ಅವರು ಸೇರಂಪುರದ ಡ್ಯಾನಿಷ್ ಪ್ರದೇಶದಲ್ಲೇ ನೆಲೆಸಿದರು ಮತ್ತು ೧೮೦೦ ರ ಜನವರಿ ೧೦ರ ವೇಳೆಗೆ ಕ್ಯಾರಿಯನ್ನು ಸೇರಿಕೊಂಡರು.
ಸೆರಮ್ಪುರದಲ್ಲಿ ಒಂದು ಬಾರಿ ಅಸ್ಥಿತ್ವಕ್ಕೆ ಬರುವ ಹಂತಗಳು ಮುಗಿದನಂತರ , ಸಂಘಟನೆಯು ಪ್ರಾಂಶುಪಾಲರ ಸಹಕಾರದೊಂದಿಗೆ ತನ್ನೆಲ್ಲ ಸಂಸಾರಗಳು ವಾಸಿಸುವಷ್ಟು ಮತ್ತು ಒಂದು ಶಾಲೆಗೆ ಸಾಕಾಗುವಷ್ಟು ದೊಡ್ಡದಾದ ಮನೆಯನ್ನು ಖರೀದಿಸಿತು. ಕ್ಯಾರಿ ಅವರು ಹಳೆಯ ಮುದ್ರಣಯಂತ್ರವೊಂದನ್ನು ಖರೀದಿಸಿ ಬೆಂಗಾಲಿಯಲ್ಲಿ ಬೈಬಲ್ನ್ನು ಮುದ್ರಿಸತೊಡಗಿದರು. ೧೮೦೦ರಲ್ಲಿ ಫೌಂಟೆನ್ ಅವರು ಅತೀಬೆದಿಯಿಂದಾಗಿ ಮರಣಿಸಿದರು. ವರ್ಷಾಂತ್ಯದ ವೇಳೆಗೆ ಸಂಘಟನೆಯು ತನ್ನ ಮೊದಲ ಆವೃತ್ತಿಯನ್ನು ಬೆಂಗಾಲಿಯಲ್ಲಿ ಹಿಂದುವಾದ ಕೃಷ್ಣಾ ಪಾಲ್ ಅವರ ಪ್ರಕಾಶನದಲ್ಲಿ ಹೊರತಂದಿತು. ಡ್ಯಾನಿಷ್ ಸರ್ಕಾರದಿಂದಲೂ ಮತ್ತು ರಿಚರ್ಡ್ ವೆಲ್ಲೆಸ್ಲಿಯವರಿಂದಲೂ ಮತ್ತು ಭಾರತದ ಗವರ್ನರ್ ಜನರಲ್ ಇವರಿಂದಲೂ ಈ ಕಾರ್ಯವು ಮೆಚ್ಚುಗೆಯನ್ನು ಪಡೆಯಿತು.
ಹಿಂದುಗಳನ್ನು ಕ್ರಿಶ್ವಿಯನ್ನರನ್ನಾಗಿ ಪರಿವರ್ತಿಸುವಾಗ, ಅವರುಗಳನ್ನು ಅದೇ ಜಾತಿಯ ಹೆಸರಿನಡಿಯಲ್ಲಿ ಇರಿಸುವುದೋ ಹೇಗೆ? ಎಂಬ ಪ್ರಶ್ನೆಯು ಸಂಘಟನೆಯನ್ನು ಕಾಡಿತು. ೧೮೦೨ ರಲ್ಲಿ ಕೃಷ್ಣ ಪಾಲ್ ಅವರ ಮಗಳಾದ ಸುದ್ರಾ ಅವರು ಒಬ್ಬ ಬ್ರಾಹ್ಮಣನನ್ನು ಮದುವೆಯಾದಳು. ಈ ಮದುವೆಯು ಜಾತಿಯಲ್ಲಿನ ಬೇಧಬಾವವನ್ನು ಚರ್ಚ್ ಸಮ್ಮತಿಸುದಿಲ್ಲ ಎಂದು ಸಾರ್ವಜನಿಕರಿಗೆ ತೋರಿಸಲು ಒಂದು ವೇದಿಕೆಯಾಯಿತು.
ಬ್ರನ್ಸ್ಡಾನ್ ಮತ್ತು ಥಾಮಸ್ ಅವರು ೧೮೦೧ರಲ್ಲಿ ಮರಣಿಸಿದರು. ಅದೇ ವರ್ಷದಲ್ಲಿ ಗವರ್ನರ್ ಜನರಲ್ ಅವರು ಸಾರ್ವಜನಿಕ ಸೇವೆಯಲ್ಲಿರುವವರನ್ನು ಶೀಕ್ಷಿತರನ್ನಾಗಿ ಮಾಡುವ ಸಲುವಾಗಿ ಪೋರ್ಟ್ ವಿಲಿಯಂ ಎಂಬ ಕಾಲೆಜನ್ನು ಪ್ರಾರಂಭಿಸಿದರು. ಇಲ್ಲಿ ಕ್ಯಾರಿಯವರನ್ನು ಬೆಂಗಾಲಿ ಫ್ರೊಫೆಸರ್ ಆಗಿ ಕಾರ್ಯನಿರ್ವಹಿಸುವಂತೆ ಕೋರಿಕೊಂಡರು. ಕಾಲೇಜಿನಲ್ಲಿ ಕ್ಯಾರಿಯವರ ಸಹೊದ್ಯೋಗಿಗಳಲ್ಲಿ ಪಂಡಿತ್ ಸಮುದಾಯದವರೂ ಇದ್ದರು. ಇದರಿಂದಾಗಿ ಅವರು ಬಂಗಾಲಿಯಲ್ಲಿ ಯಾವುದಾದರು ಸಂಶಯಗಳಿದ್ದರೆ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಅವರು ಬೆಂಗಾಲಿ ಮತ್ತು ಸಂಸ್ಕ್ರತದ ವ್ಯಾಕರಣಗಳನ್ನು ಬರೆದರು ನಂತರ ಅವರು ಬೈಬಲ್ನ್ನು ಸಂಸ್ಕ್ರತಕ್ಕೆ ಬಾಷಾಂತರಿಸಲು ಪ್ರಾರಂಭಿಸಿದರು. ಸತಿ ಪದ್ದತಿ ಮತ್ತು ಮಕ್ಕಳನ್ನು ಬಲಿಕೊಡುವ ಕ್ರಮಗಳನ್ನು ತಡೆಯುವ ಸಲುವಾಗಿ ಗವರ್ನರ್ ಜನರಲ್ ಇವರ ಪ್ರಭಾವವನ್ನು ಬಳಸಿಕೊಂಡರು(ಆದರೂ ೧೮೨೯ ರ ವರೆಗೆ ಸತಿ ಪದ್ದತಿಯನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ). ಮತ್ತು ಹಿಂದೂ ಧರ್ಮದ ಪ್ರಕಾರ ಈ ಪದ್ದತಿಗಳಿಗೆ ಯಾವುದೇ ಗ್ರಂಥಗಳ ಅಥವಾ ಯಾವುದೇ ಲಿಖಿತ ರೂಪದ ಆಧಾರಗಳಿಲ್ಲವೆಂದು ಪಂಡಿತರನ್ನು ಕೇಳಿ ಖಚಿತಪಡಿಸಿಕೊಂಡರು.
ಅವರ ಪತ್ನಿಯಾದ ಡೊರೊಥಿ ಕ್ಯಾರಿಯವರು ೧೮೦೭ರಲ್ಲಿ ಮರಣಿಸಿದರು. ಆದರೆ ಅವರ(ಅವಳ)ಕಾರಣದಿಂದಾಗಿ ಬಹಳ ದಿನಗಳಿಂದ ಸಂಘಟನೆಗೆ ತನ್ನ ಉಪಯುಕ್ತೆಯನ್ನು ನಿಲ್ಲಿಸಿದ್ದರು ಇದರಿಂದಾಗಿ ಸಂಘದ ಕಾರ್ಯಚಟುವಟಿಕೆಗಳಿಗೆ ಅಡೆತಡೆಯನ್ನೊಡ್ಡಿದಂತಾಗಿತ್ತು. ಜಾನ್ ಮಾರ್ಶಾಮನ್ ಅವರು, ಹೇಗೆ ಕ್ಯಾರಿಯವರು ತನ್ನ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿದ್ದರು ಎಂಬುದನ್ನು ಅವರ ಅಧ್ಯಯನ ಮತ್ತು ಮತ್ತು ಬಾಷಾಂತರಗಳನ್ನಾಧರಿಸಿ " ಹುಚ್ಚಿಯಾದ ಪತ್ನಿಯು ತನ್ನ ಕಟುನೋವಿನಲ್ಲಿ ಚೀರಾಡುತ್ತಿರುವಾಗ ತನ್ನ ತಲೆಯ ಮೇಲೆ ಸುತ್ತಿಗೆಯಿಂದ ಹೊಡೆದಂತಹ ವಾತಾವರಣದಲ್ಲಿ ಪಕ್ಕದ ರೂಮಿನಲ್ಲಿಯೇ ಕೆಲಸವನ್ನು ನಿರ್ವಹಿಸುತ್ತಿದ್ದರು" ಎಂದು ಬರೆದಿದ್ದಾರೆ. ೧೮೦೮ರಲ್ಲಿ ಕ್ಯಾರಿಯವರು ಮರುಮದುವೆಯಾದರು. ಅವರ ಹೊಸ ಹೆಂಡತಿಯಾದ ಚಾರ್ಲೊಟ್ಟೆ ರುಮ್ಹೊರ್ ಅವರು, ಇವರಿದ್ದ ಚರ್ಚ್ನ ಒಬ್ಬ ಡ್ಯಾನಿಷ್ ಸದಸ್ಯರಾಗಿದ್ದರು, ಡೊರಿಥಿಯವರರಂತಲ್ಲದೇ ಕ್ಯಾರಿಯವರಿಗೆ ಮಾನಸಿಕವಾಗಿ ಸಮಾನವಾದ ಪತ್ನಿಯಾಗಿದ್ದರು. ಅವರು ಕ್ಯಾರಿಯವರೊಂದಿಗೆ ಹದಿಮೂರು ವರ್ಷಗಳ ಕಾಲ ತಾನು ಸಾಯುವವರೆಗೆ ಸಂಸಾರವನ್ನು ಸಾಗಿಸಿದರು.
ಮುದ್ರಣ ಯಂತ್ರದ ಸಹಕಾರದಿಂದ ಬೈಬಲ್ನ್ನು ಬಂಗಾಲಿ,ಸಂಸ್ಕ್ರತ, ಮತ್ತು ಪ್ರಮುಖ ಭಾಷೆಗಳಲ್ಲಿ ಹಾಗೂ ಪ್ರಾಂತೀಯ ಭಾಷೆಗಳಲ್ಲಿ ಭಾಷಾಂತರವಾಗಿ ಬಂದಂತಾಯಿತು. ಇವುಗಳಲ್ಲಿ ಹಲವಾರು ಭಾಷೆಗಳು ಮೊದಲು ಮುದ್ರಣವನ್ನೇ ಕಂಡವುಗಳಾಗಿರಲಿಲ್ಲ. ವಿಲ್ಲಿಯಂ ವಾರ್ಡ್ ಅವರು ಕೈಯಿಂದ ಅಚ್ಚು ಮುದ್ರಿಸಲು ಪಂಚ್ಗಳನ್ನು ತಯಾರಿಸಿದರು. ಕ್ಯಾರಿ ಅವರು ಸಂಸ್ಕ್ರತದಿಂದ ಇಂಗ್ಲಿಷ್ಗೆ ತಮ್ಮ ದೇಶದ ಜನರಿಗೆ ವಿಷಯಗಳು ದೊರೆಯುವ ಸಲುವಾಗಿ ಭಾಷಾಂತರ ಮಾಡತೊಡಗಿದರು. ೧೧ ಮಾರ್ಚ್ ೧೮೧೨ರಂದು ಮುದ್ರಣ ಕೊಟಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದರಿಂದ £೧೦,೦೦೦ಮೌಲ್ಯದ ವಸ್ತುಗಳು ನಾಶವಾದವು ಮತ್ತು ಮಾಡಿದ ಕೆಲಸವು ನಷ್ಟವಾಯಿತು. ನಾಶವಾದವುಗಳಲ್ಲಿ ಮರುಪೂರೈಸಲಾಗದ ಬರಹಗಳು, ಅವುಗಳಲ್ಲಿ ಕ್ಯಾರಿಅವರ ಸಂಸ್ಕ್ರತ ಭಾಷಾಂತರಗಳು ಮತ್ತು ಬಹುಭಾಷೆಯ ಸಂಸ್ಕ್ರತ ಮತ್ತು ಅದಕ್ಕೆ ಸಂಭಂದಿಸಿದ ಭಾಷೆಗಳ ನಿಘಂಟನ್ನು ಹೊಂದಿತ್ತು. ಒಂದು ವೇಳೆ ಈ ಕೆಲಸವು ಪೂರ್ಣಗೊಂಡಿದ್ದರೆ ಇದು ಭಾಷಾ ಶಾಸ್ತ್ರಕ್ಕೆ ನೀಡಿದ ಗಣನೀಯ ಕೊಡುಗೆಯಾಗುವುದರಲ್ಲಿ ಸಂಶಯವಿರಲಿಲ್ಲ. ಆದರೆ ಅದೃಷ್ಟವಶಾತ್ ಮುದ್ರಣ ಕೊಠಡಿ ಹಾಗೂ ಪಂಚ್ಗಳು ಬಚಾವಾದವು ಮತ್ತು ಸಂಘಟನೆಯು ಮುದ್ರಣವನ್ನು ಮುಂದಿನ ಆರು ತಿಂಗಳಿನಲ್ಲಿ ಪುನರಾರಂಭಮಾಡಲು ಶಕ್ತವಾಯಿತು. ಕ್ಯಾರಿ ಅವರ ಒಟ್ಟಾರೆ ಜೀವನದಲ್ಲಿ ಅವರು ವಿವಿಧ ಭಾಷೆಗಳು ಹಾಗೂ ಉಪಭಾಷೆಗಳನ್ನು ಸೇರಿಸಿದಂತೆ ಒಟ್ಟಾರೆಯಾಗಿ ೪೪ ಭಾಷೆಗಳಲ್ಲಿ ಭಾಷಾಂತರಗೊಂಡಿತು.
ಹಾಗೂ ೧೮೧೨ರಲ್ಲಿ ಅಮೆರಿಕಾದ ಕಾಂಗ್ರೆಸ್ನ ಮಿಶನರಿಯಾದ ಜುಡ್ಸನ್ ಭಾರತಕ್ಕೆ ಭೇಟಿ ನೀಡಿತು ಮತ್ತು ನಾಮಕರಣ ಮಾಡಿ ಸೇರಿಸಿಕೊಳ್ಳಬೇಕಾದಾಗ ಮಾಡಬೇಕಾದ ಶುದ್ದಿಸ್ನಾನದ ಬಗ್ಗೆ ಕ್ಯಾರಿ ಅವರು ಮಾಡಿದ ಅಧ್ಯಯನವನ್ನು ಮತ್ತು ಅವರು ಬರೆದ ವಿಧಿವಿಧಾನಗಳ ಬಗ್ಗೆ ಪರಿಶೀಲಿಸಿತು. ಈ ಅದ್ಯಯನದಿಂದಾಗಿ ಕ್ಯಾರಿ ದಿಕ್ಷಾಸ್ನಾಪಕರೆನಿಸಿಕೊಂಡರು. ಕ್ಯಾರಿ ಅವರು ಅಮೇರಿಕಾದ ದಿಕ್ಷಾಸ್ನಾಪಕರದ ಬೆಂಬಲವನ್ನು ಜೊಡ್ಸನ್ ಸಂಸ್ಥೆಗೆ ತೆಗೆದುಕೊಳ್ಳಬೇಕೆಂದು ಇಚ್ಚಿಸಿದರು. ಇದರಿಂದಾಗಿ ೧೮೧೪ರಲ್ಲಿ ಪ್ರಪ್ರಥಮ ಬಾರಿಗೆ ಅಮೆರಿಕಾದಲ್ಲಿ ಅಮೆರಿಕನ್ ಬಪ್ಟಿಸ್ಟ್ ಮಿಶನ್ ಬೋರ್ಡ್ ಪ್ರಾರಂಭವಾಯಿತು. ಇದು ಅಮೆರಿಕಾದ ಪಾಶ್ಚಾತ್ಯದೇಶಗಳ ಸಲುವಾಗಿನ ದಿಕ್ಷಾಸ್ನಾಪಕರ ಸಭೆಯಾಗಿದ್ದು ನಂತರ ಇದನ್ನು ಟ್ರೇನಿಯಲ್ ಕನ್ವೆನ್ಶನ್ ಎಂದು ಕರೆಯಲಾಗಿದೆ. ಹೆಚ್ಚಾಗಿ ಅಮೆರಿಕಾದ ಎಲ್ಲ ದಿಕ್ಷಾಸ್ನಾಪಕರ ಅಂಗ ಸಂಸ್ಥೆಗಳು ನೇರವಾಗಿ ಅಧವಾ ಪರೋಕ್ಷವಾಗಿ ಈ ಸಭೆಯಿಂದ ನಿರ್ದೇಶಿತವಾಗಿದ್ದಾಗಿದೆ.
೧೮೧೮ರಲ್ಲಿ ಸಂಘವು ಸೆರಂಪೂರ್ ಕಾಲೇಜನ್ನು ದೇಶಿಯ ಮಂತ್ರಿಗಳಿಗೆ ಬೆಳೆಯುತ್ತಿರುವ ಚರ್ಚ್ಗಳ ಬಗ್ಗೆ ಮತ್ತು ಜಾತಿ ಭಾಷೆಗಳ ಬೇಧಬಾವವಿಲ್ಲದೇ ಎಲ್ಲರಿಗೂ ಕಲೆ ಹಾಗೂ ವಿಜ್ಞಾನದ ಶಿಕ್ಷಣವನ್ನು ನೀಡುವ ಸಲುವಾಗಿ ಪ್ರಾರಂಭಿಸಿದರು. ಡೆನ್ಮಾರ್ಕ್ನ ದೊರೆಯು ರಾಜಸಹಾಯಧನವನ್ನು ೧೮೨೭ರಲ್ಲಿ ನೀಡಿದರು ಇದರಿಂದಾಗಿ ಪದವಿಯುನ್ನು ನೀಡುವ ಸಂಸ್ಥೆಯು ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಪ್ರಾರಂಭವಾಯಿತು.[4]
೧೮೨೦ರಲ್ಲಿ ಕ್ಯಾರಿ ಅವರು ಸಸ್ಯಶಾಸ್ತ್ರಕ್ಕೆ ಒತ್ತು ನೀಡುವ ದೃಷ್ಟಿಯಿಂದ ತೋಟಗಾರಿಕಾ ಕೃಷಿ ಸಂಘವನ್ನು (Agri Horticultural Society of India) ಅಲಿಪುರ ಮತ್ತು ಕೊಲ್ಕತ್ತಾಗಳಲ್ಲಿ ಸ್ಥಾಪಿಸಿದರು.
ಅವರ ಎರಡನೆ ಪತ್ನಿಯಾದ ಚಾರ್ಲೊಟ್ಟೆ ಇವರು ೧೮೨೧ರಲ್ಲಿ ಮೃತರಾದರು ಅವರ ಹಿರಿಯ ಮಗನಾದ ಫೆಲಿಕ್ಸ್ ಕೂಡ ಇವರ ಹಿಂದೆಯೇ ಮರಣಿಸಿದರು. ೧೮೨೩ರಲ್ಲಿ ಅವರು ಮೂರನೇ ಬಾರಿಗೆ ಒಬ್ಬ ವಿದವೆಯನ್ನು ಮದುವೆಯಾದರು ಅವರ ಹೆಸರು ಗ್ರೇಸ್ ಹಗ್ಸ್ ಎಂಬುದಾಗಿತ್ತು.
ಸಂಘಟನೆ(ಮಿಶನರಿ)ಗಳ ಸಂಖ್ಯೆಯು ಬೆಳೆಯುತ್ತಾ ಸಾಗಿದಂತೆ ಅವುಗಳ ನಡುವೆ ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಹೆಚ್ಚಾದವು. ಹಳೆಯ ಸಂಘಟನೆಗಳಲ್ಲಿ ಅನುಭವವಿಲ್ಲದವರಿಂದ ತುಂಬಿಹೋಗಿ ನಿರ್ವಾಣದ ಹಂತಕ್ಕೆ ತಲುಪಿದವು. ಹೊಸ ಮಶಿನರಿಗಳು ಬಂದವಾದರೂ ಅವು ಜನಾಂಗಿಯ ಸಂಪ್ರದಾಯಗಳಿಗೆ ಹೊಂದಿಕೊಳ್ಳದಂತೆಯೇ ಬೆಳೆದವು ಮತ್ತು ಅದರಲ್ಲಿ ಒಬ್ಬರು ಮಾತ್ರ ಹೆಚ್ಚು ಬೇಡಿಕೆಗೆ ಬರುವಂತಹ ವ್ಯವಸ್ತೆಯು ನಿರ್ಮಾಣವಾಯಿತು. ಅವರು ಬೇರೆ ಮನೆ ಮತ್ತು ಆಳುಕಾಳುಗಳೊಂದಿಗೆ ವಾಸಿಸುತ್ತಿದ್ದರು. ಇದರಿಂದಾಗಿ ಕ್ಯಾರಿ, ವಾರ್ಡ್, ಮಾರ್ಶಾಮ್ ಇವರುಗಳ ಶಿಸ್ತಿನ ವಿಚಾರಗಳಿಗೆ ದಕ್ಕೆಯುಂಟಾಯಿತು ಮತ್ತು ಹೊಸ ಮಶಿನರಿಗಳು ಅದರಲ್ಲೂ ಮಾರ್ಶಾಮ್ ಅವರು ತಮ್ಮ ಇಚ್ಛೆಗೆ ವಿರುದ್ದವಾದ ಕೆಲಸಗಳನ್ನೇ ವಹಿಸುತ್ತಾರೆ ಎಂದು ಭಾವಿಸಿಕೊಂಡವು.
ಇಂಗ್ಲೆಂಡ್ನಲ್ಲಿನ ಸಂಘದ ಮುಖ್ಯಸ್ಥರಾದ ಆಂಡ್ರೂ ಪುಲ್ಲರ್ ಅವರು ೧೮೧೫ರಲ್ಲಿ ಮೃತರಾದರು. ನಂತರ ಅವರ ಉತ್ತರಾಧಿಕಾರಿಯಾದ ಸರ್ವಾಧಿಕಾರಿ ಮನೋಭಾವನೆಯುಳ್ಳ ಜಾನ್ ಡೈಯರ್ ಅವರು ಎಲ್ಲ ವ್ಯಾಪಾರಮಾರ್ಗಗಳನ್ನು ಮತ್ತು ಸಂಘವನ್ನು ತನ್ನ ಹಿಡಿತದಲ್ಲಿ ತರಲು ಮತ್ತು ಇಂಗ್ಲೆಂಡ್ನಲ್ಲಿಂದಲೇ ಶೆರಾಂಪುರ್ ಮಿಶನರಿಯನ್ನು ನಡೆಸಲು ಪ್ರಯತ್ನಿಸಿದರು. ಇದು ಬದ್ದ ವಿರೋಧಕ್ಕೆ ಕಾರಣವಾಯಿತು ಕ್ಯಾರಿ ಅವರು ತಾವು ಕಟ್ಟಿ ಬೆಳೆಸಿದ ಸಂಸ್ಥೆಗಳೊಂದಿಗೆ ಅವರಿಂದ ದೂರಾಗಿ ಮಿಶನ್ ಮತ್ತು ತನ್ನ ವಾಸ್ತವ್ಯವನ್ನು ಕಾಲೆಜು ಬಯಲಿಗೆ ಸ್ಥಳಾಂತರಿಸಿದರು. ಅವರು ೧೮೩೪ರಲ್ಲಿನ ತಮ್ಮ ಮರಣದವರೆಗೂ ಅವರ ಬಂಗಾಳಿ ಬೈಬಲ್ನ್ನು ಮರುಮುದ್ರಣ ಮಾಡುತ್ತಾ, ಭಾಷಣಗಳನ್ನು ನೀಡುತ್ತಾ ಮತ್ತು ವಿದ್ಯಾರ್ಥಿಗಳಿಗೆ ಕಲಿಸುತ್ತಾ ಶಾಂತವಾದ ಜೀವನವನ್ನು ಸಾಗಿಸಿದರು. ಅವರು ೯ ಜೂನ್ ೧೮೩೪ರಲ್ಲಿ ಮರಣಿಸಿದ ಸ್ಥಳದಲ್ಲಿ ರೆಗೆಂಟ್ಸ್ ಪಾರ್ಕ್ನ್ನು ನಿರ್ಮಿಸಲಾಗಿದೆ. ಮತ್ತು ಆಕ್ಸ್ಪರ್ಡ್ ವಿಶ್ವವಿದ್ಯಾಲಯದ ದಿಕ್ಷಾಸ್ನಾಪಕ ಸಭಾಂಗಣವನ್ನು ನಿರ್ಮಿಸಲಾಗಿದೆ.
ಎಫ್.ಡಿ. ವಾಕರ್ ಮತ್ತು ಜೆ.ಬಿ.ಮೆಯರ್ಸ್ ಅವರಿಂದ ಬರೆಯಲ್ಪಟ್ಟ ಕ್ಯಾರಿ ಅವರ ಆತ್ಮಕಥೆಯಲ್ಲಿ ಕ್ಯಾರಿ ಅವರು ಮೊದಲ ಪತ್ನಿಯಾದ ಡೊರೊಥಿಯವರಿಂದಾಗಿ ಭಾರತದಲ್ಲಿನ ಅವರ ಮಂತ್ರಿಯಾಗಿದ್ದ ಕಾಲದಲ್ಲಿ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರೆಂದು ಹೇಳಿದ್ದಾರೆ.[6] ಬೆಕ್ ಅವರು ಬರೆದ ಡೊರೊಥಿ ಕ್ಯಾರಿ ಅವರ ಆತ್ನಕಥನದಲ್ಲಿ ಅವರ ವಿವರಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಚಿತ್ರಿಸಿದ್ದಾರೆ. ಹದಿನೆಂಟನೇ ಶತಮಾನದ ಅವಿದ್ಯಾವಂತ ಮಹಿಳೆಯೊಂದಿಗೆ ಕಷ್ಟಕರವಾದ ಜೀವನ ಸಾಗಿಸುತ್ತಿದ ಕ್ಯಾರಿ ಅವರನ್ನು ವಿಲಿಯಂ ಕ್ಯಾರಿ ಅವರು ಮತ್ತು ಜೀವನವನ್ನು ಸುಧಾರಿಸಿದರು ಮತ್ತು ಕ್ಯಾರಿ ಅವರನ್ನು ಅವರ ಹಾದಿಯಲ್ಲಿ ಮುಂದುವರಿಯಲು ಸಹಾಯಕರಾದರು. ಡೊರೊಥಿಯವರು ಈ ಎಲ್ಲ ಬದಲಾವಣೆಗಳನ್ನು ಸಹಿಸಿಕೊಳ್ಳಲು ಬಹಳಕಷ್ಟಪಟ್ಟರು ಆದರೆ ಅವರಿಂದ ಮಾನಸಿಕವಾಗಿಯೂ ಮತ್ತು ಭೌದ್ದಿಕವಾಗಿಯೂ ಈ ಎಲ್ಲ ಬದಲಾವಣೆಗಳಿಗೆ ಹೊಂದಿಕೊಳ್ಳಲು ಅಸಮರ್ಥರಾದರು ಮತ್ತು ಕ್ಯಾರಿ ಅವರೂ ಕೂಡ ಇಂತಹ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿಯದೇ ಹೋದವರಾದ್ದರಿಂದ ಅವರಿಂದಲೂ ಯಾವುದೇ ಸಹಾಯಗಳು ಲಭಿಸಲಿಲ್ಲ.[7] ಕ್ಯಾರಿ ಅವರು ಇಂಗ್ಲೆಂಡ್ನಲ್ಲಿರುವ ತಮ್ಮ ಸಹೋದರಿಯರಿಗೆ ೫ ಅಕ್ಟೋಬರ್ ೧೭೯೫ರಂದು ಹೀಗೆ ಬರೆದಿದ್ದಾರೆ " ಕೆಲವು ದಿನಗಳ ಹಿಂದೆ ನಾನು ನನ್ನ ಹೆಂಡತಿಯನ್ನು ಕಳೆದುಕೊಳ್ಳುವ ಭಯವನ್ನು ಹೊಂದಿದ್ದೆ. ಹೊಟ್ಟೆಕಿಚ್ಚು ಅವಳ ಮನಸ್ಸಿನಲ್ಲಿ ಹೊಕ್ಕಿರುವ ದೊಡ್ಡ ಭೂತವಾಗಿತ್ತು."[8]
ಡೊರೊಥಿಯವರ (ಅದೇ ಸಂದರ್ಭದಲ್ಲಿ ವಿಲಿಯಂ ಕ್ಯಾರಿ ಅವರು ಪ್ರಥಮ ಬಾರಿಗೆ ಭಾರತಿಯ ಮತಾಂತರಿಗಳಿಗೆ ಮತ್ತು ಅವರ ಮಗನಾದ ಫೆಲಿಕ್ಸ್ ಅವರಿಗೆ ಶುದ್ದಿಸ್ನಾನವನ್ನು ಮಾಡಿಸುತ್ತಿದ್ದರು. ಅವರ ಹೆಂಡತಿಯನ್ನು ಒತ್ತಾಯ ಪೂರ್ವಕವಾಗಿ ಒಂದು ಕೋಣೆಯಲ್ಲಿ ಅವಳಿಗೆ ಹುಚ್ಚು ಹಿಡಿದಿದೆಯೆಂದು ಕೂಡಿಹಾಕಲಾಗಿತ್ತು.)ಮಾನಸಿಕ ಅಸ್ವಸ್ಥತೆಯು ಅನಿವಾರ್ಯವಾಗಿ ಕ್ಯಾರಿ ಅವರ ಸಂಸಾರದಲ್ಲಿನ ಇತರ ತೊಂದರೆಗಳಿಗೆ ಎಡೆಮಾಡಿಕೊಟ್ಟಿತು.[9] ಜೊಶುವಾ ಮಾರ್ಶಾಮನ್ ಅವರು ಕ್ಯಾರಿ ಅವರನ್ನು ಬೇಟಿಯಾದಾಗ ಅವರು ಅವರ ನಾಲ್ಕು ಮಕ್ಕಳನ್ನು ಬೇಜವಬ್ದಾರಿಯುತವಾಗಿ ನೋಡಿಕೊಳ್ಳುತ್ತಿರುವುದನ್ನು ನೋಡಿ ಧಿಬ್ರಮೆಗೊಳಗಾದರು. ಆಗ ಮಕ್ಕಳ ವಯಸ್ಸು ೪, ೭, ೧೨ ಮತ್ತು ೧೫,ಇತ್ತು ಅವರೆಲ್ಲರೂ ಸುಸಂಸ್ಕ್ರತರಾಗಿರಲಿಲ್ಲ, ಅಶಿಸ್ತಿನಿಂದ ಕೂಡಿದ್ದರು ಮತ್ತು ಅಶಿಕ್ಷಿತರಾಗಿದ್ದರು.
ಲೈನ್ ಮರ್ರಿಯವರ ಅದ್ಯಯನದ ಜೊತೆಯಲ್ಲಿ ಅತಿಕಟ್ಟುನಿಟ್ಟಿನ ಧಾರ್ಮಿಕ ನಡತೆ ಗಳುಳ್ಳ ಕ್ಯಾರಿಅವರ[10] ಅಂತಿಮ ಗತಶಾಸ್ತ್ರದ ಬಗ್ಗೆ ಯಾರೂ ಅಷ್ಟು ಗಮನಹರಿಸಿದಂತಿಲ್ಲ, ಆದರೆ ಇದೇ ಅವರ, ಬಹುಮುಖ್ಯವಾಗಿ ಮಶಿನರಿಗಳ ಪ್ರನಾಳಿಕೆಯಾಗಿತ್ತು. ಹಾಗೆ ನೋಡಿದರೆ ಬ್ರುಸ್ ಜೆ ನಿಕೊಲಾಸ್ ಅವರ ಬರಹವಾದ "The Theology of William Carey."ದಲ್ಲಿಯೂ ಕೂಡ ಇದರ ಪ್ರಸ್ತಾಪವಾಗಿಲ್ಲ.[11] ಕ್ಯಾರಿ ಓರ್ವ ಕ್ಯಾಲ್ವಿನ್ ಪಂಥಿಯರಾಗಿದ್ದರು ಮತ್ತು ಪೋಸ್ಟ್ಮಿಲೆನಿಯಸ್ಟ್ ಆಗಿದ್ದರು. ಎರಡು ದೀರ್ಘವಾದ ಪ್ರಬಂಧದಲ್ಲಿ ಅವರ ಸಾಧನೆಯನ್ನು ಚರ್ಚಿಸಲಾಗಿದೆಯಾದರೂ ದಾರ್ಮಿಕ[12] ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ನಿರ್ಲಕ್ಷಿಸಲಾಗಿದೆ.[13] ಮತ್ತು ಮಿಶನರಿಗಳ ಕಾರ್ಯದಲ್ಲಿ ಬಹುಮುಖ್ಯ ಪಾತ್ರವಹಹಿಸಿದ ಅವರ ಅಂತಿಮ ಗತಿಶಾಸ್ತ್ರದ ಬಗ್ಗೆಯೂ ವಿಶ್ಲೇಶಿಸಲಾಗಿಲ್ಲ.[14] ಆದರೆ ಜೆಮ್ಸ್ ಬೆಕ್ ಅವರು ಕ್ಯಾರಿ ಅವರ ಮೊದಲ ಹೆಂಡತಿಯ ಆತ್ಮಕಥೆಯಲ್ಲಿ [7] ಅವರ ಆದ್ಯಾತ್ಮದ ಬಗೆಗಿನ ಅಭಿಪ್ರಾಯ ಮತ್ತು "ಭವಿಷ್ಯದ ಬಗೆಗಿನ ನಿಲುವು"ನ್ನು ವಿವರಿಸಿದ್ದಾರಾದರೂ ಜಗತ್ತಿನ ಮಿಶನರಿಗಳ ಬಗೆಗೆ ಅವರಿಗಿದ್ದ ಶ್ರದ್ದೆಯನ್ನು ಹೇಳಲಿಲ್ಲ. ಆದರೆ ಇದನ್ನು ಅವರು ಪೋಸ್ಟ್ಮಿಲೆನಿಯಲ್ ಥಿಯೋಲಜಿಗಳಿಂದ ಗಳಿಸಿಕೊಂಡರು.[15]
ಕ್ಯಾರಿ ಅವರು ಅವರ ಹೆಸರನ್ನು ಹೊಂದಿದ ಕನಿಷ್ಠ ಐದು ಕಾಲೆಜುಗಳನ್ನು ಹೊಂದಿದ್ದಾರೆ. ಅವುಗಳೆಂದರೆ, ಕ್ಯಾಲಿಫೋರ್ನಿಯಾದ ಪೆಸಡೆನಾದಲ್ಲಿನ ವಿಲಿಯಂ ಕ್ಯಾರಿ ಇಂಟರ್ನ್ಯಾಶನಲ್ ಯುನಿವರ್ಸಿಟಿ, ಬ್ರಿಟಿಷ್ ಕೋಲಂಬಿಯಾದ ವ್ಯಾಂಕೊವರ್ನಲ್ಲಿನ ಕ್ಯಾರಿ ಥಿಯೊಲಾಜಿಕಲ್ ಕಾಲೆಜ್, ವಿಕ್ಟೋರಿಯಾದ ಮೆಲ್ಬೋರ್ನಲ್ಲಿನ ಕ್ಯಾರಿ ಬೆಪ್ಟಿಸ್ಟ್ ಗ್ರಾಮರ್ ಸ್ಕೂಲ್, ಶ್ರೀಲಂಕಾದ ಕೊಲಂಬೊದಲ್ಲಿನ ಕ್ಯಾರಿ ಕಾಲೆಜ್ ಆಪ್ ಕೊಲಂಬೊ, ಮತ್ತು ಮಿಸಿಸಿಪಿಯ ಹಟೈಸ್ಸಬರ್ಗ್ನಲ್ಲಿನ ವಿಲಿಯಂ ಕ್ಯಾರಿ ಯುನಿವರ್ಸಿಟಿಗಳಾಗಿವೆ. ಬಾಂಗ್ಲಾದೇಶದ ಚಿಟ್ಟಾಗಾಂಗ್ನಲ್ಲಿರುವ ವಿಲಿಯಂ ಕ್ಯಾರಿ ಅಕಾಡಮಿಯು ಬಾಂಗ್ಲಾದೇಶಿಯರಿಗೆ ಮತ್ತು ವಲಸಿಗ ಮಕ್ಕಳಿಗೆ ಬಾಲವಾಡಿಯಿಂದ ಹನ್ನೆರಡನೇ ಈಯತ್ತೆಯವರೆಗೆ ಶೀಕ್ಷಣವನ್ನು ನೀಡುತ್ತಿದೆ.
This section requires expansion. (December 2009) |
ವಿಲಿಯಂ ಕ್ಯಾರಿ ಅವರನ್ನು "ಫಾದರ್ ಆಪ್ ಮಾಡರ್ನ್ ಮಿಶನ್ಸ್" ಎಂದು ಕರೆಯಲಾಗಿದೆ. ಮತ್ತು ಇವರು ೧೯ನೇ ಶತಮಾನದ ಫ್ರೊಟೆಸ್ಟಂಟ್ ಮಿಶನರಿಗಳ ಅಭ್ಯುದಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. [ಸೂಕ್ತ ಉಲ್ಲೇಖನ ಬೇಕು]
ಕ್ಯಾರಿ ಅವರ ಗೌರವಾರ್ಥವಾಗಿ ಅಕ್ಟೋಬರ್ ೧೯ ಅನ್ನು ಲಿಥರ್ಜಿಕಲ್ ಕ್ಯಾಲೆಂಡರ್ ಆಫ್ ದಿ ಎಪಿಸೋಡಿಕಲ್ ಚರ್ಚ್ (ಯುಎಸ್ಎ)ಯಲ್ಲಿ ಹಬ್ಬದ ದಿನವಾಗಿ ಆಚರಿಸಲಾಗುತ್ತದೆ.
ಟೆಂಪ್ಲೇಟು:Portal
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.