ಮಂಡೋದರಿ
From Wikipedia, the free encyclopedia
ಮಂಡೋದರಿ ರಾಮಾಯಣದ ಅನುಸಾರ ರಾವಣನ ಪತ್ನಿ ಹಿಂದೂ ಆಚರಣೆಯ ಅನುಸಾರ ನಿತ್ಯವೂ ಪ್ರಾರ್ಥನೆ ಸಲ್ಲಿಸಬೇಕಾದ ಐದು ಜನ ಪತಿವ್ರತಾ ಮಹಿಳೆಯರಲ್ಲಿ ಒಬ್ಬಳು. ರಾಮಾಯಣವು ಅವಳನ್ನು ಸುಂದರಿ, ಧಾರ್ಮಿಕಳು ಹಾಗೂ ನೀತಿವಂತಳು ಎಂದು ಚಿತ್ರಿಸುತ್ತದೆ.
ಮಂಡೋದರಿ | |
---|---|
![]() ರಾವಣನನ್ನು ಕೊಲ್ಲಲು ಉಪಯೋಗಿಸಿದ ಬಾಣವನ್ನು ಮಂಡೋದರಿಯಿಂದ ಅಪಹರಿಸುತ್ತಿರುವ ಹನುಮಾನ್. | |
ದೇವನಾಗರಿ | मंदोदरी |
ಸಂಬಂಧ | ರಾಕ್ಷಸ, ಪಂಚಕನ್ಯೆ |
ನೆಲೆ | ಲಂಕೆ |
ಹೆಂಡತಿ | ರಾವಣ, ವಿಭೀಷಣ |
ಇವಳು ಮಯಾಸುರ ಮತ್ತು ಗಂಧರ್ವ ಕನ್ಯೆ ಹೇಮಾ ಇವರ ಮಗಳು.ಇವಳಿಗೆ ಮೇಘನಾದ ಮತ್ತು ಅಕ್ಷ ಕುಮಾರ ಎಂಬ ಇಬ್ಬರು ಮಕ್ಕಳು. ಕೆಲವು ರಾಮಾಯಣಗಳ ಪ್ರಕಾರ ಸೀತೆಯು ಈಕೆಯ ಮಗಳು. ರಾವಣನು ಅನೇಕ ಕೆಟ್ಟ ಕೆಲಸಗಳನ್ನು ಮಾಡಿದರೂ ಕೂಡ ಅವನನ್ನು ಪ್ರೀತಿಸುವವಳು, ಆದರೆ ಅವನನ್ನು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಸಲಹೆ ಕೊಡುವವಳು. ಅವನು ಅಪಹರಿಸಿದ ಸೀತೆಯನ್ನು ರಾಮನಿಗೆ ಮರಳಿಸುವಂತೆ ಸಲಹೆಯನ್ನು ಮತ್ತೆ ಮತ್ತೆ ಕೊಟ್ಟಳಾದರೂ ರಾವಣ ಅದಕ್ಕೆ ಕಿವಿಗೊಡಲಿಲ್ಲ. .
![Thumb image](http://upload.wikimedia.org/wikipedia/commons/thumb/d/d8/Angry_Ravana_drawing_his_sword_rushed_at_her_to_kill_Sita.jpg/640px-Angry_Ravana_drawing_his_sword_rushed_at_her_to_kill_Sita.jpg)
ರಾಮಾಯಣದ ಕೆಲವು ಆವೃತ್ತಿಗಳಲ್ಲಿ ವಾನರರು ಅವಳ ಜತೆ ಕೆಟ್ಟ ರೀತಿಯಿಂದ ವರ್ತಿಸಿದಂತೆ ಚಿತ್ರಿಸಿವೆ. ವಾನರರು ಅವಳ ಪಾವಿತ್ರ್ಯಭಂಗ ಮಾಡಿದಂತೆಯೂ ರಾವಣನ ಸಾವಿಗೆ ಅದುವೇ ಕಾರಣವಾದಂತೆಯೂ ಚಿತ್ರಿಸಿವೆ. ರಾಮನು ರಾವಣನನ್ನು ಕೊಲ್ಲಲು ಬಳಸಿದ ಬಾಣವನ್ನು ಹನುಮಂತನು ಅವಳಿಂದ ಅಪಹರಿಸಿದನಂತೆ.
ರಾವಣನ ಸಾವಿನ ನಂತರ ರಾಮನ ಸಲಹೆಯಂತೆ ರಾವಣನ ತಮ್ಮ ವಿಭೀಷಣ ಅವಳನ್ನು ಮರುಮದುವೆಯಾದನಂತೆ .