From Wikipedia, the free encyclopedia
ಹೊಸನಗರ ನಾಗರಾಜೇಗೌಡ ಗಿರೀಶ್ , ( ಹುಟ್ಟು -೨೬ ಜನವರಿ ೧೯೮೮) ಕ್ರೀಡಾಪಟುವಾಗಿದ್ದಾರೆ. ಅವರ ಎಡಗಾಲು ಹುಟ್ಟಿನಿಂದಲೇ ಊನವಾಗಿದೆ. ಇವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊಸನಗರದವರು. ಗಿರೀಶ್ ೨೦೦೬ರಿಂದ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುತ್ತಾ ಬಂದಿದ್ದಾರೆ. . ಅಂತರರಾಷ್ಟ್ರೀಯ ಕೂಟಗಳಲ್ಲೂ ಪದಕದ ಸಾಧನೆ ಮಾಡಿದ್ದಾರೆ. ಅವರು ಲಂಡನ್ನಲ್ಲಿ ನಡೆದ ೨೦೧೨ರ ಪ್ಯಾರಾಲಿಂಪಿಕ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ F-42 ವರ್ಗದಲ್ಲಿ ಪುರುಷರ ಎತ್ತರದ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ .[1] ಕತ್ತರಿ ತಂತ್ರವನ್ನು ಬಳಸಿಕೊಂಡು ೧.೭೪ ಮೀಟರ್ ಜಿಗಿದು ಫೈನಲ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಎಂಟನೇ ಭಾರತೀಯರಾದರು.
ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟವೊಂದರಲ್ಲಿ ಅವರು ಸಾಮಾನ್ಯ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿ ಒಂದು ಬಹುಮಾನ ಪಡೆದು ಗಿರೀಶರು ಯಶಸ್ಸಿನ ಮೊದಲ ರುಚಿಯನ್ನು ನೋಡಿದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಒಂದು ಕಂಚಿನ ಪದಕ ಗೆದ್ದಿದ್ದಾರೆ. ನಂತರ ರಾಷ್ಟ್ರೀಯ ಎತ್ತರ ಜಿಗಿತದ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರು ೨೦೦೬ ರಲ್ಲಿ ಐರ್ಲೆಂಡ್ ನಲ್ಲಿ ಅಂಗವಿಕಲರ ಕಿರಿಯ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೊದಲ ಸಾಧನೆಯನ್ನು ಮಾಡಿದರು. ನಂತರ ಈ ಕುವೈಟ್ ಮತ್ತು ಮಲೇಷ್ಯಾ ರಲ್ಲಿ ಅಥ್ಲೆಟಿಕ್ ಕೂಟಗಳಲ್ಲಿ ಚಿನ್ನದ ಪದಕಗಳನ್ನು ಪಡೆದರು.[2] ೨೦೧೩ ರಲ್ಲಿ ಗಿರೀಶ್ಗೆ ಪದ್ಮಶ್ರೀ ಗೌರವ ಒಲಿದಿದೆ.
೨೦೧೩ ರಲ್ಲಿ ಗಿರೀಶ್ಗೆ ಪದ್ಮಶ್ರೀ ಗೌರವ ಒಲಿದಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.