ಕನ್ನಡ ಚಲನಚಿತ್ರ From Wikipedia, the free encyclopedia
ಮಗುವಾಗಿದ್ದಾಗ ಅನಾಥನಾದ ರಂಗ (ರಾಜ್ಕುಮಾರ್ ಪಾತ್ರ) ಅವರ ದೂರದ ಸಂಬಂಧಿ ಚಂದ್ರಶೇಖರ್ ರಾವ್ ಬಹದ್ದೂರ್ (ಸಂಪತ್) ಮತ್ತು ಅವರ ಕರುಣಾಮಯಿ ಪತ್ನಿ ಪಾರ್ವತಿ (ಎಂ ಜಯಶ್ರೀ) ಆಶ್ರಯದಲ್ಲಿ ಬೆಳೆದನು.
ಚಂದ್ರಶೇಖರ್ ರಾವ್ ಅವರ ಮೂರು ಗಂಡು ಮಕ್ಕಳು ರಾಮನಾಥ (ವಜ್ರಮುನಿ), ಸೋಮನಾಥ (ಬೆಂಗಳೂರು ನಾಗೇಶ್) ಮತ್ತು ವಿಶ್ವನಾಥ (ದ್ವಾರಕೀಶ್), ಇಬ್ಬರು ಹೆಣ್ಣುಮಕ್ಕಳು - ದೊಡ್ಡ ಮಗಳು ವಿಧವೆ ರಾಜಮ್ಮ (ಲಕ್ಷ್ಮಿ ದೇವಿ) ಮತ್ತು ಅವಳ ಮಗ ಹಾಗೂ ಇಬ್ಬರು ಚಿಕ್ಕ ಮೊಮ್ಮಕ್ಕಳು ತುಂಬಿದ ದೊಡ್ಡ ಕುಟುಂಬ. ಪಾರ್ವತಿ ತನ್ನ ಬಾಲ್ಯದ ಗೆಳತಿ ಮಾಯಕ್ಕನಿಗೆ ಅವಳ ಮಗಳು ಲಕ್ಷ್ಮಿಯನ್ನು (ಜಯಂತಿ) ತನ್ನ ಮೂರನೇ ಸೊಸೆಯಾಗಿ ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತಾಳೆ. ಆದರೆ ಅವಳ ಮೂರನೇ ಮಗ ಲೇಪಾಕ್ಷಿಯನ್ನು (ಬಿ ಜಯ) ಪ್ರೀತಿಸುತ್ತಿದ್ದ ಕಾರಣ ಮದುವೆಯಾಗಲು ನಿರಾಕರಿಸುತ್ತಾನೆ. ಆಗ ಪಾರ್ವತಿ ಲಕ್ಷ್ಮಿಯನ್ನು ರಂಗನಿಗೆ ಕೊಟ್ಟು ಮದುವೆ ಮಾಡಿಕೊಡುತ್ತಾಳೆ.
ಷೇರು ಮಾರುಕಟ್ಟೆಯಲ್ಲಿ ತನ್ನೆಲ್ಲ ಸಂಪತ್ತನ್ನು ಕಳೆದುಕೊಂಡಾಗ ಚಂದ್ರಶೇಖರ್ ರಾವ್ ಅವರ ಜೀವನವು ಕ್ರೂರ ತಿರುವು ಪಡೆಯುತ್ತದೆ. ಮಗಳ ಮದುವೆ ರದ್ದಾಗುತ್ತದೆ. ಗಂಡು ಮಕ್ಕಳ ಸೊಸೆಯಂದಿರ ವರ್ತನೆ ಬದಲಾಗುತ್ತದೆ. ರಂಗ ಮತ್ತು ಲಕ್ಷ್ಮಿಯನ್ನು ಹೊರಗೆ ಕಳುಹಿಸುವಂತೆ ಆಗುತ್ತದೆ. ಚಂದ್ರಶೇಖರ್ ರಾವ್ ಹೃದಯಾಘಾತದಿಂದ ಸಾಯುತ್ತಾನೆ.
ಕೋಟಯ್ಯನ (ಬಾಲಕೃಷ್ಣ) ಸಹಾಯದಿಂದ ರಂಗನು ತಂಗಿಯಂತೆ ಇದ್ದ ಗೀತಾಳನ್ನು ಮದುವೆಯಾಗಲಿರುವ ರಾಚಪ್ಪ (ಮಹದೇವಪ್ಪ) ಒಡೆತನದ ಕಾರ್ಖಾನೆಯಲ್ಲಿ ಕೆಲಸ ಪಡೆಯುತ್ತಾನೆ. ರಂಗನು ಕುಟುಂಬದಲ್ಲಿನ ಪ್ರಕ್ಷುಬ್ಧತೆಯನ್ನು ಹೇಗೆ ಸರಿಪಡಿಸುತ್ತಾನೆ ಮತ್ತು ಎಲ್ಲರನ್ನೂ ಮತ್ತೆ ಹೇಗೆ ಒಂದಾಗಿಸುತ್ತಾನೆ ಎಂಬುದೇ ಕಥೆಯ ಉಳಿದ ಸಾರಾಂಶ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.