ಸದಸ್ಯ:Keerthana1810412
From Wikipedia, the free encyclopedia
ನನ್ನ ಹೆಸರು ಕೀರ್ತನ.ಜೆ ನಾನು ಜೂನ್ ೨೦ ,೨೦೦೦ ರೆಂದು ಉತ್ತರರಾಜ್ಯದ ಕರ್ನಾಟಕ ಬಳ್ಳಾರಿಯಲ್ಲಿ ಜನಿಸಿದ್ದು ಜಿತೇಂದ್ರನಥ್ ಮತ್ತು ಶ್ರೀ ಮತಿ ದೇವಿ ಅವರ ಪ್ರಥಮ ಪುತ್ರಿಯಾಗಿ ಜನಿಸಿದೆ,ನನ್ನ ಕಿರಿಯ ತಮ್ಮನ ಹೆಸರು ಚರಣ್.ಜೆ ಈಗ ಬೆಂಗಳೂರು ನಗರದ ಅತ್ತಿಬೆಲೆಯಲ್ಲಿ ವಾಸಿಸುತ್ತಿದ್ದನೆ ಬಾಲ್ಯದಿಂದಲೂ ನಾನು ನಮ್ಮ ತಂದೆ,ತಾಯಿಯ ಪ್ರೀತಿಯ ಮಗಳು.ಅಲ್ಲದೆ ನಾನು ಬಾಲ್ಯದಲ್ಲಿ ಆಡಿದ ಆಟ,ತುಂಟತನ,ಗಲಾಟೆ, ಕೀಟಲೆ ಈಗಲೂ ನನ್ನ ನೆನಪಿನಲ್ಲಿದೆ.
ಜನನ | ಬಳ್ಳಾರಿ |
---|---|
ವಿದ್ಯಾಭ್ಯಾಸ | ಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ. |
ಪೋಷಕ(ರು) | ಜಿತೇಂದ್ರನಾಥ್, ದೇವಿ |
![one of fort in ballari built by Hyber Ali](http://upload.wikimedia.org/wikipedia/commons/thumb/2/29/BELLARY_FORT_2.jpg/640px-BELLARY_FORT_2.jpg)
ನನಗೆ ೪ ವರ್ಷವಿದ್ದಾಗ ನನ್ನ ತಾಯಿ ಶ್ರೀ ಶಾರದಾ ಪ್ರಾಥಮಿಕ ಶಾಲೆಗೆ ದಾಖಲಾತಿ ಮಾಡಿಸಿದರು ನನ್ನ ತಮ್ಮನು ಅಲ್ಲಿಯೆ ೧೦ನೇ ತರಗತಿಯ ಮುಗಿಸಿದನು.ನಾನು ಶಾಲೆಗೆ ಹೋಗಲು ತುಂಬಾ ಹಠ ಮತ್ತು ಅಳು ಮಾಡುತಿದ್ದೆ .ನನ್ನ ತಾಯಿ ಹಾಗೂ ಶಿಕ್ಷಕರ ಬುದ್ದಿವಾದ,ಪ್ರೀತಿಯ ಮಾತು ಮತ್ತು ಪ್ರೋತ್ಸಾಹದಿಂದ ತಪ್ಪದೆ ಶಾಲೆಗೆ ಹೋಗುವ ಮನಸ್ಸು ಬಂದಿತ್ತು.
ಹವ್ಯಾಸಗಳು:
ನನ್ನ ಮುಂದಿನ ಶಿಕ್ಷಣದಲ್ಲಿ ಉತ್ತಮ ಹಾಗೂ ತುಂಬಾ ಸ್ನೇಹಿತರು,ನನಗೆ ಓದಿನ ಜೊತೆಗೆ ಆಟಗಾರ್ತಿ, ಹಾಡು, ಪ್ರಬಂಧ,ಭಾಷಣ ಹೀಗೆ ಮುಂತಾದ ಚಟುವಟಿಕೆಗಳನ್ನು ಮೇಲೆ ಆಸಕ್ತಿ ಬಹಳಷ್ಟು ಸ್ಪರ್ಧೆಯಲ್ಲಿ ಬಹುಮಾನವನ್ನು ಗೆದ್ದುಕೊಂಡಿದೆ.
![famous god in hampi](http://upload.wikimedia.org/wikipedia/commons/thumb/6/61/Virupaksha_temple%2C_Hampi.jpg/640px-Virupaksha_temple%2C_Hampi.jpg)
ಹೀಗೆ ನಾನು ಬಾಲ್ಯದಿಂದಲೂ ಎಲ್ಲಾ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸುತ್ತಾ ಬಂದಿದ್ದು. ನಾನು ೯ನೇ ತರಗತಿ ಓದುತ್ತಿರುವಾಗ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದೆವು.ಮೈಸೂರು,ಮಡಿಕೇರಿ,ಚಾಮುಂಡಿಬೆಟ್ಟ,ತಲಕಾಡು, ಚಿತ್ರದುರ್ಗ,ಶಿವಮೊಗ್ಗ, ಹಂಪೆಯ ವಿರೂಪಾಕ್ಷ ದೇವಾಲಯ,ಮುಂತಾದ ಸ್ಥಳಗಳಿಗೆ ಭೇಟಿನೀಡಿದ್ದೆವು.ಇದು ಜೀವನದ ಮರೆಯಲಾರದ ಕ್ಷಣಗಳು.ನಾನು ಆ ಶಾಲೆಯಲ್ಲಿ ಬಹಳ ವಿಚಾರಗಳನ್ನು ಕಲಿತು ನಾನು ವಸ್ತು ಪ್ರದರ್ಶನಗಳಲ್ಲಿ ಉತ್ತಮ ಪ್ರಶಸ್ತಿ ಗೆದ್ದುಕೂಂಡೆ.
ನಾನು ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದಾಗ ಪ್ರತಿ ನಿತ್ಯ ಮುಂಜಾನೆ ೪:೩೦ ಎದ್ದು ಬೆಳ್ಳಗೆ ೬ ವಿಶೇಷ ತರಗತಿಗಳಿಗೆ ಹಾಜಾರಾಗಿ ನಂತರ ಶಾಲಾ ಅವಧಿಯನ್ನು ಸಹ ಮುಗಿಸಿಕೊಂಡು ನನ್ನ ವಿದ್ಯಾಭ್ಯಾಸ ಮಾಡುತ್ತಿದ್ದೆ.ಹೀಗೆ ನನ್ನ ಎಸ್.ಎಸ್.ಎಲ್.ಸಿ ಪರೀಕ್ಷೆಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದೇನೆ ಇದರಿಂದ ನನಗೆ ನಿರೀಕ್ಷಿತ ಅಂಕಗಳು ದೊರೆಯದ ಕಾರಣ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ.
ಪಿ.ಯು.ಸಿ ಶಿಕ್ಷ
![famous novelist](http://upload.wikimedia.org/wikipedia/commons/thumb/8/80/Swami_Vivekananda_1893_Scanned_Image.jpg/640px-Swami_Vivekananda_1893_Scanned_Image.jpg)
ನನ್ನ ಎಸ್.ಎಸ್.ಎಲ್.ಸಿ ಮುಗಿದ ನಂತರ ನಾನು ಸಿ.ಎ( ಚಾರ್ಟರ್ಡ್ ಅಕೌಂಟೆಂಟ್) ಆಗಬೇಕೆಂಬ ಇಚ್ಛೆಯಿಂದ ಪಿ.ಯು.ಸಿ ಯಲ್ಲಿ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು ಚಂದಾಪುರದಲ್ಲಿರುವ ಸ್ವಾಮಿ ವಿವೇಕಾನಂದ ಗ್ರಾಮಂತರ ಪದವಿ ಪೂರ್ವ ಕಾಲೇಜುನಲ್ಲಿ ಪ್ರವೇಶ ಪಡೆದು ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಷ್ಟ ಪಟ್ಟು ಓದಿ ಉನ್ನತ ದರ್ಜೆಯಲ್ಲಿ ಉತ್ತೀರ್ಣಳಾದೆ ಕಾರಣ ನನಗೆ ಬಂಗಾರದ ಪದಕ ಮತ್ತು ಪ್ರತಿಭಾ ಪುರಸ್ಕಾರದೊಂದಿಗೆ ನನ್ನನ್ನು ಸನ್ಮಾನಿಸಿರುತ್ತಾರೆ. ಪದವಿ ಪೂರ್ವ ಶಿಕ್ಷಣ: ನನ್ನ ಅಭಿಲಾಷೆಯಂತೆ ಇದೇ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪದವಿ ತರಗತಿಗೆ ಪ್ರವೇಶ ಪಡೆದು ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದೇನೆ.ಇದೇ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿ ಮುಂದೆ ಒಂದು ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡು ನನ್ನ ಜೀವನವನ್ನು ನಾನೇ ರೂಪಿಸಿಕೊಂಡು ಸ್ವಾತಂತ್ರ್ಯಳಾಗಿ ನಮ್ಮ ಕುಟುಂಬದ ನಿರ್ವಹಣೆ ಮಾಡಬೇಕು ಇಚ್ಛೆಯನ್ನು ಹೊಂದಿರುತ್ತನೆ.ಇಲ್ಲಿಯವರೆಗೂ ಪ್ರತಿ ಹಂತದಲ್ಲೂ ನನ್ನ ಪೋಷಕರಿಂದ ಸಂಪೂರ್ಣವಾಗಿ ಪ್ರೋತ್ಸಾಹ ಹಾಗೂ ಸಹಕಾರ ದೊರೆಯುತ್ತಿದ್ದು,ಮುಂದೆಯೂ ಇದೇ ರೀತಿ ದೊರೆಯುತ್ತಿರುತ್ತದೆ ಎಂದು ನಂಬಿ ಪ್ರತಿ ಕ್ಷಣದಲ್ಲೂ ನನ್ನ ಜೊತೆಗಿದ್ದ ದೇವರಿಗೆ, ಪೋಷಕರಿಗೆ,ಗುರುಗಳಿಗೆ, ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳನ್ನು ತಿಳಿಸುತ್ತಾ ನನ್ನ ಪರಿಚಯವನ್ನು ಮುಗಿಸುತ್ತೇನೆ.