![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/2a/Comrade_Batukeshswar_Dutt.jpg/640px-Comrade_Batukeshswar_Dutt.jpg&w=640&q=50)
ಬಟುಕೇಶ್ವರ ದತ್ತ
From Wikipedia, the free encyclopedia
ಬಟುಕೇಶ್ವರ ದತ್ತ pronunciation (ಸಹಾಯ·ಮಾಹಿತಿ)</img>
pronunciation (ಸಹಾಯ·ಮಾಹಿತಿ)( ಬಂಗಾಳಿ : ಬಟುಕೆಶ್ಬರ್ ದತ್ತ; ೧೮ ನವೆಂಬರ್ ೧೯೧೦ - ೨೦ ಜುಲೈ ೧೯೬೫) ೧೯೦೦ ರ ದಶಕದ ಆರಂಭದಲ್ಲಿ ಭಾರತೀಯ ಸಮಾಜವಾದಿ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. [2] ಅವರು ೮ ಏಪ್ರಿಲ್ ೧೯೨೯ ರಂದು ಬ್ರಿಟೀಷರ ದಬ್ಬಾಳಿಕೆಯನ್ನು ವಿರೋಧಿಸಿ ಹೊಸ ದೆಹಲಿಯ ಕೇಂದ್ರ ಶಾಸನ ಸಭೆಯಲ್ಲಿ ಭಗತ್ ಸಿಂಗ್ ಅವರ ಜೊತೆಗೆ ಬ್ರಿಟೀಷ್ ಸಾಮ್ರಾಜ್ಯಕ್ಕೆ ಎಚ್ಚರಿಸುವಂತೆ ಎರಡು ಬಾಂಬ್ಗಳನ್ನು ಸ್ಫೋಟಿಸಿದ್ದಕ್ಕಾಗಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಬ್ರಿಟೀಷರು ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿ ಜೀವಾವಧಿ ಶಿಕ್ಷೆಗೆ ಒಳಪಡಿಸಿದ ನಂತರ, ದತ್ತ್, ಸುಖದೇವ್ ಮತ್ತು ಭಗತ್ ಸಿಂಗ್ ಅವರು ಬ್ರಿಟೀಷರು ಭಾರತೀಯ ಖೈದಿಗಳ ಮೇಲಿನ ನಿಂದನೀಯ ವರ್ತನೆಯನ್ನು ವಿರೋಧಿಸಿ ಐತಿಹಾಸಿಕ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು ಮತ್ತು ಅದರ ಪರಿಣಾಮವಾಗಿ ಅವರಿಗೆ ಕೆಲವು ಹಕ್ಕುಗಳನ್ನು ಪಡೆದರು. [3] ಅವರು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ನ ಸದಸ್ಯರೂ ಆಗಿದ್ದರು.
ಬಟುಕೇಶ್ವರ ದತ್ತ | |
---|---|
বটুকেশ্বর দত্ত | |
![]() ೧೯೫೨ ರಲ್ಲಿ ದತ್ತ | |
ಜನನ | (೧೯೧೦-೧೧-೧೮)೧೮ ನವೆಂಬರ್ ೧೯೧೦ ಖಂಡಘೋಷ[1] |
ಮರಣ | 20 July 1965(1965-07-20) (aged 54) ದೆಹಲಿ |
ರಾಷ್ಟ್ರೀಯತೆ | British Indian (1910–1947) Indian (1947–1965) |
ವೃತ್ತಿ | ಕ್ರಾಂತಿಕಾರಿ |
Organization | ಭಾರತೀಯ ಸಮಾಜವಾದಿ ಸಂಘಟಣೆ |
ಗಮನಾರ್ಹ ಕೆಲಸಗಳು | ಭಾರತದ ಸ್ವಾತಂತ್ರ್ಯ ಹೋರಾಟ |
Criminal penalty | ಜೀವಾವಧಿ ಶಿಕ್ಷೆ |