ಜಯಚಾಮರಾಜ ಒಡೆಯರ್
From Wikipedia, the free encyclopedia
ಜಯಚಾಮರಾಜ ಒಡೆಯರ್ [1](ಜುಲೈ ೧೮, ೧೯೧೯-ಸೆಪ್ಟೆಂಬರ್ ೨೩, ೧೯೭೪) ಮೈಸೂರು ಸಂಸ್ಥಾನದ ೨೫ನೇ ಹಾಗು ಕೊನೆಯ ಮಹಾರಾಜ ಆಗಿದ್ದವರು. ಇವರು ೧೯೪೦ರಿಂದ ೧೯೫೦ರವರೆಗೆ ರಾಜ್ಯಬಾರ ನಡೆಸಿ, ೧೯೫೦ರಲ್ಲಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ ೧೯೫೬ರವರೆಗು ಸೇವೆ ಸಲ್ಲಿಸಿದರು. ಕರ್ನಾಟಕ ಸ್ಥಾಪನೆಯ ನಂತರ ೧೯೬೪ರವರೆಗೆ ಅದರ ರಾಜ್ಯಪಾಲರಾಗಿದ್ದರು.[2]
Quick Facts ಜಯಚಾಮರಾಜ ಒಡೆಯರ್ ಬಹದ್ದೂರ್, ಆಳ್ವಿಕೆ ...
ಜಯಚಾಮರಾಜ ಒಡೆಯರ್ ಬಹದ್ದೂರ್ | |
---|---|
ಮೈಸೂರು ಮಹಾರಾಜ | |
ಆಳ್ವಿಕೆ | ೧೯೪೦-೧೯೫೦ |
ಪೂರ್ವಾಧಿಕಾರಿ | ನಾಲ್ವಡಿ ಕೃಷ್ಣರಾಜ ಒಡೆಯರು |
ಉತ್ತರಾಧಿಕಾರಿ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ | |
ಸಂತಾನ | |
ಗಾಯತ್ರಿ ದೇವಿ, ಮೀನಾಕ್ಷಿ ದೇವಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಕಾಮಾಕ್ಷಿದೇವಿ, ಇಂದ್ರಾಕ್ಷಿದೇವಿ, ವಿಶಾಲಾಕ್ಷಿ ದೇವಿ | |
ತಂದೆ | ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ |
ತಾಯಿ | ಯುವರಾಣಿ ಕೆಂಪು ಚೆಲುವಾಜ ಅಮ್ಮಣ್ಣಿ |
ಜನನ | ೧೮-೦೭-೧೯೧೯ ಮೈಸೂರು ಸಂಸ್ಥಾನ |
ಮರಣ | ೨೩-೦೯-೧೯೭೪ ಬೆಂಗಳೂರು |
ಧರ್ಮ | ಜನಪದ |
Close
ಇವರು ಯದುವಂಶದ ಕೊನೆಯ ದೊರೆ. ತತ್ತ್ವಜ್ಞಾನಿ. ಸಂಗೀತಜ್ಞ, ರಾಜನೀತಿಜ್ಞ, ಉದಾರ ದಾನಿ.