![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/57/Gayasisa1.jpg/640px-Gayasisa1.jpg&w=640&q=50)
ಗಯಾ
From Wikipedia, the free encyclopedia
ಗಯಾ ( ಕನ್ನಡದಲ್ಲಿ ಗಯೆ ) ಬಿಹಾರದ ರಾಜಧಾನಿ ಪಾಟ್ನಾದಿಂದ ೧೦೦ ಕಿ.ಮೀ. ದಕ್ಷಿಣದಲ್ಲಿ ಫಲ್ಗೂ ನದಿಯ ತೀರದಲ್ಲಿರುವ ಒಂದು ನಗರ. ಫಲ್ಗೂ ನದಿಯನ್ನು ರಾಮಾಯಣದಲ್ಲಿ ನಿರಂಜನಾ ಎಂದು ಉಲ್ಲೇಖಿಸಲಾಗಿದೆ. ಗಯಾ ಕ್ಷೇತ್ರವು ಹಿಂದೂ ಮತ್ತು ಬೌದ್ಧಧರ್ಮಗಳೆರಡರಲ್ಲೂ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ. ಗಯೆಯು ಮೂರು ದಿಕ್ಕುಗಳಲ್ಲಿ ಸಣ್ಣ ಬೆಟ್ಟಗುಡ್ಡಗಳಿಂದ ಮತ್ತು ನಾಲ್ಕನೆಯ ದಿಕ್ಕಿನಲ್ಲಿ ಫಲ್ಗೂ ನದಿಯಿಂದ ಸುತ್ತುವರಿಯಲ್ಪಟ್ಟಿದೆ.17.24 ಚ.ಕಿಮೀ. ಗಯೆಯ ಸುತ್ತಲೂ ಛೋಟಾನಾಗಪುರ ಪ್ರಸ್ಥಭೂಮಿಯ ಅಂಚಿನ ಬೆಟ್ಟಗಳಿವೆ. ವರ್ಷದಲ್ಲಿ ಬಹುಕಾಲ ಬರಡಾಗಿರುವ ಫಲ್ಗು ನದಿಯ ಮರಳು ಬಿಸಿಲಿನಿಂದ ಕಾಯುವುದರಿಂದ ಗಯ ನಗರ ಬಹಳ ಬಿಸಿ. ಗಯ ನಗರ ಛೋಟಾನಾಗಪುರ ಪ್ರಸ್ಥಭೂಮಿಯೂ ಗಂಗಾ ನದಿಯ ಬಯಲೂ ಕೂಡುವ ಎಡೆಯಲ್ಲಿರುವುದರಿಂದ ಇದೊಂದು ಮುಖ್ಯ ವ್ಯಾಪಾರ ಕೇಂದ್ರ. ಅಲ್ಲದೆ ಇದೊಂದು ಯಾತ್ರಾಸ್ಥಳ. ಪ್ರತಿ ವರ್ಷವೂ ಲಕ್ಷಗಟ್ಟಲೆ ಯಾತ್ರಾರ್ಥಿಗಳು ಗಯಕ್ಕೆ ಬರುತ್ತಾರೆ. ಗಯ ನಗರದ ಅನೇಕ ದೇವಸ್ಥಾನಗಳಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ (1787) ವಿಷ್ಣುಪಾದ ದೇವಸ್ಥಾನ ಮುಖ್ಯವಾದದ್ದು. ಈ ಕ್ಷೇತ್ರದ ಒಂದು ಭಾಗವಾದ ಬ್ರಹ್ಮಗಯ ಹಿಂದುಗಳ ಯಾತ್ರಾಸ್ಥಳವಾದರೆ ಇನ್ನೊಂದು ಭಾಗವಾದ ಬೋಧಗಯ ಪ್ರಪಂಚದ ಬೌದ್ಧರ ಯಾತ್ರಾಸ್ಥಳ.
ಗಯಾ
ಗಯಾ | |
---|---|
Location of ಗಯಾ | |
Population (2001) | |
• Total | ೩,೫೦,೦೦೦ |
Website | gaya.bih.nic.in |
Gaya
गया | |
---|---|
Metropolitan City | |
![]() Brahmayoni hill, where Buddha taught to Fire Sutta | |
Country | ![]() |
State | Bihar |
Region | Magadha |
Division | Magadh Division |
District | Gaya |
Government | |
• Type | Municipal corporation |
• Body | Gaya Nagar Nigam |
Area | |
• Total | ೫೦.೧೭ km೨ (೧೯.೩೭ sq mi) |
Elevation | ೧೧೧ m (೩೬೪ ft) |
Population (2011) | |
• Total | ೪,೬೩,೪೫೪ |
• Rank | 95th |
• Density | ೭,೮೦೦/km೨ (೨೦,೦೦೦/sq mi) |
Demonym | Gayaite |
Languages | |
• Official | Magahi, ಹಿಂದಿ, English |
Time zone | UTC+5:30 (IST) |
PIN | 823001 - 06 |
Telephone code | 91-631 |
Vehicle registration | BR 02 |
Railway Station | Gaya Junction |
Airport | Gaya Airport |
Website | www |
ಹಿಂದೂ ಪುರಾಣಗಳ ಪ್ರಕಾರ ಈ ಸ್ಥಳದಲ್ಲಿ ಮಹಾವಿಷ್ಣುವು ಗಯಾಸುರನೆಂಬ ಅಸುರನನ್ನು ಸಂಹರಿಸಿದನು. ಈ ಅಸುರನ ಹೆಸರೇ ನಗರಕ್ಕೂ ಅಂಟಿತು. ವಿಷ್ಣುವು ಗಯಾಸುರನನ್ನು ತನ್ನ ಪಾದಗಳಿಂದ ಒತ್ತಿಹಿಡಿವ ಮೂಲಕ ಸಂಹರಿಸಿದನು. ಗಯಾಸುರನು ಸಣ್ಣಸಣ್ಣ ಬೆಟ್ಟಗುಡ್ಡಗಳಾಗಿ ಪರಿವರ್ತಿತನಾದನು. ಗಯಾಸುರನು ಮಹಾ ಮಹಿಮಾವಂತನಾಗಿದ್ದು ತನ್ನನ್ನು ಸ್ಪರ್ಶಿಸುವವರ ಅಥವಾ ನೋಡುವವರ ಪಾಪಗಳೆಲ್ಲವನ್ನು ಕಳೆಯಬಲ್ಲವನಾಗಿದ್ದನು. ದೇವತೆಗಳು ಗಯಾಸುರನ ಮರಣದ ನಂತರ ಆತನ ಕಾಯದಲ್ಲಿ ನೆಲೆಸುವೆವೆಂದು ವಚನವಿತ್ತಿದ್ದರು. ಹೀಗಾಗಿ ಸಾವಿನ ನಂತರ ಈ ಪ್ರದೇಶದಲ್ಲಿ ಬೆಟ್ಟಗುಡ್ಡ ಮತ್ತು ನೆಲದ ರೂಪದಲ್ಲಿ ಉಳಿದಿರುವ ಗಯಾಸುರನ ಕ್ಷೇತ್ರವು ಪರಮ ಪಾವನವಾಗಿ ಸರ್ವ ಪಾಪಗಳನ್ನು ನೀಗಿಸಬಲ್ಲ ಕ್ಷೇತ್ರವಾಯಿತು. ಹಿಂದೂಗಳು ಇಲ್ಲಿ ತಮ್ಮ ಪೂರ್ವಜರಿಗೆ ಶ್ರಾದ್ಧಕಾರ್ಯಗಳನ್ನು ನಡೆಸುವರು. ಇದರಿಂದಾಗಿ ತಮ್ಮ ಪೂರ್ವಜರು ಮಾಡಿರಬಹುದಾದ ಎಲ್ಲ ಪಾಪಗಳು ತೊಳೆದುಹೋಗಿ ಅವರಿಗೆ ಮುಕ್ತಿ ಸಿಗುವುದೆಂಬ ನಂಬಿಕೆ ಇದೆ.