ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್
From Wikipedia, the free encyclopedia
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ನಿಯಮಿತ (KIOCL), ಒಂದು ಭಾರತ ಸರ್ಕಾರದ ಉದ್ಯಮ ಅದರ ಮತ್ತು ಆಡಳಿತಾತ್ಮಕ ಮುಖ್ಯ ಕಛೇರಿ ಬೆಂಗಳೂರಿನಲ್ಲಿದೆ ಹಾಗೂ ಇದು ಮಂಗಳೂರಿನಲ್ಲಿ ಒಂದು ಪೆಲೆಟ್ಟೇಶನ್ ಪ್ಲಾಂಟ್ಅನ್ನು ಮತ್ತು ಕುದುರೆಮುಖ(ಚಿಕ್ಕಮಗಳೂರು ಜಿಲ್ಲೆ)ದಲ್ಲಿ ಒಂದು ಕಬ್ಬಿಣದ ಅದಿರಿನ ಗಣಿ ಹೊಂದಿತ್ತು. ಕುದುರೆಮುಖ ಗಣಿ, ವಿಶ್ವದ ಅತಿ ದೊಡ್ಡ ಕಬ್ಬಿಣದ ಅದಿರು ಗಣಿಗಳಲ್ಲಿ ಒಂದಾಗಿದೆ, ಇದನ್ನು ೨೦೦೬ ರಲ್ಲಿ ಮುಚ್ಚಲಾಯಿತು [3].
ಸಂಸ್ಥೆಯ ಪ್ರಕಾರ | ಸಾರ್ವಜನಿಕ ವಲಯದ ಸಂಸ್ಥೆ |
---|---|
ಸ್ಥಾಪನೆ | ೧೯೭೬ |
ಮುಖ್ಯ ಕಾರ್ಯಾಲಯ | ಬೆಂಗಳೂರು, ಭಾರತ |
ಪ್ರಮುಖ ವ್ಯಕ್ತಿ(ಗಳು) | ಶ್ರೀ ಎಂ.ವಿ.ಸುಬ್ಬಾ ರಾವ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ[1] |
ಉದ್ಯಮ |
|
ಉತ್ಪನ್ನ |
|
ಆದಾಯ | ೪೯೭.೩ ದಶಲಕ್ಷ ರೂ (2016-17)[2] |
ಪೋಷಕ ಸಂಸ್ಥೆ | ಉಕ್ಕು ಸಚಿವಾಲಯ |
ಜಾಲತಾಣ | www.kioclltd.in |
ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ಕುದುರೆಮುಖದಲ್ಲಿ ಅದಿರಿನ ಗಣಿಗಾರಿಕೆ ನಡೆಯುತ್ತಿತ್ತು. ಗಣಿಗಾರಿಕೆ ಅದಿರನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲಕ 110 ಕಿಮೀ ಕೊಳವೆ ಮಾರ್ಗದ ಮೂಲಕ ಹೊಸ ಮಂಗಳೂರು ಪಕ್ಕದಲ್ಲಿರುವ ಪಣಂಬೂರು ಬಂದರಿಗೆ ಸಾಗಿಸಲಾಗುತ್ತಿತು. ಮಂಗಳೂರಿನ ಕಂಪನಿಯು ೧೯೮೭ ರಲ್ಲಿ ಮಂಗಳೂರಿನಲ್ಲಿ ವಾರ್ಷಿಕವಾಗಿ 3.5 ದಶಲಕ್ಷ ಟನ್ನುಗಳ ಸಾಮರ್ಥ್ಯವಿರುವ ಪೆಲೆಟ್ ಘಟಕವನ್ನು ನಿರ್ಮಿಸಿತು [4]. ಈ ಸ್ಥಾವರವು 2011 ರಲ್ಲಿ ಸ್ಥಗಿತಗೊಂಡಿತು ಆದರೆ 2014 ರಲ್ಲಿ ಈ ಘಟಕ ಎನ್ಎಂಡಿಸಿ ಲಿಮಿಟೆಡ್ ಸರಬರಾಜು ಮಾಡಿದ ಅದಿರನ್ನು ಸಂಸ್ಕರಿಸಿ ಚೀನಾ, ಇರಾನ್, ಜಪಾನ್ ಮತ್ತು ತೈವಾನ್ ದೇಶಗಳಿಗೆ ಕಳುಹಿಸಿತು.