ಕರ್ನಾಟಕ ವಿಧಾನ ಪರಿಷತ್
From Wikipedia, the free encyclopedia
ಕರ್ನಾಟಕ ವಿಧಾನ ಪರಿಷತ್ತು ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ. ವಿಧಾನ ಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ಧಿಷ್ಟ ಕಾರ್ಯ ನಿರ್ವಹಿಸುತ್ತವೆ. ಇದನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು.
- ಭಾರತ ಸಂವಿಧಾನವನ್ನು ಅಂಗೀಕರಿಸುವ ಮೊದಲೇ ಮೈಸೂರು ಸಂಸ್ಥಾನದಲ್ಲಿ (1907) ಮೇಲ್ಮನೆ ಸ್ಥಾಪನೆಯಾಗಿತ್ತು. ಮುಂದೆ ರಾಷ್ಟ್ರ ಮಟ್ಟದಲ್ಲಿ ‘ರಾಜ್ಯಸಭೆ’ ಸ್ಥಾಪನೆಗೂ ಇದು ಸ್ಫೂರ್ತಿಯಾಯಿತು.
- 1914ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಮೈಸೂರು ದಿವಾನರಾಗಿದ್ದಾಗ ನ್ಯಾಯವಿಧೇಯಕ ಸಭೆಯ ಸಂಖ್ಯೆಯನ್ನು 18ಕ್ಕೆ ನಿಗದಿಪಡಿಸಿದರು. ಆ ಪೈಕಿ ನಾಲ್ವರನ್ನು ಮೈಸೂರು ಪ್ರಜಾ ಪ್ರತಿನಿಧಿ ಸಭೆಯಿಂದ, ಉಳಿದ ನಾಲ್ವರನ್ನು ಎಂಟು ಜಿಲ್ಲೆಗಳಿಂದ ಆರಿಸುವಂತೆ ಹಾಗೂ ಮುಸಲ್ಮಾನರು, ಕ್ರೈಸ್ತರು, ಕೆಳವರ್ಗದ ಜನರನ್ನು ನಾಮನಿರ್ದೇಶನ ಮಾಡುವ ನಿಯಮಕ್ಕೆ ಚಾಲನೆ ನೀಡಿದರು.
- ವಿಧಾನ ಪರಿಷತ್ತು ಮತ್ತು ರಾಜ್ಯಸಭೆ ಪ್ರತಿಭಾವಂತರು ರಾಜಕೀಯ ವ್ಯವಸ್ಥೆಯಲ್ಲಿ ಅವಕಾಶ ಮಾಡಿಕೊಡಲು ಇರುವ ವ್ಯವಸ್ಥೆ.ಇದಕ್ಕೆ ಅತ್ಯುತ್ತಮ ಸಾಕ್ಷಿ ಎಂದರೆ, ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಪ್ರಜ್ಞಾಪೂರ್ವಕವಾಗಿ ರಾಜ್ಯಸಭೆಗೆ ಆರಿಸಿ, ಸಂವಿಧಾನ ರಚನೆಯಂತಹ ಮಹತ್ವದ ಕೆಲಸವನ್ನು ಸಾಧ್ಯಮಾಡಲಾಯಿತು. ಮೌಲಿಕವಾದ ವಿಚಾರಧಾರೆ,ಚರ್ಚೆಯಿಂದ ಮೇಲ್ಮನೆ ಒಂದು ಅಂಕುಶದಂತೆ ಕಾರ್ಯ ನಿರ್ವಹಿಸುತ್ತದೆ.
- ಶಾಸನ ನಿರೂಪಣೆ ಮತ್ತು ಆಡಳಿತ ವಿಚಾರಗಳಲ್ಲಿ ಸರ್ಕಾರಕ್ಕೆ ಸಹಕಾರಿಯಾಗಲೆಂಬ ಉದಾರ ಆಶಯದಿಂದ ಕರ್ನಾಟಕ ವಿಧಾನ ಪರಿಷತ್ತು ಅಸ್ತಿತ್ವಕ್ಕೆ ಬಂತು. ಭಾಷಾವಾರು ರಾಜ್ಯ ರಚನೆ, ಪ್ರಾಂತ್ಯಗಳ ಪುನರ್ವಿಂಗಡಣೆಯಾದ ನಂತರ ಆಯಾ ರಾಜ್ಯಗಳ ವ್ಯಾಪ್ತಿ, ಜನಸಂಖ್ಯೆ, ಅವಶ್ಯಕತೆಗೆ ತಕ್ಕಂತೆ ಮೇಲ್ಮನೆ ರಚಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ವಿವೇಚನೆಯನ್ನು ರಾಜ್ಯಗಳಿಗೆ ನೀಡಲಾಗಿದೆ.
- ಕರ್ನಾಟಕ ವಿಧಾನ ಪರಿಷತ್ತು ರಚನೆಯಿಂದ ತಜ್ಞರೂ, ಅನುಭವಿಗಳೂ ಆದಕೆ.ಟಿ.ಭಾಷ್ಯಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಂ.ಪಿ.ಎನ್.ಶಾಸ್ತ್ರಿ, ಬಸವರಾಜ ಕಟ್ಟೀಮನಿ, ಬಿ.ಜಯಮ್ಮ, ಅಕ್ಬರ್ ಅಲಿ ಮುಂತಾದ ಅನೇಕ ಮಹನೀಯರು ಶಾಸನಸಭೆ ಪ್ರವೇಶಿಸಲು ಸಾಧ್ಯವಾಯಿತು. ಹೀಗೆ ರಾಜಕೀಯ ಪಕ್ಷಗಳ ದಾಕ್ಷಿಣ್ಯದಿಂದ ಮುಕ್ತರಾದ, ಪೂರ್ವಗ್ರಹಪೀಡಿತರಾಗದ, ಹಿರಿಯರ ಹಾಗೂ ತಜ್ಞರ ಸಲಹೆ-ಸೂಚನೆಗಳು ಸಿಗಬೇಕೆಂಬುದು ಮೇಲ್ಮನೆ ರಚನೆಯ ಉದ್ದೇಶ.
- ಖ್ಯಾತ ವಿಜ್ಞಾನಿ ಡಾ. ರಾಜಾರಾಮಣ್ಣ ಹತ್ತು ವರ್ಷ ಪ್ರಧಾನಿಯಾಗಿದ್ದ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಡಾ. ಮನಮೋಹನ್ ಸಿಂಗ್ ರಾಜ್ಯಸಭಾ ಸದಸ್ಯರಾಗಿದ್ದರು.ಪಂಚಾಯತ್ರಾಜ್ ವ್ಯವಸ್ಥೆಯನ್ನು ಪರಿಚಯಿಸಿದ ಅಬ್ದುಲ್ ನಜೀರ್ಸಾಬ್, ವೈಕುಂಠ ಬಾಳಿಗಾ, ರಾಮಕೃಷ್ಣ ಹೆಗಡೆ, ಎ.ಕೆ.ಸುಬ್ಬಯ್ಯ, ಮೈಸೂರು ಗೀತಾ ಬುಕ್ಹೌಸ್ನ ಸತ್ಯನಾರಾಯಣ, ಮಳ್ಳೂರು ಆನಂದರಾವ್, ಬಿ.ವಿ.ಕಕ್ಕಿಲ್ಲಾಯ ಮುಂತಾದ ಅನೇಕ ಮಹನೀಯರುಗಳು ಮೇಲ್ಮನೆ ಸದಸ್ಯರಾಗಿದ್ದರು.
- ಗಂಭೀರ ಚರ್ಚೆಗಳು ನಡೆಯಬೇಕು ಎನ್ನುವ ಕಾರಣಕ್ಕಾಗಿಯೇ ವಿಧಾನ ಪರಿಷತ್ ಅನ್ನು ವಿಶಿಷ್ಟವಾಗಿ ರಚಿಸಲಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ತಜ್ಞರಾದವರು, ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗದೇ ಇರುವವನ್ನು ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ.11 ಸದಸ್ಯರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ.
Quick Facts Karnataka Legislative Council ಕರ್ನಾಟಕ ವಿಧಾನ ಪರಿಷತ್ತು, Type ...
Karnataka Legislative Council ಕರ್ನಾಟಕ ವಿಧಾನ ಪರಿಷತ್ತು | |
---|---|
Type | |
Type | ಮೇಲ್ಮನೆ |
Leadership | |
ಸಭಾಪತಿಗಳು | ಪ್ರತಾಪ್ ಚಂದ್ರ ಶೆಟ್ಟಿ, Indian national Congress |
ಉಪ ಸಭಾಪತಿಗಳು | ಎಸ್ ಎಲ್ ಧರ್ಮೆಗೌಡ, JD (S) |
ಆಡಳಿತ ಪಕ್ಷದ ನಾಯಕರು | ಜಯಮಾಲ ರಾಮಚಂದ್ರ, INC |
ವಿರೋಧ ಪಕ್ಷದ ನಾಯಕರು | ಕೋಟ ಶ್ರೀನಿವಾಸ ಪೂಜಾರಿ, BJP |
Structure | |
Seats | 75 (64 elected, 11 nominated) |
Political groups | Indian National Congress (೩೭) Bharatiya Janata Party (೧೮) Janata Dal (Secular)(೧೬), Independents(೨) |
Meeting place | |
Legislative Council Chamber at the Vidhana Soudha | |
Website | |
http://kla.kar.nic.in/ | |
Footnotes | |
The Council was established in 1907 for the Princely State of Mysore. The Princely state was merged with the Union of India and became Mysore State in 1950; Mysore State was re-organized to its current territorial state in 1956 and renamed as Karnataka on 1 November 1973 |
Close
ಭಾರತದಲ್ಲಿ ಒಟ್ಟು ೭ (೬?) ರಾಜ್ಯಗಳಲ್ಲಿ ವಿಧಾನ ಪರಿಷತ್ ಕಾರ್ಯ ನಿರ್ವಹಿಸುತ್ತಿವೆ. ತಮಿಳು ನಾಡು ರಾಜ್ಯದಲ್ಲೂ ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ ವಿಧಾನ ಪರಿಷತ್'ನ ಒಟ್ಟು ಸದಸ್ಯರ ಸಂಖ್ಯೆ ೭೫. ಸದಸ್ಯರ ಕಾರ್ಯಾವದಿ ೬ ವರ್ಷ. ಇದರಲ್ಲಿ ೧/೩ ನೇ ಭಾಗದಷ್ಟು ಸದಸ್ಯರು ಪ್ರತಿ ೨ ವರ್ಷಕ್ಕೊಮ್ಮೆ ನಿವೃತ್ತಿ ಹೊಂದುತ್ತಾರೆ. ಈ ಕಾರಣದಿಂದ, ವಿಧಾನ ಪರಿಷತನ್ನು ಸ್ಥಿರ ಅಥವಾ ಖಾಯಂ ಸಭೆ ಎಂದು ಕರೆಯಲಾಗುತ್ತದೆ.(ಭಾರತದ ರಾಜ್ಯಾಂಗ)