From Wikipedia, the free encyclopedia
ಉಳ್ಳಾಲ ಇದು ಮಂಗಳೂರಿನಿಂದ ೮ ಕಿ.ಮೀ. ದಕ್ಷಿಣಕ್ಕೆ ನೇತ್ರಾವತಿ ನದಿಯ ದಡದಲ್ಲಿರುವ ಒಂದು ಪಟ್ಟಣ.ಇದು ೧೬ ನೆಯ ಶತಮಾನದಲ್ಲಿದ್ದ ಅಬ್ಬಕ್ಕ ರಾಣಿಯ ರಾಜಧಾನಿಯಾಗಿತ್ತು.ಇವಳ ಕುಲದೈವವಾದ ಸೋಮನಾಥ ದೇವರ ಸುಂದರ ದೇವಾಲಯವಿದೆ. ಮುಸ್ಲಿಂ ಸಮುದಾಯದ ಪ್ರಸಿದ್ದ ಮಸೀದಿಯೊಂದು ಇಲ್ಲಿದೆ. ಇಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಬಹಳ ಪ್ರಸಿದ್ಧಿಯಾಗಿದೆ. ಸೋಮೇಶ್ವರ ಕಡಲ ಕಿನಾರೆ ಪ್ರವಾಸಿ ಆಕರ್ಷಣೆಯ ಕೇಂದ್ರ.[1]
ಉಳ್ಳಾಲ
Ullal Ullal 1 | |
---|---|
ನಗರ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
Government | |
• Type | ನಗರಸಭೆ |
• Body | ಉಳ್ಳಾಲ ನಗರಸಭೆ |
Area | |
• Total | ೧೧.೮ km೨ (೪.೬ sq mi) |
Elevation | ೫ m (೧೬ ft) |
Population (2011) | |
• Total | ೫೩,೮೦೮ |
• Density | ೪,೬೦೦/km೨ (೧೨,೦೦೦/sq mi) |
ಭಾಷೆಗಳು | |
• ಅಧಿಕೃತ | ಕನ್ನಡ |
• Other | ಬ್ಯಾರಿ ಭಾಷೆ, ಕೊಂಕಣಿ, ತುಳು |
Time zone | UTC+5:30 (IST) |
ಪಿನ್ ಕೋಡ್ | 575020 |
Vehicle registration | KA 19 |
ಲೋಕ ಸಭೆ | ದಕ್ಷಿಣ ಕನ್ನಡ |
ವಿಧಾನ ಸಭೆ | ಮಂಗಳೂರು |
Literacy | 92.87% |
Website | www |
ಕವಿ ಉಲ್ಲಾಳ ಮಂಗೇಶರಾಯರು ಈ ಊರಿನವರು.
ಪುತ್ತಿಗೆಯ ಚೌಟ ಅರಸುಮನೆತನದ ಒಂದು ಶಾಖೆಯ ರಾಜರು ಉಳ್ಳಾಲವನ್ನು ಆಳುತ್ತಿದ್ದರು. ಇಲ್ಲಿಯ ಸೋಮನಾಥ ಅವರ ಕುಲದೇವರು. 16ನೆಯ ಶತಮಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ ಅಬ್ಬಕ್ಕ ಈ ಶಾಖೆಯಲ್ಲಿ ಪ್ರಸಿದ್ಧಳು. ವಿದೇಶಿಯರ ಬಲವನ್ನು ಮುರಿಯಲು ಸರ್ವಪ್ರಯತ್ನಮಾಡಿದ ಈ ವೀರರಾಣಿ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದಳು. ಆಕೆಯ ತರುವಾಯ ಉಲ್ಲಾಳ ರಾಜ್ಯವನ್ನಾಳಿದ ಆಕೆಯ ಮಗಳು ಕಾರ್ಕಳದ ಅರಸರೊಡನೆ ಯುದ್ಧ ಮಾಡಿ ಸತ್ತಳು. ಆಕೆಯ ಮಗ ಚಿಕ್ಕರಾಯ (1606-28) ಬಿದನೂರು ವೆಂಕಟಪ್ಪನಾಯಕನ ನೆರವನ್ನು ಪಡೆದು ಕಾರ್ಕಳದ ಅರಸನನ್ನು ಸೋಲಿಸಿದ (1608). ಭೋಜರಾಜನ ಆಳ್ವಿಕೆಯಲ್ಲಿ (1630-44) ಉಳ್ಳಾಲ ಬಿದನೂರು ಸಂಸ್ಥಾನಕ್ಕೆ ಸೇರಿತು.
ಉಳ್ಳಾಲದಲ್ಲಿ - ಕೋಟೆಪುರ, ಕೋಡಿ,ಅಬ್ಬಕ ನಗರ,ಉಳ್ಳಾಲ ಉಳಿಯ, ಉಳ್ಳಾಲ ಪೇಟೆ, ಮುಕ್ಕಚೇರಿ, ಮಾಸ್ತಿಕಟ್ಟೆ, ಒಂಬತ್ತು ಕೆರೆ, ಮೊಗವೀರ ಪಟ್ಟಣ, ಮದನಿ ನಗರ, ಹಳೆ ಕೋಟೆ ಇದು ಕೆಲವು ಸ್ಥಳಗಳ ಹೆಸರು.
ಉಳ್ಳಾಲದಲ್ಲಿ ಕೋಟೆ ಮತ್ತು ಅರಮನೆಯ ಅವಶೇಷಗಳಿವೆ. ಸೋಮನಾಥ ದೇವಾಲಯದಲ್ಲಿ ಇಟಾಲಿಯನ್ ಶೈಲಿಯ ಹಲವು ಸುಂದರ ಶಿಲ್ಪಗಳಿವೆ. ಊರಿನಿಂದ ಸು.9ಕಿಮೀ ದೂರದಲ್ಲಿ ಉಳ್ಳಾಲ ಅರಸರ ಭದ್ರತಾಣವಾಗಿದ್ದ ಉಚ್ಚಿಲ ಕೋಟೆ ಮತ್ತು ಮಣೇಲ ಅರಮನೆ ಇವೆ. ಕಾರ್ಕಳದ ಭೈರರಸ ಒಡೆಯರೂ ಇಲ್ಲಿ ಅರಮನೆಗಳನ್ನು ಕಟ್ಟಿದ್ದರೆಂದು ಹೇಳಿಕೆ.
ಸಯ್ಯದ್ ಮೊಹಮ್ಮದ್ ಶರೇಫ಼ುಲ್ ಮದನಿ ದರ್ಗಾ, ಶ್ರೀ ಚೀರುಂಬ ಬಗವಥಿ ದೇವಾಲಯ, ಸೋಮೇಶ್ವರ ದೇವಾಲಯ, ಕಡಪರ ಜಾರ ದರ್ಗಾ, ಬೇಸಿಗೆ ಸ್ಯಾಂಡ್ಸ್ ಬೀಚ್ ರೆಸಾರ್ಟ್, ರಾಣಿಪುರ ರಾಣಿ ಅಬ್ಬಕ್ಕ ಚೌಟ ಫೋರ್ಟ್, ಕೆ ಪಂಡ್ಯರಾಜ ಬಲ್ಲಾಳ್ ಇನ್ಸ್ಟಿಟ್ಯೂಟ್ ಮತ್ತು ನರ್ಸಿಂಗ್ ಕಾಲೇಜು, ಸಯ್ಯಿದ್ ಮದನಿ ಕಾಲೇಜುಗಳಂತೆ ಐತಿಹಾಸಿಕ ನೆಲೆಗಳಿಗೆ ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿನ ಮೀನು ಊಟ ಮತ್ತು ತೈಲ ಸಸ್ಯ ತುಂಬಾ ಪ್ರಸಿದ್ಧ. [2]
16ನೆಯ ಶತಮಾನದಲ್ಲಿ ಫ್ರಾನ್ಸಿಸ್ಕನ್ ಪಾದ್ರಿಗಳು ಕಟ್ಟಿಸಿದ ಚರ್ಚ್ ನಗರದಲ್ಲಿದೆ. .
ಉಲ್ಲಾಳದಲ್ಲಿರುವ ಸೈಯದ್ ಮಹಮ್ಮದ್ ಷರೀಫ ಮದನೀ ಅವರ ದರ್ಗಾ ಬಹು ಪ್ರಸಿದ್ಧ. ಈ ಸಂತರು ಸು.400 ವರ್ಷಗಳ ಹಿಂದೆ ಮದೀನಾದಿಂದ ಬಂದು ಇಲ್ಲಿನ ಮೇಲಂಗಡಿ ಮಸೀದಿಯಲ್ಲಿ ನೆಲಸಿ ಇಲ್ಲಿಯೇ ಮದುವೆಯಾಗಿ ಅನೇಕ ಪವಾಡಗಳನ್ನು ಮೆರೆಸಿ ಜನಮನ್ನಣೆ ಗಳಿಸಿದರೆಂದು ಪ್ರತೀತಿ. ಇವರ ಗೌರವಾರ್ಥ ಐದು ವರ್ಷಗಳಿಗೊಮ್ಮೆ ಉರುಸ್ ನಡೆಯುತ್ತದೆ. ಎಲ್ಲ ಜಾತಿಮತಗಳ ಜನ ಇಲ್ಲಿಗೆ ಬರುತ್ತಾರೆ. ಸಂತರ ಮರಣಾನಂತರ ಕಟ್ಟಿದ ದರ್ಗಾ ನಾಲ್ಕು ಬಾರಿ ಪುನರ್ನಿರ್ಮಾಣವಾಯಿತು. ಇಂದು ಇರುವ ಭವ್ಯ ಕಟ್ಟಡ 1970ರ ರಚನೆ. ಈ ದರ್ಗಾದ ಆಡಳಿತವರ್ಗ ಅರಬ್ಬೀ ಕಾಲೇಜು ಮತ್ತು ಪ್ರೌಢಶಾಲೆಯನ್ನು ನಡೆಸುತ್ತಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.