![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/d/da/Umar2.png/640px-Umar2.png&w=640&q=50)
ಉಮರ್
ಮುಹಮ್ಮದ್ ಪೈಗಂಬರರ ಆಪ್ತ ಸಂಗಡಿಗ ಮತ್ತು ಇಸ್ಲಾಮೀ ಸಾಮ್ರಾಜ್ಯದ ದ್ವಿತೀಯ ಖಲೀಫ. / From Wikipedia, the free encyclopedia
ಉಮರ್ ಬಿನ್ ಖತ್ತಾಬ್ (ಅರಬ್ಬಿ: عمر بن الخطاب) (ಕ್ರಿ.ಶ. 584 – 644) — ಮುಹಮ್ಮದ್ರ ಆಪ್ತ ಸಂಗಡಿಗ ಮತ್ತು ಪ್ರಮುಖ ಅನುಯಾಯಿಗಳಲ್ಲೊಬ್ಬರು. ಇಸ್ಲಾಮೀ ಸಾಮ್ರಾಜ್ಯದ ದ್ವಿತೀಯ ಖಲೀಫ. ಮುಸಲ್ಮಾನರ ನಂಬಿಕೆ ಪ್ರಕಾರ ಬದುಕಿರುವಾಗಲೇ ಸ್ವರ್ಗದ ಸುವಾರ್ತೆ ಪಡೆದ ಹತ್ತು ಸಹಾಬಿಗಳಲ್ಲಿ ಒಬ್ಬರು. ಮುಹಮ್ಮದ್ರ ಪತ್ನಿ ಹಫ್ಸರ ತಂದೆ. ತನ್ನ ನ್ಯಾಯಸಮ್ಮತ ಮತ್ತು ನಿಷ್ಪಕ್ಷ ಆಡಳಿತದ ಮೂಲಕ ಜಗದ್ವಿಖ್ಯಾತಿ ಪಡೆದ ಆಡಳಿತಗಾರ.
ಉಮರ್ عمر | |
---|---|
ಫಾರೂಕ್, ಅಮೀರುಲ್ ಮೂಮಿನೀನ್ | |
![]() | |
ಅರಬ್ಬೀ ಭಾಷೆಯಲ್ಲಿರುವ ಉಮರ್ರ ಹೆಸರು | |
ದ್ವಿತೀಯ ಖಲೀಫ | |
ಆಡಳಿತ | ಆಗಸ್ಟ್ 23, 634 ರಿಂದ ನವೆಂಬರ್ 3, 644 |
ಪೂರ್ವಾಧಿಕಾರಿ | ಅಬೂ ಬಕರ್ ಬಿನ್ ಅಬೂ ಕುಹಾಫ |
ಉತ್ತರಾಧಿಕಾರಿ | ಉಸ್ಮಾನ್ ಬಿನ್ ಅಫ್ಫಾನ್ |
ಪತ್ನಿಯರು |
|
ಗೋತ್ರ | ಬನೂ ಅದೀ (ಕುರೈಷ್) |
ತಂದೆ | ಖತ್ತಾಬ್ ಬಿನ್ ನುಫೈಲ್ |
ತಾಯಿ | ಹಂತಮ ಬಿಂತ್ ಹಿಶಾಂ |
ಜನನ | 583 ಮಕ್ಕಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ |
ಮರಣ | 644 ಮದೀನಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ |
Burial | ಮದೀನಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ |
ಕೆಲಸ | ವ್ಯಾಪಾರಿ, ಆಡಳಿತಗಾರ |
ಧರ್ಮ | ಇಸ್ಲಾಂ ಧರ್ಮ |
ಉಮರ್ ಆರಂಭಕಾಲದಲ್ಲಿ ಮುಹಮ್ಮದ್ರ ಬದ್ಧ ವೈರಿಯಾಗಿದ್ದರು. ಮುಹಮ್ಮದ್ರ ಧರ್ಮದಿಂದಾಗಿ ಕುರೈಷ್ ಬುಡಕಟ್ಟಿನಲ್ಲಿ ಮತ್ತು ಮಕ್ಕಾದಲ್ಲಿ ಜನರ ಮಧ್ಯೆ ಒಡುಕು ಮೂಡುತ್ತಿರುವುದನ್ನು ಕಂಡು ರೋಷಾಕುಲರಾಗಿ ಖಡ್ಗವನ್ನು ಬೀಸಿಕೊಂಡು ಮುಹಮ್ಮದ್ರನ್ನು ಹತ್ಯೆಗೈಯಲು ತೆರಳಿದಾಗ, ತನ್ನ ತಂಗಿ ಕೂಡ ಇಸ್ಲಾಂ ಧರ್ಮಕ್ಕೆ ಸೇರಿದ ಸುದ್ದಿಯನ್ನು ತಿಳಿದು ತಂಗಿಯ ಮನೆಯತ್ತ ಧಾವಿಸಿದರು. ಅಲ್ಲಿ ಅನಿರೀಕ್ಷಿತವಾಗಿ ಅವರು ಕುರ್ಆನ್ ಶ್ಲೋಕಗಳಿಗೆ ಕಿವಿಗೊಟ್ಟರು. ಇದರಿಂದ ಅವರ ಮನಪರಿವರ್ತನೆಯಾಯಿತೆಂದು ಹೇಳಲಾಗುತ್ತದೆ. ಆ ಕ್ಷಣದಲ್ಲೇ ಅವರು ಮುಹಮ್ಮದ್ರ ಬಳಿಗೆ ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾದರು.
ಪ್ರಥಮ ಖಲೀಫ ಅಬೂ ಬಕರ್ರ ಮರಣಾನಂತರ ಉಮರ್ ಇಸ್ಲಾಮೀ ಸಾಮ್ರಾಜ್ಯದ ದ್ವಿತೀಯ ಖಲೀಫರಾದರು. ಅವರ ಆಡಳಿತಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯವು ಊಹಿಸಲಾಗದಷ್ಟು ವೇಗದಲ್ಲಿ ವಿಸ್ತರಿಸಿತು. ಸಂಪೂರ್ಣ ಸಾಸಾನಿ ಸಾಮ್ರಾಜ್ಯ ಮತ್ತು ಬೈಝಾಂಟೈನ್ ಸಾಮ್ರಾಜ್ಯದ ಮೂರರಲ್ಲಿ ಎರಡು ಭಾಗ ಇಸ್ಲಾಮಿನ ತೆಕ್ಕೆಗೆ ಬಂದವು. ಅವರು ಸಾಸಾನಿಗಳ ವಿರುದ್ಧ ಹೋರಾಡಿ ಕೇವಲ ಎರಡು ವರ್ಷಗಳಲ್ಲಿ ಪರ್ಶಿಯಾ ಪತನದ ಮೂಲಕ ಸಾಸಾನಿ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ನಾಶ ಮಾಡಿದರು. ಅವರು ಯಹೂದರ ಮೇಲಿದ್ದ ಕ್ರೈಸ್ತ ಬಹಿಷ್ಕಾರವನ್ನು ಕೊನೆಗೊಳಿಸಿ ಅವರಿಗೆ ಜೆರುಸಲೇಮ್ ಪ್ರವೇಶಿಸಿ ಆರಾಧನೆ ಮಾಡಲು ಅವಕಾಶ ನೀಡಿದರು. ಕ್ರಿ.ಶ. 644 ರಲ್ಲಿ ಅವರು ಪರ್ಶಿಯನ್ ಗುಲಾಮ ಅಬೂ ಲುಅಲುಅ ಫೈರೂಝ್ನಿಂದ ಕೊಲೆಯಾದರು.