From Wikipedia, the free encyclopedia
ಹರಿಹರ : ೧೨ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಶೈವಕವಿ.ಈತನ ಸೋದರಳಿಯನೆ ರಾಘವಾಂಕ.ಹರಿಹರನು ಕೆಲವು ಕಾಲ ನರಸಿಂಹ ಬಲ್ಲಾಳ ರಾಜನಲ್ಲಿ ಕರಣಿಕನಾಗಿದ್ದ.ಹುಟ್ಟಿದ್ದು ಹಂಪೆಯಲ್ಲಿ. ತಂದೆ ಮಹದೇವ ಭಟ್ಟ, ತಾಯಿ ಶರ್ವಾಣಿ,ತಂಗಿ ರುದ್ರಾಣಿ. ಈಕೆ ರಾಘವಾಂಕನ ತಾಯಿ. ಗುರು ಮಾಯಿದೇವ.ಆರಾಧ್ಯ ದೈವ ಹಂಪೆಯ ವಿರೂಪಾಕ್ಷ.
ಈತ "ರಗಳೆಗಳ ಕವಿ" ಎಂದೆ ಪ್ರಸಿದ್ಧನಾಗಿದ್ದಾನೆ. ಹನ್ನೆರಡನೆಯ ಶತಮಾನದ ಬಹು ಮಹತ್ವದ ಶರಣ ಚಳವಳಿ ಮತ್ತು ವಚನ ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ. ಮೂಲತಃ ಆತನು ಭಕ್ತ ಕವಿ. ಆತನ ಕಾವ್ಯದ ತುಂಬ ಭಕ್ತಿಯು ಓತಪ್ರೋತವಾಗಿ ಹರಿದಿದೆ. ಹರಿಹರನ ಎರಡೂ ಶತಕಗಳಲ್ಲಿ ಆತನು ಹಂಪೆಯ ಶ್ರೀ ವಿರೂಪಾಕ್ಷನಲ್ಲಿ ತಳೆದಿರುವ ಭಕ್ತಿಯು ಎದ್ದು ಕಾಣುತ್ತದೆ. ಅಂತೆಯೇ ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ.
ಹರಿಹರನ ಶತಕದ್ವಯವು ಪ್ರಮುಖವಾಗಿ ಆತನ ಆತ್ಮಕಥನಗಳೇ ಆಗಿವೆ. ಗಿರಿಜಾ ಕಲ್ಯಾಣವು ಹರಿಹರನ ಮಹೋನ್ನತ ಚಂಪೂ ಕಾವ್ಯವಾಗಿದೆ. ಆವರೆಗಿನ ಕನ್ನಡ ಚಂಪೂ ಕೃತಿಗಳಲ್ಲಿ ಕಾಣದ ಕಥಾ ವಿಷಯವು ಇಲ್ಲಿದೆ. ಶೈವ ಪುರಾಣ ಗಳಲ್ಲಿ ಕಂಡು ಬರುವ ಶಿವಪಾವ೯ತಿಯರ ವಿವಾಹದ ಕಥೆ ಗಿರಿಜಾ ಕಲ್ಯಾಣದ ವಸ್ತು. ಗಿರಿಜೆಯ ಜನನದಿಂದ ಶಿವನೊಡನೆ ಅವಳ ವಿವಾಹದವರೆಗೆ ಮನೋಜ್ಞವಾಗಿ ಅವಳ ಸೌಂದಯ೯, ಸೊಬಗು, ಭಕ್ತಿಯ ಕಠೋರತೆ ಇವುಗಳನ್ನು ಸೂಕ್ಷ್ಮವಾಗಿ ಕವಿಯು ಚಿತ್ರಿಸಿದ್ದಾನೆ.
ಹರಿಹರನ ರಗಳೆಗಳಂತೂ ಆತನ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರಗೊಳಿಸಿರುವ ಅಮರ ಕೃತಿಗಳು. ಹರಿಹರನ ನೈಜಪ್ರತಿಭೆಯು ಇಲ್ಲಿ ಗೋಚರಿಸುತ್ತದೆ. ಅವನ ರಗಳೆಗಳ ಸಂಖ್ಯೆಗಳ ಬಗ್ಗೆ ಗೊಂದಲವಿದೆಯಾದರೂ, ಅವುಗಳ ಸಂಖ್ಯೆಯು ೧೦೬ ಎಂದು ಬಹುತೇಕರ ಅಭಿಪ್ರಾಯವಾಗಿದೆ. ವಿವಿಧ ಗಾತ್ರದ, ಬೇರೆ ಬೇರೆ ಶಿವಶರಣರ ಕಥೆಗಳನ್ನು ಈ ರಗಳೆಗಳಲ್ಲಿ ಹೇಳಲಾಗಿದೆ. ಮುಖ್ಯವಾಗಿ ೬೩ ಪುರಾತನರ, ಅಂದರೆ ತಮಿಳಿನ 'ಪೆರಿಯ ಪುರಾಣ'ದಲ್ಲಿ ಹೇಳಲಾಗಿರುವ ೬೩ ಶಿವಭಕ್ತರ ಕಥೆಗಳು ಇಲ್ಲಿವೆ.
ಹೊಯ್ಸಳ ಸಾಮ್ರಾಜ್ಯದ ಕನ್ನಡ ಕವಿಗಳು ಮತ್ತು ಬರಹಗಾರರು (1100-1343 CE) | |
ನಾಗಚಂದ್ರ | 1105 |
ಕಾಂತಿ | 1108 |
ರಾಜಾದಿತ್ಯ | 12th. c |
ಹರಿಹರ | 1160–1200 |
ಉದಯಾದಿತ್ಯ | 1150 |
ವೃತ್ತ ವಿಲಾಸ | 1160 |
ಕೆರೆಯ ಪದ್ಮರಸ | 1165 |
ನೇಮಿಚಂದ್ರ | 1170 |
ಸುಮನೋಬನ | 1175 |
ರುದ್ರಭಟ್ಟ | 1180 |
ಅಗ್ಗಳ | 1189 |
ಪಾಲ್ಕುರಿಕಿ ಸೋಮನಾಥ | 1195 |
ಬೊಪ್ಪಣ | 1180 |
ಕವಿ ಕಾಮ | 12th c. |
ದೇವಕವಿ | 1200 |
ರಾಘವಾಂಕ | 1200–1225 |
ಭಂದುವರ್ಮ | 1200 |
ಬಾಲಚಂದ್ರ ಕವಿ | 1204 |
ಪಾರ್ಶ ಪಂಡಿತ | 1205 |
ಮಹಾನಂದಿ ಆಚಾರ್ಯ | 1209 |
ಜನ್ನ | 1209–1230 |
ಪುಲಿಗೆರೆ ಸೋಮನಾಥ | 13th c. |
ಹಸ್ತಿಮಲ್ಲ | 13th c. |
ಚಂದ್ರಮ | 13th c. |
ಸೋಮರಾಜ | 1222 |
ಗುಣವರ್ಮ II | 1235 |
ಪೊಳಲ್ವದಂತನಾಥ | 1224 |
ಆಂಡಯ್ಯ | 1217–1235 |
ಸಿಸುಮಯಣ | 1232 |
ಮಲ್ಲಿಕಾರ್ಜುನ | 1245 |
ನರಹರಿತೀರ್ಥ | 1281 |
ಕುಮಾರ ಪದ್ಮರಸ | 13th c. |
ಮಹಾಬಲ ಕವಿ | 1254 |
ಕೇಶಿರಾಜ | 1260 |
ಕುಮುದೇಂದು | 1275 |
ನಾಚಿರಾಜ | 1300 |
ರಟ್ಟ ಕವಿ | 1300 |
ನಾಗರಾಜ | 1331 |
ಸೇವುಣ ಯಾದವ ಆಳ್ವಿಕೆಯಲ್ಲಿ ಪ್ರಸಿದ್ಧ ಕನ್ನಡ ಕವಿಗಳು ಮತ್ತು ಬರಹಗಾರರು | |
ಕಮಲಭವ | 1180 |
ಅಚ್ಚಣ್ಣ | 1198 |
ಅಮುಗಿದೇವ | 1220 |
ಚಾವುಂಡರಸ | 1300 |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.