ರಾಮನಗರ
ರೇಷ್ಮೆ ನಾಡು / From Wikipedia, the free encyclopedia
ರಾಮನಗರ ಕರ್ನಾಟಕದ ಒಂದು ನಗರ, ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ಕಸಬಾ ಹೋಬಳಿಯ ಕೇಂದ್ರವಾಗಿದೆ. ರಾಮನಗರ ಜಿಲ್ಲೆಯ ಹೆಸರುನ್ನು ನವ ಬೆಂಗಳೂರು ಎಂದು ಬದಲಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರು ಜಿಲ್ಲೆಯ ಭಾಗವಾಗಿದ್ದು 1986ರಲ್ಲಿ ಬೆಂಗಳೂರು ಗ್ರಾಮಾಂತರ ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ನಂತರ 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು ರೇಷ್ಮೆ ನಾಡು, ಕ್ಷೀರ ನಗರ, ಸಪ್ತಗಿರಿ ನಾಡು ಎಂದು ಖ್ಯಾತಿಗಳಿಸಿದೆ. ರಾಮನಗರ ತಾಲೂಕು ವಿಸ್ತೀರ್ಣ 630 ಚ.ಕಿ.ಮೀ ಹೊಂದಿದೆ.
ರಾಮನಗರ
ರೇಷ್ಮೆ ನಗರ | |
---|---|
ನಗರ | |
English transcription(s) | |
ಒಕ್ಕೂಟ | ಭಾರತ |
ನಾಡು/ದೇಶ | ಕರ್ನಾಟಕ |
ಜಿಲ್ಲೆ | ರಾಮನಗರ |
Elevation | ೭೪೭ m (೨,೪೫೧ ft) |
Population (2011) | |
• Total | ೯೫,೧೬೭ [1] |
Languages | |
• Official | ಕನ್ನಡ |
Time zone | UTC+5:30 (IST) |
Website | www.ramanagaracity.mrc.gov.in |
ರಾಮನಗರ ನಗರ ಪ್ರದೇಶ ವ್ಯಾಪ್ತಿಯಲ್ಲಿ ರಾಮನಗರ, ಕೊತ್ತಿಪುರ, ಸಿಡ್ಲುಕಲ್ಲು, ಚನ್ನಮಾನಹಳ್ಳಿ, ಅರ್ಚಕರಹಳ್ಳಿ, ಐಜೂರು, ರಂಗರಾಯರ ದೊಡ್ಡಿ, ಬೋಳಪ್ಪನಹಳ್ಳಿ, ಚನ್ನೇನಹಳ್ಳಿ, ಕೇಶವಪುರ, ಚಾಮುಂಡಿಪುರ, ಜಿಗೇನಹಳ್ಳಿ, ರಾಯರದೊಡ್ಡಿ, ಕೆಂಪೇಗೌಡನ ದೊಡ್ಡಿ, ಅಂಚೆಕೆಂಪಯ್ಯನ ದೊಡ್ಡಿ, ದೇವರೆಸೆಗೌಡನ ದೊಡ್ಡಿ, ವಡೇರಹಳ್ಳಿ, ರಾಮಗಿರಿ, ರಾಮದುರ್ಗ ಎಂಬ 20 ಗ್ರಾಮಗಳನ್ನು ಕೂಡಿ ರಾಮನಗರ ನಗರವಾಗಿದೆ.
ರಾಮನಗರ ಜಿಲ್ಲೆ 6 ತಾಲೂಕುಗಳನ್ನು ಹೊಂದಿದೆ ಅವುಗಳೆಂದರೆ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಕುಣಿಗಲ್, ಹಾರೋಹಳ್ಳಿಯನ್ನು 2020ರಲ್ಲಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ.
ಬೇಡಿಕೆಯಿರುವ 5 ಹೊಸ ತಾಲೂಕುಗಳು ಕನಕಪುರ ತಾಲೂಕನ್ನು ವಿಭಜಿಸಿ ಹಾರೋಹಳ್ಳಿ ಮತ್ತು ಕೋಡಿಹಳ್ಳಿ ತಾಲೂಕು ರಚನೆ ಮಾಡಬೇಕು.
ರಾಮನಗರ ತಾಲೂಕನ್ನು ವಿಭಜಿಸಿ ಬಿಡದಿ ತಾಲೂಕು ರಚನೆ ಮಾಡಬೇಕು
ಮಾಗಡಿ ತಾಲೂಕನ್ನು ವಿಭಜಿಸಿ ಕುದೂರು ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ವಿಭಜಿಸಿ ಹುಲಿಯೂರು ದುರ್ಗ ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ರಾಮನಗರ ಜಿಲ್ಲೆಗೆ ಸೇರ್ಪಡೆ ಮಾಡಬೇಕು ರಾಮನಗರ ಜಿಲ್ಲೆಯ ಒಟ್ಟು ವಿಸ್ತೀರ್ಣ 4497 ಚ.ಕಿ.ಮೀ.