ರಘುವಂಶಮ್
From Wikipedia, the free encyclopedia
ರಘುವಂಶ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಮಹಾಕಾವ್ಯ. ೧೯ ಸರ್ಗಗಳನ್ನು ಒಳಗೊಂಡಿರುವ ಈ ಮಹಾಕಾವ್ಯ ದಿಲೀಪ ಖಾಟ್ವಂಗ್, ರಘು, ದಶರಥ, ರಾಮ ಸೇರಿದಂತೆ ಲವ ಕುಶಅಗ್ನಿವರ್ಣನವರೆಗೆ ಬರುವ ರಘುವಂಶದ ರಾಜರ ಕಥೆಗಳನ್ನು ಒಳಗೊಂಡಿದೆ. ಹತ್ತನೇ ಸರ್ಗದಿಂದ ಹದಿನೈದನೇ ಸರ್ಗದವರೆಗೆ ರಾಮನ ಕಥೆಯನ್ನು ವರ್ಣಿಸಲಾಗಿದೆ. ಅನಂತರವೂ ಆಯಾಯಾ ಕಾಲದ ರಾಮನ ವಂಶದ ರಾಜರುಗಳ ಚರಿತ್ರೆಯನ್ನು ಹೇಳಲಾಗಿದೆ.ಕೊನೆಯ ಸರ್ಗವು ಅಗ್ನಿವರ್ಣನ ರಾಜ್ಯಾಭಿಷೇಕದೊಂದಿಗೆ ಮುಗಿಯುತ್ತದೆ. ಕಾಳಿದಾಸನು ಅಗ್ನಿವರ್ಣನ ನಂತರದ ರಾಜರುಗಳ ವಿವರಗಳನ್ನೂ ಬರೆಯಲು ಬಯಸಿದ್ದರೂ ಆತ ಮೃತ್ಯುವಶವಾದನೆಂದು ಕೆಲವರು ಅಭಿಪ್ರಾಯವಿದೆ. ಮತ್ತೆ ಕೆಲವರು ಕಾಳಿದಾಸ ಬರೆದ ಮುಂದಿನ ಕಥೆ ಅನುಪಲಬ್ಧವೆಂದು ಭಾವಿಸುತ್ತಾರೆ.ರಘುವಂಶದಲ್ಲಿ ಬರುವ ರಾಜರುಗಳ ವಿವರಗಳಿಗೂ ರಾಮಾಯಣದ ವಿವರಗಳಿಗೂ ಸಾಕಷ್ಟು ಭೇದಗಳಿವೆ. ಆದರೆ ವಾಯುಪುರಾಣದ ವರ್ಣನೆಗಳು ರಘುವಂಶದ ವರ್ಣನೆಗಳಿಗೆ ಸದೃಶವಾಗಿರುವುದನ್ನು ಗಮನಿಸಬಹುದು.
ಇಪ್ಪತ್ತೊಂದು ಸರ್ಗಗಳಲ್ಲಿ ರಘುವಂಶದ ರಾಜರುಗಳ ಹೆಸರುಗಳು ಹೀಗಿವೆ:
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
|
|
|