- ಚಂದ್ರವಂಶದವರಾದ ಕೌರವರು ಮತ್ತು ಪಾಂಡವರ ಕಥೆ ಅಥವಾ ಇತಿಹಾಸ ಭಾರತದಲ್ಲೂ ಹಾಗೆಯೇ ಜಗತ್ತಿನಲ್ಲೂ ಬಹಳ ಪ್ರಸಿದ್ಧಿಹೊಂದಿದೆ. ಇದನ್ನು ಜಯ ಎಂಬ ಹೆಸರಿನಿಂದ ಶ್ರೀ ವೇದವ್ಯಾಸರು ರಚಿಸಿದರು . ಅದು ಮಹಾಭಾರತವೆಂದು ಪ್ರಸಿದ್ಧವಾಗಿದೆ. ಮಹಾಭಾರತದ ಮುಖ್ಯವಾಗಿ ಚಂದ್ರವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರುವಂಶ (ಚಂದ್ರವಂಶ)ದ ಸದಸ್ಯರ ನಡುವೆ ಕುರುಕ್ಷೇತ್ರದಲ್ಲಿ ನಡೆಯುವ ಹೋರಾಟವನ್ನು ಕುರಿತದ್ದು. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದದಲ್ಲಿ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತನು ಮಹಾರಾಜನ ಕಥೆಯಿಂದ ಆರಂಭವಾಗಿ, ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಶ್ರೀ ವೇದವ್ಯಾಸರ ಶಿಷ್ಯನಾದ ವೈಶಂಪಾಯನ ಮುನಿಯು ಜನಮೇಜಯನಿಗೆ ಅವನ ಮುತ್ತಾತಂದಿರಾದ ಪಾಂಡವರು ಮತ್ತು ಕೌರವರ ಇತಿಹಾಸವನ್ನು ಹೇಳುವಾಗ ಅವನ ವಂಶದ -ಚಂದ್ರವಂಶದ ವಿವರವನ್ನು ಹೇಳುತ್ತಾನೆ.ಅದು ಕೊನೆಗೆ ಕುರುಜಾಗಂಲವನ್ನು ಗೆದ್ದು ಪ್ರಸಿದ್ದಿ ಪಡೆದ ಕುರು ಮಹಾರಾಜನ ಹೆಸರಿನಲ್ಲಿ ಕುರುವಂಶವೆಂದು ಪ್ರಸಿದ್ಧವಾಯಿತು
- ಮಹಾಭಾರತದ ಆದಿಪರ್ವ ೭೫ನೆಯ ಅಧ್ಯಾಯ ಸಂಭವ ಪರ್ವ ಶ್ಲೋಕ: ೩೩೦೯/೧-೬೫ ಇದರಲ್ಲಿ ಚಂದ್ರವಂಶದ ವಿವರ ಇದೆ.