ಹರೀಶ್ಚಂದ್ರ
From Wikipedia, the free encyclopedia
ಹರೀಶ್ಚಂದ್ರ (1923-83) ಆಧುನಿಕ ಭಾರತದ ಒಬ್ಬ ಶ್ರೇಷ್ಠ ಗಣಿತವಿದ. ಶ್ರೀನಿವಾಸ ರಾಮಾನುಜನ್ (1887-1920) ಅನಂತರ ಗಣಿತಜ್ಞರ ಸಾಲಿನಲ್ಲಿ ಇವರೇ ಸರ್ವೋತ್ತಮರೆಂದು ವಿದ್ವಾಂಸರ ಅಭಿಪ್ರಾಯ. ಈ ಮುಂದಿನ ಹೇಳಿಕೆ ಇವರ ನಿಶಿತಮತಿಯ ಮೈವಳಿಕೆಗೆ (ಟೆಕ್ಸ್ಚರ್) ಹಿಡಿದ ಕನ್ನಡಿ: “ಆವಿಷ್ಕಾರ ಪ್ರಕ್ರಿಯೆಯಲ್ಲಿ ಒಂದೆಡೆ ಜ್ಞಾನ ಅಥವಾ ಅನುಭವ ಮತ್ತು ಇನ್ನೊಂದೆಡೆ ಕಲ್ಪನೆ ಅಥವಾ ಪ್ರತಿಭಾನ ವಹಿಸುವ ಪಾತ್ರಗಳ ಬಗ್ಗೆ ನಾನು ಅನೇಕ ಸಲ ಗಾಢ ಚಿಂತನೆ ಹರಿಸಿದ್ದೇನೆ. ಇವೆರಡರ ನಡುವೆ ಮೂಲಭೂತವಾದ ಒಂದು ಸಂಘರ್ಷ ಇದೆಯೆಂದು ನಂಬಿದ್ದೇನೆ. ಜ್ಞಾನವು ಜಾಗರೂಕತೆಯನ್ನು ಮುಂದೊಡ್ಡುತ್ತ ಕಲ್ಪನೆಯ ಮುಕ್ತ ವಿಹಾರಕ್ಕೆ ಪ್ರತಿಬಂಧಕವಾಗುವ ತೆರದಲ್ಲಿ ವರ್ತಿಸುತ್ತದೆ. ಎಂದೇ ಪಾರಂಪರಿಕ ಅರಿವಿನ ಹೊರೆ ಇರದ ಮುಗ್ಧತೆ ಕೆಲವೊಮ್ಮೆ ಭದ್ರ ಆಸ್ತಿ ಆಗಬಲ್ಲದು. ಡಿರಾಕ್ ಮಾಡಿದ ಆವಿಷ್ಕಾರ ‘ಎಲೆಕ್ಟ್ರಾನಿನ ಸಾಪೇಕ್ಷತಾತ್ಮಕ ಸಮೀಕರಣ’[1] ಇದಕ್ಕೊಂದು ಉಜ್ಜ್ವಲ ನಿದರ್ಶನ ಎಂದು ಭಾವಿಸಿದ್ದೇನೆ.”
![Thumb image](http://upload.wikimedia.org/wikipedia/commons/thumb/3/30/Harish-Chandra_4.jpg/220px-Harish-Chandra_4.jpg)