ಸತ್ಯಕಾಮ
From Wikipedia, the free encyclopedia
ಸತ್ಯಕಾಮ ಎನ್ನುವ ಕಾವ್ಯನಾಮದಲ್ಲಿ ಖ್ಯಾತರಾದ ಶ್ರೀ ಅನಂತ ಕೃಷ್ಟಾಚಾರ್ಯ ಶಹಪೂರ ಇವರು ಬಾಗಲಕೋಟೆ ಜಿಲ್ಲೆಯಲ್ಲಿರುವ ಬೀಳಗಿ ತಾಲೂಕಿನ ಗಲಗಲಿ ಗ್ರಾಮದವರು. ಇವರು ಹುಟ್ಟಿದ್ದು ೧೯೨೦ ಎಪ್ರಿಲ್ ೧೬ ರಂದು ತಮ್ಮ ತಾಯಿ ರುಕ್ಮಿಣಿಯವರ ತವರೂರಾದ ಜಮಖಂಡಿಯ ಹತ್ತಿರವಿರುವ ಮೈಗೂರು ಎನ್ನುವ ಗ್ರಾಮದಲ್ಲಿ . ೧೯೩೪ರವರೆಗೆ ಇವರ ಶಿಕ್ಷಣ ಗಲಗಲಿಯಲ್ಲಿಯೆ ಆಯಿತು. ಮುಲ್ಕಿ ಪರಿಕ್ಷೆ ಉತ್ತೀರ್ಣರಾದ ಬಳಿಕ ಒಂದು ವರ್ಷ ಗಲಗಲಿಯಲ್ಲಿ ಖಾಲಿ ಕಳೆದರು. ೧೯೩೫ರಲ್ಲಿ ಬಾಗಿಲುಕೋಟೆಯ ಸಕ್ರಿ ಹೈಸ್ಕೂಲಿನಲ್ಲಿ ಮುಂದಿನ ಶಿಕ್ಷಣಕ್ಕಾಗಿ ಸೇರಿಕೊಂಡರು. ಆದರೆ ಓದು ಮುಂದುವರಿಸದೆ ಅಲ್ಲಿಗೆ ನಿಲ್ಲಿಸಿಬಿಟ್ಟರು.