![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/67/Sharad_Pawar%252C_Minister_of_AgricultureCrop.jpg/640px-Sharad_Pawar%252C_Minister_of_AgricultureCrop.jpg&w=640&q=50)
ಶರದ್ ಪವಾರ್
ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು / From Wikipedia, the free encyclopedia
ಶರದ್ಚಂದ್ರ ಗೋವಿಂದರಾವ್ ಪವಾರ್ (ಮರಾಠಿ:शरदचंद्र गोविंदराव पवार) (ಜನನ ಡಿಸೆಂಬರ್ ೧೨, ೧೯೪೦) ಅವರು ಜನಪ್ರಿಯವಾಗಿ ಶರದ್ ಪವಾರ್ ಎಂದು ಹೆಸರಾಗಿದ್ದಾರೆ. ಪವಾರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ೧೯೯೯ ರಲ್ಲಿ ಪ್ರತ್ಯೇಕಗೊಂಡು ರೂಪಿತವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ಈ ಹಿಂದೆ ರಕ್ಷಣಾ ಮಂತ್ರಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಯ ಸ್ಥಾನವನ್ನು ಅಲಂಕರಿಸಿದ್ದರು ಮತ್ತು ಪ್ರಸ್ತುತ ಭಾರತ ಸರ್ಕಾರದ ಕೃಷಿ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶರದ್ಚಂದ್ರ ಗೋವಿಂದರಾವ್ ಪವಾರ್ | |
---|---|
![]() | |
MP | |
ಮತಕ್ಷೇತ್ರ | Madha |
6th ಮುಖ್ಯ ಮಂತ್ರಿ ಮಹಾರಾಷ್ಟ್ರ State ![]() | |
ಅಧಿಕಾರ ಅವಧಿ 18 July 1978 – 17 February 1980 | |
ಪೂರ್ವಾಧಿಕಾರಿ | ವಸಂತ್ದದ ಪಾಟೀಲ್ |
ಉತ್ತರಾಧಿಕಾರಿ | President's Rule |
12th ಮುಖ್ಯ ಮಂತ್ರಿ ಮಹಾರಾಷ್ಟ್ರ State ![]() | |
ಅಧಿಕಾರ ಅವಧಿ 26 June 1988 – 25 June 1991 | |
ಪೂರ್ವಾಧಿಕಾರಿ | Shankarrao Chavan |
ಉತ್ತರಾಧಿಕಾರಿ | Sudhakarrao Naik |
14th ಮುಖ್ಯ ಮಂತ್ರಿ ಮಹಾರಾಷ್ಟ್ರ State ![]() | |
ಅಧಿಕಾರ ಅವಧಿ 6 March 1993 – 14 March 1995 | |
ಪೂರ್ವಾಧಿಕಾರಿ | Sudhakarrao Naik |
ಉತ್ತರಾಧಿಕಾರಿ | Manohar Joshi |
Presidents Bharat Scouts and Guides | |
ಅಧಿಕಾರ ಅವಧಿ 2001 – 2004 | |
ಪೂರ್ವಾಧಿಕಾರಿ | ರಾಮೇಶ್ವರ್ ಥಾಕೂರ್ |
ಉತ್ತರಾಧಿಕಾರಿ | ರಾಮೇಶ್ವರ್ ಥಾಕೂರ್ |
ಮಂತ್ರಿ ಕೃಷಿ | |
ಅಧಿಕಾರ ಅವಧಿ 2004 – Present | |
ಪೂರ್ವಾಧಿಕಾರಿ | ರಾಜನಾಥ್ ಸಿಂಗ್ |
ಉತ್ತರಾಧಿಕಾರಿ | Incumbent |
Minister of Consumer Affairs, Food and Public Distribution ![]() | |
ಅಧಿಕಾರ ಅವಧಿ 2004 – 2011 | |
ಪೂರ್ವಾಧಿಕಾರಿ | ಶರದ್ ಯಾದವ್ |
ಉತ್ತರಾಧಿಕಾರಿ | ಕೆ.ವಿ. ಥೋಮಸ್ |
President of the International Cricket Council | |
ಅಧಿಕಾರ ಅವಧಿ 2010 – Present | |
ಪೂರ್ವಾಧಿಕಾರಿ | ಡವಿದ್ ಮೋರ್ಗನ್ |
ಉತ್ತರಾಧಿಕಾರಿ | Incumbent |
ವೈಯಕ್ತಿಕ ಮಾಹಿತಿ | |
ಜನನ | (1940-12-12) ೧೨ ಡಿಸೆಂಬರ್ ೧೯೪೦ (ವಯಸ್ಸು ೮೩) ಪುಣೆ, ಮಹಾರಾಷ್ಟ್ರ |
ರಾಜಕೀಯ ಪಕ್ಷ | NCP |
ಸಂಗಾತಿ(ಗಳು) | ಪ್ರತಿಭಾ ಪವಾರ್ |
ಮಕ್ಕಳು | 1 daughter - ಸುಪ್ರಿಯ ಸುಲೇ |
ವಾಸಸ್ಥಾನ | ಬರಮತಿ, ಪುಣೆ |
ಧರ್ಮ | ಹಿಂದೂ |
As of October 29, 2010 ಮೂಲ: |
ಪವಾರ್ ಅವರು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಪಟ್ಟಣದವರಾಗಿದ್ದಾರೆ. ಪವಾರ್ ಅವರು ಮಹಾರಾಷ್ಟ್ರದ ಮಾಧಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಲೋಕಸಭೆಯಲ್ಲಿ ಎನ್ಸಿಪಿ ಪಕ್ಷದ ಮುಖಂಡರಾಗಿದ್ದಾರೆ. ಪವಾರ್ ಅವರು ಭಾರತದ ರಾಷ್ಟ್ರೀಯ ರಾಜಕಾರಣದ ಜೊತೆಗೆ ಮಹಾರಾಷ್ಟ್ರದ ಪ್ರಾಂತೀಯ ರಾಜಕಾರಣದಲ್ಲಿ ಪ್ರಮುಖ ಭಾಗವಾಗಿದ್ದಾರೆ.
ಹಾಗೆಯೇ ಪವಾರ್ ಅವರು ೨೦೦೫ ರಿಂದ ೨೦೦೮ ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೧೦ ರಲ್ಲಿ, ಶರದ್ ಪವಾರ್ ಅವರು ಇಂಗ್ಲೆಂಡಿನ ಡೇವಿಡ್ ಮೋರ್ಗನ್ ಅವರ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದರು.[1]