From Wikipedia, the free encyclopedia
ವೃಂದಾವನ (ಹಿಂದಿ:वृन्दावनpronunciation (ಸಹಾಯ·ಮಾಹಿತಿ))(ಪರ್ಯಾಯವಾಗಿ ವೃಂದಾಬನ , ಬ್ರಿಂದಾವನ್ , ಬ್ರಿಂದಾವನ , ಅಥವಾ ಬೃಂದಾವನ ಎಂದೂ ಉಚ್ಚರಿಸಲ್ಪಡುತ್ತದೆ.) ವ್ರಜ್ ಎಂದೂ ಸಹ ಪರಿಚಿತವಾಗಿದೆ.(ಏಕೆಂದರೆ ಇದು ಬ್ರಜ್ ಪ್ರದೇಶದಲ್ಲಿ ನೆಲೆಗೊಂಡಿದೆ), ಇದು ಭಾರತದ ಉತ್ತರ ಪ್ರದೇಶ ರಾಜ್ಯದ ಮಥುರಾ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಪುರಾತನ ಕಾಲದ ಅರಣ್ಯವಿರುವ ಪ್ರದೇಶವಾಗಿದ್ದು, ಇಲ್ಲಿ ಭಗವಾನ್ ಕೃಷ್ಣನು ತನ್ನ ಬಾಲ್ಯದ ದಿನಗಳನ್ನು ಕಳೆದಿರುತ್ತಾನೆ.
ವೃಂದಾವನ
Vrindavan | |
---|---|
city | |
Population (2001) | |
• Total | ೫೬,೬೧೮ |
ಪಟ್ಟಣವು ಆಗ್ರಾ-ದೆಹಲಿ ಹೆದ್ದಾರಿಗೆ ಸಮೀಪ, ಭಗವಾನ್ ಕೃಷ್ಣನ ಜನ್ಮಸ್ಥಳ ಮಥುರಾ ನಗರದಿಂದ ಸುಮಾರು ೧೫ ಕಿಮೀ ದೂರದಲ್ಲಿದೆ. ಪಟ್ಟಣವು, ರಾಧಾ ಹಾಗು ಕೃಷ್ಣನ ಆರಾಧನೆಗೆ ಸಮರ್ಪಿತ ನೂರಾರು ದೇವಾಲಯಗಳನ್ನು ಹೊಂದಿದೆ. ಜೊತೆಗೆ ಹಲವಾರು ಧಾರ್ಮಿಕ ಸಂಪ್ರದಾಯಗಳಾದ ಗೌಡೀಯ ವೈಷ್ಣವಧರ್ಮ, ವೈಷ್ಣವಧರ್ಮ ಹಾಗು ಸರ್ವೆಸಾಮಾನ್ಯವಾಗಿ ಹಿಂದೂಧರ್ಮದಲ್ಲಿ ಪವಿತ್ರಸ್ಥಳವೆಂದು ಪರಿಗಣಿತವಾಗಿದೆ. ನಗರದಲ್ಲಿ ಆಶ್ರಯ ಪಡೆಯುವ ತಿರಸ್ಕೃತ ವಿಧವೆಯರು ದೊಡ್ಡ ಸಂಖ್ಯೆಯಲ್ಲಿ ಇರುವ ಕಾರಣಕ್ಕೆ ಇದು "ವಿಧವೆಯರ ಪಟ್ಟಣ"ವೆಂಬ ಸಂಕ್ಷಿಪ್ತ ಹೆಸರಿನಿಂದ ಕರೆಯಲ್ಪಡುತ್ತದೆ.[1]
ನಗರದ ಪುರಾತನ ಹೆಸರು, ಬೃಂದಾವನ, 'ಬೃಂದಾ' ಆಸಿಮಮ್ ಟೆನುಯಿಫ್ಲೋರಂ (ಪವಿತ್ರ ತುಳಸಿ ಅಥವಾ ತುಳಸಿ ) ತೋಟಗಳಿಂದ ಹಾಗು ಒಂದು ತೋಟ ಅಥವಾ ತುಳಸಿ ಕಾಡು ಎಂಬ ಅರ್ಥ ನೀಡುವ ವನ (ಸಂಸ್ಕೃತ: वन) ಶಬ್ದಗಳಿಂದ ವ್ಯುತ್ಪತ್ತಿ ಹೊಂದಿದೆ.[2] ನಿಧಿವನ ಹಾಗು ಸೇವಾ ಕುಂಜ್ ನಲ್ಲಿ ಇಂದಿಗೂ ಇಂಥ ಎರಡು ಚಿಕ್ಕ ತೋಟಗಳು ಅಸ್ತಿತ್ವದಲ್ಲಿವೆ.
ಹಿಂದೂ ಇತಿಹಾಸದೊಂದಿಗೆ ಸಂಬಂಧದ ಕೊಂಡಿ ಹೊಂದಿರುವ ವೃಂದಾವನ, ಪುರಾತನ ಗತವೈಭವ ಹೊಂದಿರುವುದರ ಜೊತೆ ಒಂದು ಮಹತ್ವದ ಹಿಂದೂ ಯಾತ್ರಾಸ್ಥಳವಾಗಿದೆ. ಇಂದಿಗೂ ಉಳಿದಿರುವ ನಗರದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಗೋವಿಂದ ದೇವ್ ದೇವಾಲಯವೂ ಒಂದು.ದೇವಾಲಯವು ೧೫೯೦ರಲ್ಲಿ ನಿರ್ಮಾಣವಾಗಿರುವ ಅದೇ ಶತಮಾನದಲ್ಲಿ ರಚನೆಯಾದ ಪಟ್ಟಣದ ನಂತರದ ವಾಸ್ತುಶಿಲ್ಪವಾಗಿದೆ.[3]
ಕಾಲಾನಂತರದಲ್ಲಿ ವೃಂದಾವನವು ತನ್ನ ಅಸ್ತಿತ್ವವನ್ನು ಮರೆ ಮಾಚಿಕೊಂಡಿತ್ತು. ಆದರೆ ೧೬ನೇ ಶತಮಾನದಲ್ಲಿ ಭಗವಾನ್ ಚೈತನ್ಯ ಮಹಾಪ್ರಭುಗಳು ಇದನ್ನು ಮರುಪರಿಶೋಧಿಸಿ ಕಳೆದುಕೊಂಡಿದ್ದನ್ನು ಮತ್ತೆ ಹುಡಿಕಿದರು ಎಂದು ನಂಬಲಾಗುತ್ತದೆ. ಭಗವಾನ್ ಚೈತನ್ಯ ಮಹಾಪ್ರಭುಗಳು, ಶ್ರೀಕೃಷ್ಣನ ಅಲೌಕಿಕ ಗತಕಾಲದೊಂದಿಗೆ ಸಹಯೋಗ ಹೊಂದಿರುವ, ಕಣ್ಮರೆಯಾದ ಪವಿತ್ರಸ್ಥಳಗಳನ್ನು ಗುರುತಿಸುವ ಉದ್ದೇಶದಿಂದ ವೃಂದಾವನಕ್ಕೆ ೧೫೧೫ರಲ್ಲಿ ಭೇಟಿ ನೀಡುತ್ತಾರೆ. ಪವಿತ್ರ ಪ್ರೇಮರೂಪದ ಆಧ್ಯಾತ್ಮಿಕ ಮಗ್ನಸ್ಥಿತಿಯಲ್ಲಿ ವೃಂದಾವನದ ವಿವಿಧ ಪವಿತ್ರ ವನಗಳಲ್ಲಿ ಭಗವಾನ್ ಚೈತನ್ಯರು ಅಲೆಯುತ್ತಾರೆ. ಹೀಗೆ ತಮ್ಮ ದೈವಿಕ ಶಕ್ತಿಯಿಂದ, ಭಗವಾನ್ ಕೃಷ್ಣನ ಗತಕಾಲದ ಮಹತ್ವದ ಸ್ಥಳಗಳನ್ನು ವೃಂದಾವನದೊಳಗೆ ಹಾಗು ಸುತ್ತಮುತ್ತಲು ಗುರುತಿಸಲು ಅವರು ಶಕ್ತರಾಗುತ್ತಾರೆ.[4]
ಕಳೆದ ೨೫೦ ವರ್ಷಗಳಲ್ಲಿ, ಮೊದಲು ಸ್ಥಳೀಯ ರಾಜರುಗಳಿಂದ, ನಂತರ ಇತ್ತೀಚಿನ ದಶಕಗಳಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಗಳಿಂದ ವೃಂದಾವನದ ವಿಶಾಲ ವನಗಳು ನಗರೀಕರಣಕ್ಕೆ ಗುರಿಯಾಗಿವೆ. ಕೆಲವೇ ಕೆಲವು ಜಾಗಗಳನ್ನು ಹೊರತುಪಡಿಸಿ ವನ್ಯಪ್ರದೇಶದ ಕ್ಷೇತ್ರವನ್ನು ಕುಗ್ಗಿಸಲಾಗಿದೆ. ಅಲ್ಲದೇ ನವಿಲುಗಳು, ಹಸುಗಳು, ಕೋತಿಗಳು ಹಾಗು ಪಕ್ಷಿ ಸಂಕುಲದ ಹಲವು ಪ್ರಬೇಧಗಳನ್ನು ಒಳಗೊಂಡಂತೆ ಸ್ಥಳೀಯ ವನ್ಯಜೀವಿ ಸಂಕುಲವನ್ನು ಅಲ್ಲಿಂದ ಹೊರಹಾಕಲಾಗಿದೆ. ಕೆಲವೇ ಕೆಲವು ನವಿಲುಗಳು ಹಾಗು ಕೋತಿಗಳು ಕಂಡುಬರುತ್ತವಾದರೂ ಹಸುಗಳು ವೃಂದಾವನದ ಪ್ರಮುಖ ಆಶ್ರಮಗಳಲ್ಲಿರುವ ಗೋಶಾಲೆಗಳಲ್ಲಿ ಮಾತ್ರ ಕಂಡುಬರುತ್ತವೆ.
ಭಗವಾನ್ ಕೃಷ್ಣದ ಆಶೀರ್ವಾದದಿಂದ, ಕಲಿಯುಗವು ವೃಂದಾವನಕ್ಕೆ ಪ್ರವೇಶಿಸುವುದಿಲ್ಲವೆಂಬ ನಂಬಿಕೆಯೂ ಸಹ ಇದೆ.
ಹಿಂದೂ ಧರ್ಮದ ಎಲ್ಲ ಸಂಪ್ರದಾಯಗಳು ವೃಂದಾವನವನ್ನು ಪವಿತ್ರ ಸ್ಥಳವೆಂದು ಪರಿಗಣಿಸುತ್ತವೆ. ಈ ಪ್ರದೇಶದಲ್ಲಿ ಪ್ರಮುಖವಾಗಿ ಅನುಸರಿಸಲಾಗುವ ಸಂಪ್ರದಾಯವೆಂದರೆ ವೈಷ್ಣವಧರ್ಮದ ಆಚರಣೆಯಾಗಿದೆ. ಅದಲ್ಲದೇ ಕಾರ್ಯನಿರ್ವಹಿಸುವ ಹಲವಾರು ವೃಂದಾವನದ ಆಶ್ರಮಗಳೊಂದಿಗೆ ಈ ಸ್ಥಳವು ಕಲಿಕಾ ಕೇಂದ್ರವಾಗಿದೆ. ಇದೊಂದು ಕೃಷ್ಣನ ಆರಾಧನಾ ಕೇಂದ್ರವಾಗಿದ್ದು, ಇಲ್ಲಿನ ಪ್ರದೇಶವು ಕೃಷ್ಣನೊಂದಿಗಿನ ಅವಿನಾಭಾವ ಸಂಬಂಧ ಹೊಂದಿರುವ ಗೋವರ್ಧನ ಹಾಗು ಗೋಕುಲ ಸ್ಥಳವಿಶೇಷಗಳನ್ನು ಒಳಗೊಂಡಿದೆ. ರಾಧಾ ಕೃಷ್ಣನ ಭಕ್ತರು ಅಥವಾ ದೈವಶ್ರದ್ಧೆಯುಳ್ಳ ದಶಲಕ್ಷಗಟ್ಟಲೆ ಶೃದ್ದಾವಂತರು ಈ ಯಾತ್ರಾಸ್ಥಳಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತಾರೆ.ಜೊತೆಗೆ ಭೂಮಿಯ ಮೇಲಿನ ಕೃಷ್ಣ ಅವತಾರಕ್ಕೆ ಸಂಬಂಧಿಸಿದ ಹಲವಾರು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ.[5]
ಸಂಪ್ರದಾಯ ಹಾಗು ದಾಖಲಾದ ಸಾಕ್ಷಿಯ ಪ್ರಕಾರ, ಕೃಷ್ಣನನ್ನು ಸಾಕು ತಂದೆತಾಯಿಯರಾದ ನಂದ ಮಹಾರಾಜ ಹಾಗು ಯಶೋಧ ಗೋಕುಲದ ದನಗಾಹಿ ಹಳ್ಳಿಯಲ್ಲಿ ಬೆಳೆಸುತ್ತಾರೆ. ಭಾಗವತ ಪುರಾಣವು, ವೃಂದಾವನದ ವನದಲ್ಲಿನ ಕೃಷ್ಣನ ಬಾಲ್ಯದ ವಿನೋದಾವಳಿಗಳನ್ನು ವಿವರಿಸುತ್ತದೆ. ಅಲ್ಲಿ ಕೃಷ್ಣನು ತನ್ನ ಸಹೋದರ ಬಲರಾಮ, ಹಾಗು ತನ್ನ ಗೋಪಾಲಕ ಸ್ನೇಹಿತರೊಂದಿಗೆ ಬೆಣ್ಣೆ ಕದಿಯುವುದರೊಂದಿಗೆ, ಬಾಲ್ಯದ ತುಂಟಾಟಗಳಲ್ಲಿ ತೊಡಗಿ, ಅಸುರರೊಂದಿಗೆ ಯುದ್ದ ಮಾಡಿರುತ್ತಾನೆ. ಈ ತುಂಟಾಟಗಳ ಜೊತೆಯಲ್ಲಿ, ಕೃಷ್ಣ ವೃಂದಾವನ ಹಳ್ಳಿಯ ಸ್ಥಳೀಯ ಹುಡುಗಿಯರನ್ನು ಸಂಧಿಸುವುದು ಹಾಗು ಅವರೊಟ್ಟಿಗೆ ನರ್ತಿಸುವುದನ್ನೂ ಸಹ ಇದರಲ್ಲಿ ವಿವರಿಸಲಾಗಿದೆ, ಅದರಲ್ಲೂ ವಿಶೇಷವಾಗಿ ರಾಧಾರಾಣಿ, ಇವರೆಲ್ಲರೂ ಗೋಪಿ ಎಂಬ ಹೆಸರಿನಿಂದ ಪರಿಚಿತರಾಗಿದ್ದಾರೆ. ಈ ವಿನೋದಗಳು, ಸಂಸ್ಕೃತ ಕವಿ ಜಯದೇವ ರಚಿಸಿದ ಪ್ರಸಿದ್ಧ ಸಂಸ್ಕೃತ ಪದ್ಯ, ಗೀತ ಗೋವಿಂದಕ್ಕೆ ಪ್ರೇರಣೆಯಾಗಿವೆ.(ಸುಮಾರು. ೧೨೦೦ AD).
ಅತ್ಯಂತ ಜನಪ್ರಿಯ ದೇವಾಲಯಗಳೆಂದರೆ:
ಗೋವಿಂದ ದೇವ್ (ಗೋವಿಂದಜಿ)ದೇವಾಲಯ , ಈ ದೇವಾಲಯವು ಗ್ರೀಕ್ ನ ಶಿಲುಬೆಯಾಕಾರದಲ್ಲಿ ನಿರ್ಮಿತ ಏಳು ಮಹಡಿಗಳಿಂದ ಭವ್ಯವಾಗಿ ರಚನೆಯಾಗಿತ್ತು. ಚಕ್ರವರ್ತಿ ಅಕ್ಬರನು ಆಗ್ರಾದ ಕೆಂಪು ಕೋಟೆಗೆಂದು ತರಿಸಲಾಗಿದ್ದ ಕೆಂಪು ಮರಳುಗಲ್ಲನ್ನು ಈ ದೇವಾಲಯದ ನಿರ್ಮಾಣಕ್ಕಾಗಿ ದಾನಮಾಡಿದ್ದನೆಂದು ಹೇಳಲಾಗುತ್ತದೆ. ಅವನ ಸೇನಾಪತಿ ರಾಜ ಮಾನ್ ಸಿಂಗ್ ನ ಮೇಲ್ವಿಚಾರಣೆಯಲ್ಲಿ ೧೫೯೦ರಲ್ಲಿ ಒಂದು ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಪಾಶ್ಚಿಮಾತ್ಯ, ಹಿಂದೂ ಹಾಗು ಮುಸ್ಲಿಮರ ವಾಸ್ತುಶಿಲ್ಪೀಯ ಅಂಶಗಳೊಂದಿಗೆ ರಚನೆಯಾಗಿದೆ. ಇದು ಮುಘಲ್ ದೊರೆ ಔರಂಗಜೇಬನಿಂದ ನಾಶಗೊಳಿಸಲ್ಪಡುತ್ತದೆ.
ಆಕರ್ಷಣೀಯ ಇತರ ಸ್ಥಳಗಳಲ್ಲಿ ಸೇವಾ ಕುಂಜ್, ಕೇಸಿ ಘಾಟ್, ಶ್ರೀಜಿ ಮಂದಿರ, ಜುಗಲ್ ಕಿಶೋರ್ ದೇವಾಲಯ, ಲಾಲ್ ಬಾಬು ದೇವಾಲಯ, ರಾಜ್ ಘಾಟ್, ಕುಸುಮ ಸರೋವರ, ಮೀರಾ-ಬಾಯಿ ದೇವಾಲಿ, ಇಮ್ಲಿ ತಾಲ್, ಕಾಲಿಯ ಘಾಟ್, ರಮಣ ರೇಟಿ, ವರಾಹ ಘಾಟ್ ಹಾಗು ಚಿರ ಘಾಟ್, ಜೊತೆಗೆ ದೋಣಿಯ ಮೂಲಕ ನದಿಯಲ್ಲಿ ಸ್ವಲ್ಪ ದೂರ ಕ್ರಮಿಸಿದರೆ ದೇವ್ರಹ ಬಾಬಾರ ಸಮಾಧಿ ಸಿಗುತ್ತದೆ, ಇವರು ಕಳೆದ ಶತಮಾನದಲ್ಲಿದ್ದ ಓರ್ವ ಪೂಜ್ಯ ಸಂತರಾಗಿದ್ದಾರೆ.
ಸೇವಾ ಕುಂಜದಲ್ಲಿ ಭಗವಾನ್ ಕೃಷ್ಣ, ರಾಧಾರಾಣಿ ಹಾಗು ಗೋಪಿಯರೊಂದಿಗೆ ರಾಸಲೀಲೆಯಲ್ಲಿ ತೊಡಗುತ್ತಿದ್ದನು; ಅದಲ್ಲದೇ ನಿಧಿವನದಲ್ಲಿ ದೈವೀ ಜೋಡಿಯು ವಿಶ್ರಾಂತಿ ಪಡೆಯುತ್ತಿತ್ತು. ತಾನ್ಸೇನ್ ರ ಗುರು ಸ್ವಾಮೀ ಹರಿದಾಸರ ಸಮಾಧಿಯೂ ಇಲ್ಲಿದೆ. ಪ್ರತಿ ವರ್ಷ, ಇವರ ಗೌರವಾರ್ಥ, ಸ್ವಾಮಿ ಹರಿದಾಸ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ, ಕಾರ್ಯಕ್ರಮದಲ್ಲಿ ಭಾರತದ ಎಲ್ಲ ಪ್ರಸಿದ್ಧ ಸಂಗೀತಗಾರರು ಭಾಗವಹಿಸುತ್ತಾರೆ.
ಶ್ರೀ ವೃಂದಾವನದಲ್ಲಿರುವ ಮತ್ತೊಂದು ಪ್ರಸಿದ್ಧ ದೇವಾಲಯವೆಂದರೆ ಗುರುಕುಲ ರಸ್ತೆಯಲ್ಲಿರುವ ಶ್ರೀ ಕಥಿಯ ಬಾಬಾ ಕಾ ಸ್ಥಾನ", "ಬ್ರಜೋಬಿದೇಹಿ ಮಹಂತ " ಎಂದು ಹೆಸರಾಗಿರುವ ಇವರು ನಿಮ್ಬರ್ಕ ಪಂಥದ ಸ್ವಭುರಾಮ್ ದ್ವಾರರ ಆಚಾರ್ಯರೆನಿಸಿದ್ದಾರೆ. ಶ್ರೀ ಸ್ವಾಮೀ ರಾಷ್ ಬಿಹಾರಿ ದಾಸ್ ಕಥಿಯ ಬಾಬಾಜಿ ಮಹಾರಾಜ್ ಎಂದೇ ಪ್ರಖ್ಯಾತರಾಗಿದ್ದಾರೆ.
ವೃಂದಾವನವು27.58°N 77.7°Eರಲ್ಲಿ ನೆಲೆಯಾಗಿದೆ.[10] ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೧೭೦ ಮೀಟರ್ (೫೫೭ ಅಡಿ) ಎತ್ತರದಲ್ಲಿದೆ. ಇದೊಂದು ಪವಿತ್ರ ನಗರವೂ ಹೌದು.
As of 2001[update]ಭಾರತ ಜನಗಣತಿಯ ಪ್ರಕಾರ,[11] ವೃಂದಾವನವು ೫೬,೬೧೮ರಷ್ಟು ಜನಸಂಖ್ಯೆ ಹೊಂದಿದೆ. ಒಟ್ಟು ಜನಸಂಖ್ಯೆಯಲ್ಲಿ ೫೬% ಪುರುಷರು ಮತ್ತು ೪೪% ಮಹಿಳೆಯರು ಇದ್ದಾರೆ. ವೃಂದಾವನವು ಸರಾಸರಿ ೬೫%ರಷ್ಟು ಸಾಕ್ಷರತಾ ಪ್ರಮಾಣ ಹೊಂದಿದೆ. ಇದು ೫೯.೫%ರಷ್ಟು ಸರಾಸರಿ ರಾಷ್ಟ್ರೀಯ ಸಾಕ್ಷರತಾ ಪ್ರಮಾಣಕ್ಕಿಂತ ಹೆಚ್ಚಿದೆ: ಪುರುಷರ ಸಾಕ್ಷರತಾ ಪ್ರಮಾಣವು ೮೪%ನಷ್ಟು, ಹಾಗು ಮಹಿಳಾ ಸಾಕ್ಷರತಾ ಪ್ರಮಾಣವು ೭೪%ರಷ್ಟಿದೆ. ವೃಂದಾವನದಲ್ಲಿ ಶೇಖಡಾ ೧೩ರಷ್ಟು ಜನಸಂಖ್ಯೆಯು ಆರು ವರ್ಷ ವಯೋಮಿತಿಗಿಂತ ಕೆಳಗಿನವರು. ಮಹಿಳೆಯರ ಸಂಖ್ಯೆ ೨೪,೨೦೦ ರಷ್ಟಿದ್ದು, ಜನಸಂಖ್ಯೆಯಲ್ಲಿ ೧೩%ನಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.
ವೃಂದಾವನವು ವಿಧವೆಯರ ನಗರವೆಂದೂ[12] ಸಹ ಕರೆಯಲ್ಪಡುತ್ತದೆ. ಏಕೆಂದರೆ ತಮ್ಮ ಗಂಡಂದಿರನ್ನು ಕಳೆದುಕೊಂಡ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಹಾಗು ಸುತ್ತಮುತ್ತಲ ಪ್ರದೇಶಗಳಿಂದ ಬಂದು ಇಲ್ಲಿ ನೆಲೆಗೊಳ್ಳುತ್ತಾರೆ. ಕೆಲವು ಹಿಂದೂ ಸಂಪ್ರದಾಯಗಳ ಪ್ರಕಾರ, ಮೇಲ್ಜಾತಿಯ ವಿಧವೆಯರು ಮರುವಿವಾಹ ಮಾಡಿಕೊಳ್ಳುವಂತಿರಲಿಲ್ಲ; ಈ ರೀತಿಯಾಗಿ ತಮ್ಮ ಪತಿಯ ವಿಯೋಗದಿಂದ ಕುಟುಂಬದ ತಿರಸ್ಕಾರಕ್ಕೆ ಒಳಗಾದವರು ಇಲ್ಲಿಗೆ ಬಂದು ನೆಲೆಸುತ್ತಿದ್ದರು. ಸುಮಾರು ೧೫,೦೦೦ದಿಂದ ೨೦,೦೦೦ ವಿಧವೆಯರು ಬೀದಿ ಪ್ರದೇಶಗಳಲ್ಲಿ ವಾಸಿಸುತ್ತಾರೆಂದು ಅಂದಾಜಿಸಲಾಗಿದೆ.[13][14] ಇವರಲ್ಲಿ ಹಲವರು ಸುಮಾರು ೩೦ ವರ್ಷಕ್ಕೂ ಹೆಚ್ಚು ಕಾಲದಿಂದ ಇಲ್ಲಿ ವಾಸ ಮಾಡುತ್ತಿದ್ದಾರೆ. ಭಜನಾಶ್ರಮಗಳಲ್ಲಿ ಏಳರಿಂದ ಎಂಟು ಗಂಟೆಗಳ ಕಾಲ ದೇವರ ಭಜನೆ ಗಳನ್ನು ಹಾಡುವುದರ ಬದಲಿಯಾಗಿ, ಹೆಂಗಸರಿಗೆ ಒಂದು ಬಟ್ಟಲು ಅನ್ನ ಹಾಗು ಅಲ್ಪ ಹಣ ನೀಡಲಾಗುತ್ತದೆ.(ಸುಮಾರು ಹತ್ತು ರೂಪಾಯಿಗಳು)[12], ಹೀಗಾಗಿ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಇವರುಗಳು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾರೆ ಅಥವಾ, ಕೆಲವೊಂದು ಪರಿಸ್ಥಿತಿಗಳಲ್ಲಿ ವೇಶ್ಯಾವೃತ್ತಿ ಮಾಡುತ್ತಾರೆ.[15] ಗಿಲ್ಡ್ ಆಫ್ ಸರ್ವಿಸ್ ಎಂಬ ಸಂಸ್ಥೆಯು ಇಂತಹ ನತದೃಷ್ಟ ಹೆಂಗಸರು ಹಾಗು ಮಕ್ಕಳಿಗೆ ಸಹಾಯ ಮಾಡಲು ಸ್ಥಾಪನೆಯಾಗಿದೆ[14]. ಈ ಸಂಸ್ಥೆಯು ಅಮರ್ ಬರಿ(ನನ್ನ ಮನೆ) ಎಂಬ ಆಶ್ರಯತಾಣವನ್ನು ೨೦೦೦ದಲ್ಲಿ ಆರಂಭಿಸಿತು. ಇದು ವೃಂದಾವನದ ೧೨೦ ವಿಧವೆಯರಿಗೆ ಆಶ್ರಯ ನೀಡಿದೆ; ಅಲ್ಲದೆ ೫೦೦ ವಿಧವೆಯರಿಗೆ ಎರಡನೇ ನೆಲೆಯಾಗಲು ಇನ್ನೊಂದು ಆಶ್ರಯತಾಣವು ಆರಂಭವಾಗುವ ನಿರೀಕ್ಷೆಯಿದೆ.
ಇತ್ತೀಚಿನ ದಿನಗಳಲ್ಲಿ ವೃಂದಾವನವು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಆದಾಯದ ಪ್ರಮುಖ ಮೂಲವಾಗುತ್ತಿದೆ. ವೃಂದಾವನದ ಶಾಂತಿ ಹಾಗು ನಿಶಬ್ದತೆಯ ವಾತಾವರಣದಿಂದಾಗಿ ದೆಹಲಿಯ ಹಲವರು ಇಲ್ಲಿ ಮನೆಗಳನ್ನು ಖರೀದಿಸಿ, ಪವಿತ್ರ ಸ್ಥಳದಲ್ಲಿ ನೆಲೆಸಲು ಮುಂದಾಗಿದ್ದಾರೆ. ಈ ಅವಶ್ಯಕತೆಗೆ ಬದಲಿಯಾಗಿ, ಹಲವು ಪ್ರಸಿದ್ಧ ರಿಯಲ್ ಎಸ್ಟೇಟ್ ಹಾಗು ಆಸ್ತಿಯನ್ನು ಅಭಿವೃದ್ಧಿ ಪಡಿಸುವ ಕಂಪನಿಗಳು ಹೊಸ ಹೌಸಿಂಗ್ ಯೋಜನೆ ಆರಂಭಿಸಿವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.