ವಿಕ್ರಮಾದಿತ್ಯ
From Wikipedia, the free encyclopedia
ಭಾರತದ ಉಜ್ಜಯಿನಿಯ,ವಿಕ್ರಮಾದಿತ್ಯ (ಸಂಸ್ಕೃತ:विक्रमादित्य) (102 BCE ನಿಂದ 15 CE) ಪೌರಾಣಿಕ ರಾಜನಾಗಿದ್ದನು. ಬುದ್ಧಿವಂತಿಕೆ, ಶೌರ್ಯ ಮತ್ತು ಉದಾರತೆಗಾಗಿ ಖ್ಯಾತನಾಗಿದ್ದನು. ಗಮನೀಯವಾಗಿ ಚಂದ್ರಗುಪ್ತ II ಮತ್ತು ಸಾಮ್ರಾಟ್ ಹೇಮ್ ಚಂದ್ರ ವಿಕ್ರಮಾದಿತ್ಯ ('ಹೇಮು ಎಂದು ಖ್ಯಾತನಾಗಿರುವ') ಮುಂತಾದ ಅನೇಕ ರಾಜರುಗಳಿಗೆ ಭಾರತದ ಚರಿತ್ರೆಯಲ್ಲಿ "ವಿಕ್ರಮಾದಿತ್ಯ" ಎಂಬ ಬಿರುದು ಬಂದಿರುತ್ತದೆ. "ಶೌರ್ಯ" ಮತ್ತು ಆದಿತ್ಯ Āditya ಅದಿತಿಯ ಮಗ ಎಂಬ ಅರ್ಥದ ಸಂಸ್ಕೃತ ತತ್ಪುರುಶದ ಹೆಸರೇ ರಾಜ ವಿಕ್ರಮಾದಿತ್ಯ. ಅದಿತಿ, ಅಥವಾ ಆದಿತ್ಯಾಗಳ ಪ್ರಖ್ಯಾತ ಪುತ್ರ ಸೂರ್ಯ ಸೂರ್ಯ ದೇವರು; ಆದ್ದರಿಂದ, ವಿಕ್ರಮಾದಿತ್ಯ ಎಂದರೆ ಸೂರ್ಯ, ಸೂರ್ಯನ ಶೌರ್ಯಕ್ಕೆ ಸಮ ಎಂಬ ಅರ್ಥವಿದೆ. ವಿಕ್ರಮ ಅಥವಾ ವಿಕ್ರಮಾರಕಾ (ಸಂಸ್ಕೃತದಲ್ಲಿ ಅರ್ಕಾ ಎಂದರೆ ಸೂರ್ಯ) ಎಂದೂ ಕರೆಯುತ್ತಾರೆ.
BCE ಮೊದಲ ಶತಮಾನದಲ್ಲಿ ವಿಕ್ರಮಾದಿತ್ಯ ಜೀವಿಸಿದ್ದನು, ಕಥಾ-ಸರಿತಾ-ಸಾಗರದ ಪ್ರಕಾರ ವಿಕ್ರಮಾದಿತ್ಯ ಉಜ್ಜಯಿನಿಯ ಪರಮಾರಾ ರಾಜ ವಂಶದ ಮಹೇಂದ್ರಾದಿತ್ಯನ ಮಗ. ಆದಾಗ್ಯೂ, ಇದು ೪ನೇ ಶತಮಾನದ ನಂತರ ಬರೆಯಲ್ಪಟ್ಟಿದೆ. ದೆಹಲಿಯ ತಾರ್ ಡೈನಾಸ್ಟಿಯ ಪೂರ್ವಿಕನು ಈ ವಿಕ್ರಮಾದಿತ್ಯನು ಎಂದೂ ಕೂಡ ಅನ್ಯ ಮೂಲಗಳು ದಾಖಲಿಸಿವೆ.[1][2][3][4][5]
ಹಿಂದು ಧರ್ಮದಲ್ಲಿ ಜನಿಸಿದ ಮಕ್ಕಳಿಗೆ ವಿಕ್ರಮ್ ಎಂದು ಹೆಸರನಿಡುವ ರೂಢಿ ಹೆಚ್ಚುತ್ತಿದ್ದು, ಅದು ವಿಕ್ರಮಾದಿತ್ಯನಿಗಿರುವ ಜನಪ್ರಿಯತೆಯ ಧ್ಯೋತಕವೆನ್ನಬಹುದು ಮತ್ತು ಎರಡು ಜನಪ್ರಿಯ ಜಾನಪದ ಕಥೆಗಳು ಕೂಡ ಅವನ ಬಗ್ಗೆ ಸೃಷ್ಟಿಯಾಗಿರುತ್ತದೆ.