ವರಾಹ ಉಪನಿಷತ್ತು
From Wikipedia, the free encyclopedia
ವರಾಹ ಉಪನಿಷತ್ತು ( Sanskrit "ಹಂದಿ") ೧೩ ನೇ ಮತ್ತು ೧೬ ನೇ ಶತಮಾನದ ನಡುವೆ ಸಂಯೋಜಿಸಲ್ಪಟ್ಟ ಹಿಂದೂ ಧರ್ಮದ ಒಂದು ಚಿಕ್ಕ ಉಪನಿಷತ್ ಆಗಿದೆ. ಇದನ್ನು ಸಂಸ್ಕೃತದಲ್ಲಿ ರಚಿಸಲಾಗಿದೆ ಹಾಗೂ ಇದನ್ನು ಕೃಷ್ಣ ಯಜುರ್ವೇದದ ೩೨ ಉಪನಿಷತ್ತುಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ ಮತ್ತು ೨೦ ಯೋಗ ಉಪನಿಷತ್ತುಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ.
ಉಪನಿಷತ್ತಿನ ಪಠ್ಯವು ಐದು ಅಧ್ಯಾಯಗಳನ್ನು ಹೊಂದಿದೆ. ಪ್ರಾಥಮಿಕವಾಗಿ ಇದನ್ನು ವಿಷ್ಣುವು ತನ್ನ ವರಾಹ (ಹಂದಿ) ಅವತಾರದಲ್ಲಿ ಋಷಿ ರಿಭುನೊಂದಿಗೆ ನಡೆಸಿದ ಚರ್ಚೆಯಾಗಿ ರಚಿಸಲಾಗಿದೆ. ಚರ್ಚೆಯು ಮುಖ್ಯವಾಗಿ ತತ್ವಗಳ ವಿಷಯಗಳು, ವೈಯಕ್ತಿಕ ಆತ್ಮ (ಸ್ವಯಂ, ಆತ್ಮ ) ಮತ್ತು ಅಂತಿಮ ವಾಸ್ತವ ( ಬ್ರಹ್ಮ ) ನಡುವಿನ ಸ್ವಭಾವ ಮತ್ತು ಸಂಬಂಧಗಳು, ಕಲಿಕೆಯ ಏಳು ಹಂತಗಳು, ಜೀವನ್ಮುಕ್ತಿಯ ಗುಣಲಕ್ಷಣಗಳು (ಜೀವಂತ ಸ್ವಾತಂತ್ರ್ಯದ ಆಂತರಿಕ ಅರ್ಥ) ಮತ್ತು ನಾಲ್ಕು ವಿಧದ ಜೀವನ್ಮುಕ್ತರು (ವಿಮೋಚನೆಗೊಂಡ ವ್ಯಕ್ತಿಗಳು) ಇವುಗಳನ್ನು ಒಳಗೊಂಡಿದೆ. ಪಠ್ಯದ ಕೊನೆಯ ಅಧ್ಯಾಯವು ಯೋಗ, ಅದರ ಗುರಿಗಳು ಮತ್ತು ವಿಧಾನಗಳಿಗೆ ಮೀಸಲಾಗಿರುತ್ತದೆ.
ಇದು ಉಪನಿಷತ್ ಆಗಿ, ಹಿಂದೂ ಧರ್ಮದ ತಾತ್ವಿಕ ಪರಿಕಲ್ಪನೆಗಳನ್ನು ಪ್ರಸ್ತುತಪಡಿಸುವ ವೇದಾಂತ ಸಾಹಿತ್ಯದ ಒಂದು ಭಾಗವಾಗಿದೆ. ವರಾಹ ಉಪನಿಷತ್ತು ದುಃಖ ಮತ್ತು ಭಯದಿಂದ ವಿಮೋಚನೆಗೆ ಮಾನವನು ತಿಳಿಯಬೇಕಾದ ಅಸ್ತಿತ್ವದ ದ್ವಂದ್ವವಲ್ಲದ ಸ್ವರೂಪ, ಸ್ವಯಂ, ಬ್ರಹ್ಮ ಮತ್ತು ವಿಷ್ಣುವಿನ ನಡುವಿನ ಏಕತೆ ಮತ್ತು ಆತ್ಮ-ವಿಮೋಚನೆಯಲ್ಲಿ ಯೋಗದ ಪಾತ್ರವನ್ನು ಸ್ಪುಟಪಡಿಸುತ್ತದೆ . ಒಬ್ಬರ ಆತ್ಮದ ವಿಮೋಚನೆಗೆ ಅತ್ಯಗತ್ಯವಾದ ಹತ್ತು ಯಮಗಳನ್ನು (ಸದ್ಗುಣಗಳನ್ನು) ಪಟ್ಟಿಮಾಡುತ್ತದೆ :ಇವುಗಳು, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಸಹಾನುಭೂತಿ, ಋಜುತ್ವ, ಕ್ಷಮ, ಬೂಟಾಟಿಕೆ ಇಲ್ಲದಿರುವಿಕೆ, ಮಿತಾಹಾರ ಮತ್ತು ಶೌಚ . ಉಪನಿಷತ್ತಿನ ಪಠ್ಯವು ಜೀವನ್ಮುಕ್ತ ಎಂದರೆ ಏನೆಂಬುದನ್ನು ವಿವರಿಸುತ್ತದೆ-ಯಾರ ಆಂತರಿಕ ಸ್ಥಿತಿಯು, ಇತರ ವಿಷಯಗಳ ಜೊತೆಗೆ, ಸಂತೋಷದಿಂದ ಅಥವಾ ಅವನಿಗೆ ಉಂಟುಮಾಡುವ ದುಃಖದಿಂದ ಪ್ರಭಾವಿತವಾಗುವುದಿಲ್ಲವೋ, ಯಾರು ಪ್ರಪಂಚದ ಭಯದಿಂದ ಕುಗ್ಗುವುದಿಲ್ಲವೋ, ಅಥವಾ ಪ್ರಪಂಚವು ಅವನ ಭಯದಿಂದ ಕುಗ್ಗುವುದಿಲ್ಲವೋ ಮತ್ತು ಯಾರ ಇಂದ್ರಿಯ ಶಾಂತವಾಗಿ ಆಂತರಿಕ ಸಂತೃಪ್ತಿಯು ಇತರರ ಕಡೆಗೆ ಕೋಪ, ಭಯ ಮತ್ತು ಸಂತೋಷದಿಂದ ಮುಕ್ತವಾಗಿರುತ್ತದೋ ಅವನನ್ನು ಜೀವನ್ಮುಕ್ತ ಎನ್ನಬಹುದು ಎಂದು ತಿಳಿಸುತ್ತದೆ.