ರಾಮಲಿಂಗಮ್ ರಾಜು From Wikipedia, the free encyclopedia
ಬೈರಾಜು ರಾಮಲಿಂಗ ರಾಜು (16 ಸೆಪ್ಟೆಂಬರ್ 1954 ರಂದು ಜನನ) ಸತ್ಯಮ್ ಕಂಪ್ಯೂಟರ್ ಸರ್ವೀಸಸ್ ನ ಮಾಜಿ ಅಧ್ಯಕ್ಷ ಮತ್ತು ಸಿಇಒ. ₹71.36 ಬಿಲಿಯನ್ (ಸರಿಸುಮಾರಾಗಿ ಯುಎಸ್ $ 1.5 ಶತಕೋಟಿ) ಗಳಷ್ಟು ಹಣ ದುರುಪಯೋಗ ಮಾಡಿದ ಆರೋಪದಿ೦ದ ಇವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. 2015 ರಲ್ಲಿ, ಕಾರ್ಪೊರೇಟ್ ವಂಚನೆ ಹಾಗು ಹಣ ದುರುಪಯೋಗ ಮಾಡಿದ್ದಾರೆ೦ದು ಒಪ್ಪಿಕೊಳ್ಳುವುದರ ಮೂಲಕ ಸತ್ಯಂ ಕುಸಿತಕ್ಕೆ ಕಾರಣರಾದರು. [1][2]
ರಾಮಲಿಂಗ ರಾಜು 16 ಸೆಪ್ಟೆಂಬರ್ 1954 ರಂದು ಕೃಷಿ ಕುಟುಂಬಕ್ಕೆ ಜನಿಸಿದರು. ನಾಲ್ಕು ಮಕ್ಕಳಲ್ಲಿ ಇವರೆ ಹಿರಿಯರು. ವಿಜಯವಾಡದ ಆಂಧ್ರ ಲೊಯೋಲಾ ಕಾಲೇಜಿನಿಂದ ಕಾಮರ್ಸ್ ಪದವಿ ಪಡೆದರು. ಅಮೆರಿಕಾದ ಒಹಾಯೋ ವಿಶ್ವವಿದ್ಯಾಲಯದಿಂದ MBA ಪದವಿ ಪಡೆದರು. 1977 ರಲ್ಲಿ ಭಾರತಕ್ಕೆ ಮರಳಿದ ನಂತರ, ರಾಜು ಇಪ್ಪತ್ತೆರಡನೆ ವಯಸ್ಸಿನಲ್ಲಿ ಮದುವೆಯಾದರು.
ಹಲವು ವರ್ಷಗಳ ಕಾಲ ಸುಳ್ಳು ಲೆಕ್ಕ ಸೃಷ್ಟಿಸಿ ಸತ್ಯಂ ಕಂಪ್ಯೂಟರ್ ಕಂಪನಿಗೆ ಹೆಚ್ಚು ಲಾಭ ಬರುತ್ತಿರುವಂತೆ ರಾಮಲಿಂಗರಾಜು ಹಾಗೂ ಅವರ ಸೋದರರು ಇತರರ ಜತೆಗೂಡಿ ತೋರಿಸಿದ್ದರು. ರಾಮರಾಜು ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 5.5 ಕೋಟಿ ರೂ. ದಂಡ ವಿಧಿಸಿದರು. ಇತರೆ ಆರೋಪಿಗಳಾದ ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್, ಪಿಡಬ್ಲ್ಯುಸಿ ಕಂಪನಿಯ ಮಾಜಿ ಆಡಿಟರ್ಗಳಾದ ಸುಬ್ರಮಣಿ ಗೋಪಾಲಕೃಷ್ಣನ್, ಟಿ. ಶ್ರೀನಿವಾಸ್, ರಾಜು ಅವರ ಮತ್ತೂಬ್ಬ ಸೋದರ ಸೂರ್ಯನಾರಾಯಣ ರಾಜು, ಮಾಜಿ ನೌಕರರಾದ ಜಿ. ರಾಮಕೃಷ್ಣ, ಡಿ. ವೆಂಕಟಪತಿ ರಾಜು, ಶ್ರೀಶೈಲಂ, ಸತ್ಯಂ ಕಂಪನಿಯ ಮಾಜಿ ಆಂತರಿಕ ಮುಖ್ಯ ಆಡಿಟರ್ ವಿ.ಎಸ್. ಪ್ರಭಾಕರ ಗುಪ್ತಾ ಅವರಿಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ ತಲಾ 25 ಲಕ್ಷ ರೂ. ದಂಡ ವಿಧಿಸಿತು. [ಶಾಶ್ವತವಾಗಿ ಮಡಿದ ಕೊಂಡಿ] [3] [ಶಾಶ್ವತವಾಗಿ ಮಡಿದ ಕೊಂಡಿ]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.