ಭಾರತೀಯ ರಾಷ್ಟ್ರೀಯ ಸೇನೆ
ವಿಶ್ವ ಸಮರ II ರಲ್ಲಿ ಆಕ್ಸಿಸ್ ಸೈನ್ಯದ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಹೋರಾಡುತ್ತಿವೆ / From Wikipedia, the free encyclopedia
ದಿ ಇಂಡಿಯನ್ ನ್ಯಾಷನಲ್ ಆರ್ಮಿ ಅಥವಾ ಆಝಾದ್ ಹಿಂದ್ ಫೌಜ್ ಎರಡನೆಯ ಮಹಾಯುಧ್ಧದಲ್ಲಿ ಇಂಪೀರಿಯಲ್ ಜಪಾನ್ ಆರ್ಮಿ ಯೊಂದಿಗೆ ಮಿತ್ರಸೈನ್ಯದ ವಿರುದ್ಧ ಹೋರಾಡಿದ ಭಾರತೀಯ ಸಂಸ್ಥೆ. ಎರಡನೆಯ ಮಹಾಯುಧ್ಧದ ಸಮಯದಲ್ಲಿ ಜಪಾನಿಯರಿಂದ ಯುಧ್ಧ ಕೈದಿಗಳಾದ ಬ್ರಿಟಿಷ್ ಸೈನ್ಯದ ಭಾರತೀಯರನ್ನು ಸಂಘಟಿಸಿ ಈ ಸೈನ್ಯ ವನ್ನು ರಚಿಸಲಾಯಿತು.
ಭಾರತೀಯ ರಾಷ್ಟ್ರೀಯ ಸೇನೆ | |
---|---|
ಸಕ್ರಿಯ | ಆಗಸ್ಟ್ 1942 – ಸೆಪ್ಟೆಂಬರ್ 1945 |
ದೇಶ | ಭಾರತ |
ನಿಷ್ಠೆ | ಅಜಾದ್ ಹಿಂದ್ |
ಶಾಖೆ | ಪದಾತಿಸೈನ್ಯ |
ಪಾತ್ರ | ಗೆರಿಲಾ ಪದಾತಿ ಸೈನ್ಯ, ವಿಶೇಷ ಕಾರ್ಯಾಚರಣೆಗಳು. |
ಗಾತ್ರ | 43,000 (ಸುಮಾರು) |
ಧ್ಯೇಯವಾಕ್ಯ | ಇತ್ತೆಹಾದ್, ಇತ್ಮದ್ ಔರ್ ಕುರ್ಬಾನಿ (ಉರ್ದು ಭಾಷೆಯಲ್ಲಿ ಒಗ್ಗಟ್ಟು, ನಂಬಿಕೆ ಮತ್ತು ಬಲಿದಾನ) |
ಸೇನಾ ಪ್ರಯಾಣಗೀತ | ಕದಮ್ ಕದಮ್ ಬಢಾಯೆ ಜಾ |
ಕದನಗಳು | ಎರಡನೇ ವಿಶ್ವಯುದ್ಧ
|
ದಂಡನಾಯಕರು | |
ವಿಧ್ಯುಕ್ತ ಮುಖ್ಯಸ್ಥ | ಸುಭಾಷ್ ಚಂದ್ರ ಬೋಸ್ |
ಗಮನಾರ್ಹ ದಂಡನಾಯಕರು |
ಜನರಲ್ ಮೋಹನ್ ಸಿಂಗ್ ದೇಬ್ ಮೇಜರ್ ಜನರಲ್ ಎಮ್.ಜ಼ೆಡ್ ಕಿಯಾನಿ |
ಲಾಂಛನಗಳು | |
ಗುರುತು ಸಂಕೇತ |
ಈ ಸೈನ್ಯವನ್ನು ಸಂಘಟಿಸುವದರಲ್ಲಿ ರಾಸಬಿಹಾರಿ ಘೋಷ ತುಂಬಾ ಶ್ರಮಪಟ್ಟವರು. ಸುಭಾಷಚಂದ್ರ ಬೋಸ್ ಈ ಸೈನ್ಯದ ಮುಖಂಡತ್ವ ವಹಿಸಿಕೊಂಡರು. ಕ್ಯಾಪ್ಟನ್ ಶಹಾನವಾಜ್, ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಇವರು ಈ ಸೈನ್ಯದ ಪ್ರಮುಖರು. ಕರ್ನಾಟಕದವರೇ ಆದ ಐ.ಎನ್.ಎ. ರಾಮರಾವ ಈ ಸೈನ್ಯದಲ್ಲಿದ್ದರು.
ಯುದ್ಧಸಮಯದಲ್ಲಿ ಬರ್ಮಾ (ಈಗಿನ ಮೈನ್ಮಾರ್) ದೇಶದಲ್ಲಿ ಮುನ್ನುಗ್ಗಿ, ಭಾರತದ ಗಡಿಯ ಹತ್ತಿರಕ್ಕೆ ಈ ಸೈನ್ಯ ತಲುಪಿತ್ತು. ಆದರೆ ಜಪಾನ್ನ ಮೇಲೆ ಅಣುಬಾಂಬ ದಾಳಿಯಿಂದಾಗಿ, ಜಪಾನ ಮಿತ್ರಸೈನ್ಯಕ್ಕೆ ಶರಣಾಗುವದರೊಂದಿಗೆ ಆಝಾದ ಹಿಂದ ಸೈನ್ಯಕ್ಕೆ ಹಿನ್ನಡೆಯಾಯಿತು.
ಆಝಾದ ಹಿಂದ್ ಸೈನ್ಯದ ಮುಖ್ಯಸ್ಥ ಸುಭಾಷಚಂದ್ರ ಬೋಸ್ ಅವರ ವಿವಾದಾತ್ಮಕ ವಿಮಾನ ದುರಂತದೊಂದಿಗೆ ಈ ಸೈನ್ಯದ ಹೋರಾಟ ಸಂಪೂರ್ಣವಾಗಿ ಮುಕ್ತಾಯವಾಯಿತು.