ಬಾಬು ರಾಜೇಂದ್ರ ಪ್ರಸಾದ್
ಭಾರತದ ಪ್ರಥಮ ರಾಷ್ಟ್ರಪತಿ / From Wikipedia, the free encyclopedia
ಡಾ. ರಾಜೇಂದ್ರ ಪ್ರಸಾದ್ (ಡಿಸೆಂಬರ್ ೩ ೧೮೮೪ - ಫೆಬ್ರವರಿ ೨೮ ೧೯೬೩) ಭಾರತದ ಮೊದಲನೆಯ ರಾಷ್ಟ್ರಪತಿ[1]. ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜಸೇವಕರಾಗಿ ಅವರು ಮಹತ್ವದ ಸೇವೆ ನೀಡಿದವರು.
Quick Facts ಉಪ ರಾಷ್ಟ್ರಪತಿ, ಪೂರ್ವಾಧಿಕಾರಿ ...
ಡಾ. ರಾಜೇಂದ್ರ ಪ್ರಸಾದ್ | |
ಮೊದಲನೆಯ ಭಾರತದ ರಾಷ್ಟ್ರಪತಿ | |
ಅಧಿಕಾರದ ಅವಧಿ ಜನವರಿ ೨೬, ೧೯೫೦ – ಮೇ ೧೩, ೧೯೬೨ | |
ಉಪ ರಾಷ್ಟ್ರಪತಿ | ಸರ್ವೆಪಳ್ಳಿ ರಾಧಾಕೃಷ್ಣನ್ |
---|---|
ಪೂರ್ವಾಧಿಕಾರಿ | ಸಿ. ರಾಜಗೋಪಾಲಾಚಾರಿ |
ಉತ್ತರಾಧಿಕಾರಿ | ಸರ್ವೆಪಳ್ಳಿ ರಾಧಾಕೃಷ್ಣನ್ |
ಜನನ | ಡಿಸೆಂಬರ್ ೩, ೧೮೮೪ ಜೆರದೈ, ಬಿಹಾರ್ |
ಮರಣ | February 28, 1963(1963-02-28) (aged 78) |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಜೀವನಸಂಗಾತಿ | ರಾಜವಂಶಿ ದೇವಿ |
Close
“ನನ್ನ ಕೈಯಿಂದ ವಿಷದ ಬಟ್ಟಲನ್ನಾದರೂ ಸ್ವೀಕರಿಸಲು ಹಿಂಜರಿಯದ ವ್ಯಕ್ತಿಯೊಬ್ಬನಿದ್ದಾನೆ. ಆತನೇ ರಾಜೇಂದ್ರ ಪ್ರಸಾದ್” ಗಾಂಧೀಜಿಯವರು ಆಡಿದ ಈ ಮಾತು ಬಾಬು ರಾಜೇಂದ್ರ ಪ್ರಸಾದರ ಬಗ್ಗೆ. ಅವರು ಗಾಂಧೀಜಿಯವರ ವ್ಯಕ್ತಿತ್ವ, ನೈತಿಕ ಸ್ಥೈರ್ಯ, ಕಾರ್ಯ ವಿಧಾನ ಹಾಗೂ ಆದರ್ಶಗಳಲ್ಲಿ ಇಟ್ಟಿದ್ದ ಅನನ್ಯ ವಿಶ್ವಾಸಕ್ಕೆ ಸಾಕ್ಷಿ. ಹಾಗೆಂದ ಮಾತ್ರಕ್ಕೆ ಪ್ರಸಾದರು ಗಾಂಧೀಜಿಯವರ ವ್ಯಕ್ತಿಪೂಜಕರಾಗಿದ್ದರು ಎಂದರ್ಥವಲ್ಲ. ಭಿನ್ನಾಭಿಪ್ರಾಯ ಬಂದಾಗ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪ್ರಸಾದರು ಹಿಂಜರಿಯುತ್ತಿರಲಿಲ್ಲ. ಆದರೆ ಒಮ್ಮೆ ಗಾಂಧೀಜಿ ಒಂದು ನಿರ್ಧಾರ ತೆಗೆದುಕೊಂಡಮೇಲೆ, ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರು.