ಡಿಸೆಂ. ೨೦೧೪ ರಿಂದ ರಾಜಕೀಯ ಘಟನಾವಳಿ-ಕಾಲಸೂಚಿ
- 2014 ಅಕ್ಟೋಬರ್ - ತಾಲಿಬಾನ್ ಅವರಿಂದ ತಲೆಗೆ ಗುಂಡಿಕ್ಕಲ್ಪಟ್ಟ, ಆದರೆ ಬಾಲಕಿಯರ ಶಿಕ್ಷಣಕ್ಕಾಗಿ ಚಳುವಳಿಗಾರಳಾಗಿ ಬದುಕುಳಿದಿರುವ ಮಲಾಲಾ ಯುಸಫ್ಜಾಯಿ, ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.
- 2015 ಏಪ್ರಿಲ್ - ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಚೀನಾ ಮತ್ತು ಪಾಕಿಸ್ತಾನ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಗಳಿಗೆ ಸಹಿ ಮಾಡಿದೆ.
- 2016 ರ ಮಾರ್ಚ್ - ಸುಪ್ರೀಂ ಕೋರ್ಟ್ ಮೂರು ವರ್ಷಗಳ ನಿಷೇಧವನ್ನು ಉಲ್ಲಂಘಿಸಬಾರದೆಂಬ ನಿಯಮಕ್ಕೆ ಅನುಮತಿ ಪಡೆದ ಬಳಿಕ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ದುಬೈಗೆ ತೆರಳಿದ್ದಾರೆ. ಅವರಿಗೆ ತುರ್ತು ಬೆನ್ನುಮೂಳೆಯ ಚಿಕಿತ್ಸೆ ಅಗತ್ಯವಿದೆಯೆಂದು ಅವನ ವಕೀಲರು ಹೇಳುತ್ತಾರೆ ಮತ್ತು ಅವನ ವಿರುದ್ಧ ರಾಜದ್ರೋಹ ಮತ್ತು ಕೊಲೆ ಆರೋಪಗಳನ್ನು ಎದುರಿಸಬೇಕಾಗಿತ್ತು.
- ಜನ್ ಕಮರ್ ಜಾವೇದ್ ಬಾಜ್ವಾ ಹೊಸ ಸೈನ್ಯದ ಮುಖ್ಯಸ್ಥನಾಗಿದ್ದಾರೆ. ಈ ಸ್ಥಾನವು ದೇಶದಲ್ಲಿ ಅತ್ಯಂತ ಶಕ್ತಿಯುತವಾಗಿದೆ.
- 2017 ರ ಮಾರ್ಚ್ - ಸಂಸತ್ತು 1947 ರಲ್ಲಿ ಭಾರತದಿಂದ ವಿಭಜನೆಯಾದ ನಂತರ ದೇಶದ ಹಿಂದು ಅಲ್ಪಸಂಖ್ಯಾತರು ತಮ್ಮ ಮದುವೆಯನ್ನು ಮೊದಲ ಬಾರಿಗೆ ನೋಂದಾಯಿಸಲು ಅನುಮತಿಸುವ ಕಾನೂನನ್ನು ಜಾರಿಗೊಳಿಸುತ್ತದೆ.
- 2017 ಆಗಸ್ಟ್ - ಪ್ರಧಾನ ಮಂತ್ರಿ ನವಾಜ್ ಶರೀಫ್ ಭ್ರಷ್ಟಾಚಾರ ಆರೋಪದ ಮೇಲೆ ಸುಪ್ರೀಂಕೋರ್ಟ್ ಅನರ್ಹಗೊಳಿಸಿದ ನಂತರ ರಾಜೀನಾಮೆ ನೀಡಿದರು. ಅವರಿಗೆ ಶಿಕ್ಷೆವಿಧಿಸಿದೆ ಮತ್ತು ಜೈಲು ಶಿಕ್ಷೆಯನ್ನು ನೀಡಿದೆ.
- 2018 ಜುಲೈ - ಸಾರ್ವತ್ರಿಕ ಚುನಾವಣೆಗಳು.
- ಇಮ್ರಾನ್ ಖಾನ್ರ ಏಳಿಗೆ:
- 2017 ಆಗಸ್ಟ್ - ಪ್ರಧಾನ ಮಂತ್ರಿ ನವಾಜ್ ಶರೀಫ್ ರನ್ನು ಭ್ರಷ್ಟಾಚಾರ ಆರೋಪದ ಮೇಲೆ ಸುಪ್ರೀಂಕೋರ್ಟ್ ಅನರ್ಹಗೊಳಿಸಿದ ನಂತರ ರಾಜೀನಾಮೆ ನೀಡಬೇಕಾಯಿತು. ಅವರು ಶಿಕ್ಷೆಗೊಳಗಾದರು ಮತ್ತು ಜೈಲು ಶಿಕ್ಷೆವಿಧಿಸಲಾಗಿದೆ.
- 2018 ರ ಆಗಸ್ಟ್ - ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಭ್ರಷ್ಟಾಚಾರ ಮತ್ತು ರಾಜಕಾರಣದ ರಾಜಕೀಯವನ್ನು ಕೊನೆಗೊಳಿಸುವ ಪ್ರತಿಜ್ಞೆಯ ಮೇಲೆ ಪ್ರಧಾನಮಂತ್ರಿಯಾಗಿದ್ದಾರೆ. ಪಾಕಿಸ್ತಾನದ ತೆಹ್ರೀಕ್ -ಇ-ಇನ್ಸಾಫ್ (ಪಿಟಿಐ) ಜುಲೈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಅತಿದೊಡ್ಡ ಪಕ್ಷವಾಯಿತು.
- .[88]
- ಮಮ್ ನೂನ್ ಹುಸೇನ್ :12ನೇ ಅಧ್ಯಕ್ಷರು:ದಿ.9 ಸೆಪ್ಟೆಂಬರ್ 2013 ರಿಂದ ದಿ.30 ಜುಲೈ 2013 (ಪಾಕಿಸ್ತಾನದ ಮುಸ್ಲಿಮ್ ಲೀಗ್ -ಎನ್)
- ಹುಸೇನ್ ಪಾಕಿಸ್ತಾನದ 12 ನೇ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದರು ಮತ್ತು 9 ಸೆಪ್ಟೆಂಬರ್ 2013 ರಂದು ಅಧಿಕಾರ ವಹಿಸಿಕೊಂಡರು. [89]
- ನವಾಜ್ ಶರೀಫ್ : ೨೦ ನೇ ಪ್ರಧಾನಿ: ದಿ. 5 ಜೂನ್ 2013 ರಿಂದ 28 ಜುಲೈ 2017 4 ವರ್ಷಗಳು,1 ತಿಂಗಳು,23 ದಿನಗಳು, 2013 (ಪಾಕಿಸ್ತಾನ ಮುಸ್ಲಿಂ ಲೀಗ್ -ಎನ್)
- ಜೂನ್ 5, 2013 ರಂದು, ಶರೀಫ್ ಮೂರನೇ ಸತತ ಅವಧಿಗೆ ಅಧಿಕಾರ ವಹಿಸಿಕೊಂಡರು. ಪನಾಮ ಪೇಪರ್ಸ್ ಪ್ರಕರಣದ ಪರಿಣಾಮವಾಗಿ ಅವರು ದಿ.28 ಜುಲೈ 2017 ರಂದು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಅನರ್ಹರಾಗಿ, ಹುದ್ದೆ ತ್ಯಜಿಸಿದರು.
- ಪಾರ್ಲಿಮೆಂಟ್ ತನ್ನ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಪಾಕಿಸ್ತಾನವು ಮೊದಲ ಬಾರಿಗೆ, 11 ಮೇ 2013 ರಂದು ನಡೆದ ಚುನಾವಣೆಗಳು ನೆಡೆದವು. ಸಂಪ್ರದಾಯವಾದಿ ಪಾಕಿಸ್ತಾನ್ ಮುಸ್ಲಿಂ ಲೀಗ್ (N) ಸಂಸತ್ತಿನಲ್ಲಿ ಸಮೀಪದ ಬಹುಮತವನ್ನು ಸಾಧಿಸಿದಾಗ ದೇಶದ ರಾಜಕೀಯ ದೃಶ್ಯ ಬದಲಾಯಿಸಿತು. ನವಾಜ್ ಶರೀಫ್ ಮೇ 28 ರಂದು ಪ್ರಧಾನ ಮಂತ್ರಿಯಾದರು. ಆಗಸ್ಟ್ 2013 ರವರೆಗೆ ರಾಷ್ಟ್ರೀಯ ಚರ್ಚೆಗಳು ನಡೆಯುತ್ತಿರುವ ರಾಷ್ಟ್ರೀಯ ಪ್ರತ್ಯೇಕತೆ, ದೇಶದ ವಿದೇಶಾಂಗ ನೀತಿ, ಬಂದೂಕು ನಿಯಂತ್ರಣ, ತೆರಿಗೆ, ವಲಸೆ, ಮತ್ತು ಭಯೋತ್ಪಾದನಾ ವಿರೋಧಿ ಸುಧಾರಣೆಗಳ ಮೇಲೆ ಆಡಳಿತ ಮುಂದುವರಿಯಿತು.[90]
ಪಾಕೀಸ್ತಾನ -2013
ನವಾಜ್ ಷರೀಫ್ ರ ಹಿನ್ನೆಲೆ ಮತ್ತು ಸಂಕಷ್ಟ
- 1999 ರಲ್ಲಿ (ಎರಡು ಬಾರಿ ಪ್ರಧಾನಿಯಾಗಿದ್ದ) ಷರೀಫರ ಮೇಲೆ ಮಿಲಿಟರಿ ನ್ಯಾಯಾಲಯವು ಮಾನವ ಅಪಹರಣ ಕೊಲೆ ಪ್ರಯತ್ನ ಹೈಜಾಕಿಂಗ್ , ಭಯೋತ್ಪಾದನೆ ,ಭ್ರಷ್ಟಾಚಾರ ಆಪಾದನೆಗಳನ್ನು ಹೊರಿಸಿ ವಿಚಾರಣೆ ನಡೆಸಿ ಮರಣದಂಡನೆ ಕೊಡುವುದರಲ್ಲಿತ್ತು. ಆರೆ ಸೌದಿಅರೇಬಿಯಾ ಯುಎಸ್ಎ ಗಳ ವತ್ತಡಕ್ಕೆ ಮಣಿದು ೧೪ವರ್ಷ ಸೆರೆವಾಸ, US$400,000 ದಂಡವನ್ನು ವಿಧಿಸಿತು ನಂತರ ಸೌದಿ ಅರೆಬಿಯಾದ ಮಧ್ಯಸ್ತಿಕೆಯಿಂದ ಸೌದಿ ಅರೇಬಿಯಾಕ್ಕೆ 21 ವರ್ಷಗಳ ಕಾಲ ಪಾಕೀಸ್ತಾನ ರಾಜಕೀಯಕ್ಕೆ ಮರಳಬಾರದೆಂಬ ಷರತ್ತಿನೊಂದಿಗೆ ಸೌದಿ ಅರೇಬಿಯಾಕ್ಕೆ ಗಡೀಪಾರು ಮಾಡಲಾಯಿತು
- ಷರೀಫ್, ಸಾಚಾತನಕ್ಕೆ ಸರಿಯಾದ ಪುರಾವೆ ಒದಗಿಸ ಕಾರಣ ಲಾಹೋರ್ ಉನ್ನತ ನ್ಯಾಯಾಲಯ ಅವರಿಗೆ ತೆರಿಗೆ ವಂಚನೆ ಯ ಬಾಬ್ತು U.S. $400,000 ತೆರಲು ಹೇಳಿತು-(25 Novmber 2007).ನ್ಯಾಯಾಲಯವು ಜೂನ್ 2008 ರಲ್ಲಿ ಹಿಂದಿನ ಅಪರಾಧಗಳಿಗೆ ವಿನಾಯತಿ ನೀಡಿ ಪುನಃ ಪಾರ್ಲಿಮೆಂಟ್` ಚುನಾವಣೆ ಗಳಲ್ಲಿ ಭಾಗವಹಿಸಲು ಅನುಮತಿ ನೀಡಿತು.
- ಜೂನ್ 2008 ರ ಉಪಚುನಾವಣೆಯಲ್ಲಿ(by-elections,) ಷರಿಫ್ ರ'ಪಾಕೀಸ್ತಾನ ಮುಸ್ಲಿಮ್ ಲೀಗ್ (N) 91 ರಾಷ್ಟ್ರೀಯ ಅಸೆಂಬ್ಲಿಯ ಸ್ಥಾನಗಳನ್ನೂ 180 ಪ್ರಾಂತೀಯ ಅಸಸೆಂಬ್ಲೀ ಸ್ಥಾನಗಳನ್ನು ಪಡೆಯಿತು. ದಿ. 2 ಏಪ್ರಿಲ್ 2010, ಪುನಃ ರಾಜ್ಯಾಂಗ ತಿದ್ದುಪಡಿಯಾಗಿ ಷರೀಫರು ಮೋರನೇ ಬಾರಿ ಪ್ರಧಾನ ಮಂತ್ರಿಯಾಗಲು ಅನುಮತಿ ದೊರೆಯಿತು.
- 1999 ರಲ್ಲಿ ಷರೀಫರ ಮೇಲೆ ಮಿಲಿಟರಿ ನ್ಯಾಯಾಲಯವು ದಿ 2 ಏಪ್ರಿಲ್ 2010 ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿಸಿಕೊಂಡು ಮೂರನೇ ಬಾರಿ ಪ್ರಧಾನ ಮೋತ್ರಿಯಾಗಳು ಅರ್ಹತೆ ಪಡೆದರು. 2013 ರ ಪಾಕೀಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ನವಾಜ್ ಷರೀಫರ 'ಪಾಕೀಸ್ತಾನ ಮುಸ್ಲಿಮ್ ಲೀಗ್ (N) 126 ಸ್ಥಾನ ಗಳೀಸಿ ವಿರೋಧ ಪಕ್ಷಗಳ ಅಚ್ಚರಿಗೆ ಕಾರಣವಾಯಿತು ಆದರೂ ಬಹುಮತಕ್ಕೆ ೧೩೭/137 ಸ್ಥಾನ ಬೇಕಿತ್ತು. ಸ್ವತಂತ್ರ ಸದಸ್ಯರ ಮತ್ತು ಇತರರ ಬೆಂಬಲ/ಪಕ್ಷದಲ್ಲಿ ಸೇರ್ಪಡೆ ಪಡೆದು 142 (On 19 May 2013) ಸ್ಥಾನಗಳ ಬಹುಮತ ಪಡೆದು, ದಿ 7 ಜೂನ್ 2013 ಪ್ರಧಾನ ಮಂತ್ರಿಯಾಗಿ ಅಧಿಕಾರ ಪೆಡೆದರು.ಆದರೆ ಈಗ ಚುನಾವಣೆಯಲ್ಲಿ ಅಕ್ರಮ /ಮೋಸ ನೆಡೆದಿದೆಯಾದ್ದರಿಂದ ಷರೀಫ್ ರು ರಾಜೀನಾಮೆ ನೀಡಿ ವಿಚಾರಣೆ / ಚುನಾವಣೆ ನಡೆಸಬೇಕೆಂದು ಇಮ್ರಾನ್ ಖಾನ್,ಕೆಲವೇ ಸಾವಿರ ಜನರ ಬೆಂಬಕದೊಂದಿಗೆ (ತೆಹ್ರೀಕ್-ಇ-ಇನ್ಸಾಫ್ ಪಕ್ಷ)ಉಗ್ರ ಚಳುವಳಿ ನಡೆಸುತ್ತಿದ್ದಾರೆ. ಅವರಜೊತೆ ಪಾಕಿಸ್ತಾನ ಅವಾಮಿ ತೆಹರಿಕ್ (ಪಿಎಟಿ) ಪಕ್ಷದ ಮುಖ್ಯಸ್ಥ ತಹಿರುಲ್ ಖಾದ್ರಿ ನೇತೃತ್ವದಲ್ಲಿ ಆಗಸ್ಟ್ 14ರಿಂದ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರದಲ್ಲಿ ಸೇರಿದ್ದಾರೆ-[91]
ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ರ ತಕರಾರು
- ಏಪ್ರಿಲ್ 1996 ರಲ್ಲಿ ಕ್ರಿಕೆಟ್ ಆಲ್ ರೌಂಡರ್ ಇಮ್ರಾನ್ ಖಾನ್, ತೆಹ್ರೀಕ್-ಇ-ಇನ್ಸಾಫ್("Movement for Justice") ರಾಜಕೀಯ ಪಕ್ಷವನ್ನು ಕಟ್ಟಿದರು. ನವೆಂ. 2002 ರಿಂದ ಅಕ್ಟೋಬರ್ 2007,ರಾಷ್ಟ್ರೀಯ ಅಸೆಂಬಲಿಗೆ ಸದಸ್ಯರಾಗಿದ್ದರು. ದಿ 11 ಮೇ 2013, ಚುನಾವಣೆಯಲ್ಲಿ ಭಾಗವಹಿಸಿ 35 ಸ್ಥಾನ ಗಳಿಸಿದರು. ಫಲಿತಾಶ ಎಣಿಕೆ ಆಗುತ್ತಿದ್ಆಗಲೇ ಷರೀಫರಿಗೆ ಅವರ ಗೆಲುವಿಗಾಗಿ ಶುಭಾಶಯ ಹೇಳಿದ್ದರು. ಆದರ ನಂತರ ಇಮ್ರಾನ್ ಖಾನ್ ಅವರು ಚುನಾವಣೆಯಲ್ಲಿ ಮೋಸ ನೆಡೆದಿದೆ ಎಂದು ನವಾಜ್ ಷರೀಫ್ ರಾಜೀನಾಮೆ ಕೊಟ್ಟು ಪುನಃ ,ಅಪರಾಧವಿಲ್ಲವೆಂದು ಕಂಡುಬಂದಲ್ಲಿ ಪ್ರಧಾನಿಯಾಗಬಹುದೆಂದು ಚಳವಳಿ,/ ಉಗ್ರ ಪ್ರತಿಭಟನೆಯನ್ನು ದಿ.14-ಆಗಸ್ಟ್ 2014 ರಿಂದ ನೆಡೆಸುತ್ತಿದ್ದಾರೆ([]). ಪಾಕಿಸ್ತಾನ ಅವಾಮಿ ತೆಹರಿಕ್ (ಪಿಎಟಿ) ಪಕ್ಷದ ಮುಖ್ಯಸ್ಥ ತಹಿರುಲ್ ಖಾದ್ರಿ ಅವರು ಪ್ರತಿಭಟನೆಗೆ ಪೂರ್ಣ ಬೆಂಬಲ ನೀಡಿ ಅದರಲ್ಲಿ ಭಾಗವಹಿಸಿದ್ದಾರೆ,