ನಾಗಾರ್ಜುನ
From Wikipedia, the free encyclopedia
ಆಚಾರ್ಯ ನಾಗಾರ್ಜುನ (ಹಿಂದಿ: नागा अर्जुन, ತೆಲುಗು: నాగార్జున, ಟಿಬೆಟನ್: ཀླུ་སྒྲུབ་ ಕ್ಲು ಸ್ಗ್ರಬ್) (ಸುಮಾರು 150 - 250 CE) ಓರ್ವ ಭಾರತೀಯ ದಾರ್ಶನಿಕನಾಗಿದ್ದ. ಈತ ಮಹಾಯಾನ ಬೌದ್ಧಮತದ ಮಧ್ಯಮಕ ಶಾಲೆಯನ್ನು ಸಂಸ್ಥಾಪಿಸಿದ.
ಅವನ ಬರಹಗಳು ಮಧ್ಯಮಕ ಶಾಲೆಯ ರೂಪುಗೊಳ್ಳುವಿಕೆಗೆ ಆಧಾರಗಳಾಗಿದ್ದು, ಮೂರು ಪ್ರಕರಣ ಗ್ರಂಥ (ಸನ್ಲುನ್) ಶಾಲೆ ಎಂಬ ಹೆಸರಿನಡಿಯಲ್ಲಿ ಅದು ಚೀನಾಕ್ಕೆ ರವಾನಿಸಲ್ಪಟ್ಟಿತು. ಪ್ರಜ್ಞಾಪರಮಿತ ಸೂತ್ರಗಳ ತತ್ತ್ವಶಾಸ್ತ್ರವನ್ನು ಅಭಿವೃದ್ಧಿಪಡಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ. ನಳಂದದ ಬೌದ್ಧಮತೀಯ ವಿಶ್ವವಿದ್ಯಾಲಯದೊಂದಿಗೆ ಅವನಿಗೆ ನಿಕಟ ಒಡನಾಟವಿತ್ತು. ಬೌದ್ಧಮತದ ಜೋಡೋ ಶಿನ್ಷು ಶಾಖೆಯಲ್ಲಿ, ಅವನನ್ನು ಮೊದಲನೇ ಕುಲಜನಕ ಎಂದು ಪರಿಗಣಿಸಲಾಗಿದೆ.
ಐತಿಹಾಸಿಕ ಪ್ರಾಮುಖ್ಯತೆಯ ನಾಗಾರ್ಜುನನ ವಾಸ್ತವಿಕ ಜೀವನದ ಕುರಿತು ಹೆಚ್ಚೇನೂ ತಿಳಿದುಬಂದಿಲ್ಲ. ನಾಗಾರ್ಜುನನ ಎರಡು ಅತ್ಯಂತ ವ್ಯಾಪಕ ಜೀವನ ಚರಿತ್ರೆಗಳ ಪೈಕಿ ಒಂದು ಚೀನೀ ಭಾಷೆಯಲ್ಲಿದ್ದರೆ, ಮತ್ತೊಂದು ಟಿಬೆಟ್ಟಿನ ಭಾಷೆಯಲ್ಲಿದೆ. ಅವನ ಜೀವನದ ಅನೇಕ ಶತಮಾನಗಳ ನಂತರ ಬರೆಯಲ್ಪಟ್ಟ ಈ ಜೀವನಚರಿತ್ರೆಗಳು, ಐತಿಹಾಸಿಕವಾಗಿ ನಂಬಿಕೆಗೆ ಅರ್ಹವಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿರುವ ವಿಷಯ ಸಾಮಗ್ರಿಯನ್ನು ಒಳಗೊಂಡಿವೆ. ನಾಗಾರ್ಜುನ ಓರ್ವ ಬ್ರಾಹ್ಮಣನಾಗಿ[1] ಹುಟ್ಟಿದ. ಪ್ರಾಯಶಃ ಭಾರತದ ದಕ್ಷಿಣ ಭಾಗದ ಆಂಧ್ರ ವಲಯದಲ್ಲಿ, ಪ್ರಾಯಶಃ ಒಂದು ಮೇಲ್ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಅವನ ಜನನವಾಯಿತು. ಇದು ಅವನ ಕಾಲದಲ್ಲಿದ್ದ ವೇದಗಳೊಂದಿಗಿನ ಹೊಂದಿದ್ದ ಧಾರ್ಮಿಕ ನಿಷ್ಠೆಯನ್ನು ಸೂಚಿಸುತ್ತದೆ.[2]