![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/53/Drestadyumna-kl.jpg/640px-Drestadyumna-kl.jpg&w=640&q=50)
ಧೃಷ್ಟದ್ಯುಮ್ನ
From Wikipedia, the free encyclopedia
ಧೃಷ್ಟದ್ಯುಮ್ನ('ಧೈರ್ಯಶಾಲಿ ಮತ್ತು ಭವ್ಯವಾದವನು' ಎಂದರ್ಥ) ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಪಾಂಚಾಲ ಸಾಮ್ರಾಜ್ಯದ ರಾಜ ದ್ರುಪದನ ಮಗ ಮತ್ತು ದ್ರೌಪದಿಯ ಅವಳಿ ಸಹೋದರ.[1][2]
Quick Facts ಧೃಷ್ಟದ್ಯುಮ್ನ, ಮಾಹಿತಿ ...
ಧೃಷ್ಟದ್ಯುಮ್ನ | |
---|---|
![]() ಜಾವಾ ಗೊಂಬೆಯಾಟದಲ್ಲಿ ಧೃಷ್ಟದ್ಯುಮ್ನ | |
ಮಾಹಿತಿ | |
ಕುಟುಂಬ | |
ಮಕ್ಕಳು | ಕ್ಷತ್ರಧರ್ಮನ್, ಕ್ಷತ್ರವರ್ಮನ್, ಕ್ಷತ್ರಂಜಯ ಮತ್ತು ಧೃಷ್ಟಕೇತು (ಪುತ್ರರು) |
Close
ತನ್ನ ಶತ್ರು ದ್ರೋಣನನ್ನು ಕೊಲ್ಲುವ ಸಾಮರ್ಥ್ಯವಿರುವ ಮಗನನ್ನು ಬಯಸಿದ ದ್ರುಪದನು ಒಂದು ಯಜ್ನವನ್ನು ಆಯೋಜಿಸಿದ್ದನು. ಆ ಯಜ್ಞದಿಂದ ಧೃಷ್ಟದ್ಯುಮ್ನನು ಜನಿಸಿದನು ಮತ್ತು ಅವನ ಜೊತೆಗೆ ದ್ರೌಪದಿಯೂ ಜನಿಸಿದಳು. ಪಾಂಡವ ರಾಜಕುಮಾರ ಅರ್ಜುನನು ಬ್ರಾಹ್ಮಣನ ವೇಷ ಧರಿಸಿ ದ್ರೌಪದಿಯನ್ನು ವಿವಾಹವಾದಾಗ, ಧೃಷ್ಟದ್ಯುಮ್ನನು ಬ್ರಾಹ್ಮಣನ ವೇಷದಲ್ಲಿದ್ದ ಅರ್ಜುನನ ಗುರುತನ್ನು ಅರಿತುಕೊಳ್ಳುತ್ತಾನೆ. ಕುರುಕ್ಷೇತ್ರ ಯುದ್ಧದಲ್ಲಿ, ಧೃಷ್ಟದ್ಯುಮ್ನನು ಪಾಂಡವರೊಂದಿಗೆ ಸೇರುತ್ತಾನೆ ಮತ್ತು ಪಾಂಡವರ ಪಡೆಗಳ ಸರ್ವೋಚ್ಚ ಸೇನಾಧಿಪತಿಯಾಗುತ್ತಾನೆ. ಯುದ್ಧದ ಹದಿನೈದನೇ ದಿನದಂದು ಅವನು ದ್ರೋಣರ ಶಿರಚ್ಛೇದನ ಮಾಡಿ, ತನ್ನ ಜನ್ಮದ ಧ್ಯೇಯವನ್ನು ಪೂರೈಸುತ್ತಾನೆ.