From Wikipedia, the free encyclopedia
ಜನಪದ ಆಭರಣಗಳು ವ್ಯಕ್ತಿಯ ಜೀವನದಲ್ಲಿ ಸೌಂದರ್ಯವರ್ಧಕವಾಗಿ, ಸೌಂದರ್ಯರಕ್ಷಕವಾಗಿ, ಔಪಯೋಗಿಕವಾಗಿ, ಆರೋಗ್ಯವರ್ಧಕವಾಗಿ, ಆಪದ್ಧನವಾಗಿ, ಅನ್ಯಾಕರ್ಷಕವಾಗಿ ಪ್ರದರ್ಶನಗೊಳುತ್ತಿವೆ. ಆದಿ ಮಾನವ ಪ್ರಕೃತಿಯ ಆರಾಧಕ. ಹಾಗಾಗಿ ನಿಸರ್ಗದ ನಮೂನೆಯಲ್ಲಿ ಆಭರಣ ಗಳನ್ನು ಮಾಡಿಸಿ ಕೊಳ್ಳುವುದನ್ನು ರೂಢಿಸಿ ಕೊಂಡಿದ್ದಾನೆ. ಮೈಮೇಲೆ ತುಂಡು ಬಟ್ಟೆ ಧರಿಸದಿದ್ದರೂ, ಇಡೀ ದೇಹ ಮುಚ್ಚುವಷ್ಟು ಒಡವೆಗಳನ್ನು ಯಾವುದೇ ಎಗ್ಗಿಲ್ಲದೆ ಧರಿಸಿ, ತನ್ನ ಅಲಂಕಾರ ಪ್ರಿಯತೆಯನ್ನು ಮೆರೆದಿದ್ದಾನೆ. ಒಡವೆ ಧರಿಸಲು ವಯೋಮಿತಿಯೇನು ಇಲ್ಲ. ಇಂತಹ ಆಭರಣಗಳ ಅಧ್ಯಯನ ಹೊಸಲೋಕವೂಂದರ ದರ್ಶನ ಮಾಡಿಸುತ್ತಾ, ವಿಸ್ಮಯದೊಂದಿಗೆ ಆನಂದವನ್ನು ಉಂಟು ಮಾಡುತ್ತದೆ. ಆಭರಣಗಳಿಗೆ ಮೂಲ ಪ್ರೇರಣೆ 'ಹಚ್ಚೆ'. ಆರಂಭದಲ್ಲಿ ಒಡವೆಗಳು ಮಣ್ಣು, ಮಣಿ, ಕವಡೆ,ಪ್ರಾಣಿಗಳ ಕೊಂಬಿನಿಂದ, ಶಂಖಗಳಿಂದ ಮಾಡಲ್ಪಟ್ಟರೂ, ಅವು ಬೇಗನೆ ನಶಿಸಿ ಹೋಗುತ್ತಿದ್ದುದರಿಂದ ಲೋಹಗಳ ಆಭರಣಗಳು ಬೆಳಕಿಗೆ ಬಂದುವು.
ಜಾನಪದ ಸಾಗರದಷ್ಟು ಆಳ, ಆಕಾಶದಷ್ಟು ವಿಸ್ತಾರ. ಅದಕ್ಕೆ ಹಿರಿಯ ವಿದ್ವಾಂಸರು-"ಹರಿಯ ಒಡಲಲ್ಲಿ ಬ್ರಹ್ಮಾಂಡ ಅಡಗಿರುವಂತೆ, ಜಾನಪದ ಕುಕ್ಷಿಯಲ್ಲಿ ಇಡೀ ಜಗತ್ತೆಲ್ಲವೂ ಹುದುಗಿದೆ" ಎಂದಿದ್ದಾರೆ. ಜಾನಪದವು ಒಂದು ವಿಶೇಷ ಅಧ್ಯಯನ ವಿಷಯವಾಗಿ ಬೆಳೆದಿದೆ. ಅದು ಕೇವಲ ಸಂಗ್ರಹ, ರಸವಿಮರ್ಶೆಗಳಿಗಷ್ಟೇ ಮೀಸಲಾಗಿಲ್ಲ. ಅವುಗಳೊಂದಿಗೆ-
ಮಾನವ ಇತಿಹಾಸದಲ್ಲಿ ಖನಿಜಗಳಿಗೆ ಸಂಬಂಧ ಪಟ್ಟಂತೆ ನಾಲ್ಕು ಸಾಮಾಜಿಕ ಯುಗಗಳು ಬಳಕೆಯಲ್ಲಿವೆ. ಅವುಗಳೆಂದರೆ-
ಆಭರಣಗಳನ್ನು ಮಾಡಿಸುವಲ್ಲಿ 'ನವರತ್ನ'ಗಳ ಪಾತ್ರ ಬಹಳ ಮುಖ್ಯವಾದುದು. ನವರತ್ನಗಳನ್ನು 'ಹರಳು'ಗಳೆಂಬ ಸಾಮಾನ್ಯ ಹೆಸರಿನಿಂದಲೂ ಕರೆಯುತ್ತಾರೆ. ಒಂಬತ್ತು ಬಗೆಯ ಹರಳುಗಳು ನವರತ್ನಗಳೆಂದು ಗುರುತಿಸಲ್ಪಟ್ಟಿವೆ. ಪ್ರತಿ ಹರಳುಗಳಿಗೂ ಅವುಗಳದೇ ಆದ ವಿಶಿಷ್ಟ ಗುಣ, ವಿಶೇಷತೆಗಳಿರುವುದನ್ನು ಕಾಣಬಹುದು. ನವರತ್ನಗಳ ಹುಟ್ಟಿನ ಬಗ್ಗೆ ಪುರಾಣದಲ್ಲಿ ಒಂದು ಚಿಕ್ಕ ಕಥೆಯಿದೆ. ಅದೆಂದರೆ- ಒಮ್ಮೆ ಸುರರು 'ವೇಲಾಸುರ'ನೆಂಬ ಅಸುರನನ್ನು ಕೊಂದಾಗ, ಆ ರಕ್ಕಸನ ಅಂಗಾಂಗಗಳು ನವರತ್ನಗಳಾಗಿ ಪರಿವರ್ತನೆಗೊಂಡುವಂತೆ. ವೇಲಾಸುರನ ಮೂಳೆಯಿಂದ- ವಜ್ರವೂ, ಹಲ್ಲಿನಿಂದ -ಮುತ್ತು, ರಕ್ತದಿಂದ -ಮಾಣಿಕ್ಯವೂ, ಮೇದಸ್ಸಿನಿಂದ -ಪಚ್ಚೆಯೂ, ಮಾಂಸದಿಂದ- ಹವಳವೂ, ಶ್ಲೇಷ್ಮದಿಂದ-ಪುಷ್ಯರಾಗ, ನರದಿಂದ-ಗೋಮೇಧಿಕ, ರೋಮದಿಂದ- ವೈಢೂರ್ಯವೂ, ಕಂಗಳಿಂದ ನೀಲ ಹುಟ್ಟಿವೆಯೆಂದು ಹೇಳಲಾಗಿದೆ.
ಮಕ್ಕಳ ಒಡವೆಗಳೆಲ್ಲ ಸಾಮಾನ್ಯವಾಗಿ ಚಿನ್ನ, ಬೆಳ್ಳಿಯಿಂದ ಮಾಡಿದವುಗಳಾಗಿವೆ. ಅರಳೆಲೆ, ಅಂದುಗೆ, ಮಾಗಾಯಿ, ಮುರ, ಎಲೆ, ನಕ್ಷತ್ರ, ಬಿಂದುಲಿ, ದಿಟ್ಟಿಮಣಿಸರ, ಹವಳದ ಸರ, ಹುಲಿಯುಗುರು, ಬಾಲಿಮಣಿ, ತಟ್ಟುಮಣಿ, ಹನುಮಂತನತಾಳಿ, ಗೆಜ್ಜೆ ಉಡುದಾರ, ಪಟ್ಟೆ ಉಡುದಾರ, ಕೈಕಟ್ಟು, ಕಡಗ, ನುಲಿಕೆ, ಕಪ್ಪ, ಉಂಗುರಗಳು, ಕಾಲ್ಕಡಗ, ಗೆಜ್ಜೆ ಚೈನು, ಪೆಂಡೆ ಗೆಜ್ಜೆ, ಹಾಲ್ಗಡಗ ಮುಂತಾದುವು. ಮಕ್ಕಳ ಆಭರಣಗಳಲ್ಲಿ ಪ್ರಮುಖವಾಗಿ ನಾಲ್ಕು ವಿಭಾಗಗಳಿವೆ-
ಆರಂಭ ಕಾಲದಲ್ಲಿ ಸ್ತೀ -ಪುರುಷರು ಹೆಚ್ಚು ಕಡಿಮೆ ಸಮಾನವಾಗಿ ಆಭರಣಗಳನ್ನು ಧರಿಸುತ್ತಿದ್ದರು. ಕಾಲಕ್ರಮೇಣ ಪುರುಷರು ಆಭರಣಗಳಿಂದ ವಿಮುಖವಾಗ ತೊಡಗಿದರು. ಮುರ, ಮುರವು, ಒಂಟಿಹರಳು, ಒಂಟಿಮುತ್ತು, ರತ್ನಕುಂಡಲ, ಕರ್ಣಕುಂಡಲ, ಹತ್ತಕಡಕು, ಜಂಟ್ಲಗುಂಡಲ, ಬಾವುಲಿ, ಗುಬ್ಬಿಬಾವುಲಿ, ಚಂದ್ರಬಾವುಲಿ, ಕಂಠೀಹಾರ, ಗುಂಡಿನಸರ, ಪವನಸರ, ಗೋಪು, ಅಸಲಿ, ಚಪಲಹಾರ, ಜೀರಿಗೆಸರ, ಬಠಾಣಿಸರ, ಹಗ್ಗದುರಿ ಚೈನು, ನೇವಳ, ಉಡುದಾರ, ತನಿಮಣಿ, ಗಜಗ, ಪಟ್ಟಿಉಡುದಾರ, ತೋಳ್ಬಳೆ, ತೋಡೆ, ಕೇಯೂರ, ಬಾಪುರಿ, ಬಾಹುಬಂಧ, ಒಂಟೀಬಳೆ, ಕಂಕಣ, ಕಡಗ, ಬಿಂದ್ಲಿ, ಪೋಚೆ/ಪಾಟ್ಲಿ, ಕಪ್ಪ, ಬದ್ದು, ನುಲಿಕೆ ಕಪ್ಪ, ಬಿರುದು, ಸಾದದುಂಗುರ, ಹರಳಿನುಂಗುರ, ಹವಳದುಂಗುರ, ಮುತ್ತಿನುಂಗುರ, ನವರತ್ನದುಂಗುರ, ವಜ್ರದುಂಗುರ, ಗಂಡುಮಿಂಚು, ಕಾಲ್ಕಡಗ, ಪೆಂಡೆ ಮುಂತಾದುವು.
ಸಾಧಾರಣವಾಗಿ ಆಭರಣಗಳೆಲ್ಲ ಹೆಣ್ಣಿಗಾಗೇ ಹೆಚ್ಚಾಗಿ ರೂಪುಗೊಂಡಿವೆ. ಬೈತಲೆ ಬೊಟ್ಟು,/ಮಣಿ.ಸರ, ಪದಕ, ಸೀಮಂತಮಣಿ, ಸೂರ್ಯ, ಚಂದ್ರಕೋಲು, ಕೇದಿಗೆ, ನಾಗರ, ವೊಗ್ಗಿನಮಾಲೆ, ಜಡೆಬಿಲ್ಲೆ, ಜಡೆನಾಗರ, ಜಡೆಸರ, ಜಡೆಗೊಂಡೆ, ಜಡೆಬಂಗಾರ, ಗಿಳಿಹೆರಳು, ಓಲೆ-ಮುತ್ತಿನ/ವಜ್ರದ/ಹರಳಿನ/ಕರಿಮಣಿ/ ಸೀಮೆ ಕಮಲದ/ನೀಲದ/ಕುಡುಕಿ/ನವರತ್ನದ/ಬಿಚ್ಚೋಲೆ/ಗುಮ್ಮಂಚಿನೋಲೆ, ಜುಮುಕಿ, ಬುಗುಡಿ-ಮುತ್ತಿನ/ಎಲೆ/ಕಡ್ಡಿ/ಗೆಜ್ಜೆತಳುಕಿನ/ನೆಲ್ಲಿಕಾಯಿ, ತಟ್ಟು, ಬಾಬುಲು, ಮೇಟಿಕೊಳವೆ, ಮುಳುಗು, ಬಾವಲಿ-ಮುತ್ತಿನ/ಹರಳಿನ/ಚಂದ್ರ/ಗುಬ್ಬಿ/ಕಿಡಕಿ/ವೊಗ/ಬುರುಗಿ/ಬಾಳ, ಚೌಕಳಿ, ಅಗಸಿಕಡ್ಡಿ, ಮುರ, ಕೆನ್ನೆಸರಪಳಿ, ಮಿಂಚಪಟ್ಟಿ, ತಾಲೂಕ, ದ್ರಾಕ್ಷಿಪಟ್ಟಿ, ಹುಜರ, ಬೆಳ್ಳಿತಂಬು, ಕರ್ಣಮೂಲ, ಮೂಗುತಿ, ನತ್ತು, ಬುಲಾಕು, ಮುಕುರ, ಗೋಟ, ಮುರುಬಟ್ಟು, ಮೂಗುಬಟ್ಟು, ಗಾಡೆ, ನಾಸಮಣಿ, ಏಕಾವಳಿ, ಸರಿಗೆ, ಹಾರ/ಸರ/ಮಾಲೆ- ಮುತ್ತಿನ/ರತ್ನದ/ಪದಕ/ನಕ್ಷತ್ರ/ದೊಡ್ಡಗುಂಡು/ಸಣ್ಣಗುಂಡು/ಚಿಂತಾಕು/ಕಟ್ಟಾಣಿ/ಸರಿಗೆಬಂದಿ/ಅಡ್ಡಿಕೆ/ಮೋಹನ/ಕಂಠ/ಟೀಕಿ/ಗೋಧಿ/ಅವಲಕ್ಕಿ/ಬಟಾಣಿ/ಮಾವಿನಕಾಯಿ/ನೆಲ್ಲಿಕಾಯಿ/ಕಾಸಿನಸರ/ತಾಳಿ/ತೋರಹಾರ/ಹೀರಹಾರ/ಹಗ್ಗದ ಚೈನು, ನಾಗಮರಿ,ತೋಳ್ಬಂದಿ ,ವಂಕಿ, ಬಳೆ-ಚಿನ್ನ/ಬೆಳ್ಳಿ/ಬಂಗಾರ/ಮುತ್ತು/ಹರಳು/ಕಡಗ/ಗೋಟು/ಬಿಲ್ವಾರ/ಕಂಕಣ/ಪೋಚೆ/ತೋಡೆ/ಪಾಟ್ಲಿ, ಉಂಗುರಗಳು, ಡಾಬು, ಸೊಂಟದ ಪಟ್ಟಿಗಳು, ರನ್ನಿನಜೋಡು, ಗೆಜ್ಜೆಯುಂಗುರ, ಮೀನು, ಮಿಂಚು, ಪಿಲ್ಲಿ, ಕಾಲುಂಗುರ ಮುಂತಾದುವು.
ಸಂಪ್ರದಾಯದಲ್ಲಿ ಸಂಸ್ಕೃತಿಗೆ ಬಹುಮುಖ್ಯ ಸ್ಥಾನವಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರಲ್ಲಿನ ವಿವಾಹ ಇನ್ನಿತರ ಕಾರ್ಯಗಳಲ್ಲಿ ಒಂದಷ್ಟು ಬದಲಾವಣೆಗಳಿರುವುದನ್ನು ಕಾಣಬಹುದಾಗಿದೆ. ಹಿಂದು ಮದುವೆಗಳಲ್ಲಿ ವರನ ಕಡೆಯವರು ವಧುವಿಗೆ 'ಬಣ್ಣಬಂಗಾರ'ದ ಬುಟ್ಟಿ ತರುವುದು ವಾಡಿಕೆ. ಅದರಲ್ಲಿ ಗೌರಿಬಳೆ, ಬಳ್ಳಿಕಾಲುಂಗುರ, ಕಾಲ್ಗೆಜ್ಜೆ, ಚೈನು, ಡಾಬು, ಓಲೆ, ಹೂ, ಬಳೆ, ರೇಷ್ಮೇಸೀರೆ, ತಾಳಿ ಮುಂತಾದುವನ್ನು ತಂದರೆ, ಮುಸ್ಲಿಂರು ಝಮ್ಕಿ, ಕೀರನ್ , ಬುಗ್ಗಿ, ವಾಲೆ, ಗಲ್ಲೇರ, ಲವಾ,ಕಿರಾಚಿ ಹಾರ್, ಬಂಗಾರದ ಬಳೆ, ಉಂಗುರಗಳು, ಚಂದ್ರನಾಕಾರದ ತಲೆಬಿಲ್ಲೆ, ಮೂಗುತಿ/ಬುಲಾಕು, ಕಾಲ್ಗೆಜ್ಜೆ ಮುಂತಾದುವನ್ನು ತೊಟ್ಟರೆ, ಕ್ರಿಶ್ಚಿಯನ್ನರು ಉಂಗುರ, ಬಾದಾಮಿಯಾಕಾರದ ತಾಳಿಯ ಮೇಲೆ ಶಿಲುಬೆಯ ಚಿಹ್ನೆ ಇರುತ್ತದೆ. ಚಿನ್ನದ ಸರ, ಬ್ರೇಸ್ಲೇಟ್ ಧರಿಸುವರು. ಇವರು ಬಹುತೇಕ ಹಿಂದುಗಳನ್ನು ಅನುಸರಿಸಿ ಅವರು ಧರಿಸುವ ಒಡವೆಗಳನ್ನೇ ತೊಡುತ್ತಾರೆ.
ಆಭರಣಗಳು ಮನುಷ್ಯನ ಆರೋಗ್ಯವನ್ನು ಸಂರಕ್ಷಿಸುತ್ತವೆ ಎಂಬ ಮನೋಭಾವವಿದೆ. ಅದರ ಪ್ರಕಾರ-ಓಲೆ ಧರಿಸಿದರೆ, ಅದು ಮಿದುಳನ್ನು ಪ್ರಚೋದಿಸುತ್ತದೆ. ಮೂಗುತಿ ಉಸಿರಿನ ಸಮತೋಲನ ಕಾಪಾಡುತ್ತದೆ. ಕೊರಳ ಹಾರಗಳು ಗಂಟಲನ್ನೂ, ಶ್ವಾಸಕೋಶವನ್ನು ಶುದ್ದಿಗೊಳಿಸುತ್ತವೆ, ಜೊತೆಗೆ ಎದೆಯ ಮೇಲಿನ ನವಿರಾದ ನರಗಳನ್ನು ಪ್ರಚೋದಿಸಿ ರಕ್ತಸಂಚಾರ ನಿಯಂತ್ರಿಸುತ್ತವೆ. ಉಂಗುರಗಳು ಹೃದ್ರೋಗವನ್ನು ತಡೆಯುತ್ತವೆ. ಕೈಕಡಗ, ಸೊಂಟದ ಡಾಬುಗಳು ನಡುವಿಗೆ ಬಲ ನೀಡುವುದರೊಂದಿಗೆ ಜನನೇಂದ್ರಿಯಗಳ ಆರೋಗ್ಯವನ್ನು ವರ್ಧಿಸುತ್ತವೆ. ಕಾಲುಂಗುರ ಹೆಣ್ಣಿನ ಕೋಪವನ್ನು ಶಮನಗೊಳಿಸುತ್ತದೆ. ಚಿನ್ನದ/ಬೆಳ್ಳಿಯ ಆಭರಣಗಳು ಚರ್ಮರೋಗವನ್ನು ತಡೆಯುತ್ತವೆ. ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯನ್ನು ಜಾಗೃತ ಗೊಳಿಸುತ್ತವೆ.
ವಿಶ್ವಕರ್ಮ ಜನಾಂಗದವರು ಆಭರಣಗಳ ತಯಾರಿಕೆಯಲ್ಲಿ ಪ್ರಸಿದ್ದರಾಗಿದ್ದಾರೆ. ವೇದಗಳ ಕಾಲದಲ್ಲಿ ಇವರನ್ನು ಅಕ್ಕಸಾಲಿಗ, ಆಚಾರಿ, ಸುಕರ್ಮಣ, ಹಿರಣ್ಯಕಾರ, ಚೀನಿವಾರ, ಮಣಿಕಾರ ಎಂದು ಕರೆಯಲಾಗಿದೆ. ಅಕ್ಕಸಾಲಿಗರಿಗೆ ವಿಶ್ವಕರ್ಮನೇ ಮೂಲಪುರುಷ. ಇವನಿಗೆ ಐದು ಜನ ಗಂಡು ಮಕ್ಕಳು. ಅವರೆಂದರೆ-ಮಯ, ತೃಷ್ಟ್ಯ, ವಿಶ್ವಜ್ಞ, ಮನು, ಶಿಲ್ಪಿ. ಇವರ ಕೆಲಸಗಳೆಂದರೆ-
ವಿವಿಧ ಶಿಲ್ಪ ಕಾರ್ಯದಲ್ಲಿ ನಿರತನಾದವನು 'ಮಯ'
ಮರಗೆಲಸ ಯಜ್ಞಕಾರ್ಯದಲ್ಲಿ ಪರಿಣಿತನಾದವನು 'ತೃಷ್ಟ್ಯ,'
ಮಾಂಗಲ್ಯ ಆಭರಣಗಳ ತಜ್ಞ ನಾಗಿದ್ದವನು 'ವಿಶ್ವಜ್ಞ',
ಕಬ್ಬಿಣದ ಕೆಲಸದಲ್ಲಿ ಪಾರಂಗತನಾದವನು 'ಮನು'
ವಿಗ್ರಹ ದೇವಾಲಯ ನಿರ್ಮಾಣದಲ್ಲಿ ತೊಡಗಿದವನು 'ಶಿಲ್ಪಿ'
ಹೀಗೆ ಐದು ಮಂದಿಯು ಅವರವರ ವೃತ್ತಿಗಳನ್ನು ಅವಲಂಭಿಸಿದ್ದರು. ಇವರೆಲ್ಲರೂ ಅಕ್ಕಸಾಲಿಗರ ಮೂಲಪುರುಷರು. ಇವರು ಮುಂದೆ 'ಪಾಂಚಾಳ'ರೆಂಬ ಹೆಸರಿನಿಂದ ಕರೆಯಲ್ಪಟ್ಟರು.
ಅರ, ಅಚ್ಚುವೊಳೆ, ಅಡಸಲ್ಲು, ಐರಣ, ಕುಂಚಗಳು, ಗರಗಸ, ಕಂಬಚ್ಚು, ಗೆಜ್ಜೆಕುಳಿ, ಚಾಣ, ತಂತಿ, ತ್ರಾಸು, ತಿದಿ, ತ್ರಿಜ್ಯ, ಮಾಪಕ, ಬಟ್ಟು, ಮೂಸೆ, ಊದುವ ಕೊಳವೆ, ಓರೆಕಲ್ಲು, ಕಂಪಾಸು, ತೂಕದ ಅಳತೆ, ನೈಟ್ರಿಕ್ ಮತ್ತು ಸಲ್ಫೂರಿಕ್ ಆಮ್ಲ, ಮೈಲುತುತ್ತು, ಗಂಧಕಾಮ್ಲ, ಅರಗು, ಒಪ್ಪದಮರಳು, ಕೆಂಪುಮರಗಳು, ನವಸಾರ, ಪಟಿಕ, ಪೆಟ್ಲುಪ್ಪು, ಬಿಳಿಗಾರ, ರಸಕರ್ಪೂರ, ಸಮುದ್ರದ ನೊರೆಗಳು, ಆಭರಣಗಳ ನಕ್ಷೆ ಮುಂತಾದುವು.
ಸಂಪ್ರದಾಯದ ಮುಂದುವರೆದ ರೂಪವೇ ಆಚರಣೆ. ಆಚರಣೆಗಳನ್ನು ಅಂತರ್ಗತ ಅಥವಾ ವೈಯಕ್ತಿಕ ಎಂಬುವುದಕ್ಕಿಂತ ಅವು ಸಾಮುದಾಯಿಕವಾದುವು ಎನ್ನಬಹುದು. ಆಚರಣೆಗಳಲ್ಲಿ ಮೂರು ವಿಧಗಳಿವೆ. ಅವೆಂದರೆ-
ಜನಪದವೆಂಬುದೇ ಒಂದು ವಿಶ್ವಕೋಶವಿದ್ದಂತೆ. ಅದನ್ನು ಯಾರೂ ಸಹ ಸಂಪೂರ್ಣವಾಗಿ ಒಮ್ಮೆಗೆ ಓದಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಹಲವಾರು ವಿಭಾಗ ಕ್ರಮಗಳನ್ನು ಮಾಡಿಕೊಂಡು ಓದಬೇಕಾಗುತ್ತದೆ. ಆಗ ಮಾತ್ರ ಅದು ಸ್ವಲ್ಪ ಹಿಡಿತಕ್ಕೆ ಸಿಗುತ್ತದೆ. ಅಂತಹ ವಿಭಾಗಕ್ರಮಗಳನ್ನೇ ಪ್ರಕಾರಗಳೆಂದು ಕರೆಯಲಾಗುತ್ತದೆ. ಆಭರಣಗಳಿಗೆ ಸಂಬಂಧಪಟ್ಟಂತೆ ಇರುವ ಜನಪದ ಪ್ರಕಾರಗಳಲ್ಲಿ ಕಥೆಗೆ ಮೊದಲ ಸ್ಥಾನವಿದೆ.
ವಜ್ರಕುಮಾರ-ಒಂದೂರಲ್ಲಿ ಒಬ್ಬ ಅರಸು. ಅವನಿಗೆ ಏಳುಜನ ಗಂಡುಮಕ್ಕಳು, ಒಬ್ಬ ಹೆಣ್ಣು ಮಗಳು. ಏಳುಜನ ಗಂಡುಮಕ್ಕಳು ಏಳು ರೀತಿಯ ಬಂಗಾರದ ಒಡವೆಗಳನ್ನು ಮಾಡಿಸಿ, ಅವನ್ನು ತಂಗಿಗೆ ತೊಡಿಸಿ, ತಂಗಿಯ ಪ್ರತಿ ತಲೆ ಕೂದಲಿಗೂ ಮುತ್ತು, ಬಂಗಾರ ಪೋಣಿಸುವ ಸಲುವಾಗಿ ಅವನ್ನು ತರಲು ಬೇರೆ ರಾಜ್ಯಕ್ಕೆ ಹೋಗುತ್ತಾರೆ. ಆ ಹುಡುಗಿಯ ಏಳುಜನ ಅತ್ತಿಗೆಯರು ಈ ತಂಗಿಗೆ ನಾನಾ ರೀತಿಯ ಚಿತ್ರಹಿಂಸೆ ಕೊಟ್ಟು, ಅವಳ ಒಡವೆಗಳನ್ನೇಲ್ಲ ಕಿತ್ತುಕೊಂಡು ಅವಳನ್ನು ಮನೆಯಿಂದ ಹೊರಗಟ್ಟಿ ಬಿಡುತ್ತಾರೆ. ಆ ತಂಗಿ ಕಾಡಿಗೋಗಿ ಅಲ್ಲಿ ಸತ್ತಿದ್ದ ರಾಜಕುಮಾರನನ್ನು ಬದುಕಿಸಿ, ಅವನನ್ನೇ ಮದುವೆಯಾಗಿ ವಜ್ರಕುಮಾರನೆಂಬ ಮಗುವನ್ನು ಹಡೆಯುತ್ತಾಳೆ. ನಂತರ ಆ ಮಗುವಿನಿಂದ ತಂಗಿ ಅಣ್ಣಂದಿರು ಮತ್ತೆ ಒಂದಾಗುತ್ತಾರೆ.
ತಾಯಿ ಚಾಮುಂಡಿ ವಾಲೆಯ ಬೆಳಕಿಗೆ
ಎಪ್ಪತ್ತೊಂದು ಹುಲ್ಲೆ ಬೆದರಿದೊ
ದೊಡ್ಡಂಚಿನ ಸೀರೆ ಒಡ್ಯಾಣಕೆ ಬಂಗಾರ
ದೊಡ್ಡೇರಿ ಮೇಲೆ ಬರುವೂಳೆ ಚಾಮುಂಡಿ
ವಜ್ರದ ಹೊನ್ನೋಲೆ ಗೆಜ್ಜೆ ತಳಕಿನ ಬುಗುಡಿ
ಗೆಜ್ಜೆ ಗಲಿರೆಂಬೊ ಕಿರುಪಿಲ್ಲಿ ಹಾಕ್ಕೊಂಡು
ಚಾಮುಂಡಿ ಜಗ್ಗುತ್ತಾ ಬೆಟ್ಟ ಇಳಿದಾಳೆ
ದೊರೆಗಳು ಕೈ ಎತ್ತಿ ಮುಗಿದಾರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.