ಗೌತಮ ಕ್ಷೇತ್ರ
ಭಾರತ ದೇಶದ ಗ್ರಾಮಗಳು / From Wikipedia, the free encyclopedia
ಬೆಟ್ಟದಾಸನಪುರ ಬೆಂಗಳೂರು ದಕ್ಷಿಣಜಿಲ್ಲೆಯಲ್ಲಿರುವ ಬೆಂಗಳೂರು ದಕ್ಷಿಣ ತಾಲೂಕಿನ ಒಂದು ಇತಿಹಾಸ ಪ್ರಸಿದ್ಧ ಸ್ಠಳ. ಇದು ಗೌತಮ ಕ್ಷೇತ್ರವೆಂದು ಗುರುತಿಸಲ್ಪಟ್ಟಿದೆ. ಗೌತಮ ಕ್ಷೇತ್ರವು ಇತಿಹಾಸದ ಪುಟಗಳಲ್ಲಿ ಮರೆಯಾಗಿರಬಹುದು, ಆದರೆ ಕನ್ನಡದ ಅರಸು ಮನೆತನವಾದ ಗಂಗರ ಆಳ್ವಿಕೆಯಲ್ಲಿ ಕಟ್ಟಿದ ಕೋಟೆ ಬೆಂಗಳೂರಿನ ಪ್ರಸಿದ್ದ ಸ್ಥಳಗಳಲ್ಲಿ ಒಂದಾಗಿದೆ ಹಾಗು ಅಂದಿನ ಗೌತಮ ಕ್ಷೇತ್ರವೇ ಇಂದಿನ ಬೆಟ್ಟದಾಸನಪುರ ಎಂದು ಕರೆಯಲ್ಪಟ್ಟಿದೆ. ಇಲ್ಲಿನ ಕೋಟೆಯು ವಿಶಾಲವಾದ ಕಲ್ಲಿನ ಬಂಡೆಯ ಮೇಲೆ ಇದ್ದು ಕೋಟೆಯ ಒಳಗೆ ಎರಡು ಪುರಾತನ ದೇವಸ್ಥಾನಗಳಿವೆ. ಮೊದಲನೆಯದು ಶ್ರೀ ಭೂದೇವಿ - ಶ್ರೀ ದೇವಿ ಸಮೇತ ಶ್ರೀ ತಿಮ್ಮರಾಯಸ್ವಾಮಿ ದೇವಸ್ಥಾನ ಮತ್ತು ಎರಡನೇಯದು ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನವಿದ್ದು ಇದು ದೇಶದಲ್ಲೇ ಎರಡನೇಯ ಹರಿಹರರ ಸಂಗಮ ಕ್ಷೇತ್ರವೆಂದೇ ಪ್ರತೀತಿ (ಮೊದಲನೇಯದು ಕಾಶಿ ಕ್ಷೇತ್ರ).
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಡಿಸೆಂಬರ್ ೨೦೧೫) |