![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/ca/Bluff_erosion_in_Pacifica_2.jpg/640px-Bluff_erosion_in_Pacifica_2.jpg&w=640&q=50)
ಕ್ಷರಣ/ಸವೆತ
From Wikipedia, the free encyclopedia
ಸವೆತ ವು ನೈಸರ್ಗಿಕ ಪರಿಸರದಲ್ಲಿ ಅಥವಾ ಅವುಗಳ ಮೂಲದಲ್ಲಿ ಘನವಸ್ತುಗಳ ಸೆಡಿಮೆಂಟ್(ಕಣ),ಮಣ್ಣು,ಕಲ್ಲು ಮತ್ತಿತರ ಕಣಗಳುಹವೆಯ ಪ್ರಭಾವದಿಂದ ವಿಘಟನೆ ಮತ್ತು ಸಾಗಣೆಯಾಗಿ ಬೇರೆ ಕಡೆ ಶೇಖರಣೆಯಾಗುವ ಪ್ರಕ್ರಿಯೆ. ಇದು ಸಾಮಾನ್ಯವಾಗಿ ಗಾಳಿ,ನೀರು ಅಥವಾ ಹಿಮದ ಸಾಗಣೆಯಿಂದ ಸಂಭವಿಸುತ್ತದೆ; ಇಳಿಜಾರಿನಲ್ಲಿ ಮಣ್ಣು ಅಥವಾ ಇತರ ವಸ್ತುಗಳು ಗುರುತ್ವ ಬಲದಿಂದ ಜಾರುವ ಮೂಲಕ,ಅಥವಾ ಜೈವಿಕಸವೆತದಲ್ಲಿ ನೆಲದಡಿ ವಾಸಿಸುವ ಜೀವಿಗಳಿಂದ ಉಂಟಾಗುತ್ತದೆ.
![Thumb image](http://upload.wikimedia.org/wikipedia/commons/thumb/c/ca/Bluff_erosion_in_Pacifica_2.jpg/640px-Bluff_erosion_in_Pacifica_2.jpg)
ಭೂಸವೆತವು ನೈಸರ್ಗಿಕ ಕ್ರಿಯೆಯಾಗಿದ್ದು, ಮಾನವ ಭೂಬಳಕೆಯಿಂದ ಇದು ಗಮನಾರ್ಹವಾಗಿ ಹೆಚ್ಚಿದೆ. ವಿಶೇಷವಾಗಿ ಕೈಗಾರಿಕೆ ಕೃಷಿ,ಕಾಡು ಕಡಿಯುವಿಕೆ ಮತ್ತು ಪಟ್ಟಣದ ಯದ್ವಾತದ್ವಾ ಬೆಳವಣಿಗೆ.[1][2] ನೈಸರ್ಗಿಕ ಸಸ್ಯವರ್ಗದ ಭೂಮಿ ಅಥವಾ ಸುಸ್ಥಿರ ಕೃಷಿಪದ್ದತಿಗಳಲ್ಲಿ ಬಳಸುವ ಭೂಮಿಗಿಂತ, ಕೈಗಾರಿಕೆ ಕೃಷಿಗೆ ಬಳಸಲಾದ ಭೂಮಿ ಸಾಮಾನ್ಯವಾಗಿ ಗಮನಾರ್ಹ ಹೆಚ್ಚಿನ ಪ್ರಮಾಣದ ಸವೆತಕ್ಕೆ ಗುರಿಯಾಗುತ್ತದೆ. ವಿಶೇಷವಾಗಿ ಭೂಮಿಯನ್ನು ಉಳುಮೆಗೆ ಬಳಸುವ ವಿಚಾರದಲ್ಲಿ ಇದು ನಿಜ, ಇದು ನೆಲದ ಮೇಲ್ಭಾಗದಲ್ಲಿ ಸಸ್ಯಗಳ ಹೊದಿಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಮಣ್ಣಿನ ರಚನೆ ಮತ್ತು ಸಸ್ಯದ ಬೇರುಗಳು ಎರಡಕ್ಕೂ ಹಾನಿವುಂಟುಮಾಡುತ್ತದೆ. ಉಳುಮೆ ಮಾಡಿಲ್ಲದಿದ್ದರೆ ಅವು ಮಣ್ಣನ್ನು ಇರುವ ಸ್ಥಳದಲ್ಲೇ ಭದ್ರವಾಗಿ ಹಿಡಿದಿಡುತ್ತಿತ್ತು. ಆದಾಗ್ಯೂ,ಸುಧಾರಿತ ಭೂಬಳಕೆ ಪದ್ಧತಿಗಳಿಂದ ಸವೆತವನ್ನು ತಪ್ಪಿಸಬಹುದು.ಎತ್ತರದ ಪ್ರದೇಶದ ಕೃಷಿ,ಸಾಂಪ್ರದಾಯಿಕ ಉಳುಮೆ ಪದ್ಧತಿಗಳು ಮತ್ತು ಗಿಡ ನೆಡುವಿಕೆ.
ಸ್ವಲ್ಪ ಪ್ರಮಾಣದ ಸವೆತವು ನೈಸರ್ಗಿಕವಾಗಿದ್ದು,ವಾಸ್ತವವಾಗಿ ಪರಿಸರವ್ಯವಸ್ಥೆಗೆ ಆರೋಗ್ಯಕರವಾಗಿದೆ. ಉದಾಹರಣೆಗೆ,ನೀರಿನ ತೊರೆಗಳಲ್ಲಿ ನರುಜುಕಲ್ಲುಗಳು ಸತತವಾಗಿ ನೀರುಹರಿಯುವ ದಿಕ್ಕಿನಲ್ಲಿ ಸಾಗುತ್ತದೆ. ವಿಪರೀತ ಸವೆತವು ಆದಾಗ್ಯೂ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನೀರಿನ ರಾಡಿ,ಪರಿಸರವ್ಯವಸ್ಥೆ ನಾಶ ಮತ್ತು ಒಟ್ಟಾರೆ ಮಣ್ಣಿನ ನಷ್ಟ.
ಸವೆತವು ವೆದರಿಂಗ್(ಹವೆಯ ಪ್ರಭಾವಕ್ಕೆ ವಿಘಟನಗೊಳ್ಳುವ ಪ್ರಕ್ರಿಯೆ)ನಿಂದ ವ್ಯತ್ಯಾಸವನ್ನು ಹೊಂದಿದೆ. ವೆದರಿಂಗ್ ಕಲ್ಲಿನಲ್ಲಿರುವ ಖನಿಜಗಳ ರಾಸಾಯನಿಕ ಅಥವಾ ನೈಸರ್ಗಿಕ ವಿಘಟನೆ.ಇವೆರಡೂ ಪ್ರಕ್ರಿಯೆಗಳು ಜತೆಜತೆಯಾಗಿ ಉಂಟಾಗಬಹುದು.