ಕಳಿಂಗ ಯುದ್ಧ
From Wikipedia, the free encyclopedia
ಕಳಿಂಗ ಯುದ್ಧವು ಕ್ರಿ.ಪೂ.261 ರಲ್ಲಿ ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕನಿಗೂ ಕಳಿಂಗ ದೇಶದ ರಾಜ ಶುದ್ಧಧರ್ಮನಿಗು ನಡೆದ ಯುದ್ಧ. ಇದು ಸಾಮ್ರಾಟ್ ಅಶೋಕನ ಕಿರೀಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ನಡೆದ ಗಮನಾರ್ಹವಾದ ಘಟನೆ. ಅಶೋಕನ ಏಕೈಕ ಪ್ರಮುಖ ಯುದ್ಧವಾದ ಈ ಯುದ್ದ, ಅಪಾರ ಸಾವು ನೋವುಗಳಿಗೆ ಕಾರಣವಾಗಿ ಇತಿಹಾಸದಲ್ಲಿಯೇ ಅತ್ಯಂತ ಘೋರವಾದ ಯುದ್ಧಗಳಲ್ಲಿ ಒಂದಾಗಿದೆ. ಅಶೋಕನು ರ್ಕಿ.ಪೂ.೨೬೧ರಲ್ಲಿ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು. ಅಶೋಕನ ೧೩ನೇ ಶಿಲಾಶಾಸನದ ಆಧಾರದ ಮೇಲೆ ಕಳಿಂಗ ರಾಜ್ಯ ಸ್ವತಂತ್ರ್ಯವಾಗಿತ್ತು, ಮೌರ್ಯ ಸಾಮ್ರಾಜ್ಯಕ್ಕೆ ಸೇರಿರಲಿಲ್ಲಾ ಎಂಬುದಾಗಿ ತಿಳಿದು ಬರುತ್ತದೆ. ಕಳಿಂಗದ ಯೋಧರು ತಮ್ಮ ಸ್ವಾತಂತ್ರ್ಯವನ್ನು ಮೌರ್ಯರ ಆಕ್ರಮಣದಿಂದ ಕಾಪಾಡಿಕೊಳ್ಳಲು ವೀರಾವೇಶದಿಂದ ಹೋರಾಡಿದರೂ, ಅಂತಿಮವಾಗಿ ಸಂಖ್ಯೇಯಲ್ಲಿ ಮೀರಿದ್ದ ಅಶೋಕನ ಸೈನ್ಯವೇ ಯುದ್ಧವನ್ನು ಗೆದ್ದಿತು. ಈ ಯುದ್ಧದ ಅಪಾರ ರಕ್ತಪಾತವು ಅಶೋಕನ ಮನಃಪರಿವರ್ತನೆಗೆ ಕಾರಣವಾಗಿ ಅವನನ್ನು ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಮಾಡಿ ಮುಂದೆ ಅಹಿಂಸೆಯ ಹಾದಿಯಲ್ಲಿ ಸಾಗುವಂತೆ ಮಾಡಿತು.[1]