ಉದಯ ಶಂಕರ್
From Wikipedia, the free encyclopedia
ಭಾರತದಲ್ಲಿ ಆಧುನಿಕ ನೃತ್ಯದ ಪುರೋಗಾಮಿ, ಮತ್ತು ವಿಶ್ವ ವಿಖ್ಯಾತ ಭಾರತೀಯ ನೃತ್ಯಪಟು ಹಾಗೂ ನೃತ್ಯ ನಿರ್ದೇಶಕರಾದ ಉದಯ್ ಶಂಕರ್ ರವರು[1] (ಡಿಸೆಂಬರ್ ೮, ೧೯೦೦ - ಸೆಪ್ಟೆಂಬರ್ ೨೬, ೧೯೭೭) ಬಂಗಾಳಿ:উদয় শংকরಭಾರತೀಯ ಶಾಸ್ತ್ರೀಯ, ಜಾನಪದ, ಹಾಗೂ ಬುಡಕಟ್ಟು ನೃತ್ಯದ ಮೂಲಪಾಠಗಳಿಂದ ಪ್ರೇರೇಪಿಸಲ್ಪಟ್ಟ, ಪಾರಂಪರಿಕ ಭಾರತೀಯ ಶ್ರೇಷ್ಠ ನೃತ್ಯಕ್ಕೆ ಪಾಶ್ಚಾತ್ಯ ನಾಟಕೀಯ ಕಲಾಕೌಶಲ್ಯಗಳನ್ನು ಹೊಂದಿಸಲು ಅವರು ಅತ್ಯಂತ ಪ್ರಸಿದ್ಧರಾಗಿದ್ದರು, ಹೀಗೆ ಆಧುನಿಕ ಭಾರತೀಯ ನೃತ್ಯದ ಅಸ್ತಿಭಾರ ಹಾಕುತ್ತಾ, ನಂತರ ಇದನ್ನು ೧೯೨೦ ಹಾಗೂ ೧೯೩೦ ರಲ್ಲಿ ಭಾರತ, ಯುರೋಪ್, ಮತ್ತು ಸಂಯುಕ್ತ ಸಂಸ್ಥಾನಗಳಲ್ಲಿ ಜನಪ್ರಿಯಗೊಳಿಸಿದರು ಹಾಗೂ ವಿಶ್ವ ಭೂಪಟದಲ್ಲಿ ಭಾರತೀಯ ನೃತ್ಯವನ್ನು ಪರಿಣಾಮಕಾರಿಯಾಗಿ ಭದ್ರಪಡಿಸಿದರು.[2][3][4][5][6] ೧೯೬೨ ರಲ್ಲಿ, ಸಂಗೀತ, ನೃತ್ಯ ಹಾಗೂ ನಾಟಕಕ್ಕೆ ಭಾರತದ ರಾಷ್ಟ್ರೀಯ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿಯಿಂದ ಅವರ ಜೀವಮಾನದ ಸಾಧನೆಗಾಗಿ, ಅದರ ಅತ್ಯುನ್ನತ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್ಅನ್ನು ಅವರಿಗೆ ನೀಡಲಾಯಿತು, ಮತ್ತು ೧೯೭೧ ರಲ್ಲಿ, ಭಾರತದ ಸರ್ಕಾರವು, ತನ್ನ ಎರಡನೆ ಅತ್ಯಂತ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣವನ್ನು ದಯಪಾಲಿಸಿತು.
ಉದಯ್ ಶಂಕರ್ | |
---|---|
ಜನನ | ೮ ಡಿಸಂಬರ್ ೧೯೦೦ |
ಮರಣ | ೨೬ ಸೆಪ್ಟೆಂಬರ್ ೧೯೭೭ (ವಯಸ್ಸು ೭೬) |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ನೃತ್ಯಪಟು, ನೃತ್ಯ ನಿರ್ದೇಶಕ |
ಸಂಗಾತಿ | ಅಮಲಾ ಶಂಕರ್ |
ಮಕ್ಕಳು | ಆನಂದ ಶಂಕರ್, ಮಮತಾ ಶಂಕರ್ |