ಪೃಥ್ವಿರಾಜ್ ಚೌಹಾಣ್
From Wikipedia, the free encyclopedia
ಪೃಥ್ವಿರಾಜ್ ಚೌಹಾಣ್ ಅಥವಾ ರಾಯ್ ಪಿಥೋರಾ ಎಂದು ಕರೆಯಲ್ಪಡುವ ಪೃಥ್ವಿರಾಜ III ( ಕ್ರಿ.ಶ.೧೧೭೭-೧೧೯೨) ಚೌಹಾಣ್ ರಾಜವಂಶದ ರಾಜನಾಗಿದ್ದನು. ಅವನು ರಾಜಸ್ಥಾನದ ಅಜ್ಮೀರ್ನಲ್ಲಿ ತನ್ನ ರಾಜಧಾನಿಯೊಂದಿಗೆ ಸಪದಲಕ್ಷ ಪ್ರದೇಶವನ್ನು ಆಳಿದನು. ಕ್ರಿ.ಶ.೧೧೭೭ ಯಲ್ಲಿ ಅಪ್ರಾಪ್ತ ವಯಸ್ಕನಾಗಿ ಸಿಂಹಾಸನವನ್ನು ಏರಿದನು. ಪೃಥ್ವಿರಾಜನು ಉತ್ತರದಲ್ಲಿ ಥಾನೇಸರ್ನಿಂದ ದಕ್ಷಿಣದ ಜಹಾಜ್ಪುರ (ಮೇವಾರ್) ವರೆಗೆ ವಿಸ್ತರಿಸಿದ ರಾಜ್ಯವನ್ನು ಆನುವಂಶಿಕವಾಗಿ ಪಡೆದನು. ಇದು ನೆರೆಯ ಸಾಮ್ರಾಜ್ಯಗಳ ವಿರುದ್ಧ ಮಿಲಿಟರಿ ಕ್ರಮಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿತ್ತು. ಇದು ಮುಖ್ಯವಾಗಿ ಚಂಡೇಲರನ್ನು ಸೋಲಿಸಿತು.
ಪೃಥ್ವಿರಾಜನು ಹಲವಾರು ರಜಪೂತ ರಾಜರ ಒಕ್ಕೂಟವನ್ನು ಮುನ್ನಡೆಸಿದನು. ಕ್ರಿ.ಶ ೧೧೯೧ ಯಲ್ಲಿ ತಾರೋರಿ ಬಳಿ ಮುಹಮ್ಮದ್ ಘೋರಿ ನೇತೃತ್ವದ ಘುರಿದ್ ಸೈನ್ಯವನ್ನು ಸೋಲಿಸಿದನು. ನಂತರ ಕ್ರಿ.ಶ.೧೧೯೨ ನಲ್ಲಿ ಘೋರಿ ಟರ್ಕಿಯ ಆರೋಹಿತವಾದ ಬಿಲ್ಲುಗಾರರ ಸೈನ್ಯದೊಂದಿಗೆ ಹಿಂದಿರುಗಿದನು. ಅದೇ ಯುದ್ಧಭೂಮಿಯಲ್ಲಿ ರಜಪೂತ ಸೈನ್ಯವನ್ನು ಸೋಲಿಸಿದನು. ಪೃಥ್ವಿರಾಜ್ನ ಸೈನ್ಯವನ್ನು ನೋಡಿ ಯುದ್ಧಭೂಮಿಯಿಂದ ಅವರು ಓಡಿಹೋದರು. ಆದರೆ ಅವರನ್ನು ಸಿರ್ಸಾ ಬಳಿ ಸೆರೆಹಿಡಿದು ಗಲ್ಲಿಗೇರಿಸಲಾಯಿತು. ತರೈನ್ನಲ್ಲಿನ ಅವರ ಸೋಲನ್ನು ಭಾರತದ ಇಸ್ಲಾಮಿಕ್ ವಿಜಯದಲ್ಲಿ ಒಂದು ದೊಡ್ಡ ಘಟನೆಯಾಗಿ ನೋಡಲಾಗುತ್ತದೆ ಮತ್ತು ಹಲವಾರು ಘಟನೆಗಳನ್ನು ಅರೆ-ಪೌರಾಣಿಕ ಕತೆಗಳಲ್ಲಿ ವಿವರಿಸಲಾಗಿದೆ. ಅದರಲ್ಲಿ ಪೃಥ್ವಿರಾಜ್ ರಾಸೊ ಮುಖ್ಯವಾದದ್ದು .